ಮಡಿಕೇರಿ: ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾ ರಸ್ವಾಮಿ ತಮ್ಮ ಚೊಚ್ಚಲ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ಯಾವುದೇ ಯೋಜನೆ ಮತ್ತು ಅನುದಾನ ಘೋಷಿಸದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ. ಹಿರಿಯ ಸಾಹಿತಿ, ರಂಗಕರ್ಮಿ, ಅಡ್ಡಂಡ ಕಾರ್ಯಪ್ಪ, ರಾಜ್ಯ ಸರಕಾರದ ಬಜೆಟ್ ವಿರುದ್ಧ ಹರಿ ಹಾಯ್ದಿರುವ ವೀಡಿಯೋ ವೈರಲ್ ಆಗಿದ್ದು, ಸರಕಾರವನ್ನು ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ. ಕೊಡಗು ಜಿಲ್ಲೆಯನ್ನು ಕರ್ನಾ ಟಕದಿಂದಲೇ ಹೊರಗಿಡಲಾಗಿದ್ದು, ಜಿಲ್ಲೆಯ ಜನತೆಯ ಪ್ರತ್ಯೇಕ ರಾಜ್ಯದ ಕೂಗಿಗೆ ಮುಖ್ಯ…
ನಾಳೆ ಯೋಧ ನಮನ
July 7, 2018ಮಡಿಕೇರಿ: ಕೊಡಗು ಯೋಧಾಭಿಮಾನಿ ಬಳಗ ವತಿಯಿಂದ ಮಡಿಕೇರಿ ಕೊಡವ ಸಮಾಜ ಸಹಯೋಗದಲ್ಲಿ ‘ಯಾರಿಗಾಗಿ ನಮ್ಮವರ ಬಲಿದಾನ’ ಯೋಧ ನಮನ ಕಾರ್ಯಕ್ರಮ ಜುಲೈ 8ರಂದು ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ. ದೇಶರಕ್ಷಣೆಯಲ್ಲಿ ತೊಡಗಿದ್ದಾಗ ಬಲಿದಾನಿ ಗಳಾದ, ಯುದ್ಧ ಮುಂತಾದ ಹೋರಾಟ ದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ವೀರ ಸೈನಿಕರನ್ನು ಸ್ಮರಿಸುವ ಸಲುವಾಗಿ ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್(ನಿ) ಕಂಡ್ರತಂಡ ಸಿ. ಸುಬ್ಬಯ್ಯ ಅಧ್ಯಕ್ಷತೆಯಲ್ಲಿ…
ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ
July 5, 2018ಮಡಿಕೇರಿ: ಮೇಕೇರಿ, ತಾಳತ್ತಮನೆ ವ್ಯಾಪ್ತಿಯ ಕಾಫಿ ತೋಟ ಗಳ ಒಳಗೆ 2 ದಿನಗಳ ಕಾಲ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಎರಡು ಕಾಡಾನೆಗಳು ಕೊನೆಗೂ ಕಾಫಿ ತೋಟಗಳಿಂದ ಕಾಲ್ಕಿತ್ತಿವೆ. ಮೇಕೇರಿ, ಮಂಗಳದೇವಿನಗರ, ಪೊನ್ನಚೆಟ್ಟಿ ಎಸ್ಟೇಟ್ ಮಾರ್ಗವಾಗಿ ಮೋದೂರು ಎಸ್ಟೇಟ್ ಕಡೆ ತೆರಳಿ ರುವ ಕಾಡಾನೆಗಳು, ಹೇರೂರು ವ್ಯಾಪ್ತಿ ಯಲ್ಲಿರುವ ಕುರಿತು ಅರಣ್ಯ ಇಲಾಖೆ ಮಾಹಿತಿ ಕಲೆ ಹಾಕಿದೆ. ಮೇಕೇರಿ ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ ಕುಶಾಲನಗರ ಆರ್.ಆರ್.ಟಿ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖೆ ಸಿಬ್ಬಂದಿ…
ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ
July 5, 2018ಮಡಿಕೇರಿ: ಮೀನುಕೊಲ್ಲಿ ಮೀಸಲು ಅರಣ್ಯದಂಚಿನ ಗ್ರಾಮಸ್ಥರು ಸಾಕಿದ್ದ ಹಸುಗಳನ್ನು ಭೇಟೆಯಾಡಿ ಆತಂಕ ಸೃಷ್ಟಿಸಿರುವ ಹುಲಿಯ ಚಲನವಲನ ಕುರಿತು ಮಾಹಿತಿ ಸಂಗ್ರಹಿಸಲು ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ಮೀನುಕೊಲ್ಲಿ ರಕ್ಷಿತ ಅರಣ್ಯದಂಚಿನಲ್ಲಿರುವ ಪೊನ್ನತ್ ಮೊಟ್ಟೆ ನಿವಾಸಿ ರಾಬರ್ಟ್ ಎಂಬವರ ಹಸುವನ್ನು ಬಲಿ ಪಡೆದಿದ್ದ ಹುಲಿ, ಚಿಕ್ಲಿ ಹೊಳೆಯ ಸಂಪರ್ಕ ರಸ್ತೆಯಲ್ಲಿ ನಾಗರಾಜ್ ಎಂಬುವರಿಗೆ ಸೇರಿದ ಹಸುವನ್ನು ಕೊಂದು ಹಾಕಿ ಕಳೆಬರವನ್ನು ಇನ್ನೂರು ಮೀಟರ್ ದೂರಕ್ಕೆ ಎಳೆದೊಯ್ದು ಕಂಬಿಬಾಣೆ ಮತ್ತು ರಂಗಸಮುದ್ರ ಸಂಪರ್ಕ ಕಲ್ಪಿಸುವ…
ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ
July 4, 2018ಮಡಿಕೇರಿ: ಮೇಕೇರಿ ವ್ಯಾಪ್ತಿಯ ಕಾಫಿ ತೋಟಗಳಿಗೆ ದಾಂಗುಡಿ ಇಟ್ಟು ಫಸಲು ನಷ್ಟ ಮತ್ತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ 2 ಕಾಡಾನೆಗಳನ್ನು ಕಾಡಿ ಗಟ್ಟಲು ಅರಣ್ಯ ಇಲಾಖೆ ಮಂಗಳ ವಾರವೂ ಕಾರ್ಯಾಚರಣೆ ನಡೆಸಿತು. ಕುಶಾಲನಗರದ ನುರಿತ ರ್ಯಾಪಿಡ್ ರೆಸ್ಪಾನ್ಸ್ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖಾ ಸಿಬ್ಬಂದಿಗಳು ಮಂಗಳವಾರ ಬೆಳಗ್ಗೆ ಯಿಂದಲೇ ಕಾಫಿ ತೋಟದ ಒಳಗೆ ಕಾಡಾ ನೆಗಳು ಅಲೆದಾಡಿರುವ ಹೆಜ್ಜೆ ಗುರುತುಗಳ ಜಾಡು ಅರಸಿ ಹೊರಟು, 2 ಕಾಡಾನೆ ಗಳು ಮೇಕೇರಿ ಕಡೆಯಿಂದ ತಾಳತ್ತಮನೆ ಬಳಿ ತೆರಳಿರುವ…
ಮಾನವ ಹಕ್ಕುಗಳ ಆಯೋಗದಿಂದ ಮಹಿಳೆಯರಿಗೆ ಬ್ರಹ್ಮಗಿರಿಬೆಟ್ಟ ಪ್ರವೇಶ ನಿಷೇಧ ಪ್ರಕರಣ ವಜಾ
July 4, 2018ಮಡಿಕೇರಿ: ತಲಕಾವೇರಿಯಲ್ಲಿ ಮೇ. 23 ರಂದು ಕೇರಳದ ನಾರಾಯಣ ಪೊದುವಾಳ್ ಜೋತಿಷಿಗಳ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಕಾರ್ಯಕ್ರಮದಲ್ಲಿ ‘ಬ್ರಹ್ಮಗಿರಿ ಬೆಟ್ಟಕ್ಕೆ ಮಹಿಳೆಯರ ಪ್ರವೇಶ ನಿಷೇಧ’ ಕುರಿತ ಚರ್ಚೆಯನ್ನು ಆಧರಿಸಿ, ರಾಜ್ಯ ಮಾನವ ಹಕ್ಕು ಆಯೋಗ ಜಿಲ್ಲಾಧಿಕಾರಿ ಶ್ರೀವಿದ್ಯಾ ಮತ್ತು ತ¯ಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರ ವಿರುದ್ಧ ದಾಖಲಿಸಿ ಕೊಂಡಿದ್ದ ಅರ್ಜಿಯನ್ನು ವಜಾ ಮಾಡಿದೆ. ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ, ಜೂನ್.25 ರಂದು ಆಯೋಗದ ಮುಂದೆ ಹಾಜರಾಗಿ ತಮ್ಮ ಸಮಜಾಯಿಸಿಕೆಯನ್ನು ತಿಳಿಸುವಂತೆ…
ಅಕ್ರಮ ಮರಳುಗಾರಿಕೆ; 16 ಲಕ್ಷ ದಂಡ ಸಂಗ್ರಹ
July 4, 2018ಮಡಿಕೇರಿ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಿಂದ ಕಳೆದ ವರ್ಷ 16 ಲಕ್ಷ ರೂ. ರಾಜಸ್ವ ಸಂಗ್ರಹವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ.ರೇಷ್ಮ ಹಾಗೂ ಭೂ ವಿಜ್ಞಾನಿ ಕೆ.ಎಸ್. ನಾಗೇಂದ್ರಪ್ಪ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 8, ಮಡಿಕೇರಿ ತಾಲೂಕಿನ ಎಂಟು ಸ್ಥಳಗಳಲ್ಲಿ ಹಾಗೂ ವಿರಾಜಪೇಟೆ ತಾಲೂಕಿನ ಒಂದು ಭಾಗದಲ್ಲಿ ಒಟ್ಟು 17 ಕಡೆಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಸದ್ಯ ಮಳೆಗಾಲವಾದ್ದರಿಂದ ಡಿಸೆಂಬರ್ವರೆಗೆ ಮರಳು ಗಣಿಗಾರಿಕೆಯನ್ನು…
ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು
July 4, 2018ಮಡಿಕೇರಿ: ವಿರಾಜಪೇಟೆಯ ಖಾಸಗಿ ಆಸ್ಪತ್ರೆ ಯಲ್ಲಿ ಹೆರಿಗೆ ಗೆಂದು ದಾಖಲಾದ ಮಹಿಳೆ ಯೋರ್ವರು ತೀವ್ರ ರಕ್ತ ಸ್ರಾವದಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯು ಸಿರೆಳೆದ ದಾರುಣ ಘಟನೆ ನಡೆದಿದೆ. ವಿರಾಜಪೇಟೆ ಹೊಸ ಬಡಾವಣೆ ನಿವಾಸಿ ಯಾದ ಅಣ್ಣಡಿಯಂಡ ಲಾಸ್ಯ ತೇಜಸ್ವಿ (26) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಲಾಸ್ಯ ತೇಜಸ್ವಿ, ಹೆರಿಗೆಗೆಂದು ವಿರಾಜಪೇಟೆಯ ಖಾಸಗಿ ನರ್ಸಿಂಗ್ ಹೋಂಗೆ ದಾಖಲಾಗಿದ್ದು, ಸಹಜ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…
ಐಎಎಸ್ ಅಧಿಕಾರಿ ವಿರುದ್ಧ ಮತಾಂತರ ಆರೋಪ ವಿಹೆಚ್ಪಿ, ಭಜರಂಗದಳ ಪ್ರತಿಭಟನೆ
July 3, 2018ಮಡಿಕೇರಿ: ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಆತನ ಪತ್ನಿ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಂಘಟನೆಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘ ಟನೆಗಳ ಕಾರ್ಯಕರ್ತರು ಲವ್ ಜಿಹಾದ್ ನಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸ ಬೇಕೆಂದು ಪ್ರತಿಭಟನಾಕಾರರು…
ಮೇಕೇರಿ ಬಳಿ ಕಾಡಾನೆಗಳ ಆಟಾಟೋಪ
July 3, 2018ಮಡಿಕೇರಿ: ನಗರಕ್ಕೆ ಹೊಂದಿಕೊಂಡಿರುವ ಮೇಕೇರಿ ವ್ಯಾಪ್ತಿಯಲ್ಲಿ 2 ಕಾಡಾನೆಗಳು ಕಾಫಿ ತೋಟಕ್ಕೆ ದಾಳಿ ಮಾಡಿದೆ. ಮೇಕೇರಿ ಪೈಸಾರಿಯಿಂದ ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಭಾನುವಾರ ರಾತ್ರಿ ವೇಳೆಯಲ್ಲಿ ಆಗಮಿಸಿದ ಕಾಡಾನೆಗಳು ಎದುರಿನಿಂದ ಬಂದ ಆಟೋ ರಿಕ್ಷಾವನ್ನು ಕಂಡು ಪಕ್ಷದಲ್ಲಿದ್ದ ಕಾಫಿ ತೋಟದೊಳಗೆ ಸೇರಿಕೊಂಡಿದೆ. ಮಂಗಳಾದೇವಿ ನಗರದ ಕಡೆಯ ಅರಣ್ಯದಿಂದ ಆಗಮಿಸಿದ 2 ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಯತ್ನ ನಡೆಸಿದರಾದರೂ ಫಲ ಸಿಗಲಿಲ್ಲ. ಕಾಫಿ ತೋಟದ ಒಳಗೆ ಹಲಸಿನ ಹಣ್ಣು, ಬಿದಿರು ಯಥೇಚ್ಛವಾಗಿರುವುದ ರಿಂದ ಕಾಡಾನೆಗಳು ಮರಳಿ…