Tag: Madikeri

ಕೊಡಗಲ್ಲಿ ಹತ್ತನೇ ದಿನವೂ ಅಬ್ಬರಿಸಿದ ಮಳೆರಾಯ: ಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ
ಕೊಡಗು

ಕೊಡಗಲ್ಲಿ ಹತ್ತನೇ ದಿನವೂ ಅಬ್ಬರಿಸಿದ ಮಳೆರಾಯ: ಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ

July 15, 2018

ಮಡಿಕೇರಿ: ಮಳೆ ಮತ್ತು ಗಾಳಿಯ ತೀವ್ರತೆ ಮಡಿಕೇರಿ ನಗರವನ್ನು 10 ನೇ ದಿನವೂ ಬಾಧಿಸಿದ್ದು, ಮಳೆ ಹಾನಿ ಘಟನೆಗಳು ಮುಂದುವರಿದಿದೆ. ನಗರದ ಉಪ ವಲಯ ಅರಣ್ಯಾಧಿಕಾರಿ ಕಚೇರಿ ಪಕ್ಕದಲ್ಲಿರುವ ಮನೆಯೊಂದರ ಹಿಂಬದಿ ಭಾರಿ ಭೂ ಕುಸಿತಗೊಂಡಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಈ ಅನಾಹುತ ಘಟಿಸಿದ್ದು, ಮನೆಗೆ ಹಾನಿ ಸಂಭವಿಸಿದೆ. ಕಾವೇರಪ್ಪ ಎಂಬವರ ಮನೆಯ ಹಿಂಬದಿ ಬರೆ ಕುಸಿದ ಪರಿಣಾಮ, ಮನೆಗೂ ಹಾನಿ ಸಂಭವಿಸಿದೆ. ಮನೆಯ ಕೌಂಪೌಂಡ್ ಗೋಡೆ ಮತ್ತು ಇಂಟರ್‍ಲಾಕ್ ಸಂಪೂರ್ಣ ಕುಸಿದಿದ್ದು, ಲಕ್ಷಾಂತರ ರೂಪಾಯಿ…

ತಾತ-ಮೊಮ್ಮಗನ ಕೊಂದ ಮೂವರಿಗೆ ಗಲ್ಲು ಶಿಕ್ಷೆ
ಕೊಡಗು

ತಾತ-ಮೊಮ್ಮಗನ ಕೊಂದ ಮೂವರಿಗೆ ಗಲ್ಲು ಶಿಕ್ಷೆ

July 14, 2018

ಮಡಿಕೇರಿ: ತಾತ ಮತ್ತು ಮೊಮ್ಮಗನನ್ನು ಹತ್ಯೆ ಮಾಡಿದ ಮೂವರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ಪವನೇಶ್ ತೀರ್ಪು ನೀಡಿದ್ದಾರೆ. ಕುಶಾಲನಗರ ಸಮೀಪದ ಮಲ್ಲೇನ ಹಳ್ಳಿ ಗ್ರಾಮದವರಾದ ಹೆಚ್.ಎಸ್. ಶಿವಕುಮಾರ್ ಅಲಿಯಾಸ್ ಶಿವು, ಟಿ.ಇ.ಶಿವಕುಮಾರ್ ಅಲಿಯಾಸ್ ಜುಟ್ಟು ಶಿವು ಮತ್ತು ಕುಮಾರ್ ಅಲಿ ಯಾಸ್ ಕರಿಯಾ ಗಲ್ಲು ಶಿಕ್ಷೆಗೆ ಗುರಿ ಯಾದವರು. ಇವರುಗಳು 2016ರ ಫೆಬ್ರವರಿ 11ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಮಲ್ಲೇನಹಳ್ಳಿ ಗ್ರಾಮದ ಕೊಚ್ಚುಣ್ಣ ಅವರ…

ವರುಣನ ರುದ್ರನರ್ತನಕ್ಕೆ ಕೊಡಗು ತತ್ತರ
ಕೊಡಗು

ವರುಣನ ರುದ್ರನರ್ತನಕ್ಕೆ ಕೊಡಗು ತತ್ತರ

July 14, 2018

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವರುಣನ ರೌದ್ರಾವತಾರ ಮುಂದುವರಿದಿದ್ದು, ಸದ್ಯಕ್ಕಂತು ಮಳೆ ಕರುಣೆ ತೋರುವ ಲಕ್ಷಣ ಕಂಡು ಬರು ತ್ತಿಲ್ಲ. ಕಳೆದ 9 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, 2 ದಿನಗಳಿಂದ ಗಾಳಿಯ ತೀವ್ರತೆ ಕಂಡು ಬಂದಿದೆ. ಮಳೆಯ ಅಬ್ಬರಕ್ಕೆ ಕೊಡಗು ಜಿಲ್ಲೆ ತತ್ತರಿಸಿದ್ದು, ದಟ್ಟ ಮಂಜಿನೊಂದಿಗೆ ತೀವ್ರ ಚಳಿಯೂ ಕಂಡು ಬಂದಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕೃಷಿ ಕಾರ್ಯಗಳಿಗೂ ತೊಡಕುಂಟಾಗಿದೆ. ಶುಕ್ರ ವಾರ ಭಾರಿ ಗಾಳಿಯೊಂದಿಗೆ ಸುರಿದ ಧಾರ ಕಾರ ಮಳೆಗೆ…

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ
ಕೊಡಗು

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ

July 14, 2018

ಮಡಿಕೇರಿ: ಹೋಂ ಸ್ಟೇಗೆ ಬಂದಿದ್ದ ಪ್ರವಾಸಿಗರೋರ್ವರು ಮಳೆಯ ತೀವ್ರತೆಯ ನಡುವೇ ಕಿರು ಸೇತುವೆ ದಾಟುವ ಸಂದರ್ಭ ಆಯ ತಪ್ಪಿ ನದಿಗೆ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಬೀರುಗ ಗ್ರಾಮದಲ್ಲಿ ನಡೆದಿದೆ. ಬೀರುಗ ಗ್ರಾಮದಲ್ಲಿರುವ ಅಜ್ಜಮಾಡ ಚಿಮ್ಮ ಎಂಬುವವರ ಹೋಂಸ್ಟೇಗೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡ ಶುಕ್ರವಾರ ಹೋಂಸ್ಟೇ ಬಳಿಯೇ ಇರುವ ನದಿಯನ್ನು ಕಿರಿದಾದ ಸೇತುವೆ ಮೇಲೆ ದಾಟುತ್ತಿತ್ತು. ಈ ಸಂದರ್ಭ ಸಂದೀಪ್ ಎಂಬವರು ಆಯತಪ್ಪಿ ತುಂಬಿ ಹರಿಯುತ್ತಿರುವ ನದಿಗೆ ಬಿದ್ದಿದ್ದಾರೆ. ಕೂಡಲೇ ನದಿಗಿಳಿದ…

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿತ
ಕೊಡಗು

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿತ

July 13, 2018

ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದಿಂದ, ರಾಜಾಸೀಟ್ ಬೆಟ್ಟದ ಕೆಳ ಭಾಗದ ಹೆದ್ದಾರಿಯಲ್ಲಿ ಭಾರೀ ಬಿರುಕು ಮೂಡಿದ್ದು, ಹೆದ್ದಾರಿ ಕುಸಿತಗೊಂಡಿದೆ. ಮಳೆಯ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಹೆದ್ದಾರಿಯ ಪಕ್ಕದಲ್ಲಿ ಬರೆ ಕುಸಿತವಾಗಿ, ಹೆದ್ದಾರಿ ಸಂಚಾರ ದುಸ್ಥರ ಗೊಂಡಿದೆ. ಯಾವುದೇ ಕ್ಷಣದಲ್ಲೂ ರಸ್ತೆ ಕುಸಿಯುವ ಸಾಧ್ಯತೆಯಿದ್ದು, ಪ್ರಸ್ತುತ ಏಕಮುಖ ವಾಹನ ಸಂಚಾರ ವ್ಯವಸ್ಥೆ ರೂಪಿಸಲಾಗಿದೆ. ಶಿರಾಡಿಘಾಟ್‍ನಲ್ಲಿ ಭಾರೀ ವಾಹನಗಳ ಸಾಗಾಟಕ್ಕೆ ರಸ್ತೆ ನವೀಕರ ಣದಿಂದ ನಿರ್ಭಂದ ಹೇರಲಾಗಿದ್ದು, ಮಂಗಳೂರು-ಶಿರಾಡಿ ರಸ್ತೆಯಲ್ಲಿ ಸಂಚರಿಸು ತ್ತಿದ್ದ ಭಾರೀ ಸರಕು ತುಂಬಿದ…

ಜಿಲ್ಲೆಯಲ್ಲಿ ನಿಲ್ಲದ ಮಳೆ
ಕೊಡಗು

ಜಿಲ್ಲೆಯಲ್ಲಿ ನಿಲ್ಲದ ಮಳೆ

July 13, 2018

ಅಲ್ಲಲ್ಲಿ ಬರೆ ಕುಸಿತ, ಮನೆಗಳಿಗೆ ಹಾನಿ ಇಂದು, ನಾಳೆ ಶಾಲಾ-ಕಾಲೇಜಿಗೆ ರಜಾ ಮಡಿಕೇರಿ:  ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಸಿದ್ದಾಪುರ ಕರಡಿ ಗೋಡು ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕರಡಿಗೋಡು ಬೆಟ್ಟದ ಕಾಡು ಬಳಿ ಕೆಲವು ಮನೆಗಳಿಗೆ ನದಿ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆ ಯಲ್ಲಿ 5-6 ಕುಟುಂಬಗಳು, ತಾತ್ಕಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರವಾಗಿದ್ದು, ಕೆಲವು ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ. ಮಳೆಯ ಹಿನ್ನೆಲೆಯಲ್ಲಿ ಜು.13…

ನಾಲ್ಕುನಾಡು ಅರಮನೆ ಸಂರಕ್ಷಣೆಗೆ ಮನವಿ
ಕೊಡಗು

ನಾಲ್ಕುನಾಡು ಅರಮನೆ ಸಂರಕ್ಷಣೆಗೆ ಮನವಿ

July 13, 2018

ಮಡಿಕೇರಿ:  ನಾಲ್ಕು ನಾಡು ಅರಮನೆ ಸಂರಕ್ಷಣೆಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮನವಿ ಮಾಡಿದ್ದಾರೆ. ಅವರು ವಿಧಾನಪರಿಷತ್‍ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದು ಈ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆ ಪ್ರಸ್ತುತ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದೆಯೇ? ಎಂಬ ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೌದು ಎಂದು ಉತ್ತರಿಸಿದರು. ಇದ್ದಲ್ಲಿ ಈ ನಾಲ್ಕುನಾಡು ಅರಮನೆಯನ್ನು ಸುಸ್ಥಿತಿಯಲ್ಲಿ ಕಾಪಾಡಲು ಯಾವ ಕ್ರಮ ವಹಿಸಲಾಗಿದೆ? ಎಂಬ ಪ್ರಶ್ನೆಗೆ…

ಕೊಡಗಿನಾದ್ಯಂತ ವರುಣನ ರೌದ್ರಾವತಾರ
ಕೊಡಗು

ಕೊಡಗಿನಾದ್ಯಂತ ವರುಣನ ರೌದ್ರಾವತಾರ

July 12, 2018

ಉಕ್ಕಿ ಹರಿಯುತ್ತಿರುವ ನದಿ ತೊರೆಗಳು  ಜನ ಜೀವನ ಅಸ್ತವ್ಯಸ್ತ, ಪರದಾಟ  ಇಂದು ಶಾಲಾ-ಕಾಲೇಜಿಗೆ ರಜೆ ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಐದು ದಿನ ಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನಾಳೆ (ಜು.12)ಯೂ ಸಹ ಜಿಲ್ಲಾದ್ಯಂತ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಬೋಟ್ ಬಳಸಿ ಅಲ್ಲಿನ…

ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಕೊಡಗು

ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

July 12, 2018

ಮಡಿಕೇರಿ: ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ 35 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್.ಡಿ.ನಂಬರ್ ಇರುವ ಜಾತಿ ಪ್ರಮಾಣ ಪತ್ರದೊಂದಿಗೆ ಎ4 ಸೈಜ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ ಕನಿಷ್ಠ 200 ಪುಟ ಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಸಾಹಿತ್ಯ ಕೃತಿಗಳು ಪ್ರಕಟವಾಗಿರುವ ಲೇಖಕರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಲೇಖಕರೂ ಕೂಡ ಅರ್ಜಿ ಸಲ್ಲಿಸಬಹುದು….

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ
ಕೊಡಗು

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ

July 11, 2018

ಐದನೇ ಬಾರಿಗೆ ತ್ರಿವೇಣಿ ಸಂಗಮ ಜಲಾವೃತ್ತ ಅಲ್ಲಲ್ಲಿ ಭೂ ಕುಸಿತ ಇಂದು ಶಾಲಾ-ಕಾಲೇಜಿಗೆ ರಜೆ ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಸ್ಥಿತಿಗೆ ತಲುಪಿದೆ. ಕಾವೇರಿ, ಲಕ್ಷ್ಮಣ ತೀರ್ಥ ರಾಮ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭೂ ಕುಸಿತ ಉಂಟಾಗಿದೆ. ಕಾಲೇಜು ಕಟ್ಟಡಕ್ಕೆ ಹೊಂದಿ ಕೊಂಡಂತೆ ಬರೆ ಕುಸಿದ ಪರಿಣಾಮ, ಕಾಲೇಜು ಕಟ್ಟಡ ಅಪಾಯಕ್ಕೆ ಸಿಲುಕಿದೆ….

1 20 21 22 23 24 32
Translate »