ಅಕ್ರಮ ಮರಳುಗಾರಿಕೆ; 16 ಲಕ್ಷ ದಂಡ ಸಂಗ್ರಹ
ಕೊಡಗು

ಅಕ್ರಮ ಮರಳುಗಾರಿಕೆ; 16 ಲಕ್ಷ ದಂಡ ಸಂಗ್ರಹ

July 4, 2018

ಮಡಿಕೇರಿ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಿಂದ ಕಳೆದ ವರ್ಷ 16 ಲಕ್ಷ ರೂ. ರಾಜಸ್ವ ಸಂಗ್ರಹವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ.ರೇಷ್ಮ ಹಾಗೂ ಭೂ ವಿಜ್ಞಾನಿ ಕೆ.ಎಸ್. ನಾಗೇಂದ್ರಪ್ಪ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 8, ಮಡಿಕೇರಿ ತಾಲೂಕಿನ ಎಂಟು ಸ್ಥಳಗಳಲ್ಲಿ ಹಾಗೂ ವಿರಾಜಪೇಟೆ ತಾಲೂಕಿನ ಒಂದು ಭಾಗದಲ್ಲಿ ಒಟ್ಟು 17 ಕಡೆಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಸದ್ಯ ಮಳೆಗಾಲವಾದ್ದರಿಂದ ಡಿಸೆಂಬರ್‍ವರೆಗೆ ಮರಳು ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸಾಗಾಣಿಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ ಅವರು ಮಾಹಿತಿ ನೀಡಿದರು.

ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ 209 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ 75 ಪ್ರಕರಣ ಗಳಿಗೆ ದಂಡ ವಿಧಿಸಿ ಸುಮಾರು 16 ಲಕ್ಷ ರೂ. ಸಂಗ್ರಹಿಸಲಾಗಿದೆ. 16 ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸ ಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಎರಡು ವರ್ಷ ಗಳಲ್ಲಿ 24 ಮರಳು ಗಣಿಗಾರಿಕೆ ಪ್ರಕರಣಗಳಲ್ಲಿ 5.85 ಲಕ್ಷ ಗಣಿಗಾರಿಕೆಗೆ ವಿಧಿಸಿದ ದಂಡವಾಗಿದೆ. 11 ಪ್ರಕರಣಗಳಿಗೆ ಮೊಕ ದ್ದಮೆ ದಾಖಲಿಸಲಾಗಿದೆ. ಮರಳು ಸಾಗಾಣಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷದಲ್ಲಿ 127 ಪ್ರಕರಣ ಗಳನ್ನು ದಾಖಲಿಸಲಾಗಿದ್ದು, 21 ಲಕ್ಷದಷ್ಟು ದಂಡ ವಿಧಿಸ ಲಾಗಿದೆ. 13 ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಭೂ ವಿಜ್ಞಾನಿ ಅವರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷದಲ್ಲಿ 14 ಮರಳು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮರಳು ದಾಸ್ತಾನಿಗೆ ಸಂಬಂಧಪಟ್ಟಂತೆ 7.38 ಲಕ್ಷ ದಂಡ ವಿಧಿಸಲಾಗಿದೆ. ಒಟ್ಟಾರೆ 35 ಲಕ್ಷ ದಷ್ಟು ದಂಡ ವಿಧಿಸಲಾಗಿದ್ದು, 25 ಮೊಕದ್ದಮೆಗಳನ್ನು ದಾಖಲಿಸ ಲಾಗಿದೆ ಎಂದು ಭೂ ವಿಜ್ಞಾನಿ ನಾಗೇಂದ್ರಪ್ಪ ಅವರು ತಿಳಿಸಿದರು.

Translate »