ಮೈಸೂರು, ಫೆ.3(ಪಿಎಂ)- ಚೀನಾ ಮೂಲದ ಕೊರೋನಾ ವೈರಸ್ ಭಾರ ತಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ದೇಶ ದಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳ ಲಾಗುತ್ತಿದೆ. ಅಂತೆಯೇ ಸೋಮವಾರ ದಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ತಪಾಸಣಾ ಕೌಂಟರ್ ಕಾರ್ಯಾರಂಭ ಮಾಡಿತು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಈಗಾಗಲೇ ನಿಲ್ದಾಣ ಆಡಳಿತ ವರ್ಗ ಹಾಗೂ ಅಪೋಲೋ ಆಸ್ಪತ್ರೆ ಜಂಟಿ ಆಶ್ರಯದಲ್ಲಿ ಕ್ಲಿನಿಕ್ ಕಾರ್ಯಚಟುವಟಿಕೆಯಲ್ಲಿದ್ದು, ಇದೇ ಕ್ಲಿನಿಕ್ನಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ತಪಾಸಣಾ ಕೌಂಟರ್ ಆರಂಭಿಸ…
ಮತ್ತೇ ಡಿಸಿಎಂ ಸ್ಥಾನ ಕೇಳಲ್ಲ
February 4, 2020ಮೈಸೂರು, ಫೆ.3(ಎಸ್ಬಿಡಿ)- ಡಿಸಿಎಂ ಸ್ಥಾನ ಕೇಳಿ, ಯಾರಿಗೂ ಮುಜುಗರ ಉಂಟು ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಪುನರುಚ್ಛರಿಸಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಸೋಮವಾರ ಆಗಮಿಸಿದ್ದ ಅವರು, ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಉಪಮುಖ್ಯಮಂತ್ರಿ ಸ್ಥಾನ ಕೇಳಿ ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವುದಿಲ್ಲ. ಈ ವಿಚಾರವಾಗಿ ನಾನು ಚರ್ಚೆ ಮಾಡುವುದಿಲ್ಲ. ನಾನು ರಾಷ್ಟ್ರೀಯ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಯಾರೆಲ್ಲಾ…
ಫೆ.10ರಂದು ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬ
February 4, 2020ಮೈಸೂರು, ಫೆ.3(ಪಿಎಂ)- ಮೈಸೂರಿನ ಗೋಕುಲಂನ ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬವನ್ನು ಫೆ.10ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾತೃಮಂಡಲಿ ವಿದ್ಯಾಸಂಸ್ಥೆಗಳ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಮೊಹಲ್ಲಾದ ಮಾತೃಮಂಡಲಿ ಸಂಸ್ಥೆಗೆ 60 ವರ್ಷ ತುಂಬಿದ ವಜ್ರ ಮಹೋತ್ಸವದ ನೆನಪಿಗಾಗಿ ಗೋಕುಲಂನ ಸಂಸ್ಥೆ ನಿವೇಶನದಲ್ಲಿ 1995ರಲ್ಲಿ ಮಾತೃಮಂಡಲಿ ಶಿಶುವಿಕಾಸ ಕೇಂದ್ರ (ವಿಶೇಷ ಮಕ್ಕಳ ಶಾಲೆ) ಆರಂಭವಾಯಿತು ಎಂದರು. ಶಿಶುವಿಕಾಸ ಕೇಂದ್ರದ ಆರಂಭಕ್ಕೆ ಹಿರಿಯ ಗಾಂಧಿವಾದಿಗಳಾದ ಜಿ.ಎಸ್.ಸುಬ್ರಹ್ಮಣ್ಯಂ, ಬಿ.ಆರ್….
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಂದ ಬಿರುಸಿನ ಮತಯಾಚನೆ
February 4, 2020ಮೈಸೂರು,ಫೆ.3(ಎಂಟಿವೈ)- ಮೈಸೂರು ಮಹಾ ನಗರಪಾಲಿಕೆಯ 18ನೇ ವಾರ್ಡ್ಗೆ ಫೆ.9ರಂದು ನಡೆ ಯಲಿರುವ ಉಪಚುನಾವಣೆ ಪ್ರಚಾರ ಕಾವೇರುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ವಾರ್ಡ್ ವ್ಯಾಪ್ತಿಯಲ್ಲಿ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಬಿರುಸಿನಿಂದ ಮತ ಯಾಚಿಸುತ್ತಿದ್ದಾರೆ. ಮತದಾನಕ್ಕೆ 6 ದಿನ ಬಾಕಿ ಇದ್ದು, ಮನೆ ಮನೆಗೆ ತೆರಳಿ ವಾರ್ಡ್ ಅಭಿವೃದ್ಧಿ ಮಂತ್ರದೊಂದಿಗೆ ಬೆಂಬಲ ಕೋರುತ್ತಿದ್ದಾರೆ. ಚುನಾವಣಾ ಕಣದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಇದ್ದು, ತ್ರಿಕೋನ ಸ್ಪರ್ಧೆ ಏರ್ಪ ಟ್ಟಿದೆ. ಶತಾಯ ಗತಾಯ ಗೆಲುವು ಸಾಧಿಸಲೇಬೇ ಕೆಂದು ಮತದಾರನ…
ಮೈಸೂರು ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಸೌಲಭ್ಯ
February 4, 2020ಮೈಸೂರು, ಫೆ. 3(ಆರ್ಕೆ)- ಸ್ವಚ್ಛ ಮೈಸೂರು ಬಿರುದಿಗಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿರು ವಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯೂ ಸಹ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದೆ. ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂ ತರ ವಿಭಾಗವು ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ಶೌಚಾಲಯದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಮತ್ತು ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ಅಳವಡಿಸಿದೆ. ಮಹಿಳೆಯರು ಆ ಉಪಕರಣದಲ್ಲಿ 5 ರೂ. ನಾಣ್ಯವನ್ನು ಹಾಕಿ ಬಟನ್ ಪ್ರೆಸ್ ಮಾಡಿದರೆ 1 ಬಿಳಿ ಬಣ್ಣದ ನ್ಯಾಪ್ಕಿನ್…
ಫೆ.6ರಂದು ಪಿರಮಿಡ್ ಶೈಲಿಯ `ಶ್ರೀ ಶಿವದತ್ತ ಸಾಯಿ ಮಂದಿರ’ ಮಂದಿರ ಸಂಸ್ಥಾಪಕ ಸ್ನೇಕ್ ಶ್ಯಾಮ್
February 4, 2020ಮೈಸೂರು, ಫೆ.3(ಪಿಎಂ)- ಮಂಡ್ಯ ಜಿಲ್ಲೆ ಮೊಗರಹಳ್ಳಿ ಮಂಟಿಯ ವಿಶ್ವರೂಪ ಆಂಜನೇಯ ದೇವಸ್ಥಾನದ ಹಿಂಭಾಗ ಪಿರ ಮಿಡ್ ಶೈಲಿಯಲ್ಲಿ ನೂತನವಾಗಿ ನಿರ್ಮಿಸಿ ರುವ `ಶ್ರೀ ಶಿವದತ್ತ ಸಾಯಿ ಮಂದಿರ’ ಉದ್ಘಾ ಟನಾ ಸಮಾರಂಭವನ್ನು ಫೆ.6ರಂದು ಆಯೋ ಜಿಸಲಾಗಿದೆ ಎಂದು ಮಂದಿರದ ಸಂಸ್ಥಾಪಕ ಹಾಗೂ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಮ್ (ಬಾಲಸುಬ್ರಹ್ಮಣ್ಯಂ) ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 40×50 ಅಡಿ ವಿಸ್ತೀರ್ಣದ ನಿವೇಶನದಲ್ಲಿ 1 ಗುಂಟೆ ವಿಸ್ತೀರ್ಣದಲ್ಲಿ ಪಿರಮಿಡ್ (ಗೋಪುರ…
`ಪದ್ಮಶ್ರೀ’ ಪುರಸ್ಕøತ ದಂಪತಿಗೆ `ಪರಂಪರೆ’ ಅಭಿನಂದನೆ
February 4, 2020ಮೈಸೂರು,ಫೆ.3(ಎಸ್ಪಿಎನ್)- ಎಲೆಮರೆ ಕಾಯಿಯಂತೆ ಸಂಸ್ಕøತ ಭಾಷೆಯ `ಸುಧರ್ಮ’ ಪತ್ರಿಕೆಯನ್ನು ದಶಕಗಳ ಕಾಲದಿಂದ ಪ್ರಕಟಿಸುತ್ತಿದ್ದ ಸಂಪಾದಕ ಕೆ.ವಿ. ಸಂಪತ್ಕುಮಾರ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ `ಪದ್ಮಶ್ರೀ’ ಪ್ರಶಸ್ತಿ ಬಂದಿರುವುದು ಉತ್ತಮ ಬೆಳವಣಿಗೆ ಎಂದು ರಾಮಕೃಷ್ಣ ವಿದ್ಯಾಶಾಲೆಯ ಸಂಚಾಲಕ ಶ್ರೀ ಯುಕ್ತೇಶಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾನೂನು ಕಾಲೇಜು ಸಭಾಂಗಣದಲ್ಲಿ `ಪರಂಪರೆ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಪದ್ಮಶ್ರೀ’ ಪುರಸ್ಕøತ ದಂಪತಿಗೆ ಅಭಿನಂದನೆ ಸಲ್ಲಿಸಿ ಸ್ವಾಮೀಜಿ ಮಾತನಾಡಿದರು. ಸಂಸ್ಕøತ ಎಲ್ಲಾ ಭಾಷೆಗಳ ತಾಯಿ. ಈ ಭಾಷೆಯಿಂದ…
ಎಂಸಿಡಿಸಿಸಿ ಬ್ಯಾಂಕ್ನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ
February 4, 2020ಮೈಸೂರು, ಫೆ.3- ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ವತಿಯಿಂದ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗು ವಂತೆ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಸೋಮವಾರ ಮೈಸೂರು ಕೇಂದ್ರ ಶಾಖೆ ಯಲ್ಲಿ ಚಾಲನೆ ನೀಡಲಾಯಿತು. ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ಗೌಡ ಮಾತನಾಡಿ, ಬ್ಯಾಂಕಿನ ಗ್ರಾಹಕರಿಗೆ ಆರ್ಥಿಕವಾಗಿ ಮತ್ತು ಸಾಮಾ ಜಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶ ದಿಂದ 20ಕ್ಕೂ ಹೆಚ್ಚು ಸೇವೆಗಳನ್ನು ಅಳವಡಿ ಸಿರುವ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿದ್ದು, ಪ್ರತಿದಿನಕ್ಕೆ…
ಕೆಪಿಎಸ್ಸಿ ಸದಸ್ಯ ರಂಗರಾಜ ವನದುರ್ಗರಿಗೆ ಸನ್ಮಾನ
February 4, 2020ಮೈಸೂರು, ಫೆ.3(ಎಸ್ಪಿಎನ್)- ಉನ್ನತ ಅಧಿಕಾರ ಮತ್ತು ಹುದ್ದೆ ಹಿಂದೆ ಹೊಗ ಳಿಕೆ, ಕುತಂತ್ರ, ಸ್ವಾರ್ಥ ಇರುತ್ತದೆ. ಹಾಗಾಗಿ ಹಿಂದೆ ಸುತ್ತುವ ಹೊಗಳುಭಟರು, ಶಾಲು ಹೊದಿಸುವವರ ಬಗ್ಗೆ ಅಧಿಕಾರಸ್ಥರು ಎಚ್ಚರದಿಂದಿರಬೇಕೆಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಕಿವಿಮಾತು ಹೇಳಿದರು. ಜೆಎಲ್ಬಿ ರಸ್ತೆಯ ಇಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ನೂತನ ಕೆಪಿ ಎಸ್ಸಿ ಸದಸ್ಯ ರಂಗರಾಜ ವನದುರ್ಗ ಅವರಿಗೆ ಅಭಿಮಾನಿ ಬಳಗ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತ ನಾಡಿ, ತಳ ಸಮುದಾಯದವರು ಉನ್ನತ…
ಗ್ರಾಮ ಪಂಚಾಯಿತಿ ಉಪಚುನಾವಣೆ ಫೆ.11ರವರೆಗೆ ಮದ್ಯದ ಅಂಗಡಿ ಬಂದ್
February 4, 2020ಮೈಸೂರು, ಫೆ.3-ಮೈಸೂರು ಜಿಲ್ಲೆಯ 24 ಗ್ರಾಮ ಪಂಚಾಯಿತಿಯಲ್ಲಿ ತೆರ ವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಸಂಬಂಧ ಜನವರಿ 25ರಿಂದ ಫೆಬ್ರವರಿ 11ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಮೈಸೂರು ತಾಲೂಕಿನಲ್ಲಿ ಯಡಕೊಳ, ಸಿದ್ದಲಿಂಗಪುರ, ದೂರ, ಶ್ರೀರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಉಪಚುನಾವಣೆ ನಡೆಯಲಿದೆ. ನಂಜನಗೂಡು ತಾಲೂಕಿನ ಕೂಡ್ಲಾಪುರ, ಸಿಂಧುವಳ್ಳಿ, ಹುಣಸೂರು ತಾಲೂಕಿನ ಜಾಬಗೆರೆ, ಬೋಳನಹಳ್ಳಿ, ಬನ್ನಿಕುಪ್ಪೆ, ಮರದೂರು, ಬೀಜಗನಹಳ್ಳಿ, ಕಡೇಮನುಗನಹಳ್ಳಿ, ನೇರಳಕುಪ್ಪೆ, ಕೆ.ಆರ್.ನಗರ ತಾಲೂಕಿನ ಹೆಬ್ಬಾಳ, ಹಳೆಯೂರು,…










