Tag: Mysore

`ಸಿಎಎ’ ವಿರುದ್ಧ ಬನ್ನಿಮಂಟಪದಲ್ಲಿ ಪ್ರತಿಭಟನಾ ಧರಣಿ
ಮೈಸೂರು

`ಸಿಎಎ’ ವಿರುದ್ಧ ಬನ್ನಿಮಂಟಪದಲ್ಲಿ ಪ್ರತಿಭಟನಾ ಧರಣಿ

January 19, 2020

ಮೈಸೂರು, ಜ. 18(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮೈಸೂರಿನ ಬನ್ನಿಮಂಟಪದ ಸೇಂಟ್ ಫಿಲೋಮಿನಾ ಕಾಲೇಜು ಎದುರಿನ ಫಿರ್ದೋಸ್ ಮಸೀದಿ ಬಳಿ ಇಂದು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನಾ ಧರಣಿ ನಡೆಸಿದರು. ಬನ್ನಿಮಂಟಪ ವೆಲ್‍ಫೇರ್ ಅಸೋಸಿ ಯೇಷನ್ ಅಧ್ಯಕ್ಷ ಅಬ್ದುಲ್‍ಖಾದರ್ ಸೇಠ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದ ಪ್ರತಿಭಟನೆಯಲ್ಲಿ ಸಿಎಎ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಕಾಮುಕರಿಗೆ ಮರಣದಂಡನೆ
ಮೈಸೂರು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಕಾಮುಕರಿಗೆ ಮರಣದಂಡನೆ

January 19, 2020

ಚಿಕ್ಕಮಗಳೂರು: ಕಾಲೇಜು ವಿದ್ಯಾ ರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರಗೈದು, ಕೊಲೆ ಮಾಡಿದ್ದ ಇಬ್ಬರು ಕಾಮುಕರಿಗೆ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾ ಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಜಿಲ್ಲೆಯ ಶೃಂಗೇರಿಯಲ್ಲಿ 2016ರ ಫೆಬ್ರ ವರಿ 16ರಂದು ನಡೆದಿದ್ದ ಘಟನೆಯಿಂದ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಕಾಲುದಾರಿ ಯಲ್ಲಿ ಮನೆಗೆ ಹೋಗುತ್ತಿದ್ದ ಪ್ರಥಮ ಬಿಕಾಂ ವಿದ್ಯಾರ್ಥಿಯನ್ನು ಪ್ರದೀಪ್ ಹಾಗೂ ಸಂತೋಷ್ ಎಂಬುವರು ಅತ್ಯಾಚಾರ ಗೈದು, ಕೊಲೆ ಮಾಡಿ ಪಾಳು ಬಾವಿಗೆ ಎಸೆದಿದ್ದರು. ಇದರಿಂದಾಗಿ ಹೆಣ್ಣು ಮಕ್ಕ ಳನ್ನು ಕಾಲೇಜಿಗೆ ಕಳಿಸುವುದಕ್ಕೆ ಹೆತ್ತವರು ಹಿಂದೇಟು…

ಬಸ್‍ಸ್ಟಾಪ್‍ನಲ್ಲಿದ್ದ ಅಸ್ವಸ್ಥನನ್ನು   ಆಸ್ಪತ್ರೆಗೆ ದಾಖಲಿಸಿದ ಎಂಕೆಎಸ್
ಮೈಸೂರು

ಬಸ್‍ಸ್ಟಾಪ್‍ನಲ್ಲಿದ್ದ ಅಸ್ವಸ್ಥನನ್ನು  ಆಸ್ಪತ್ರೆಗೆ ದಾಖಲಿಸಿದ ಎಂಕೆಎಸ್

January 19, 2020

ಮೈಸೂರು, ಜ.18 (ಎಸ್‍ಬಿಡಿ)- ಅನಾರೋಗ್ಯದಿಂದ ತೀವ್ರವಾಗಿ ಬಳಲಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಮಾನವೀಯತೆ ಮೆರೆದಿದ್ದಾರೆ. ಮೈಸೂರು-ಮಾನಂದವಾಡಿ ರಸ್ತೆ, ರೈಲ್ವೆ ವರ್ಕ್‍ಶಾಪ್ ಸಮೀಪದ ಪ್ರಯಾಣಿಕರ ತಂಗುದಾಣದಲ್ಲಿ ನರಳುತ್ತಾ ಮಲಗಿದ್ದ ಅಪರಿಚಿತನನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೆಲ ದಿನಗಳಿಂದ ಆಹಾರ ಕಲ್ಪಿಸಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆ ವ್ಯಕ್ತಿ, ಮೇಲೇಳಲಾಗದ ಸ್ಥಿತಿಯಲ್ಲಿದ್ದರು. ತೊಟ್ಟಿದ್ದ ಬಟ್ಟೆ ಕೊಳಕಾಗಿದ್ದವು. ಬಟ್ಟೆ ತುಂಬಿದ್ದ ಹಳೇ ಬ್ಯಾಗ್ ಮೇಲೆ ತಲೆಯಿಟ್ಟು, ಮಲಗಿದ್ದರು. ಮೂರ್ನಾಲ್ಕು…

ಫೆ.14ರಿಂದ 19ರವರೆಗೆ ರಂಗಾಯಣ ಬಹುರೂಪಿ ನಾಟಕೋತ್ಸವ
ಮೈಸೂರು

ಫೆ.14ರಿಂದ 19ರವರೆಗೆ ರಂಗಾಯಣ ಬಹುರೂಪಿ ನಾಟಕೋತ್ಸವ

January 19, 2020

ಮೈಸೂರು,ಜ.18(ಪಿಎಂ)-ಪ್ರಸಕ್ತ ಸಾಲಿನ ಮೈಸೂರು ರಂಗಾಯಣದ ಬಹುರೂಪಿ ನಾಟಕೋತ್ಸವ ಫೆ.14ರಿಂದ 19ರವರೆಗೆ ನಡೆಯಲಿದ್ದು, ನಾಟಕೋತ್ಸವವು ಬಸ ವಣ್ಣ ಸೇರಿದಂತೆ ಹಲವು ಮಹನೀಯರ ಆಶಯ ಗಳನ್ನು ಬಿಂಬಿಸಲಿದೆ ಎಂದು ರಂಗಾಯಣ ನಿರ್ದೇ ಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು. ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ಶಾಲಾ ಮಕ್ಕಳಿಗೆ ನಡೆಸಿದ `ಬಸವಣ್ಣನವರ ರೇಖಾಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆ’ಯಲ್ಲಿ ಆಯ್ಕೆಯಾದ ಚಿತ್ರಗಳ ಪ್ರದರ್ಶನಕ್ಕೆ ಮೈಸೂರಿನ ಶಂಕರ ಮಠದ ರಸ್ತೆಯ ನಟರಾಜ ಸಭಾಭವನದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಬಹುರೂಪಿ ನಾಟಕೋ ತ್ಸವದ ಪೂರ್ವಭಾವಿಯಾಗಿ…

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಒಂದು ಜನಾಂಗಕ್ಕೆ ಸೀಮಿತವಲ್ಲ
ಮೈಸೂರು

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಒಂದು ಜನಾಂಗಕ್ಕೆ ಸೀಮಿತವಲ್ಲ

January 19, 2020

ಮೈಸೂರು, ಜ.18(ಪಿಎಂ)- ಆದಿ ಚುಂಚನಗಿರಿ ಮಠದ ಶ್ರೀಬಾಲ ಗಂಗಾಧರನಾಥ ಸ್ವಾಮೀಜಿಯವರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಶಾಸಕ ಎಲ್.ನಾಗೇಂದ್ರ ಸ್ಮರಿಸಿದರು. ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ವೃತ್ತದ ಬಳಿ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 75ನೇ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಧನೆ ಹಾದಿ ಬಲು ದೊಡ್ಡದು. ಶ್ರೀಗಳು…

ಬಳಕೆಯಾಗದ ಕೈಗಾರಿಕಾ ಭೂಮಿ, ನಿವೇಶನಗಳ ಹಿಂಪಡೆಯಲು ಸರ್ಕಾರ ನಿರ್ಧಾರ
ಮೈಸೂರು

ಬಳಕೆಯಾಗದ ಕೈಗಾರಿಕಾ ಭೂಮಿ, ನಿವೇಶನಗಳ ಹಿಂಪಡೆಯಲು ಸರ್ಕಾರ ನಿರ್ಧಾರ

January 19, 2020

ಮೈಸೂರು, ಜ.18 (ಆರ್‍ಕೆ)- ನಿಗದಿತ ಉದ್ದೇ ಶಕ್ಕೆ, ನಿಗದಿತ ಸಮಯಕ್ಕೆ ಬಳಸದೇ ಖಾಲಿ ಬಿಟ್ಟಿರುವ ಕೈಗಾರಿಕಾ ಬಡಾವಣೆಗಳ ಭೂಮಿ ಹಾಗೂ ನಿವೇ ಶನಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭವಿಷ್ಯದಲ್ಲಿ ಹೂಡಿಕೆಗಾಗಿ ಲ್ಯಾಂಡ್ ಬ್ಯಾಂಕ್ ಸೃಷ್ಟಿ ಸಲು ಯೋಜಿಸಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ದೇಶಿತ ಕೈಗಾರಿಕೆಗಳನ್ನು ಸ್ಥಾಪಿಸದೇ ಹಲವು ವರ್ಷಗಳಿಂದ ಖಾಲಿ ಬಿಟ್ಟಿರುವ ಭೂಮಿ, ನಿವೇ ಶನಗಳನ್ನು ವಾಪಸ್ ಪಡೆಯಲು ಸಿದ್ಧತೆ ನಡೆಸಿದೆ. ನವ ಉದ್ಯಮಿಗಳಿಗೆ ಪ್ರೋತ್ಸಾಹ…

ಸಾಹಿತ್ಯದ ಸಾಂಗತ್ಯದಿಂದ ಸೃಜನಶೀಲತೆ ವೃದ್ಧಿ: ಅಡ್ಡಂಡ ಕಾರ್ಯಪ್ಪ
ಮೈಸೂರು

ಸಾಹಿತ್ಯದ ಸಾಂಗತ್ಯದಿಂದ ಸೃಜನಶೀಲತೆ ವೃದ್ಧಿ: ಅಡ್ಡಂಡ ಕಾರ್ಯಪ್ಪ

January 19, 2020

ಮೈಸೂರು,ಜ.18(ವೈಡಿಎಸ್)-ಮಕ್ಕಳು ಸಾಹಿತ್ಯ-ಕಥೆ-ಕವನ-ಕಾದಂಬರಿಗಳನ್ನು ಹೆಚ್ಚು ಓದುವುದರಿಂದ ಸೃಜನಶೀಲತೆ ಬೆಳೆಯುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಭಿಪ್ರಾಯಪಟ್ಟರು. ಕುವೆಂಪುನಗರದ ಶ್ರೀ ಕಾವೇರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋ ಜಿಸಿದ್ದ `ಕಾವೇರಿ ಸಂಭ್ರಮೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್‍ಎಸ್ ಎಲ್‍ಸಿ, ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳು ಅತೀ ಬುದ್ಧಿ ವಂತರೆಂದು ಹೇಳಲಾಗದು. ಹಾಗೆಯೇ ಶೇ.35ರಷ್ಟು ಅಂಕ ಪಡೆದವರು ದಡ್ಡರಲ್ಲ. ಪೇಪರ್ ಹಾಕುತ್ತಿದ್ದ ಅಬ್ದುಲ್‍ಕಲಾಂ ರಾಷ್ಟ್ರ ಪತಿಯಾದರು. ಟೀ ಮಾರುತ್ತಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಹಾಗಾಗಿ ಎಲ್ಲರಲ್ಲೂ…

ಸಾಯಿ ಬಾಬಾ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ವಿವಾದ: ಇಂದು ‘ಶಿರಡಿ ಬಂದ್’
ಮೈಸೂರು

ಸಾಯಿ ಬಾಬಾ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ವಿವಾದ: ಇಂದು ‘ಶಿರಡಿ ಬಂದ್’

January 19, 2020

ಮುಂಬೈ, ಜ. 18- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನೀಡಿರುವ ಹೇಳಿಕೆಯಿಂದಾಗಿ ಸಾಯಿ ಬಾಬಾ ಜನ್ಮ ಸ್ಥಳದ ಬಗ್ಗೆ ವಾದ-ವಿವಾದಗಳು ಭುಗಿ ಲೆದ್ದಿದ್ದು ಈ ವಿವಾದದ ಹಿನ್ನೆಲೆಯಲ್ಲಿ ಭಾನುವಾರ ಶಿರಡಿ ಬಂದ್ ಆಚರಿಸಲು ಬಾಬಾ ಭಕ್ತರು ನಿರ್ಧರಿಸಿದ್ದಾರೆ. ಕಳೆದ ವಾರ ಔರಂಗಜೇಬ್‍ನ ಸಭೆ ಯೊಂದರಲ್ಲಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಪರ್ಭಣಿ ಜಿಲ್ಲೆಯ ಪಾತ್ರಿ ಗ್ರಾಮವೇ ಸಾಯಿ ಬಾಬಾ ಜನ್ಮಸ್ಥಳವಾಗಿದ್ದು, ಅವರ ಜನ್ಮಸ್ಥಳ ಅಭಿವೃದ್ಧಿಗಾಗಿ ಸರ್ಕಾರ 100 ಕೋಟಿ ರೂ. ಯೋಜನೆ ರೂಪಿಸಿದೆ ಎಂದು ಘೋಷಿಸಿದ್ದರು….

ಭಯವಿಲ್ಲದ ಭಕ್ತಿ ಪ್ರತಿಪಾದಿಸಿದ್ದ ಮಂಟೇಸ್ವಾಮಿ: ಬಂಜಗೆರೆ ಜಯಪ್ರಕಾಶ್
ಮೈಸೂರು

ಭಯವಿಲ್ಲದ ಭಕ್ತಿ ಪ್ರತಿಪಾದಿಸಿದ್ದ ಮಂಟೇಸ್ವಾಮಿ: ಬಂಜಗೆರೆ ಜಯಪ್ರಕಾಶ್

January 19, 2020

ಮೈಸೂರು, ಜ.18(ಎಂಕೆ)- ನಗರದ ಕಲಾಮಂದಿರದಲ್ಲಿ ಹೊನ್ನಾರು ಜನಪದ ಗಾಯಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ಕೃತಿ ಲೋಕಾರ್ಪಣೆ ಸಮಾರಂಭ ದಲ್ಲಿ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜ ಶೇಖರ ಅವರು ಸಂಪಾದಿಸಿರುವ ‘ನೀಲ ಗಾರ ಬೆಟ್ಟದಬೀಡು ಸಿದ್ಧಶೆಟ್ಟರು’ ಹಾಡಿ ರುವ ಹಾಡುಗಳ ಸಂಗ್ರಹವಾದ ‘ಜನಪದ ಮಹಾಕಾವ್ಯ ಧರೆಗೆ ದೊಡ್ಡೋರು ಮಂಟೇ ಸ್ವಾಮಿ’, ‘ಜನಪದ ಗಾಯಕ ರತ್ನ’ ಕೃತಿ ಗಳನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಬಳಿಕ ಕೃತಿ ಕುರಿತು…

ಇಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ
ಮೈಸೂರು

ಇಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

January 19, 2020

ಮೈಸೂರು,ಜ.18(ಪಿಎಂ)-ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಜ.19ರಂದು ನಡೆಯಲಿದ್ದು, ಮೈಸೂರು ಜಿಲ್ಲೆಯಲ್ಲಿ 5 ವರ್ಷದೊಳಗಿನ 2,43, 641 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಪ್ರದೇಶಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1,652 ಲಸಿಕಾ ಬೂತ್‍ಗಳನ್ನು ಪ್ರಮುಖ ಸ್ಥಳಗಳಲ್ಲಿ ತೆರೆಯಲಾಗಿದೆ. ಇದರ ಜೊತೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ….

1 64 65 66 67 68 330
Translate »