ಮೈಸೂರು, ಮಾ. 21- ದೇಶಾದ್ಯಂತ ಕೊರೊನಾ ವೈರಸ್ ಪ್ರಭಾವದಿಂದ ಕೃಷಿ ಉತ್ಪನ್ನ ಗಳು, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಇಳಿ ಮುಖವಾಗಿ ಮಾರುಕಟ್ಟೆಯಲ್ಲಿ ಖರೀದಿದಾರರು ಕಡಿಮೆಯಾಗಿ ಬೇಡಿಕೆ ಕುಸಿಯುತ್ತಿದೆ. ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಕುಕ್ಕುಟ ಉದ್ಯಮದ ಕೋಳಿ ಸಾಕಾ ಣಿಕೆಕಾರರು ಖರೀದಿ ನಿಲ್ಲಿಸಿರುವ ಕಾರಣ ಕ್ವಿಂಟಾಲ್ಗೆ 2200 ರೂ. ಬೆಲೆಯಿದ್ದ ಮೆಕ್ಕೆಜೋಳದ ಬೆಲೆ 1 ಸಾವಿರ ರೂಗಳಿಗೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ 1760 ರೂ.ಗೆ ಸರ್ಕಾರ ನಿಗದಿ ಮಾಡಲಾಗಿದೆ….
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ರಾಜೀನಾಮೆ
March 21, 2020ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ರಾಜ್ಯಪಾಲ ಲಾಲ್ ಜಿ ಟಂಡನ್ ಶುಕ್ರವಾರ ಅಂಗೀಕರಿಸಿದ್ದಾರೆ. ಇದರೊಂದಿಗೆ ಕಳೆದ 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬೃಹನ್ನಾಟಕಕ್ಕೆ ತೆರೆ ಬಿದ್ದಿದೆ. ಇಂದು ಸಂಜೆಯ ವೇಳೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಕಮಲ್ನಾಥ್ ಅವರಿಗೆ ಗುರುವಾರ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ಬಂಡಾಯ ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಹಿನ್ನೆಲೆ ಯಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ…
ಕೊರೊನಾ: ಪ್ರವಾಸಿಗರಿಲ್ಲದೆ ಟಾಂಗಾವಾಲಾಗಳ ಸಂಕಷ್ಟ!
March 21, 2020ಮೈಸೂರು,ಮಾ.20(ವೈಡಿಎಸ್)-ಕೊರೊನಾ ಕರಿನೆರಳು ಮೈಸೂರಿನ ಟಾಂಗಾ ವಾಲಾಗಳ ಮೇಲೆ ಬಿದ್ದಿದ್ದು, ಜೀವನ ನಡೆಸಲಾಗದ ಪರಿಸ್ಥಿತಿ ಎದುರಾಗಿದೆ. ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ವಿದೇಶಿಗರು, ಸಾರೋಟು, ಟಾಂಗಾಗಾಡಿಗಳಲ್ಲಿ ಸಂಚರಿಸಿ ಚರ್ಚ್, ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ ಮತ್ತಿತರೆ ಸ್ಥಳಗಳನ್ನು ವೀಕ್ಷಿ ಸುತ್ತಿದ್ದರು. ಟಾಂಗಾ ಸವಾರಿ ಪ್ರವಾಸಿಗ ರಿಗೆ ಮುದ ನೀಡುತ್ತಿತ್ತು. ಇದರಿಂದ ಬಂದ ಹಣದಿಂದ ಟಾಂಗಾವಾಲಾಗಳು ಜೀವ ನದ ಬಂಡಿ ಸಾಗಿಸುತ್ತಿದ್ದರು. ಕೊರೊನಾ ಭೀತಿಯಿಂದಾಗಿ ಮೈಸೂರಿಗೆ ಪ್ರವಾಸಿ ಗರು ಬರುವುದೇ ನಿಂತು ಹೋಗಿದೆ. ಪ್ರವಾ ಸಿಗರನ್ನೇ ನಂಬಿಕೊಂಡಿದ್ದ ಸಾರೋಟು,…
ಕೊರೊನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ ಮುಜರಾಯಿ ಇಲಾಖೆ ಆದೇಶ
March 21, 2020ಬೆಂಗಳೂರು, ಮಾ. 20- ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ದೇಶಾದ್ಯಂತ ವಿವಿಧ ರೀತಿಯ ನಿರ್ಬಂಧ, ನಿಷೇಧಗಳು ಚಾಲನೆಯಲ್ಲಿವೆ. ಹಲವೆಡೆ ಕರ್ಫ್ಯೂ ಹೇರಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯು ತನ್ನ ಎಲ್ಲಾ ದೇವಸ್ಥಾನಗಳಿಗೆ ನಿರ್ಬಂಧ ಹೇರಿದೆ. ಅನಿರ್ದಿ ಷ್ಟಾವಧಿಯವರೆಗೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಂದಿನ ಆದೇಶ ದವರೆಗೂ ಈ ನಿರ್ಬಂಧ ಮುಂದುವರಿಯಲಿದೆ. ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯ ಕ್ರಮ, ಉತ್ಸವ, ಪ್ರಸಾದ ವಿತರಣೆ, ದಾಸೋಹ ಇತ್ಯಾದಿಗಳನ್ನ ರಾಜ್ಯ ಸರ್ಕಾರ ನಿಷೇಧಿಸಿತ್ತು. ಈಗ ದೇವಸ್ಥಾನಗಳನ್ನೂ ಬಂದ್ ಮಾಡಲು ಆದೇಶಿಸ…
ಮನೆ ಮನೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಆಚರಣೆ
March 21, 2020ಮೈಸೂರು, ಮಾ.20- ರಾಷ್ಟ್ರೀಯ ಪೋಷಣಾ ಅಭಿ ಯಾನ ಎಂಬುದು ಕಾರ್ಯಕ್ರಮ ವಲ್ಲ, ಅದೊಂದು ಆಂದೋಲನ ಮತ್ತು ಸಹಭಾಗಿತ್ವವಾಗಿದೆ. ಭಾರತ ವನ್ನು ಅಪೌಷ್ಟಿಕತೆಯಿಂದ ಮುಕ್ತ ಗೊಳಿಸುವುದು ಇದರ ಉದ್ದೇಶ ವಾಗಿದ್ದು, ದೇಶದೆಲ್ಲೆಡೆ ರಾಷ್ಟ್ರೀಯ ಪೋಷಣಾ ಅಭಿಯಾನವನ್ನು ಆಚರಿಸಲಾಗುವುದು. ಗರ್ಭಿಣಿಯರು, ಮಕ್ಕಳು, ಬಾಲಕಿ ಯರು ಗಮನದಲ್ಲಿಡಬೇಕಾದ ಅಂಶ: ದೇಹ ದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಗು ಹುಟ್ಟುವಾಗ ತೂಕ ಕಡಿಮೆಯಿ ರುವ ಶಿಶುಗಳ ಸಂಖ್ಯೆ ಇಳಿಕೆ ಇವುಗಳನ್ನು ಸಾಧಿಸಲು ವಿವಿಧ ಇಲಾಖೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…
ಡ್ರಾಪ್ಲೆಟ್ಸ್ ಮೂಲಕ ಕೊರೊನಾ ವೈರಸ್ ಹರಡುತ್ತದೆ
March 21, 2020ಮೈಸೂರು, ಮಾ.20(ಎಂಟಿವೈ)-ಕೊರೊನಾ ವೈರಸ್ ಡ್ರಾಪ್ಲೆಟ್ಸ್ಗಳಿಂದ ಹರ ಡುತ್ತಿದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ತಪ್ಪದೇ ಕರವಸ್ತ್ರ ಬಳಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪಿ.ಚಿದಂಬರ ಸಲಹೆ ನೀಡಿದ್ದಾರೆ. ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಆವರಣದಲ್ಲಿ ಶುಕ್ರವಾರ `ಕೊರೊನಾ ವೈರಸ್ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಈವರೆಗೆ ಕಾಣಿಸಿಕೊಂಡಿ ರುವ ಬಹಳಷ್ಟು ವೈರಸ್ಗಳಿಂದಲೂ ಸಾವು ಸಂಭವಿಸಿದೆ. ಆದರೆ ಚಿಕೂನ್ಗುನ್ಯಾ ದಿಂದ ಸಾವು ಸಂಭವಿಸಿಲ್ಲ. ಕೊರೊನಾ ವೈರಸ್ ಈ ಬಾರಿ ಹೊಸ ರೂಪ…
`ಜನತಾ ಕಫ್ರ್ಯೂ’ಗೆ ಹೋಟೆಲ್ ಉದ್ಯಮ ಪೂರ್ಣ ಬೆಂಬಲ
March 21, 2020ಭಾನುವಾರ ಮೈಸೂರಿನ ಎಲ್ಲಾ ಹೋಟೆಲ್, ಬೇಕರಿ, ರೆಸ್ಟೋರೆಂಟ್ ಬಂದ್ ಗ್ರಾಹಕರ ಆರೋಗ್ಯ ರಕ್ಷಣೆಯೇ ನಮಗೆ ಮುಖ್ಯ ಎಂದ ಆತಿಥ್ಯ ಕ್ಷೇತ್ರ ಮೈಸೂರು, ಮಾ.20(ಎಂಟಿವೈ)- ಕೊರೊನಾ ಹರಡದಂತೆ ಎಚ್ಚರ ವಹಿ ಸುವ ನಿಟ್ಟಿನಲ್ಲಿ ಮಾ.22ರ ಭಾನುವಾರ ದೇಶಾದ್ಯಂತ `ಜನತಾ ಕಫ್ರ್ಯೂ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ನೀಡಿದ ಕರೆಗೆ `ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ’ ಪೂರ್ಣ ಬೆಂಬಲ ನೀಡಿದೆ. ಭಾನುವಾರ ಎಲ್ಲಾ ಬಗೆಯ ಹೋಟೆಲ್, ವಸತಿ ಗೃಹಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ…
ಸಾರ್ವತ್ರಿಕ ರೋಗ ನಿಯಂತ್ರಣಕ್ಕೆ ಸಹಕರಿಸಿ
March 21, 2020ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್ ಮನವಿ ಮೈಸೂರು, ಮಾ. 20(ಆರ್ಕೆ)- ಕೋವಿಡ್ -19(ಕರೋನಾ ವೈರಸ್) ಹಾಗೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಬೀದಿ ಬದಿ ವ್ಯಾಪಾರಿ ಗಳು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಯೊಂದಿಗೆ ಸಹಕರಿಸಬೇಕೆಂದು ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ ಮನವಿ ಮಾಡಿದ್ದಾರೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಮಾರಕ ರೋಗದ ವೈರಾಣು ಹರಡದಂತೆ ಪಾಲಿಕೆಯಿಂದ ಅಗತ್ಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಎಲ್ಲೆಂದರಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರೆದು, ಆಹಾರ…
ಮೃಗಾಲಯ, ಕಾರಂಜಿಕೆರೆ ಬಂದ್ ಮಾ.31ರವರೆಗೂ ವಿಸ್ತರಣೆ
March 21, 2020ಮೈಸೂರು,ಮಾ.20(ಎಂಟಿವೈ)- ಕೊರೊನಾ ಹಾಗೂ ಹಕ್ಕಿಜ್ವರ ಹರಡುವು ದನ್ನು ತಡೆಯಲು ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆಯನ್ನು ಪ್ರವಾಸಿಗ ರಿಗೆ ಸದ್ಯ ಬಂದ್ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶ ಸ್ಥಗಿತ ಕ್ರಮವನ್ನು ಮಾ.31ರವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಶುಕ್ರವಾರ ತಿಳಿಸಿದ್ದಾರೆ. ಜನಸಂದಣಿಯ ಸ್ಥಳಗಳಲ್ಲಿ ಕೊರೊನಾ ವೈರಸ್ ಸುಲಭವಾಗಿ ಹರಡುವ ಹಿನ್ನೆಲೆ ಯಲ್ಲಿ ಮೈಸೂರು ಮೃಗಾಲಯ, ಬನ್ನೇರು ಘಟ್ಟ ಸೇರಿದಂತೆ ರಾಜ್ಯದ 9 ಮೃಗಾ ಲಯಗಳನ್ನು ಮಾ.15ರಿಂದ 23ರವರೆಗೆ ಬಂದ್ ಮಾಡಲಾಗಿದೆ. ಈಗ ಮೃಗಾಲಯ ಪ್ರಾಧಿಕಾರ…
ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಕೆಲವೊಂದು ಸುರಕ್ಷಾ ಕ್ರಮಗಳು
March 21, 2020ಮೈಸೂರು, ಮಾ.20- ಬೇಸಿಗೆಯಲ್ಲಿ ತೀಕ್ಷ್ಣ ವಾದ ಬಿಸಿಲಿನಿಂದ ನಮ್ಮ ಶರೀರದಲ್ಲಿನ ಉಷ್ಣಾಂ ಶವು ಹೆಚ್ಚಾಗುತ್ತದೆ. ಇದರಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಜೀರ್ಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ಸಾರ್ವಜನಿಕರು ಆರೋಗ್ಯವಂತರಾಗಿ ರಲು ದೇಹಕ್ಕೆ ಶಕ್ತಿ ನೀಡುವಂತಹ ಆಹಾರ ಪಾನೀಯಗಳ ಬಗ್ಗೆ ಅರಿವು ಅಗತ್ಯ. ಅಗತ್ಯ ಗ್ಲೂಕೋಸ್ಗೆ ಪಾನೀಯ ಸೇವನೆ: ಬಿಸಿಲಿನ ತಾಪದಿಂದ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಇರುವಂತೆ ನೋಡಿಕೊಳ್ಳುವುದು. ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಆಗಾಗ್ಗೆ ನಿಧಾನವಾಗಿ ಕುಡಿ ಯುವುದು, ಹಣ್ಣಿನ ರಸ, ಪಾನಕಗಳನ್ನು ನೀರು, ಮಜ್ಜಿಗೆ/…