ಮಳವಳ್ಳಿ: ಬೊಲೆರೋ ಗೂಡ್ಸ್ ಟೆಂಪೋ ಹಾಗೂ ಈಟಿಯೋಸ್ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತ ಪಟ್ಟು, ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ತಳಗವಾದಿ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ. ತಳಗವಾದಿ ಗ್ರಾಮದ ನಿವಾಸಿ ಜಾನಕಿ (53), ಅಶೋಕ(35) ಹಾಗೂ ದೇವಿಪುರದ ಸೌಭಾಗ್ಯ(46) ಮೃತಪಟ್ಟವರು. ಜಯಶೀಲ (55), ನಾಗರಾಜು(25) ತೀವ್ರ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿವರ: ಬಾಳೆಎಲೆ ತುಂಬಿಕೊಂಡು ಮಳವಳ್ಳಿಯಿಂದ ಬೆಂಗಳೂರು ಕಡೆಗೆ ಹೋಗು ತ್ತಿದ್ದ ಬೊಲೆರೋ ಗೂಡ್ಸ್…
ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ
March 14, 2019ಸಿಎಂಗೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್? ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಕೋರಿದ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯ: ದೋಸ್ತಿ ನಾಯಕರ ವಿರೋಧದ ನಡುವೆಯೂ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಇಂದು ಕೂಡ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. ತಾಯಿ ಸುಮಲತಾ ಪರ ಪುತ್ರ ಅಭಿಷೇಕ್ ಅಖಾಡಕ್ಕೆ ದುಮುಕಿದ್ದು ಪ್ರಚಾರ ನಡೆಸಿದರು. ಇವತ್ತು ಅಮ್ಮ- ಮಗನ ಜುಗಲ್ ಬಂದಿ ಜೋರಾಗಿತ್ತು. ಮಳವಳ್ಳಿ ತಾಲೂಕಿನ ಹಲಗೂರು, ಹಾಡ್ಲಿ ಸರ್ಕಲ್, ಮಳವಳ್ಳಿ ಟೌನ್ ಸೇರಿ ದಂತೆ…
ಕಿಡ್ನಿ ಮಾರಾಟ ಜಾಲದ ವಂಚನೆ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
January 10, 2019ಮಳವಳ್ಳಿ : ಕಿಡ್ನಿ ಮಾರಾಟ ಜಾಲಕ್ಕೆ ಸಿಲುಕಿ ವಂಚನೆಗೊಳಗಾದ ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮಳವಳ್ಳಿಯ ಗಂಗಾಮತ ಬೀದಿ ನಿವಾಸಿ ವೆಂಕಟಮ್ಮ (48) ಎಂಬುವರೇ ಕಿಡ್ನಿ ಮಾರಾಟ ಜಾಲ ವಂಚನೆ ಗೊಳಗಾಗಿ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ವೆಂಕಟಮ್ಮ ಮಾತ್ರವಲ್ಲದೆ, ಮತ್ತೊಬ್ಬ ಮಹಿಳೆಯನ್ನೂ ಸಹ ಈ ಜಾಲದ ಮಹಿಳೆಯೋರ್ವಳು ವಂಚಿಸಿದ್ದಾಳೆ ಎಂಬುದು ಕೂಡ ಬೆಳಕಿಗೆ ಬಂದಿದೆ. ಸೊಪ್ಪು, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವೆಂಕಟಮ್ಮ, ಬೇರೆಯ ವರ ಜಮೀನನ್ನು ಗುತ್ತಿಗೆಗೆ ಪಡೆದು…
ಕೆಎಸ್ಆರ್ಟಿಸಿ ಮಳವಳ್ಳಿ ಡಿಪೋ ಅಧಿಕಾರಿಗಳ ಕಿರುಕುಳ ಆರೋಪ: ವಿಷ ಸೇವಿಸಿ ಚಾಲಕ ಆತ್ಮಹತ್ಯೆ
December 6, 2018ಮಳವಳ್ಳಿ: ಕೆಎಸ್ಆರ್ಟಿಸಿ ಮಳವಳ್ಳಿ ಡಿಪೋ ಅಧಿಕಾರಿಗಳ ಕಿರುಕುಳದಿಂದಾಗಿ ಚಾಲಕನೋರ್ವ ಕಳೆದ 4 ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಇಂದು ಇದೇ ಡಿಪೋಗೆ ಸೇರಿದ ಮತ್ತೋರ್ವ ಚಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ತಾಲೂಕಿನ ಗಾಜನೂರಿನವನಾದ ಕೆಎಸ್ಆರ್ಟಿಸಿ ಮಳವಳ್ಳಿ ಡಿಪೋ ಚಾಲಕ ಲೋಕೇಶ್, ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ಇಂದು ಮಧ್ಯಾಹ್ನ ವಿಷ ಸೇವಿಸಿದರೆಂದು ಹೇಳಲಾಗಿದ್ದು, ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ…
ಶಾಲಾ ಬಾಲಕನನ್ನು ರಕ್ಷಿಸಲು ಹೋಗಿ ಬಸ್ ಪಲ್ಟಿ, ಓರ್ವ ಸಾವು 35ಕ್ಕೂ ಹೆಚ್ಚು ಮಂದಿಗೆ ಗಾಯ
July 27, 2018ಮಳವಳ್ಳಿ: ಶಾಲಾ ಬಾಲಕನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, 35ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬುಳ್ಳಿಕೆಂಪನದೊಡ್ಡಿ ಬಳಿಯ ಮೈಸೂರು-ಮಳವಳ್ಳಿ ಹೆದ್ದಾರಿಯಲ್ಲಿ ನಡೆದಿದೆ. ತಿ.ನರಸೀಪುರ ತಾಲೂಕಿನ ಕುಳ್ಳಯ್ಯನದೊಡ್ಡಿ ಗ್ರಾಮದ ಲೆ.ರಾಜಣ್ಣ ಎಂಬುವರ ಪುತ್ರ ಮಹೇಶ್ (38) ಸಾವನ್ನಪ್ಪಿದವರು. ತೀವ್ರ ಗಾಯಗೊಂಡಿದ್ದ ಬಸಮ್ಮಣ್ಣಿ, ಬಸವರಾಜು, ಲಕ್ಕೇಗೌಡ ಎಂಬುವ ರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಗಾಯಾಳುಗಳಾದ ತಿ.ನರಸೀಪುರ ತಾಲೂಕಿನ ವ್ಯಾಸರಾಜನಪುರ ಗ್ರಾಮದ ಕೃಷ್ಣ, ಮಹಾಲಕ್ಷ್ಮಿ, ಕೇತುಪುರ ಬಸವರಾಜು, ಕೆಬ್ಬೆ ಗ್ರಾಮದ ಮಹದೇವ, ದೊಡ್ಡಪುರ…
ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ
June 30, 2018ಮಂಡ್ಯ: ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ತುಂಬು ಗರ್ಭಿಣಿಯರಿಗೆ ಮುತೈದೆಯರು ಸೀಮಂತ ಶಾಸ್ತ್ರ ಗಳನ್ನು ಮಾಡುತ್ತಿದ್ದರು. ಟೇಬಲ್ ಮೇಲೆ ಬಗೆಬಗೆಯ ಹಣ್ಣುಗಳನ್ನು ಇಡಲಾಗಿತ್ತು. ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದ ಜನರು. ಇದು ಮನೆಯಲ್ಲಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಶುಭ ಸಮಾರಂಭವಲ್ಲ. ಬದಲಾಗಿ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಕಂಡು ಬಂದ ದೃಶ್ಯ. ಹೌದು. ಇತ್ತೀಚೆಗೆ ಪಾಂಡವಪುರದ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್ಐಗೆ ಸಿಬ್ಬಂದಿಗಳು ಸೀಮಂತ ಮಾಡಿ ಸಂಭ್ರಮಿಸಿ ದ್ದರು. ಅದರಂತೆ ಶುಕ್ರವಾರ ಮಳವಳ್ಳಿ ಪೊಲೀಸ್…
ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ
June 27, 2018ಮಳವಳ್ಳಿ; ಹಿಂದೂ ಧರ್ಮದ ಏಕತೆ ಮತ್ತು ಉಳಿವಿಗಾಗಿ ನಾವು ಜಾಗೃತರಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಬಸವರಾಜು ತಿಳಿಸಿದರು. ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಹಿಂದೂಗಳ ಮೇಲಾಗು ತ್ತಿರುವ ಅಕ್ರಮಣಗಳನ್ನು ತಡೆಗಟ್ಟುವುದು ಸೇರಿದಂತೆ ಧರ್ಮದ ಪಾವಿತ್ರ್ಯತೆಗಾಗಿ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದು ಹಿಂದೂ ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಗುರಿ. ಧರ್ಮವನ್ನು ಹೊಡೆಯುವ, ಹೀನಾಯ…
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
June 23, 2018ಮಳವಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪುರಸಭೆ ಆವರಣದಿಂದ ತಾಪಂವರೆಗೆ ಮೆರವಣಿಗೆ ನಡೆಸಿದ ಪ್ರತಿ ಭಟನಾಕಾರರು, ಗ್ರಾಪಂ ನೌಕಕರಿಗೆ ಇಎಫ್ಎಂಎಸ್ ಮೂಲಕ ವೇತನ ಪಾವತಿಸ ಬೇಕು. ಬಿಲ್ಕಲೆಕ್ಟರ್ಗಳಿಗೆ 2ನೇ ಕಾರ್ಯ ದರ್ಶಿ ಆಗಿ ಬಡ್ತಿ ನೀಡುವ ಪ್ರಕ್ರಿಯೆ ಮತ್ತೆ ಜಾರಿಯಾಗಬೇಕು. ನಗರಾಭಿವೃದ್ಧಿ ಇಲಾಖೆ ನೌಕರರಿಗೆ ಇರುವಂತೆ ಗ್ರಾಪಂ ನೌಕರರಿಗೂ ಸೇವಾ ನಿಯಮಾವಳಿ ರಚಿ ಸುವುದು. ವೈದ್ಯಕೀಯ ವೆಚ್ಚ, ಪಿಂಚಣಿ , ಗ್ರಾಚ್ಯೂಯಿಟಿ ಕಲ್ಪಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು…
ಎಂ.ಎನ್.ಆರ್.ಇ.ಜಿ.ಎ ಯೋಜನೆಯಡಿ ಕೂಲಿ ನೀಡಲು ಆಗ್ರಹ
June 13, 2018ಮಳವಳ್ಳಿ: ಎಂ.ಎನ್.ಆರ್.ಇ.ಜಿ.ಎ ಯೋಜನೆಯಡಿ ಕೂಲಿ ಹಣ ನೀಡುತ್ತಿಲ್ಲ ಹಾಗೂ ಕಾರ್ಮಿಕರ ಕೆಲಸ ನಿರಾಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ದುಗ್ಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು. ಸಂಘದ ಕಾರ್ಯಕರ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣ ಗೆ ನಡೆಸಿ, ಬಳಿಕ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಮಾವೇಶಗೊಂಡು ಪಿಡಿಓ, ಹಾಗೂ ಎಂಜಿನಿ ಯರ್ ವಿರುದ್ಧ ಘೋಷಣೆ ಕೂಗಿದರು. 2016-17ನೇ ಸಾಲಿನಲ್ಲಿ ಗ್ರಾಮದ 36 ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರು….