Tag: Mandya Lok Sabha polls 2019

ಮಂಡ್ಯದಲ್ಲಿ ಪರಿಸ್ಥಿತಿ `ಕೈ’ಮೀರಿದೆ
ಮೈಸೂರು

ಮಂಡ್ಯದಲ್ಲಿ ಪರಿಸ್ಥಿತಿ `ಕೈ’ಮೀರಿದೆ

April 5, 2019

ಕೆ.ಆರ್.ಪೇಟೆ /ಶ್ರೀರಂಗಪಟ್ಟಣ,: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಶ್ರೀರಂಗಪಟ್ಟಣದಲ್ಲಿ ತಮ್ಮ ಮೊಮ್ಮಗ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಗುರು ವಾರ ಪ್ರಚಾರ ಮಾಡಿದರು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿ ಕ್ಷೇತ್ರ ಬಿಟ್ಟುಕೊಟ್ಟ ವೇಳೆ ಕಣ್ಣೀರಿಟ್ಟಂತೆಯೇ ಇಂದು ಕೆ.ಆರ್.ಪೇಟೆಯಲ್ಲಿ ನಿಖಿಲ್ ಪರ ಪ್ರಚಾರ ಮಾಡುವಾಗಲೂ ಕಣ್ಣೀರಿ ಟ್ಟರು. ಅಲ್ಲದೇ ಮಾಜಿ ಶಾಸಕರುಗಳಾದ ಚೆಲು ವರಾಯಸ್ವಾಮಿ ಮತ್ತು ರಮೇಶ್ ಬಂಡಿ ಸಿದ್ದೇಗೌಡ ವಿರುದ್ಧ…

ರೈತರ ಪರ ಕೆಲಸ ಮಾಡಲು ಅವಕಾಶ ಕೊಡಿ
ಮಂಡ್ಯ

ರೈತರ ಪರ ಕೆಲಸ ಮಾಡಲು ಅವಕಾಶ ಕೊಡಿ

April 2, 2019

ಕೆ.ಆರ್.ಪೇಟೆ: ನನ್ನ ತಾತ ಮತ್ತು ನನ್ನ ತಂದೆಯವರಂತೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಬಂದಿದ್ದೇನೆ ಅವರಂತೆಯೇ ರೈತರ ನಡುವೆ ಇದ್ದು ರೈತ ಪರವಾಗಿ ಕೆಲಸ ಮಾಡಲು ಮಂಡ್ಯ ಜಿಲ್ಲೆಯ ಜನತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‍ಕುಮಾರ ಸ್ವಾಮಿ ಮನವಿ ಮಾಡಿದರು. ಅವರು ತಾಲೂಕಿನ ಸಂತೇಬಾಚ ಹಳ್ಳಿ ಹೋಬಳಿಯ ಸಾರಂಗಿ, ಕೈಗೋನ ಹಳ್ಳಿ, ರಂಗನಾಥಪುರ ಕ್ರಾಸ್, ಭಾರತೀ ಪುರ ಕ್ರಾಸ್ ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ಕಿಕ್ಕೇರಿ ಹೋಬಳಿಯ…

ಸುಮಲತಾ ಪರ ‘ದರ್ಶನ್’ ರೋಡ್ ಶೋ
ಮೈಸೂರು

ಸುಮಲತಾ ಪರ ‘ದರ್ಶನ್’ ರೋಡ್ ಶೋ

April 2, 2019

ಶ್ರೀರಂಗಪಟ್ಟಣ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಿತ್ರನಟ ದರ್ಶನ್ ಅವರು ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಂತ ರೋಡ್ ಶೋ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದರು. ಇಂದು ಬೆಳಿಗ್ಗೆ ಕೆಆರ್‍ಎಸ್‍ನ ಅರಳೀಕಟ್ಟೆ ಬಳಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿ ಮಾತನಾಡಿದ ಅವರು, ಈ ಚುನಾವಣೆ ವೇಳೆಯಲ್ಲಿ ಯಾರ್ಯಾರು ಏನೇನೋ ಮಾತನಾಡುತ್ತಿದ್ದಾರೆ. ನಾನು, ಅದಕ್ಕೆಲ್ಲಾ ಉತ್ತರ ನೀಡುವುದಿಲ್ಲ. ನೀವು ಸುಮಲತಾ ಅವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಅವರಿಗೆ ಉತ್ತರ ಕೊಡಿ ಎಂದು…

ನಿಖಿಲ್ ಸ್ಪರ್ಧೆಗೆ ಯಾವುದೇ ತೊಂದರೆ ಇಲ್ಲ
ಮೈಸೂರು

ನಿಖಿಲ್ ಸ್ಪರ್ಧೆಗೆ ಯಾವುದೇ ತೊಂದರೆ ಇಲ್ಲ

March 31, 2019

ಮಂಡ್ಯ: ನಾಮಪತ್ರ ಪರಿ ಶೀಲನೆ ಪ್ರಕ್ರಿಯೆ ಕೊನೆ ಗೊಂಡಿದೆ. ಉಮೇದು ವಾರಿಕೆ ಅಂಗೀಕಾರ ವಾಗಿರುವುದರಿಂದ ಮಂಡ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ನಾಮಪತ್ರ ವಿವಾದ ಮುಗಿದ ಅಧ್ಯಾಯ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ನಿಖಿಲ್ ಅವರ ನಾಮಪತ್ರ ವನ್ನು ಚುನಾವಣಾ ಕಾನೂನುಗಳಿಗೆ ವಿರುದ್ಧವಾಗಿ ಅಂಗೀಕಾರ ಮಾಡಿರುವ ಕುರಿತಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣಾಧಿಕಾರಿಗಳಿಗೆ ನೀಡಿ ರುವ ದೂರಿಗೆ ಸಂಬಂಧಿಸಿದಂತೆ ದಿಢೀರ್ ಮಂಡ್ಯಕ್ಕೆ ಆಗಮಿಸಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ…

ಕರ್ತವ್ಯ ಲೋಪ ಮರೆಮಾಚುವ ಯತ್ನ: ಡಿಸಿ ನೋಟೀಸ್‍ಗೆ ಸುಮಲತಾ ಉತ್ತರ
ಮೈಸೂರು

ಕರ್ತವ್ಯ ಲೋಪ ಮರೆಮಾಚುವ ಯತ್ನ: ಡಿಸಿ ನೋಟೀಸ್‍ಗೆ ಸುಮಲತಾ ಉತ್ತರ

March 31, 2019

ಮಂಡ್ಯ:  ಮಾಧ್ಯಮಗಳಿಗೆ ನಾನು ನೀಡಿರುವ ಹೇಳಿಕೆಯು ವಾಸ್ತವಾಂಶಕ್ಕೆ ಅನುಗುಣವಾಗಿಯೂ, ನಿಜಾಂಶ ಗಳಿಂದಲೂ ಕೂಡಿದ್ದು, ನೀವು ಎಸಗಿರುವ ಕರ್ತವ್ಯ ಲೋಪ ವನ್ನು ಮರೆ ಮಾಚುವ ಹಾಗೂ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ದುರುದ್ದೇಶದಿಂದ ನನಗೆ ನೋಟೀಸ್ ನೀಡಿದ್ದೀರಿ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಉತ್ತರಿಸಿದ್ದಾರೆ. ಸುಮಲತಾ ಅವರು ಜಿಲ್ಲಾಡಳಿತ, ಮೈತ್ರಿ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಯಲ್ಲಿ ಅವರಿಗೆ ಜಿಲ್ಲಾಧಿಕಾರಿಗಳು ಶುಕ್ರವಾರ ನೋಟೀಸ್ ಜಾರಿ ಮಾಡಿದ್ದರು. ಈ…

ಸುಮಲತಾ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟ
ಮೈಸೂರು

ಸುಮಲತಾ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟ

March 31, 2019

ಮಂಡ್ಯ: ತಾಲೂಕಿನ ಕೀಲಾರ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಅವರ ರೋಡ್ ಶೋನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ರೈತ ಸಂಘದ ಬಾವುಟ ಗಳು ರಾರಾಜಿಸಿದವು. ಅಲ್ಲದೇ, ಅವರ ಚಿಹ್ನೆಯಾದ ಕಹಳೆಯನ್ನು ವಿಶೇಷ ವಸ್ತ್ರ ಧರಿಸಿದ್ದ ಇಬ್ಬರು ರೋಡ್ ಶೋನಲ್ಲಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಇಂದು ಬೆಳಿಗ್ಗೆ ಸುಮಲತಾ ಅವರು ಕೀಲಾರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಅಷ್ಟರ ಲ್ಲಾಗಲೇ ನೆರೆದಿದ್ದ ಸಾವಿರಾರು ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳ ಬಾವುಟಗಳನ್ನು ಹಿಡಿದು ರೋಡ್ ಶೋನಲ್ಲಿ ಹೆಜ್ಜೆ ಹಾಕಿದರು….

ನಾನು ಮೂಲತಃ ಮಂಡ್ಯದ ಮಗ, ಮದುವೆಯಾಗಿ ಮಂಡ್ಯದವನಾಗಬೇಕಿಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಅಭಿಷೇಕ್ ಅಂಬರೀಷ್ ಟಾಂಗ್
ಮಂಡ್ಯ

ನಾನು ಮೂಲತಃ ಮಂಡ್ಯದ ಮಗ, ಮದುವೆಯಾಗಿ ಮಂಡ್ಯದವನಾಗಬೇಕಿಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಅಭಿಷೇಕ್ ಅಂಬರೀಷ್ ಟಾಂಗ್

March 30, 2019

ಮದ್ದೂರು: ನಾನು ಮೂಲತಃ ಮಂಡ್ಯದವನು. ಯಾರನ್ನೋ ಮದುವೆಯಾಗಿ ನಾನು ಮಂಡ್ಯದವನು ಆಗಬೇಕಾದ ಅವ ಶ್ಯಕತೆ ಇಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪುತ್ರ ಅಭಿಷೇಕ್ ಟಾಂಗ್ ನೀಡಿದರು. ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ತಮ್ಮ ತಾಯಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಅವರು, ಅಂಬರೀಷ್ ಶೈಲಿಯಲ್ಲಿ ಜನ ರೊಂದಿಗೆ ಸಂವಾದದ ರೀತಿ ಮಾತನಾಡಿ, ಚಪ್ಪಾಳೆ ಗಿಟ್ಟಿಸಿದರು. ನಮ್ಮ ಸ್ವಾಭಿಮಾನವನ್ನು ಕಾಪಾಡಲು ಯಾರೂ ಬರುವುದಿಲ್ಲ, ನಾವೇ ಕಾಪಾಡಿಕೊಳ್ಳಬೇಕು ಎಂದು…

ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಘೋಷಣೆ
ಮಂಡ್ಯ

ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಘೋಷಣೆ

March 30, 2019

ಮಂಡ್ಯ: ಚುನಾವಣೆಯಲ್ಲಿ ಸೋತು ಮನೆ ಸೇರಿದ್ದ ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಇಂದಿಲ್ಲಿ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ಅಂಬರೀಶ್ ಅವರನ್ನು ಚುನಾವಣೆ ಯಲ್ಲಿ ರಾಮನಗರ ಜನ ಸೋಲಿಸಿದ್ದರು. ಆಗ ನಾನು ನನ್ನ ಸ್ವಂತ ಹಣದಲ್ಲಿ ರಾಜ್ಯೋತ್ಸವ ಮಾಡಿ ಅಂಬರೀಶ್ ಅವರನ್ನು ಜಿಲ್ಲೆಯಾ ದ್ಯಂತ ಸುತ್ತಿಸಿ ಲೋಕಸಭಾ ಚುನಾವಣೆ ಯಲ್ಲಿ ಗೆಲ್ಲಿಸುವ ಮೂಲಕ ಅವರಿಗೆ ರಾಜ ಕೀಯ ಪುನರ್ಜನ್ಮ ನೀಡಿದೆ ಎಂದರು….

ಸುಮಲತಾರಿಗೆ ಡಿಸಿ ನೋಟೀಸ್
ಮಂಡ್ಯ

ಸುಮಲತಾರಿಗೆ ಡಿಸಿ ನೋಟೀಸ್

March 30, 2019

ಮಂಡ್ಯ: ಮುಖ್ಯಮಂತ್ರಿಗಳಿಂದ ಆಡಳಿತ ದುರುಪಯೋಗವಾಗುತ್ತಿದೆ ಎಂದು ಹೇಳಿಕೆ ನೀಡಿದ ಸುಮಲತಾ ಅಂಬರೀಶ್ ಅವರಿಗೆ ಜಿಲ್ಲಾಧಿಕಾರಿ ಮಂಜುಶ್ರೀ ನೋಟೀಸ್ ಜಾರಿ ಮಾಡಿದ್ದಾರೆ. ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯಾಗಿರುವ ನನ್ನ ವ್ಯಕ್ತಿತ್ವವನ್ನು ಘಾಸಿಗೊಳಿಸುವ ಉದ್ದೇಶದಿಂದ ಊಹಾ ಪೋಹದ ಮಾಹಿತಿಯನ್ನು ಅಧಿಕೃತವೆಂಬಂತೆ ಹೇಳಿಕೆ ನೀಡಿದ್ದೀರಿ. ನಿಮ್ಮ ಹೇಳಿಕೆಯಿಂದ ನನ್ನ ಇಡೀ ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಸಿರುವ ಆಡಳಿತಕ್ಕೆ ಹಾಗೂ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿವಾಗಿ ಧಕ್ಕೆ ಉಂಟಾಗುತ್ತಿದೆ. ಜಿಲ್ಲೆಯ ಆಡಳಿತ ಯಂತ್ರವನ್ನು ಮುಖ್ಯಮಂತ್ರಿ ಗಳು ಬಳಸಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಯಿಂದ ಇಡೀ ಜಿಲ್ಲೆಯ…

ತಾತ, ಅಪ್ಪನಂತೆ ಬಡವರು, ರೈತರ ಸೇವೆ ಮಾಡುವೆ ಕಾಂಗ್ರೆಸೆ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಹೇಳಿಕೆ
ಮೈಸೂರು

ತಾತ, ಅಪ್ಪನಂತೆ ಬಡವರು, ರೈತರ ಸೇವೆ ಮಾಡುವೆ ಕಾಂಗ್ರೆಸೆ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಹೇಳಿಕೆ

March 30, 2019

ಭೇರ್ಯ: ತಾತ ದೇವೇಗೌಡರು, ಅಪ್ಪ ಕುಮಾರಸ್ವಾಮಿ ಅವರು ಅಧಿಕಾರ ಇರಲಿ, ಇಲ್ಲದಿರಲಿ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಬಡವರು, ರೈತರಿಗಾಗಿ ಶ್ರಮಿಸಿದ್ದು, ಅವರ ಹಾದಿಯಲ್ಲೇ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ನನಗೆ ಹರಸಿ, ಹಾರೈಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು. ಕೃಷ್ಣರಾಜನಗರ ತಾಲೂಕು ಹೊಸ ಅಗ್ರಹಾರ ಹೋಬಳಿಯ ಮಾರಗೌಡನಹಳ್ಳಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಶುಕ್ರವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಕಾರ್ಯಕರ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದÀ ಅವರು…

1 2 3 4
Translate »