ಮಡಿಕೇರಿ: ಕೊಡಗಿನ ಯುವ ಪೀಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ವಹಿಸುವಂತೆ ಇಲ್ಲಿನ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಲಹೆ ಮಾಡಿದೆ. ಮಡಿಕೇರಿಯ ಹೊರ ವಲಯದಲ್ಲಿ ರುವ ವಿಶಾಲ ಬೆಟ್ಟ ಶ್ರೇಣಿಯ ನಡುವೆ ಕರ್ಣಂಗೇರಿ ಗ್ರಾಮದ ಪ್ರಕೃತಿ ರಮಣೀಯ ಸೊಬಗಿನ ಪ್ರದೇಶದಲ್ಲಿ ನಾಲ್ಕು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯು ತನ್ನ ಎರಡು ಶೈಕ್ಷಣಿಕ ವರ್ಷಗಳನ್ನು ಪೂರೈಸಿರುವ ಸಂದರ್ಭ ದಲ್ಲಿ ಈ ಸಲಹೆ ಮಾಡಿದೆ. ಕರ್ಣಂಗೇರಿ ಗ್ರಾಮದ ಈ…
ಹಾಳಾದ ಪೇಡ ಮಾರಾಟ: ದೂರು
July 2, 2018ಮಡಿಕೇರಿ: ಗ್ರಾಹಕರೊಬ್ಬರು ನಗರದಲ್ಲಿರುವ ನಂದಿನಿ ಹಾಲಿನ ಉತ್ಪನ್ನ ಮತ್ತು ಮಾರಾಟ ಕೇಂದ್ರದ ವಿರುದ್ಧ ಹಾಳಾದ ಪೇಡಾ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ನಂದಿನಿ ಹಾಲಿನ ಉತ್ಪನ್ನ ಮತ್ತು ಮಾರಾಟ ಕೇಂದ್ರದಿಂದ ಪಾಲೂರು ಗ್ರಾಮದ ಸೂದನ ಎಸ್. ಈರಪ್ಪ ಅವರ ಪುತ್ರಿ ಶುಕ್ರವಾರ ನೂರು ಗ್ರಾಂ. ತೂಕದ ನಂದಿನಿ ಪೇಡಾವನ್ನು ಖರೀದಿಸಿದ್ದು, ಮನೆಗೆ ತಂದು ತಿನ್ನಲು ತೆರೆದಾಗ ಪೇಡಾ…
ಡಾ.ಅಂಬೇಡ್ಕರ್ ವಿಚಾರಧಾರೆ ಅನುಸರಿಸಲು ಕರೆ
July 2, 2018ಮಡಿಕೇರಿ: ಸಂವಿಧಾನವನ್ನು ರಚಿಸುವ ಮೂಲಕ ಸಮಾನತೆಯ ಆದರ್ಶಗಳನ್ನು ಸಾರಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸುವ ಮನೋಸ್ಥಿತಿಯನ್ನು ಪ್ರತಿ ಯೊಬ್ಬರು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಕರೆ ನೀಡಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ, ವೃದ್ಧಾಶ್ರಮದ ಬಂಧು ಗಳಿಗೆ ವಸ್ತ್ರ ವಿತರಣೆ ಹಾಗೂ ದಲಿತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮಡಿ ಕೇರಿಯಲ್ಲಿ ನಡೆಯಿತು. ಡಾ.ಅಂಬೇಡ್ಕರ್ ಅವರು ಸಂವಿಧಾನ…
ಗೌಳಿ ಬೀದಿ ತೋಡಿನಲ್ಲಿ ಹಳೇ ನಾಣ್ಯಗಳು ಪತ್ತೆ
July 1, 2018ಮಡಿಕೇರಿ: ನಗರದ ಕೊಹಿ ನೂರು ರಸ್ತೆಯ ಗೌಳಿಬೀದಿ ತೋಡಿನಲ್ಲಿ ಚಲಾವಣೆಯಲ್ಲಿರದ ನಾಣ್ಯಗಳು ಪತ್ತೆಯಾಗಿವೆ. ಮಾತ್ರವಲ್ಲದೇ ದೇವಾ ಲಯದ ಹುಂಡಿಗೆ ಹಾಕುವ ಬೆಳ್ಳಿಯ ನಾಗನ ಪ್ರತಿಮೆಗಳು, ದೀಪಗಳು, ಮಾನವ ರೂಪದ ಬೆಳ್ಳಿಯ ಹಾಳೆಗಳು ಹಾಗು ಅಂದಾಜು ನಾಲ್ಕು ಕೆ.ಜಿ.ಗೂ ಹೆಚ್ಚಿನ ನಾಣ್ಯ ಗಳು ಪತ್ತೆಯಾಗಿವೆ. ದೇವಾಲಯದ ಹುಂಡಿ ಕದ್ದಿರುವ ಕಳ್ಳರು ಹಣ ಮತ್ತು ಇತರ ವಸ್ತುಗಳನ್ನು ದೋಚಿ, ಬೆಳ್ಳಿಯ ಆಭರಣಗಳನ್ನು ತೋಡಿಗೆ ಎಸೆದಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ತೋಡಿನಲ್ಲಿ ಕಂಡುಬಂದಿರುವ ನಾಣ್ಯ ಮತ್ತು ಬೆಳ್ಳಿಯ ಆಭರಣಗಳು…
ದಶಕದಿಂದ ನೆನೆಗುದಿಗೆ ಬಿದ್ದಿರುವ ಮಡಿಕೇರಿ, ವಿರಾಜಪೇಟೆ ವಿದ್ಯುತ್ ಸಂಪರ್ಕ ಯೋಜನೆ
July 1, 2018ಮಡಿಕೇರಿ: ವೀರಾಜಪೇಟೆ- ಮಡಿಕೇರಿ ನಡುವಿನ ಸುಮಾರು ರೂ.7 ಕೋಟಿ ವೆಚ್ಚದ 66 ಕೆ.ವಿ.ವಿದ್ಯುತ್ ಮಾರ್ಗದ ಕಾಮಗಾರಿ ಕಳೆದ 10 ವರ್ಷದಿಂದಲೂ ಆರಂಭಗೊಂಡಿಲ್ಲ. ಕೆಪಿಟಿಸಿಎಲ್ ಅಧಿಕಾರಿ ಗಳು ನೆಪ ಹೇಳುತ್ತಾ ಕಾಲಹರಣ ಮಾಡಿ ದರೇ ಹೊರತು ಹೊಸ ಟೆಂಡರ್ ಪ್ರಕ್ರಿಯೆ ಆರಂಭಕ್ಕೆ ಇಂದಿಗೂ ಮನಸ್ಸು ಮಾಡಿಲ್ಲ. ಈ ಹಿಂದೆ ಸುಮಾರು ರೂ.6.75 ಕೋಟಿ ವೆಚ್ಚದ ವೀರಾಜಪೇಟೆಯಿಂದ ಮಡಿಕೇರಿ ವರೆಗೆ ಸುಮಾರು 172 ವಿದ್ಯುತ್ ಗೋಪುರ ನಿರ್ಮಾಣಕ್ಕೆ ‘ಶಿವಮೊಗ್ಗ ಸ್ಟೀಲ್ ಕಂಪೆನಿ’ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಗೋಪುರ ನಿರ್ಮಾಣಕ್ಕೆ ಗುತ್ತಿಗೆದಾರ…
ಟಿಪ್ಪು ನೆನಪಿಸುವ ಕುಶಾಲನಗರ ಹೆಸರು ಬದಲಾವಣೆಗೆ ಸಿಎನ್ಸಿ ಆಗ್ರಹ
June 30, 2018ಮಡಿಕೇರಿ: ‘ಟಿಪ್ಪು’ ಜನಿ ಸಿದ ಸುವಾರ್ತೆ ದೊರೆತ ಹಿನ್ನೆಲೆಯಲ್ಲಿ ಕಾವೇರಿ ನದಿತಟದಲ್ಲಿರುವ ದಂಡಿನಪೇಟೆ ಯಲ್ಲಿ ತನ್ನ ಸೇನಾ ತುಕ್ಕಡಿಯೊಂದಿಗೆ ಬೀಡು ಬಿಟ್ಟಿದ್ದ ‘ಹೈದರಾಲಿ’, ಸಂಭ್ರಮ ದಿಂದ ಆ ಪ್ರದೇಶವನ್ನು ಕುಶಾಲನಗರ ವೆಂದು ನಾಮಕರಣ ಮಾಡಿದ್ದು, “ಕುಷ್” ಎಂದರೆ ಪರ್ಷಿಯನ್ ಭಾಷೆಯಲ್ಲಿ ಸಂಭ್ರಮ ಎಂದರ್ಥ ಎಂದು ಅಭಿಪ್ರಾಯ ಪಟ್ಟಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ, ಕುಶಾಲನಗರ ಪಟ್ಟಣದ ಹೆಸ ರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತ…
ಸಾಲ ಯೋಜನೆ ಅನುಷ್ಠಾನದಲ್ಲಿ ನಿರಾಸಕ್ತಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ, ಶಾಸಕರ ಅಸಮಾಧಾನ
June 29, 2018ಮಡಿಕೇರಿ: ಕೇಂದ್ರ ಮತ್ತು ರಾಜ್ಯ ಸರಕಾರದ ಸಾಲದ ಯೋಜನೆಗಳ ಅನುಷ್ಠಾನದಲ್ಲಿ ನಿರಾಸಕ್ತಿ ತೋರುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ ಪ್ರತಾಪಸಿಂಹ ಹಾಗೂ ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿ ಸಿದ ಅವರು ಅಸಡ್ಡೆ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ಸೂಚನೆ ನೀಡಿದ್ದಾರೆ. ನಗರದ ಕಾರ್ಪೋರೇಷನ್ (ಲೀಡ್) ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕ್ಗಳ ಸಾಲ ವಿತರಣೆ ಮತ್ತು…
ಕೊಡಗಿನ ಸೌಂದರ್ಯ ಸವಿಯಲು ಲಕ್ಷಾಂತರ ಪ್ರವಾಸಿಗರ ಲಗ್ಗೆ
June 29, 2018ಮಡಿಕೇರಿ: ದಕ್ಷಿಣ ಕಾಶ್ಮೀರ ಎಂದೇ ಕರೆಯಲ್ಪಡುವ,ಹಸಿರು ಸೀಮೆಯ ಕೊಡಗು ಜಿಲ್ಲೆಯ ಸೌಂದರ್ಯ ಸವಿ ಯಲು ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆ ಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗುಡ್ಡಗಾಡು ಹಸಿರು ಪರಿಸರ, ತಂಪು ಹವಾಗುಣ ಪ್ರವಾಸಿಗರನ್ನು ತನ್ನೆ ಡೆಗೆ ಸೆಳೆಯುವಲ್ಲಿ ಸಫಲವಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೇಗ ವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸರಕಾರಕ್ಕೂ ಲಾಭವಾಗುತ್ತಿದೆ. 2018ರ ಜನ ವರಿಯಿಂದ ಜೂನ್ ಮೊದಲ ವಾರದ ವರೆಗೆ ಜಿಲ್ಲೆಗೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು ಅಂದಾಜು 10 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು…
ಸಲಗನ ದಾಳಿಗೆ ಆಟೋ ಜಖಂ
June 29, 2018ಮಡಿಕೇರಿ: ಒಂಟಿ ಸಲಗದ ದಾಳಿಯಿಂದ ಆಟೋ ಒಂದು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಪೊನ್ನಚೆಟ್ಟಿ ಎಸ್ಟೇಟ್ ಬಳಿ ಸಂಭವಿಸಿದೆ. ಭಜರಂಗದಳದ ತಾಲೂಕು ಉಪಾಧ್ಯಕ್ಷ ದುರ್ಗೇಶ್ ಎಂಬವರಿಗೆ ಸೇರಿದ ಆಟೋ ಜಖಂಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ದುರ್ಗೇಶ್ ಬುಧವಾರ ಸಂಜೆ ತಮ್ಮ ಮನೆ ಬಳಿ ಆಟೋ ನಿಲ್ಲಿಸಿ ತೆರಳಿದ್ದರು. ರಾತ್ರಿ ವೇಳೆ ಧಾಳಿ ಮಾಡಿದ ಒಂಟಿ ಸಲಗ, ಆಟೋ ರಿಕ್ಷಾವನ್ನು ಉರುಳಿಸಿ ಮೇಲು ಹೊದಿಕೆಯನ್ನು ದಂತದಿಂದ ತಿವಿದು, ಹರಿದು ಹಾಕಿದೆ. ಮಾತ್ರವಲ್ಲದೆ ಕಾಫಿ…
ಬಾಣೆ ಸಮಸ್ಯೆ ಕಾನೂನಾತ್ಮಕವಾಗಿ ಬಗೆಹರಿಸಿದ್ದರೂ ಅನಗತ್ಯ ಗೊಂದಲ ಸೃಷ್ಟಿ : ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಆರೋಪ
June 28, 2018ಮಡಿಕೇರಿ: ಕೊಡಗಿನ ‘ಬಾಣೆ’ ಜಾಗದ ಸಮಸ್ಯೆಗಳು ಕಾನೂನಾತ್ಮಕವಾಗಿ ಈಗಾಗಲೆ ಬಗೆಹರಿದಿದ್ದರೂ, ಇದನ್ನು ಅರಣ್ಯದ ಜಾಗ ಎಂದು ಬಿಂಬಿಸುವ ಮೂಲಕ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಇಡೀ ಕೊಡಗನ್ನು ಅರಣ್ಯೀಕರಣ ಮಾಡುವ ಪಿತೂರಿ ಡೋಂಗಿ ಪರಿಸರವಾದಿಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯು ತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲರಾದ ಎ.ಕೆ.ಸುಬ್ಬಯ್ಯ ಈ ಸಮ ಸ್ಯೆಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಯುವ ಸಮೂಹ ಮುಂದೆ ಬರಬೇಕೆಂದು ಕರೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ…