ತಿತಿಮತಿಯಲ್ಲಿ ನಿತ್ಯೋತ್ಸವ ಕಾರ್ಯಕ್ರಮ
ಕೊಡಗು

ತಿತಿಮತಿಯಲ್ಲಿ ನಿತ್ಯೋತ್ಸವ ಕಾರ್ಯಕ್ರಮ

October 22, 2020

ಗೋಣಿಕೊಪ್ಪ, ಅ.21- ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛಭಾರತ ಮಿಷನ್, ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋತ್ಸವ ಮಾಸಿಕ ಆಚರಣೆ ಮಂಗಳ ವಾರ ನಡೆಯಿತು. ಗರ್ಭಿಣಿ, ಬಾಣಂತಿ ಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮಾತೃಪೂರ್ಣ ಯೋಜನೆಯನ್ನು ಪಡೆದುಕೊಂಡು, ಆರೋಗ್ಯ ಇಲಾಖೆಯ ಹಲವು ಯೋಜನೆ ಗಳನ್ನು ಬಳಸಿಕೊಳ್ಳಲು ಸಲಹೆ ನೀಡ ಲಾಯಿತು. ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಹೊಸಮನಿ ಅವರು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.

ಸ್ವಚ್ಛ ಭಾರತ ಕಾರ್ಯಕ್ರಮದಡೀ ಆವರಣದಲ್ಲಿ ಸ್ವಚ್ಛತೆ ಮಾಡಲಾಯಿತು. ನಡೆಯಿತು. ತಿತಿಮತಿ ವೃತ್ತದ ಅಂಗನ ವಾಡಿ, ಆಶಾಕಾರ್ಯಕರ್ತೆಯರು ಪಾಲ್ಗೊ ಂಡರು. ಸುಮಾರು 5 ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು. ಕರೊನಾ ಬಗ್ಗೆ ಜನಾಂದೋಲನದ ಮೂಲಕ ಜಾಗೃತಿ ಮೂಡಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯೆ ಆಶಾಜೇಮ್, ಬಿಎಚ್‍ಇಒ ಶಿವಯ್ಯ, ತಿತಿಮತಿ ಗ್ರಾಮ ಪಂಚಾಯಿತಿ ಪಿಡಿಒ ಮಮತಾ, ಅಂಗನ ವಾಡಿ ಕಾರ್ಯಕರ್ತೆ ಸರೋಜಾ ಇದ್ದರು.

 

 

Translate »