ಬೀದರ್, ಮಾ.8- ಮಕ್ಕಳಿಗೆ ಬುದ್ಧಿ ವಾದ ಹೇಳಿ, ತಿದ್ದ ಬೇಕಿದ್ದ ಶಿಕ್ಷಕಿಯೊ ಬ್ಬರು ತನಗೆ ನಿಶ್ಚಿ ತಾರ್ಥ ಆಗಲಿಲ್ಲ ಎಂಬ ಕಾರಣಕ್ಕೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ನಲ್ಲಿ ನಡೆದಿದೆ. 24 ವರ್ಷದ ಪೂಜಾ ಎಂಬುವರು ಭಾಲ್ಕಿ ತಾಲೂಕಿನ ಭಾಲ್ಕೇಶ್ವರ ದೇವಸ್ಥಾನದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಡೆತ್ನೋಟ್ನಲ್ಲಿ ಪೂಜಾ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿಟ್ಟಿ ದ್ದಾರೆ. ಪೂಜಾ ಭಾಲ್ಕಿಯ ಖಾಸಗಿ ಚನ್ನ ಬಸವ ಪದವಿ ಕಾಲೇಜಿನಲ್ಲಿ ರಾಸಾ ಯನಿಕ ಶಾಸ್ತ್ರದ…
ಕೀಳರಿಮೆಯಲ್ಲಿದ್ದ ಹಳ್ಳಿ ಹುಡುಗರು ಲಂಕೇಶರನ್ನೇ ಗುರುವಾಗಿಸಿಕೊಂಡಿದ್ದರು
March 9, 2020`ಮೈಸೂರು ಗೆಳೆಯರ ಬಳಗ’ ಆಯೋಜಿಸಿದ್ದ `ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ಮಟ್ಟು ನೆನಪಿನ ಝರಿ ಮೈಸೂರು, ಮಾ.8(ಎಂಟಿವೈ)- ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಕೀಳರಿಮೆಗೆ ಒಳ ಗಾಗಿದ್ದ ಹಲವಾರು ಮಂದಿ ಪಿ.ಲಂಕೇಶ್ ಅವರನ್ನು (ಏಕಲವ್ಯನಂತೆ) ಗುರುವಾಗಿ ಆಯ್ಕೆ ಮಾಡಿ ಕೊಂಡಿದ್ದರೆ, ಮತ್ತೆ ಕೆಲವರು ಶಿಕ್ಷಕರಂತೆ (ಮೇಷ್ಟ್ರು) ಸ್ವೀಕರಿಸಿದ್ದರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು ನೆನಪಿಸಿಕೊಂಡರು. ಮೈಸೂರಿನ ಸಮಾನ ಮನಸ್ಕರ `ಮೈಸೂರು ಗೆಳೆಯರ ಬಳಗ’ ಕಲಾಮಂದಿರ ಆವರಣದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ `ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಮಾತ…
ವಿಜ್ಞಾನ ನಾಟಕ `ನಿಲುಕದ ನಕ್ಷತ್ರ’ ಬಲು ಜನಪ್ರಿಯ
March 9, 2020ಮೈಸೂರು,ಮಾ.8(ವೈಡಿಎಸ್)-ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಂಡ `ನಿಲುಕದ ನಕ್ಷತ್ರ’ ವಿಜ್ಞಾನ ನಾಟಕವನ್ನು ಜನರು ಮುಗಿಬಿದ್ದು ವೀಕ್ಷಿಸಿದರು. ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿ ಭಾನುವಾರ ಪ್ರಸ್ತುತಪಡಿಸಿದ ಭದ್ರಪ್ಪ ಶಿ.ಹೆನ್ಲಿ ರಚನೆಯ ಪ್ರಶಾಂತ್ ಮೈಸೂರ್ ನಿರ್ದೇಶನದ `ನಿಲುಕದ ನಕ್ಷತ್ರ’ ವಿಜ್ಞಾನ ನಾಟಕದಲ್ಲಿ ಮೊದಲಿಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ಜಗಳವಾಡುತ್ತಿರುತ್ತಾರೆ. ಅಷ್ಟರಲ್ಲಿ ಶಾಲೆಗೆ ಬಂದ ಶಿಕ್ಷಕರು, ಗದರಿಸಿದಾಗ ಎಲ್ಲರೂ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಶಿಕ್ಷಕರು, ಶ್ರೀನಿವಾಸ ರಾಮಾನುಜನ್ ಎಂಬ ವಿದ್ಯಾರ್ಥಿ ಯನ್ನು ಎಲ್ಲೋ ಟೋಪಿ? ಎಂದು ಪ್ರಶ್ನಿಸಿ ದಾಗ, ಗಾಳಿಗೆ ಹಾರಿಹೋಯಿತೆಂದು ಉತ್ತರಿ ಸುತ್ತಾನೆ. ಸರಿ,…
ಮೈಸೂರು ಜಿಲ್ಲಾಡಳಿತದಿಂದ ಕಾರ್ಮಿಕ ಸಮ್ಮಾನ ದಿನಾಚರಣೆ
March 9, 2020ಅಸಂಘಟಿತ 100 ಕಾರ್ಮಿಕರಿಗೆ `ವಿಶೇಷ ಪುರಸ್ಕಾರ’, 36 ಕಾರ್ಮಿಕರಿಗೆ `ಶ್ರಮ ಸಮ್ಮಾನ ಪ್ರಶಸ್ತಿ’ ಪ್ರದಾನ ಮೈಸೂರು, ಮಾ.8(ಪಿಎಂ)- ಬಸವಣ್ಣನವರ ನುಡಿಯಂತೆ `ಕಾಯಕವೇ ಕೈಲಾಸ’ ಎಂದು ದುಡಿಯುವ ಅಸಂಘ ಟಿತ ಕಾರ್ಮಿಕರಿಗೆ ಭಾನುವಾರ ಹಮ್ಮಿ ಕೊಂಡಿದ್ದ `ಕಾರ್ಮಿಕ ಸಮ್ಮಾನ ದಿನಾ ಚರಣೆ’ಯಲ್ಲಿ ಮೇಯರ್ ತಸ್ನೀಂ `ಶ್ರಮ ಸಮ್ಮಾನ ಪ್ರಶಸ್ತಿ’ ಪ್ರದಾನ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಂಟಿಯಾಗಿ ಮೈಸೂರಿನ ಶಾರದಾವಿಲಾಸ ಕಾಲೇಜು ಶತಮಾ ನೋತ್ಸವ ಭವನದಲ್ಲಿ…
ನಿರ್ಭಯಾ: ಅಪರಾಧಿಗಳ ನಿಗದಿತ ದಿನವೇ ಗಲ್ಲಿಗೇರಿಸುವಂತೆ ಆಗ್ರಹ
March 9, 2020ಮೈಸೂರು,ಮಾ.8(ಎಂಟಿವೈ)- ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನಿಗದಿತ ದಿನವೇ ಗಲ್ಲಿಗೇರಿಸುವಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಭಾನುವಾರ ಮೈಸೂರಿನಲ್ಲಿ ಪ್ರತಿಭಟಿಸಿದರು. ಅಂತಾ ರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ, ಗನ್ಹೌಸ್ ಬಳಿ ನೇಣಿಗೇರಿಸುವ ಅಣಕು ಪ್ರದರ್ಶನ ನಡೆಸಿದರು. ನಿಗದಿತ ದಿನದಂದೇ ಗಲ್ಲುಶಿಕ್ಷೆ ಜಾರಿಗೊಳಿಸಿ ನ್ಯಾಯಾಂಗದ ಮೌಲ್ಯ ಎತ್ತಿ ಹಿಡಿಯಬೇಕು ಎಂದು ವೇದಿಕೆ ಅಧÀ್ಯಕ್ಷ ಎಸ್.ಬಾಲಕೃಷ್ಣ ಒತ್ತಾಯಿಸಿದರು. ಪದಾಧಿಕಾರಿಗಳಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ, ಪ್ಯಾಲೇಸ್ ಬಾಬು, ಮಹದೇವಸ್ವಾಮಿ, ಬೀಡಾಬಾಬು, ಅರವಿಂದ, ಸ್ವಾಮಿ ಗೈಡ್, ಪರಿಸರ ಚಂದ್ರು,…
ಹೋರಾಟದ ಫಲವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ
March 9, 2020ಅಕ್ರಮದ ವಿರುದ್ಧ ಹೋರಾಟ ನಡೆಸಿದ ಮಹಿಳೆ ಸಮರ್ಥನೆ ತಿ.ನರಸೀಪುರ. ಮಾ. 8(ಎಸ್ಕೆ)- ರಾಜೀವ್ ಗಾಂಧಿ ವಸತಿ ನಿಗಮದಿಂದ ತಾಲೂಕಿನ ನಿಲಸೋಗೆ ಗ್ರಾಮದ ಪರಿಶಿಷ್ಟ ಜನಾಂಗ ಅರ್ಹ 39 ಫಲಾನುಭವಿಗಳಿಗೆ ಇತ್ತೀಚೆಗೆ ಶಾಸಕ ಎಂ.ಅಶ್ವಿನ್ಕುಮಾರ್ ಹಕ್ಕು ಪತ್ರ ವಿತರಿಸಿದ್ದು, ಇದು ಯಾವುದೇ ಸಂಘಟನೆಯ ಹೋರಾಟದ ಫಲವಲ್ಲ. ಗ್ರಾಮದ ನಿವೇಶನ ವಂಚಿತ ಅರ್ಹ ಫಲಾನುಭವಿಗಳ ಕಾನೂನುಬದ್ಧ ಹೋರಾಟಕ್ಕೆ ಸಿಕ್ಕ ಜಯ ಅಷ್ಟೇ ಎಂದು ನಿವೇಶನ ವಂಚಿತ ಅರ್ಹ ಫಲಾನುಭವಿ ಗೀತಾ ಹೇಳಿದರು. ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ…
ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ರೈತನ ಹೊಣೆ
March 9, 2020ಗುಂಡ್ಲುಪೇಟೆ,ಮಾ.8 (ಸೋಮ್.ಜಿ)- ಮಣ್ಣಿನ ಆರೋಗ್ಯ ಕಾಪಾಡಬೇಕಾದ ಹೊಣೆ ಪ್ರತಿಯೊಬ್ಬ ರೈತನ ಮೇಲಿದೆ ಎಂದು ಕೃಷಿ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಶ್ರೀನಿವಾಸಶೆಟ್ಟಿ ತಿಳಿಸಿದರು. ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರೈತಮೇಳ ಹಾಗೂ ಮಣ್ಣಿನ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಣ್ಣಿನ ಆರೋಗ್ಯ ಸಂಪೂರ್ಣ ನಾಶವಾಗುತ್ತಿದೆ. ಈ ಹಿಂದೆ ಭೂಮಿಗೆ ಸಾಕಷ್ಟು ದನಗಳ ಗೊಬ್ಬರ ಹಾಕಿ ಮಣ್ಣಿನ ಆರೋಗ್ಯ ಕಾಪಾಡಿ ಕೊಳ್ಳುತ್ತಿದ್ದರು. ಆದರೆ ಇಂದು ಭಾರೀ ಪ್ರಮಾಣದಲ್ಲಿ ರಸಗೊಬ್ಬರ ಹಾಕಲಾಗು ತ್ತಿದೆ ಎಂದು ಬೇಸರ…
ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗಲ್ಲ…
March 8, 2020ಮೈಸೂರು,ಮಾ.7(ಎಸ್ಬಿಡಿ)-ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗುವುದಿಲ್ಲ. ನಮ್ಮೊಂದಿಗೆ ಬಲಿಷ್ಠ ಕಾರ್ಯಕರ್ತರ ಪಡೆ ಯಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಮಂಜುನಾಥಪುರದಲ್ಲಿ ರುವ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಅನೇಕ ನಾಯಕರು ಪಕ್ಷದಿಂದ ಹೊರ ಹೋದಾಗ ನಮ್ಮ ಕಾರ್ಯಕರ್ತರು ಪಕ್ಷ ವನ್ನು ಉಳಿಸಿ, ಬೆಳೆಸಿದರು. ಈಗ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲದಂತಾಗಿ, ಅನೇಕ ನಾಯ ಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ ಎಂದು…
9 ತಿಂಗಳ ನಂತರ ನಡೆದ ಮುಡಾ ಸಭೆ
March 8, 2020ಮೈಸೂರು,ಮಾ.7(ಆರ್ಕೆ)- ಒಂಭತ್ತು ತಿಂಗಳ ನಂತರ ಕಡೆಗೂ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಾಮಾನ್ಯ ಸಭೆ ನಡೆಯಿತು. ಜೆಎಲ್ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯ ಕ್ಷರೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆವರೆಗೆ ನಡೆದ ಸುದೀರ್ಘ ಸಭೆಗೆ ಒಟ್ಟು 219 ವಿಷಯಗಳ ಪ್ರಸ್ತಾವನೆ ಗಳನ್ನು ಮಂಡಿಸಲಾಗಿತ್ತಾದರೂ, ಆ ಪೈಕಿ ಬಹುತೇಕ ಸುಮಾರು 200ಕ್ಕೆ ಸಭೆಯು ಅನುಮೋದನೆ ನೀಡಿತು. ಪ್ರಮುಖವಾಗಿ 2019-20ನೇ ಸಾಲಿನ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆ…
ವಿಮಾನದಲ್ಲಿ ಜಿಂಕೆ ಕೊಂಬು ಸಾಗಿಸಲೆತ್ನಿಸಿದ ವ್ಯಕ್ತಿ ಬಂಧನ
March 8, 2020ಮೈಸೂರು,ಮಾ.7(ವೈಡಿಎಸ್)- ಜಿಂಕೆ ಕೊಂಬನ್ನು ಅಕ್ರಮವಾಗಿ ವಿಮಾನದ ಮೂಲಕ ಮೈಸೂರಿನಿಂದ ಹೈದರಾಬಾದ್ಗೆ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಮೈಸೂರು ವಿಮಾನ ನಿಲ್ದಾಣದ ಭದ್ರತಾ ಪಡೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದು ಬಳಿಕ ವಿದ್ಯಾರಣ್ಯಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ತಮಿಳುನಾಡಿನ ಕಾಂಚಿಪುರಂ ಮೂಲದ ಕಾರ್ತಿಕ್ ರೆಡ್ಡಿ(38) ಬಂಧಿತ ಆರೋಪಿ. ಕಾರ್ತಿಕ್ ಹೈದರಾಬಾದ್ಗೆ ತೆರಳಲು ಶುಕ್ರವಾರ ರಾತ್ರಿ 8.30ರ ವೇಳೆಗೆ ಮೈಸೂರು ವಿಮಾನಕ್ಕೆ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ಅಲ್ಲಿನ ಭದ್ರತಾ ಪಡೆ ಸಿಬ್ಬಂದಿ ಕಾರ್ತಿಕ್ನ ಬ್ಯಾಗನ್ನು ಪರಿಶೀಲಿಸಿದಾಗ 1 ಜಿಂಕೆ ಕೊಂಬು ಪತ್ತೆಯಾಗಿದೆ….