ಪಡಿತರ ಧಾನ್ಯ ಪಡೆಯಲು ಓಟಿಪಿ ಅಗತ್ಯವಿಲ್ಲ; ಸರ್ಕಾರದ ಆದೇಶ
ಮೈಸೂರು

ಪಡಿತರ ಧಾನ್ಯ ಪಡೆಯಲು ಓಟಿಪಿ ಅಗತ್ಯವಿಲ್ಲ; ಸರ್ಕಾರದ ಆದೇಶ

April 7, 2020

ಮೈಸೂರು,ಏ.6(ಪಿಎಂ)-ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ವೈದ್ಯಕೀಯ ವಿಪತ್ತು ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ತೊಂದರೆ ತಪ್ಪಿಸಲು ಪ್ರಸಕ್ತ ಸಾಲಿನ ಏಪ್ರಿಲ್ ಮಾಸದ ಆಹಾರ ಧಾನ್ಯಗಳನ್ನು ಪಡಿತರ ಅಂಗಡಿಗಳಲ್ಲಿ ಓಟಿಪಿ ಇಲ್ಲ ದೆಯೇ ಕೇವಲ ಗ್ರಾಹಕರ ಸಹಿ ಪಡೆದು ಹಂಚಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಜಿಲ್ಲಾಡಳಿತಗಳು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದೂ ನಿರ್ದೇ ಶನ ನೀಡಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ಕೆ. ಅನಿಲ್‍ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

Translate »