ಹುಟ್ಟುಹಬ್ಬದಂದೇ ಉಪನ್ಯಾಸಕಿ ನೇಣಿಗೆ ಶರಣು
ಚಾಮರಾಜನಗರ

ಹುಟ್ಟುಹಬ್ಬದಂದೇ ಉಪನ್ಯಾಸಕಿ ನೇಣಿಗೆ ಶರಣು

August 10, 2022

ಚಾಮರಾಜನಗರ, ಆ.9- ತನ್ನ ಹುಟ್ಟುಹಬ್ಬದಂದೇ ಕಾಲೇಜು ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ದುರಂತ ನಗರದಲ್ಲಿ ನಡೆದಿದೆ. ಯಳಂದೂರು ತಾಲೂ ಕಿನ ಅಂಬಳೆಯ ನಿವಾಸಿ ಮಹ ದೇವಸ್ವಾಮಿ ಪುತ್ರಿ ಚಂದನಾ(26) ಆತ್ಮಹತ್ಯೆ ಮಾಡಿಕೊಂಡವರು. ಇವರು ನಗರದ ಖಾಸಗಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಯಾಗಿದ್ದು, ಸಂಸ್ಥೆಯ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡಿದ್ದರು. ಮಂಗಳವಾರ ಚಂದನಾ ಹುಟ್ಟುಹಬ್ಬ. ಸ್ನೇಹಿತರು, ವಿದ್ಯಾರ್ಥಿಗಳು ಬೆಳಗ್ಗೆಯೇ ಶುಭಾ ಶಯ ಕೋರಿದ್ದಾರೆ. ತನ್ನ ರೂಂನ ಗೆಳತಿಯರು ಹೊರಹೋದ ನಂತರ ಬೆಳಗ್ಗೆ 10.30ರಲ್ಲಿ ಚಂದನಾ ಕೊಠಡಿಯ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.

ಈಕೆಯ ತಂದೆ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಸೋಮ ವಾರ ಸಂಜೆಯಷ್ಟೇ ಮಗಳೊಟ್ಟಿಗೆ ಪಾನಿಪೂರಿ ಸೇವಿಸಿ ಊರಿಗೆ ಬರುವಂತೆ ಹೇಳಿ ಹೋಗಿದ್ದರಂತೆ. ಮಂಗಳ ವಾರ ಬೆಳಗ್ಗೆ ಕರೆ ಮಾಡಿದಾಗ ಫೆÇೀನ್ ಸ್ವಿಚ್‍ಆಫ್ ಆಗಿದೆ. ಕೂಡಲೇ ಹಾಸ್ಟೆಲ್‍ನ ಸೆಕ್ಯೂರಿಟಿಗೆ ಕರೆ ಮಾಡಿ ಚಂದನಾ ಫೆÇೀನ್ ಎತ್ತದೆ ಇರುವುದನ್ನು ತಿಳಿಸಿದ್ದಾರೆ. ಈ ವೇಳೆ ಚಂದನಾ ಕೊಠಡಿ ಬಳಿ ಹೋದ ಸೆಕ್ಯೂರಿಟಿಗೆ ಚಂದನಾ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆತ ಹಾಸ್ಟೆಲ್‍ನ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೆÇಲೀಸರು ಪರಿಶೀಲನೆ ನಡೆಸಿದರು.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್‍ನೋಟ್ ಬರೆದಿಟ್ಟ ಚಂದನಾ: ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿರುವ ಚಂದನಾ, ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಾರಂಭಿಸಿ, ಮನದಾಳದ ನೋವಿಗೆ ಅಕ್ಷರ ರೂಪ ನೀಡಿದ್ದಾರೆ. `ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ತನ್ನ ಇಬ್ಬರು ಅಕ್ಕಂದಿರಿಗೆ ಕ್ಷಮೆ ಕೇಳಿರುವ ಚಂದನಾ, ತಂಗಿಯನ್ನು ಉದ್ದೇಶಿಸಿ, ಯಾವುದೇ ಕಾರಣಕ್ಕೂ ಉಪನ್ಯಾಸಕಿ ಹುದ್ದೆಗೆ ಬರಬೇಡ ಎಂದು ಸಲಹೆ ನೀಡಿದ್ದಾರೆ.

ತಂದೆ ಗೋಳಾಟ: ಮಗಳು ಲೆಕ್ಚರರ್ ಆಗಿ ವರ್ಕ್ ಮಾಡ್ತಾ ಇದ್ದಳು. ಮನೆ ಕಡೆಯೂ ಗಮನ ಕೊಡುತ್ತಿದ್ದಳು. ಒಳ್ಳೆ ಹುಡುಗಿ. ಇಂದು ಅವಳ ಹುಟ್ಟುಹಬ್ಬವಿತ್ತು. ಮನೆಗೆ ಕರೆದುಕೊಂಡು ಹೋಗಿ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸೋಣಾ ಅಂತಾ ಅಂದುಕೊಂಡಿದ್ದೆ. ನಿನ್ನೆ ರಾತ್ರಿ 8.30ಕ್ಕೆ ನಾನು ಫೆÇೀನ್ ಮಾಡಿದ್ದೆ. ಆಗ ಫೆÇೀನ್ ಸ್ವಿಚ್ ಆಫ್ ಬರ್ತಿತ್ತು. ಪುನಃ ಬೆಳಗ್ಗೆ ವಾರ್ಡನ್‍ಗೆ ಫೆÇೀನ್ ಮಾಡಿ ವಿಚಾರಿಸಿದೆ. ಆದರೆ ಅವರು ಒಂದು ಗಂಟೆಯ ನಂತರ ನಿಮ್ಮ ಮಗಳಿಗೆ ಹುಷಾರಿಲ್ಲ ಅಂತಾ ಹೇಳಿ ಕರೆಸಿಕೊಂಡರು. ಈಗ ಹೀಗಾಗಿದೆ ಎಂದು ಮೃತಳ ತಂದೆ ಮಹದೇವಸ್ವಾಮಿ ರೋಧಿಸಿದರು.

Translate »