ಕೊಡಗಿನ ಯುವ ಜನತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಲಹೆ
ಕೊಡಗು

ಕೊಡಗಿನ ಯುವ ಜನತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಲಹೆ

July 3, 2018

ಮಡಿಕೇರಿ:  ಕೊಡಗಿನ ಯುವ ಪೀಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ವಹಿಸುವಂತೆ ಇಲ್ಲಿನ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಲಹೆ ಮಾಡಿದೆ.

ಮಡಿಕೇರಿಯ ಹೊರ ವಲಯದಲ್ಲಿ ರುವ ವಿಶಾಲ ಬೆಟ್ಟ ಶ್ರೇಣಿಯ ನಡುವೆ ಕರ್ಣಂಗೇರಿ ಗ್ರಾಮದ ಪ್ರಕೃತಿ ರಮಣೀಯ ಸೊಬಗಿನ ಪ್ರದೇಶದಲ್ಲಿ ನಾಲ್ಕು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯು ತನ್ನ ಎರಡು ಶೈಕ್ಷಣಿಕ ವರ್ಷಗಳನ್ನು ಪೂರೈಸಿರುವ ಸಂದರ್ಭ ದಲ್ಲಿ ಈ ಸಲಹೆ ಮಾಡಿದೆ.

ಕರ್ಣಂಗೇರಿ ಗ್ರಾಮದ ಈ ಬೆಟ್ಟ ಶ್ರೇಣ ಯ ಒಟ್ಟು 48 ಎಕರೆ ಪ್ರದೇಶದಲ್ಲಿ ಈಗಾಗಲೇ ಅಂದಾಜು ರೂ. 170 ಕೋಟಿ ವೆಚ್ಚದ ಕಾಮಗಾರಿ ಸಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹೆಸರಿನೊಂದಿಗೆ ಕರ್ನಾಟಕ ಸರ್ಕಾರ ದಿಂದ 2015ರಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸುವುದರೊಂದಿಗೆ ದೇಶದ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಕರ್ನಾ ಟಕದ ಒಟ್ಟು 150 ವೈದ್ಯಕೀಯ ವಿದ್ಯಾರ್ಥಿ ಗಳು ಶಿಕ್ಷಣ ಪಡೆಯುತ್ತಿದ್ದಾರೆ. ದ್ವಿತೀಯ ವರ್ಷದಲ್ಲಿಯೂ ಅರ್ಹತೆ ಮೇರೆಗೆ 150 ವಿದ್ಯಾರ್ಥಿಗಳ ಸೇರ್ಪಡೆ ಯೊಂದಿಗೆ ಪ್ರಸಕ್ತ ಆಗಸ್ಟ್‍ನಲ್ಲಿ ಮುಂದಿನ ಸಾಲಿಗೆ ಮತ್ತೆ 150 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ.

ವಿಶಾಲ ಕೊಠಡಿಗಳೊಂದಿಗೆ ಆಧುನಿಕ ವೈದ್ಯಕೀಯ ಶಿಕ್ಷಣ ಪದ್ಧತಿಯ ಕಲಿಕೆಗೆ ಅವಶ್ಯಕವಿರುವ ಎಲ್ಲಾ ತಂತ್ರಜ್ಞಾನ ಸಲ ಕರಣೆಗಳ ಸಹಿತ ಇಲ್ಲಿ ಒಂದು ನೂರಕ್ಕೂ ಅಧಿಕ ಮಂದಿ ಭೋದಕರು ಹಾಗೂ ಭೋದಕೇತರ ಸಿಬ್ಬಂದಿ ಕರ್ತವ್ಯನಿರತ ರಾಗಿದ್ದಾರೆ. ಶಿಕ್ಷಣಾರ್ಥಿಗಳಿಗೆ ಇಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಪುರುಷರು, ಮಹಿಳಾ ವಸತಿ ಗೃಹಗಳಿದ್ದು, ವಿಶೇಷ ಕಾರ್ಯಾಗಾರ, ಕಮ್ಮಟ ಗಳನ್ನು ನಡೆಸುವ ಸಭಾಂಗಣಗಳು ಆಧುನಿಕ ಅನುಕೂಲದೊಂದಿಗೆ ರೂಪುಗೊಂಡಿದೆ.

ಕಡಿಮೆ ಶುಲ್ಕ: ಇಂದಿನ ಪೈಪೋಟಿ ಯುಗದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆ ಗಳಲ್ಲಿ ಭಾರೀ ಮೊತ್ತದ ಶುಲ್ಕ ನೀಡಿ ಕಲಿಕೆಗೆ ತೆರಳುವ ಬದಲು ಈ ನೂತನ ಸರ್ಕಾರಿ ಸಂಸ್ಥೆಯಲ್ಲಿ ಕನಿಷ್ಠ ಶುಲ್ಕ ಪಾವತಿಸಿ, ಉತ್ತಮ ವ್ಯವಸ್ಥೆಯಡಿ ಕೊಡಗಿನ ಸುಂದರ ಪರಿಸರ ದಲ್ಲಿ ಕಲಿಕೆಗೆ ಅವಕಾಶ ಲಭಿಸಲಿದೆ. ವಾರ್ಷಿಕ ರೂ. 30 ಸಾವಿರದಿಂದ ರೂ. 70 ಸಾವಿರದೊಳಗೆ ಎಲ್ಲ ವೆಚ್ಚ ಭರಿಸಿ ಕಲಿಯುವ ಅವಕಾಶ ಇಲ್ಲಿದೆ. ಭವಿಷ್ಯದಲ್ಲಿ ಇದೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಥೆ ಮೂಲಕ ಅಂದಾಜು ರೂ. 5 ರಿಂದ 10 ಸಾವಿರ ಶಿಷ್ಯವೇತನ ಮರಳಿ ಕೈಸೇರಲಿದೆ.

ಪ್ಯಾರಾ ಮೆಡಿಕಲ್ ಶಿಕ್ಷಣ: ಪ್ರಸಕ್ತ ಸೆಪ್ಟೆಂಬರ್‍ನಿಂದ ಮಡಿಕೇರಿಯ ಈ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಅರ್ಹತೆ ಮೇರೆಗೆ ಕಲಿಯುತ್ತಿರುವ ಎಂಬಿಬಿಎಸ್ (ಉನ್ನತ) ಶಿಕ್ಷಣ ಮಾತ್ರವಲ್ಲದೆ ವೈದ್ಯ ಕೀಯ ಕ್ಷೇತ್ರಕ್ಕೆ ಸಹಕಾರಿಯಾಗುವ ‘ಪ್ಯಾರಾ ಮೆಡಿಕಲ್ ಕೋರ್ಸ್’ ಹಾಗೂ ಪಿಜಿ ಶಿಕ್ಷಣ ಜಾರಿಗೊಳ್ಳಲಿದ್ದು, ಕನಿಷ್ಟ 10ನೇ ತರಗತಿ ಹಾಗೂ ಪಿಯುಸಿ ಪೂರೈಸಿ ರುವ ಅಭ್ಯರ್ಥಿಗಳಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಕೊಡಗಿನ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣ ಕಲಿಕೆಗೆ ಆಸಕ್ತಿ ತೋರುವಂತೆ ಈ ಸಂಸ್ಥೆಯ ಆಡಳಿತ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

ಕಾಮಗಾರಿ ವಿಳಂಬ: ಕೊಡಗು ವೈದ್ಯ ಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಕಟ್ಟಡ ಕಾಮಗಾರಿಯನ್ನು ಬೆಂಗಳೂರಿನ ನಾಗಾರ್ಜುನ ಕಟ್ಟಡ ನಿರ್ಮಾಣ ಉದ್ದಿಮೆ ಗುತ್ತಿಗೆ ಪಡೆದುಕೊಂಡಿದ್ದು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲವೆಂದು ತಿಳಿದುಬಂದಿದೆ. ಪರಿಣಾಮ ವಿದ್ಯಾರ್ಥಿ ಗಳ ಕಲಿಕೆ ಹಾಗೂ ಇತರ ಚಟುವಟಿಕೆ ಗಳಿಗೆ ಅಪೂರ್ಣ ಕೆಲಸದೊಂದಿಗೆ ವಿದ್ಯುತ್ ಸೌಲಭ್ಯ ಇತ್ಯಾದಿ ಸಮಸ್ಯೆ ಎದುರಾಗಿದೆ ಎಂದು ಅಲ್ಲಿನ ಆಡಳಿತ ಮುಖ್ಯಸ್ಥರಾಗಿರುವ ಡಾ. ಮೇರಿ ನಾಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪ್ರಸಕ್ತ ಮೇ ಅಂತ್ಯದೊಳಗೆ ಅಂತಿಮ ಕಾಮಗಾರಿ ಪೂರೈಸಲು ಗಡುವು ನೀಡಿದ್ದರೂ ಕೂಡ ಸಾಧ್ಯವಾಗಿಲ್ಲ ವೆಂದು ಹೇಳಿದ್ದರು. ಈ ಸಂಬಂಧ ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತರ ಗಮನ ಸೆಳೆಯ ಲಾಗಿದ್ದು, ನೂತನ ಸರ್ಕಾರದ ಸಂಬಂಧಪಟ್ಟ ಸಚಿವರು ಮತ್ತು ಜನಪ್ರತಿ ನಿಧಿಗಳು ಆಸಕ್ತಿ ತೋರಬೇಕಿದೆ.

Translate »