ಮಡಿಕೇರಿ: ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು, ಕೊಡಗು ಜಿಲ್ಲೆ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯನ್ನು ಕಾಣುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಜವಾಹರ್ ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡಗಿನಂತಹ ಮಲೆನಾಡು ಪ್ರದೇಶದಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ವಿದ್ದರೂ…
ಜೆಡಿಎಸ್ ಹೋಬಳಿ ಅಧ್ಯಕ್ಷನ ಮೇಲೆ ಹಲ್ಲೆ
June 2, 2018ಮಡಿಕೇರಿ: ಗ್ರಾಪಂ ಸದಸ್ಯರಾಗಿರುವ ಮಾದಾಪುರ ಹೋಬಳಿ ಜೆಡಿಎಸ್ ಅಧ್ಯಕ್ಷರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಾದಾಪುರ ಸಮೀಪದ ಮೂವತೋಕ್ಲು ಗ್ರಾಮದಲ್ಲಿ ನಡೆದಿದೆ. ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ, ಜೆಡಿಎಸ್ ಹೋಬಳಿ ಅಧ್ಯಕ್ಷ ಮುಕ್ಕಾಟೀರ ಬೆಳ್ಳಿ ಯಪ್ಪ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನದ ಹಬ್ಬ ಆಚರಣೆ ಸಂಬಂಧ ಸಭೆ ನಡೆಯುತ್ತಿದ್ದ ವೇಳೆ ಇವರ ಮೇಲೆ ಶ್ರೀನಾಥ್ ಎಂಬಾತ ಹಲ್ಲೆ ನಡೆಸಿದ್ದಾನೆ. ತನ್ನ ಗ್ರಾಮ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ನೀರಿನ ಗೇಟ್ ವಾಲ್ ಅಳ…
ಕೊಡಗಿನ ಸುಟ್ಟತ್ಮಲೆಯಲ್ಲಿ ಅಕ್ರಮ ಹರಳು ಕಲ್ಲು ದಂಧೆ
June 2, 2018ಮಡಿಕೇರಿ: ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ವಲಯ ಹಾಗೂ ಕೊಡಗಿನ ಪುಷ್ಪಗಿರಿ ಅರಣ್ಯ ವಲಯದ ಗಡಿಯಲ್ಲಿ ರುವ ಕೂಜಿಮಲೆ ಮತ್ತು ಕೊಡಗಿನ ಸುಟ್ಟತ್ಮಲೆ ವ್ಯಾಪ್ತಿಯಲ್ಲಿ ಮರಳಿ ಅಕ್ರಮ ಹರಳು ಕಲ್ಲು ದಂಧೆ ನಡೆಯುತ್ತಿದ್ದು ಮಡಿಕೇರಿಯ ಕೆಲವರು ಈ ವನಸಂಪತ್ತು ಲೂಟಿಯಲ್ಲಿ ತೊಡಗಿರುವ ಸುಳಿವು ಲಭಿಸಿದೆ. ಒಂದೊಮ್ಮೆ ರೂ. 500 ರಿಂದ 700 ಮೊತ್ತಕ್ಕೆ ಹರಳು ಕಲ್ಲು ಕೆ.ಜಿ.ಯೊಂದಕ್ಕೆ ಮಾರಾಟ ವಾಗುತ್ತಿದ್ದರೆ, ಪ್ರಸಕ್ತ ಸುಮಾರು ರೂ.25 ಸಾವಿರ ದೊರಕಲಿದೆ ಎನ್ನಲಾಗುತ್ತಿದೆ. 1990ರ ಬಳಿಕ ಸುಬ್ರಹಣ್ಯ ವ್ಯಾಪ್ತಿಯ ಕೂಜಿಮಲೆಯಲ್ಲಿ ಈ ದಂಧೆ…
ಮಡಿಕೇರಿ ಕೋಟೆಯಲ್ಲಿ ವಾಸ್ತವ್ಯ ಹೂಡಿದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್
June 2, 2018ಮಡಿಕೇರಿ: ಮಡಿಕೇರಿಯಲ್ಲಿ ರುವ ಕೋಟೆಗೆ ತಾನೇ ವಾರಸುದಾರ ಎಂದು ಹೇಳಿಕೊಂಡು ಈ ಹಿಂದೆ ಕೋಟೆ ಆವರಣದೊಳಗಿರುವ ಮುಖ್ಯ ದ್ವಾರಕ್ಕೆ ಬೀಗಹಾಕಿ ವಿವಾದ ಸೃಷ್ಟಿಸಿದ್ದ ಮೈಸೂ ರಿನ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಇದೀಗ ಕೋಟೆ ಆವರಣ ದಲ್ಲಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ದಾಖಲಾತಿ ಗಳ ಸಹಿತ ಗಂಟುಮೂಟೆಯೊಂದಿಗೆ ಮೈಸೂರಿನಿಂದ ಮಡಿಕೇರಿ ಆಗಮಿಸಿದ ಹಾಲೇರಿ ನಾಗರಾಜು ಒಡೆಯರ್ ಜಿಲ್ಲಾ ಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸತೀಶ್ ಅವರಿಗೆ ಮಡಿಕೇರಿ ಕೋಟೆ ಪ್ರದೇಶ ತನಗೆ ಸೇರಬೇಕೆಂದು…
ಹೆಚ್ಚು ಹಣ ವಸೂಲಿ ಆರೋಪ: ಮಾಂದಲ್ಪಟ್ಟಿ ಪ್ರವಾಸಿ ವಾಹನಗಳಿಗೆ ದರ ನಿಗದಿ
May 31, 2018ಮಡಿಕೇರಿ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳು ನಿಯಮ ಬಾಹಿರವಾಗಿ ರಹದಾರಿ, ಷರತ್ತನ್ನು ಉಲ್ಲಂ ಘಿಸಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿ ಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಸೂಕ್ತ ದರ ನಿಗದಿ ಪಡಿ ಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಗರಿಷ್ಠ ಆಸನ ಸಾಮಥ್ರ್ಯ 8 ಮೀರದ, ರಹದಾರಿ ಹೊಂದಿರುವ ಜೀಪ್(ಹಳದಿ ಫಲಕ) ವಾಹನಗಳಿಗೆ ಮತ್ತು ವಾಪಸ್ಸು ಪ್ರಯಾಣ ದರ ಸಹ ಒಳ ಗೊಂಡಂತೆ…
ಮೆಕೂನ್ ಚಂಡಮಾರುತದ ಎಫೆಕ್ಟ್: ಮಂಜಿನ ನಗರಿಯಲ್ಲಿ ಮಳೆರಾಯನ ಕಾರುಬಾರು
May 30, 2018ಮಡಿಕೇರಿ: ದಕ್ಷಿಣ ಒಳನಾಡಿನ ಮೆಕೂನ್ ಚಂಡಮಾರುತದ ಎಫೆಕ್ಟ್ ಮಡಿಕೇರಿಗೂ ತಟ್ಟಿದ್ದು, ನಗರದಲ್ಲಿ ಮಳೆಯೊಂದಿಗೆ ಮಂಜು ಮಿಶ್ರಿತ ವಾತಾವರಣ ಕಂಡು ಬಂದಿದೆ. ಬೆಳಿಗ್ಗೆಯಿಂದಲೇ ಮಳೆ ಮೋಡ ಕಂಡು ಬಂದಿದ್ದು ಮಧ್ಯಾಹ್ನದ ನಂತರ ನಿರಂತರವಾಗಿ ಸುರಿದ ಮಳೆ ರಾತ್ರಿಯವರೆಗೆ ಮುಂದುವರಿಯಿತು. ಅದರೊಂದಿಗೆ ಚಳಿಯೂ ಕಂಡು ಬಂದಿದ್ದು, ಉಷ್ಣಾಂಶದಲ್ಲೂ ಕುಸಿತ ಕಂಡಿದೆ. ಮುಂಗಾರು ಪ್ರಾರಂಭಕ್ಕೂ ಮನ್ನವೆ ಮಡಿ ಕೇರಿ ಮಳೆ ಚಳಿಯಿಂದ ತರಗುಟ್ಟುತ್ತಿದೆ. ನಗರದಲ್ಲಿ ದಟ್ಟಮಂಜು ಕವಿದಿದ್ದ ಹಿನ್ನಲೆಯಲ್ಲಿ ವಾಹನ ಸವಾರರು ಹೆಡ್ಲೈಟ್ ಬಳಸಿಕೊಂಡೆ ವಾಹನ ಚಲಾಯಿಸುತ್ತಿದ್ದುದು ಕಂಡು ಬಂತು. ಇನ್ನು…
ಮಡಿಕೇರಿಯಲ್ಲಿ ಚಂದ್ರಶೇಖರ್ ರಾವ್ ಸ್ಮಾರಕ ಟ್ರಸ್ಟ್ ಪ್ರಾರಂಭ
May 30, 2018ಮಡಿಕೇರಿ: ಮುಂಬೈನಲ್ಲಿರುವ ಮಡಿಕೇರಿ ಮೂಲದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಶಾಖೆಯನ್ನು ನಗರದಲ್ಲಿ ಉದ್ಘಾಟಿಸಲಾಗಿದ್ದು, ಬಡ ವಿದ್ಯಾರ್ಥಿ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ನಗರದ ಶೇಖರ್ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಗೊಂಡ ಚಂದ್ರಶೇಖರ ರಾವ್ ಮೆಮೊರಿಯಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ, ವಿಧವಾ ವೇತನ, ವೈದ್ಯ ಕೀಯ ನೆರವು, ವಿವಾಹ ಕಾರ್ಯ ಸೇರಿದಂತೆ ಹಲವರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಅಂತೆಯೇ ಜ್ಞಾನದೀಪ ದೈವಜ್ಞ ಮಹಿಳಾ ಸಂಘಕ್ಕೆ 5 ಸಾವಿರ ರು.ಗಳ ನೆರವು ಹಾಗೂ ದೈವಜ್ಞ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು…
ಗೋಣ ಕೊಪ್ಪದಲ್ಲಿ ಮಾಜಿ ಸೈನಿಕರ ಬೃಹತ್ ಸಮಾವೇಶ ಮಾಜಿ ಸೈನಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯ
May 28, 2018ಮಡಿಕೇರಿ: ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಮಾಜಿ ಸೈನಿಕರು ಉದ್ಯೋಗ ಪಡೆಯಲು ಮುಂದಾಗ ಬೇಕಿದೆ ಎಂದು ಭಾರತೀಯ ಭೂಸೇನೆಯ ದಕ್ಷಿಣ ವಿಭಾಗದ ಸೇನಾ ಮುಖ್ಯಸ್ಥರಾದ ಲೆ.ಜ.ದಿವಾನ್ ರವೀಂದ್ರನಾಥ್ ಸೋನಿ ಅವರು ತಿಳಿಸಿದ್ದಾರೆ. ಭಾರತೀಯ ಸೇನೆ, ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾ ವತಿಯಿಂದ ಗೋಣ ಕೊಪ್ಪದ ಕಾವೇರಿ ಕಾಲೇಜಿನಲ್ಲಿ ಭಾನು ವಾರ ನಡೆದ ಮಾಜಿ ಸೈನಿಕರ ರ್ಯಾಲಿ ಯಲ್ಲಿ ಅವರು ಮಾಡಿದರು. ಮಾಜಿ ಸೈನಿಕರು ಮತ್ತು ಅವಲಂಬಿತ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಕಾರ್ಯಕ್ರಮ…
ಮುಂಗಾರು ಮಳೆ ಪ್ರವಾಹ ಮುನ್ನೆಚ್ಚರಿಕೆ ಸಿದ್ಧತೆಗೆ ಸೂಚನೆ
May 28, 2018ಮಡಿಕೇರಿ: ಮುಂಗಾರು ಮಳೆ ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳು ವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ಮುಂಗಾರು ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆ ನಿಟ್ಟಿನಲ್ಲಿ ಜೂನ್ ಮೊದಲ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ. ಆದ್ದರಿಂದ…
ಸಾಕು ತಂದೆ ಮನೆಯಲ್ಲೇ ಕಳವು ಮಾಡಿದ್ದ ಶಿಕ್ಷಕಿ ಸೆರೆ 3.60 ಲಕ್ಷ ಮೌಲ್ಯದ ಚಿನ್ನಾಭರಣ ವಶ
May 27, 2018ಮಡಿಕೇರಿ: ಮೂರ್ನಾಡಿನ ಸುಭಾಷ್ ನಗರದಲ್ಲಿ ಕಳೆದ ಐದು ದಿನಗಳ ಹಿಂದೆ ನಡೆದ ಮನೆಕಳವು ಪ್ರಕ ರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿ ಯಾಗಿದ್ದು, ಮನೆಯೊಡೆಯನ ಸಾಕುಮ ಗಳೇ ಚೋರಿ ಎನ್ನುವುದು ಖಾತ್ರಿಯಾ ಗಿದೆ. ಕೃಪಾಶ್ರೀ(26) ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ. ಮೂರ್ನಾಡು ಸುಭಾಷ್ ನಗರ ನಿವಾಸಿ ವೆಂಕಟರಮಣ ಭಟ್ ಅವರು ಮೇ 20 ರಂದು ಕಾರ್ಯನಿಮಿತ್ತ ಪರ ಊರಿಗೆ ತೆರ ಳಿದ್ದು, ಮರಳಿ ಮನೆಗೆ ಬರುವಷ್ಟರಲ್ಲಿ ಅವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗಿದ್ದ ಸುಮಾರು…