ಹೆಚ್ಚು ಹಣ ವಸೂಲಿ ಆರೋಪ: ಮಾಂದಲ್ಪಟ್ಟಿ ಪ್ರವಾಸಿ ವಾಹನಗಳಿಗೆ ದರ ನಿಗದಿ
ಕೊಡಗು

ಹೆಚ್ಚು ಹಣ ವಸೂಲಿ ಆರೋಪ: ಮಾಂದಲ್ಪಟ್ಟಿ ಪ್ರವಾಸಿ ವಾಹನಗಳಿಗೆ ದರ ನಿಗದಿ

May 31, 2018

ಮಡಿಕೇರಿ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳು ನಿಯಮ ಬಾಹಿರವಾಗಿ ರಹದಾರಿ, ಷರತ್ತನ್ನು ಉಲ್ಲಂ ಘಿಸಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿ ಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಸೂಕ್ತ ದರ ನಿಗದಿ ಪಡಿ ಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಆ ನಿಟ್ಟಿನಲ್ಲಿ ಗರಿಷ್ಠ ಆಸನ ಸಾಮಥ್ರ್ಯ 8 ಮೀರದ, ರಹದಾರಿ ಹೊಂದಿರುವ ಜೀಪ್(ಹಳದಿ ಫಲಕ) ವಾಹನಗಳಿಗೆ ಮತ್ತು ವಾಪಸ್ಸು ಪ್ರಯಾಣ ದರ ಸಹ ಒಳ ಗೊಂಡಂತೆ ದರ ನಿಗದಿಪಡಿಸಲಾಗಿದೆ.

ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದ ಲ್ಪಟ್ಟಿಯ ಪ್ರವೇಶ ದ್ವಾರದ ವರೆಗೆ(ಮಾರ್ಗ ರಾಜಾಸೀಟು, ಕೆ.ನಿಡುಗಣೆ) 800 ರೂ,. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ಪ ಟ್ಟಿಯ ಪ್ರವೇಶ ದ್ವಾರದ ವರೆಗೆ(ಮಾರ್ಗ ರಾಜಾಸೀಟು, ಎಫ್‍ಎಂಕೆಎಂಸಿ ಕಾಲೇಜು, ಕೋಳಿಗೂಡು, ಕಾಲೂರು) 800 ರೂ. ಮಾಂದಲ್ಪಟ್ಟಿ ಪ್ರವೇಶ ದ್ವಾರದಿಂದ ಮಾಂದಲ್ಪಟ್ಟಿಯ ಪ್ರೇಕ್ಷಣ ೀಯ ಸ್ಥಳದ ವರೆಗೆ (ವ್ಯೂ ಪಾಯಿಂಟ್) 300 ರೂ. ಮಡಿಕೇರಿ ಬಸ್ ನಿಲ್ದಾಣದಿಂದ ಅಬ್ಬಿ ಜಲ ಪಾತದ ವರೆಗೆ (ಮಾರ್ಗ ರಾಜಾಸೀಟು, ಕೆ.ನಿಡುಗಣೆ) 400 ರೂ, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ಪಟ್ಟಿ ಪ್ರವೇಶ ದ್ವಾರದ ವರೆಗೆ (ಮಾರ್ಗ ರಾಜಾಸೀಟು, ಕೆ.ನಿಡುಗಣೆ, ಅಬ್ಬಿ ಜಲಪಾತ) 1000 ರೂ. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ಪಟ್ಟಿಯ ಪ್ರೇಕ್ಷಣ ೀಯ ಸ್ಥಳದವರೆಗೆ (ವ್ಯೂ ಪಾಯಿಂಟ್) 1100 ರೂ. ಮಡಿಕೇರಿ ಬಸ್ ನಿಲ್ದಾಣ ದಿಂದ ಮಾಂದಲ್ಪಟ್ಟಿ ಪ್ರೇಕ್ಷಣ ಯ ಸ್ಥಳದ ವರೆಗೆ(ಮಾರ್ಗ ರಾಜಾಸೀಟು-ಕೆ.ನಿಡು ಗಣೆ, ಅಬ್ಬಿ ಜಲಪಾತ) 1300 ರೂ. ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯ ರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಮಾಂದಲ್ಪಟ್ಟಿ ಪ್ರವಾಸಿ ಕೇಂದ್ರಕ್ಕೆ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ನಡೆದ ಸಭೆಯಲ್ಲಿ ಮಾಂದಲ್ಪಟ್ಟಿ ಯಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಪ್ರವಾಸಿಗರ ವೀಕ್ಷಣೆಗೆ ವಾಹನ ವ್ಯವಸ್ಥೆ, ಪ್ರಯಾಣ ಕರ ಭದ್ರತೆ, ಶೌಚಾಲಯ, ವಾಹನ ನಿಲುಗಡೆ, ಕ್ಯಾಂಟೀನ್ ಸೌಲಭ್ಯ, ಮತ್ತಿತರ ವನ್ನು ಮಾಂದಲ್ಪಟ್ಟಿಯಲ್ಲಿ ಶಾಶ್ವತವಾಗಿ ಕಲ್ಪಿಸಬೇಕಿದೆ. ಜೊತೆಗೆ ಪ್ರವಾಸಿ ಕೇಂದ್ರ ದಲ್ಲಿ ಸ್ವಚ್ಚತೆ ಕಾಪಾಡಲು ಗಮನಹರಿಸ ಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದಿಂದ ಮಾಂದಲ್ಪಟ್ಟಿವರೆಗೆ ಮಿನಿ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಪ್ರವೇಶ ದ್ವಾರದ ಬಳಿ ಸಿಸಿ ಕ್ಯಾಮರಾ ಹಾಗೂ ಸೂಚನಾ ಫಲಕ ಅಳ ವಡಿಸವುದು ಮತ್ತಿತರ ಸಂಬಂಧ ಗಮನ ಹರಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಹೇಳಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿ ಕಾರಿ ಡಿ.ಎಂ.ಸತೀಶ್ ಕುಮಾರ್, ಪ್ರಾದೇ ಶಿಕ ಸಾರಿಗೆ ಅಧಿಕಾರಿ ಎನ್.ಬಾಲಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ, ಎಂ.ಎಲ್.ಮಂಜುನಾಥ್, ಕೆಎಸ್ ಆರ್‍ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಎಲ್.ಶಿರಾಲಿ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಪಿಡಿಓಗಳಾದ ಶಶಿಕಿರಣ, ಎ.ಪಿ.ದೇವಯ್ಯ, ಪ್ರವಾಸಿ ಅಧಿಕಾರಿ ರಾಘವೇಂದ್ರ, ಶಿವಣ್ಣ, ರೀಟಾ ಇತರರು ಇದ್ದರು.

Translate »