ಇಂದು `ವೀರೇಂದ್ರ ಪಾಟೀಲ್- ಒಂದು ನೆನಪು’ ಕಾರ್ಯಕ್ರಮ
ಮೈಸೂರು

ಇಂದು `ವೀರೇಂದ್ರ ಪಾಟೀಲ್- ಒಂದು ನೆನಪು’ ಕಾರ್ಯಕ್ರಮ

March 3, 2021

ಮೈಸೂರು,ಮಾ.2(ಆರ್‍ಕೆಬಿ)- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ (ಮಾ.3) ಸಂಜೆ 4.30ಕ್ಕೆ ವಿಜಯನಗರ ಒಂದನೇ ಹಂತದ ಸಾಹಿತ್ಯ ಭವನದಲ್ಲಿ ಮರೆಯಲಾಗದ ಮಹನೀಯರು ಮಾಲಿಕೆ ಅಡಿಯಲ್ಲಿ ರಾಜ್ಯದ ಹಿರಿಯ ಮುತ್ಸದ್ದಿ ವೀರೇಂದ್ರ ಪಾಟೀಲ್ ಅವರನ್ನು ಕುರಿತ ಒಂದು ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಂಗಳವಾರ ಮೈಸೂರು ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಉದ್ಘಾಟನೆ ನೆರವೇರಿಸಲಿದ್ದಾರೆ. ಲೀಲಾದೇವಿ ಆರ್.ಪ್ರಸಾದ್ ದಿಕ್ಸೂಚಿ ಭಾಷಣ ಮಾಡುವರು. ಮಾಜಿ ಸಚಿವ ಡಾ.ಎಂ.ಪಿ.ನಾಡಗೌಡ, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಇಂದಿನ ರಾಜಕಾರಣದ ದಿಕ್ಕನ್ನು ಗಮನಿಸಿದಾಗ ವೀರೇಂದ್ರ ಪಾಟೀಲ್ ಅವರು ಇಂದಿನ ಯುವ ಪೀಳಿಗೆಗೆ ಪ್ರೇರಣೆ ಆಗಲಿದ್ದಾರೆ. ಹೀಗಾಗಿ ಈ ಬಾರಿ ಅವರ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ನಾಗರಾಜು, ಜಿ.ಪ್ರಕಾಸ್, ಬೆನಕ ಪ್ರಸಾದ್ ಉಪಸ್ಥಿತರಿದ್ದರು.

 

Translate »