Tag: Madikeri

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ
ಕೊಡಗು

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ

July 30, 2018

ಮಡಿಕೇರಿ:  ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಕೊಡವ ತೀನಿ ನಮ್ಮೆ ಕಾರ್ಯಕ್ರಮ ನಗರದ ಕೊಡವ ಸಮಾಜದಲ್ಲಿ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ನಡೆದ ಕೊಡವ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು ಮೇಳೈಸಿದವು. ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಉದ್ದೇಶ ದಿಂದ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಸಲುವಾಗಿ ಪೈಪೋಟಿ ಹಾಗೂ ಪ್ರದರ್ಶನ ಎಂಬ ಎರಡು…

ಆ.5 ರಂದು ಆಟಿ ಹಬ್ಬ
ಕೊಡಗು

ಆ.5 ರಂದು ಆಟಿ ಹಬ್ಬ

July 30, 2018

ಮಡಿಕೇರಿ:  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಪುತ್ತೂರಿನ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸಂಘ, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಸಹಯೋಗದಲ್ಲಿ ಆಗಸ್ಟ್, 5 ರಂದು ಬೆಳಗ್ಗೆ 9 ಗಂಟೆಗೆ ಪುತ್ತೂರಿನ ತೆಂಕಿಲದ ಒಕ್ಕಲಿಗಗೌಡ ಸಮುದಾಯ ಭವನದಲ್ಲಿ ಆಟಿ ಹಬ್ಬ 2018 ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, 9.30 ಗಂಟೆಗೆ ಆಟೋಟ ಸ್ಪರ್ಧೆ, ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ…

ತಾಳತ್ತಮನೆ ಬಳಿ ಹೆದ್ದಾರಿಯಲ್ಲಿ ಗುಂಡಿ
ಕೊಡಗು

ತಾಳತ್ತಮನೆ ಬಳಿ ಹೆದ್ದಾರಿಯಲ್ಲಿ ಗುಂಡಿ

July 30, 2018

ಮಡಿಕೇರಿ:  ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳತ್ತಮನೆ ಸಮೀಪ ರಸ್ತೆಯ ಮಧ್ಯದಲ್ಲಿ ಬೃಹತ್ ಗುಂಡಿ ಬಿದ್ದಿದೆ. ಅಂತರ್ಜಲದಿಂದ ಈ ಗುಂಡಿ ಉದ್ಭವವಾಗಿದ್ದು, ವಾಹನ ಸಂಚಾರ ದುಸ್ಥರವಾಗಿ ಪರಿಣಮಿಸಿದೆ. ಹೆದ್ದಾರಿಯ ತಿರುವಿನಲ್ಲೇ ಬೃಹತ್ ಹೊಂಡ ಸೃಷ್ಟಿಯಾಗಿರುವುದರಿಂದ ಮಲ್ಟಿ ಆ್ಯಕ್ಸಿಲ್ ಲಾರಿಗಳು ಮತ್ತು ಬಸ್‍ಗಳ ಸಂಚಾರಕ್ಕೆ ಸಂಚಕಾರವಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅಪಾಯದ ಸೂಚನೆ ಫಲಕ ಅಳವಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಹೆದ್ದಾರಿಯ ಹೊಂಡಕ್ಕೆ ಕಲ್ಲುಗಳನ್ನು ಹಾಕಿ ಮುಚ್ಚಿದ್ದರು ಕೂಡ ಅಧಿಕ ಭಾರ ಹೊತ್ತು ಸಾಗುತ್ತಿರುವ ಲಾರಿಗಳಿಂದಾಗಿ ಮತ್ತಷ್ಟು ಗುಂಡಿ ಸೃಷ್ಟಿಯಾಗುತ್ತಿದೆ. ರಾತ್ರಿ…

ವಿವಿಧ ಬೆಳೆಗಾರರ ಸಂಘಗಳ ನಿಯೋಗದಿಂದ  ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ
ಕೊಡಗು

ವಿವಿಧ ಬೆಳೆಗಾರರ ಸಂಘಗಳ ನಿಯೋಗದಿಂದ  ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

July 29, 2018

ಮಡಿಕೇರಿ: ಕಾಫಿ ಬೆಳೆಗಾರರ ಸಮಸ್ಯೆ, ಕಾಳುಮೆಣಸು ಆಮದಿನಿಂದಾಗುತ್ತಿರುವ ತೊಂದರೆ ಹಾಗೂ ಕಾಡಾನೆ-ಮಾನವ ಸಂಘರ್ಷದ ಕುರಿತು ಕೇಂದ್ರ ಸರಕಾರಕ್ಕೆ ಮತ್ತೆ ಮನವರಿಕೆ ಮಾಡಿಕೊಡಲು ವಿವಿಧ ಬೆಳೆಗಾರರ ಸಂಘ, ಕಾಫಿ ಮಂಡಳಿ ಹಾಗೂ ಜನಪ್ರತಿನಿಧಿಗಳು ದೆಹಲಿಯಲ್ಲಿ ವಿವಿಧ ಇಲಾಖೆಗಳ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದರು. ರಾಜ್ಯದ ಕಾಫಿ ಬೆಳೆಗಾರ ಜಿಲ್ಲೆಗಳ ಬೃಹತ್ ನಿಯೋಗ ದೆಹಲಿಯಲ್ಲಿ ಸರಕಾರಿ ಮಟ್ಟ ದಲ್ಲಿ ಬೆಳೆಗಾರರ ಸಮಸ್ಯೆ ಕುರಿತು ಮನವರಿಕೆ ಮಾಡುವ ಪ್ರಯತ್ನ ನಡೆಸಿತು. ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ,…

ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು
ಕೊಡಗು

ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು

July 29, 2018

ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಬಿರುಕಿನಿಂದ ಅಂತರ್ಜಲ ಕೋಡಿಯಾಗಿ ಹರಿಯುತ್ತಿದೆ. ಕಳೆದ 10 ದಿನಗಳ ಹಿಂದೆ ಅಂದಾಜು 1 ಕಿ.ಮೀ. ವ್ಯಾಪ್ತಿಯುದ್ದಕ್ಕೂ ಭೂಮಿಯಲ್ಲಿ 2 ಇಂಚು ಅಗಲದ ಬಿರುಕು ಮೂಡಿತ್ತು. ದಿನದಿಂದ ದಿನಕ್ಕೆ ಬಿರುಕು ಹೆಚ್ಚುತ್ತಾ ಹೋಗಿದ್ದು, ಇದೀಗ ಬಿರುಕಿನಿಂದ ಕೆಂಪು ಬಣ್ಣದ ನೀರು ಉಕ್ಕಿ ಹರಿಯುತ್ತಿದ್ದು, ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ಭೂಮಿ ಬಿರುಕು ಬಿಟ್ಟಿರುವ ಮಾಹಿತಿ ಪಡೆದು ಈ ಹಿಂದೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ…

ಜಗತ್ತಿನ ಗಮನ ಸೆಳೆದ ಕ್ಷೇತ್ರ ಮಾಧ್ಯಮ
ಕೊಡಗು

ಜಗತ್ತಿನ ಗಮನ ಸೆಳೆದ ಕ್ಷೇತ್ರ ಮಾಧ್ಯಮ

July 29, 2018

ಮಡಿಕೇರಿ: ಕತ್ತಲ ಭಾರತದ ಕಡೆ ಮಾಧ್ಯಮಗಳು ಮುಖ ಮಾಡಿದಾಗ ಮಾತ್ರ ಮಾಧ್ಯಮದ ವ್ಯಕ್ತಿತ್ವ ಹೆಚ್ಚಾಗಲು ಸಾಧ್ಯ ಎಂದು ಮೈಸೂರು ಮಾನಸ ಗಂಗೋತ್ರಿ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರ ಗುರು ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್‍ನ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಧ್ಯಮ ಕ್ಷೇತ್ರ ಇಡೀ ಜಗತ್ತನ್ನು ಗಮನ ಸೆಳೆಯುವಂತಹ ಕ್ಷೇತ್ರವಾಗಿದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ. ಅಂದಿನ ಕಾಲದಲ್ಲಿ ಪತ್ರಿಕೆ…

ವಿದ್ಯುತ್ ಸ್ಪರ್ಶ; ವೃದ್ಧೆ ಸಾವು
ಕೊಡಗು

ವಿದ್ಯುತ್ ಸ್ಪರ್ಶ; ವೃದ್ಧೆ ಸಾವು

July 29, 2018

ಮಡಿಕೇರಿ:  ವಿದ್ಯುತ್ ಸ್ಪರ್ಶ ಗೊಂಡು ವೃದ್ಧೆಯೋರ್ವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಗರದ ಹೊರವಲಯದ ಕೆ.ಬಾಡಗದಲ್ಲಿ ನಡೆದಿದೆ. ಕೆ.ಬಾಡಗ ಭಗವತಿ ನಗರ ನಿವಾಸಿ ಮಾಚವ್ವ (88) ಎಂಬವರೇ ಮೃತ ದುರ್ದೈವಿಯಾಗಿ ದ್ದಾರೆ. ಮಾಚವ್ವ ಗೃಹ ಬಳಕೆಗಾಗಿ ಅಳವಡಿಸಿದ್ದ ನೀರಿನ ಪಂಪ್ ದುರಸ್ಥಿಗೆ ತೆರಳಿದ ಸಂದರ್ಭ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಘಟನೆಯ ಕುರಿತು ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆದಿಚುಂಚನಗಿರಿ ಮಠಕ್ಕೆ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆ ಆಸ್ತಿ ನೀಡಲು ವಿರೋಧ
ಕೊಡಗು

ಆದಿಚುಂಚನಗಿರಿ ಮಠಕ್ಕೆ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆ ಆಸ್ತಿ ನೀಡಲು ವಿರೋಧ

July 28, 2018

ಮಡಿಕೇರಿ:  ಭಾಗಮಂಡಲದ ಕಾವೇರಿ ವಿದ್ಯಾಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಅಧೀನಕ್ಕೆ ಹಸ್ತಾಂತರಿಸುವುದಕ್ಕೆ ಸಂಸ್ಥೆಯ ಹಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ವಿದ್ಯಾ ಸಂಘದ ಸದಸ್ಯ ಕುದು ಕುಳಿ ಭರತ್, ದಾನಿಗಳು ಹಾಗೂ ಸರ್ಕಾರ ನೀಡಿದ ಜಾಗ ಸೇರಿದಂತೆ ಸಂಸ್ಥೆಯ ವಶ ದಲ್ಲಿ 16.50 ಏಕರೆ ಜಾಗವಿದೆ. ಈ ಜಾಗ ದೊಂದಿಗೆ ಶಿಕ್ಷಣ ಸಂಸ್ಥೆಯನ್ನು ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರಿ ಸುವುದು ಸಮರ್ಪಕವಲ್ಲ. ಹಸ್ತಾಂತರಿಸುವ ಅಭಿಲಾಷೆ ಇದ್ದಲ್ಲಿ 6.50 ಎಕರೆ…

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು
ಕೊಡಗು

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು

July 26, 2018

ಮಡಿಕೇರಿ: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲಿ ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪಿಸಿದೆ. ಕಳೆದೊಂದು ದಿನದ ಅವಧಿ ಯಲ್ಲಿ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ‘ಕಾವೇರಿ’ಯ ಒಡಲು ಭರ್ತಿಯಾಗಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ರಸ್ತೆಗಳನ್ನು ಆವರಿಸಿದೆ. ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿ ನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ ವಾಗಿ 3 ಇಂಚಿನಷ್ಟು ಮಳೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿ ನದಿ ನೀರಿನ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ…

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ
ಕೊಡಗು

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ

July 26, 2018

ಮಡಿಕೇರಿ: ಕೊಡಗು ಅತ್ಯಂತ ಸೂಕ್ಷ್ಮ ಪರಿಸರ ವಲಯವಾ ಗಿದ್ದು, ಪ್ರವಾಸೋದ್ಯಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇಲ್ಲಿನ ಪರಿಸರಕ್ಕೆ ಇಲ್ಲವೆಂದು ಅಭಿಪ್ರಾಯಪಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಪ್ರವಾಸೋ ದ್ಯಮವನ್ನು ಮತ್ತಷ್ಟು ಉತ್ತೇಜಿಸುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಂದಿಗೂ ಕೊಡಗಿನ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ, ಪರಿಸರ ರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಪ್ರವಾ ಸೋದ್ಯಮದ ವೇಗವನ್ನು ತಡೆಯುವಷ್ಟು ಶಕ್ತಿ ಈ ಸೂಕ್ಷ್ಮ ಪ್ರದೇಶವಾದ ಕೊಡಗಿಗೆ ಇಲ್ಲ. ಜಿಲ್ಲೆಯ ಜನಸಂಖ್ಯೆ…

1 17 18 19 20 21 32
Translate »