ವಿಧಾನಪರಿಷತ್‌ಗೆ ಬಿಜೆಪಿಯ ಸವದಿ, ಕೇಶವಪ್ರಸಾದ್, ನಾರಾಯಣಸ್ವಾಮಿ, ಹೇಮಲತಾ, ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್, ನಾಗರಾಜ ಯಾದವ್, ಜೆಡಿಎಸ್‌ನ ಶರವಣ ಅವಿರೋಧ ಆಯ್ಕೆ
ಮೈಸೂರು

ವಿಧಾನಪರಿಷತ್‌ಗೆ ಬಿಜೆಪಿಯ ಸವದಿ, ಕೇಶವಪ್ರಸಾದ್, ನಾರಾಯಣಸ್ವಾಮಿ, ಹೇಮಲತಾ, ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್, ನಾಗರಾಜ ಯಾದವ್, ಜೆಡಿಎಸ್‌ನ ಶರವಣ ಅವಿರೋಧ ಆಯ್ಕೆ

May 28, 2022

ಬೆಂಗಳೂರು, ಮೇ ೨೭ (ಕೆಎಂಶಿ)-ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ÷್ಮಣ್ ಸವದಿ, ಕೆ.ಅಬ್ದುಲ್ ಜಬ್ಬಾರ್ ಸೇರಿದಂತೆ ಏಳು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನಾಮಪತ್ರ ಹಿಂಪಡೆಯಲು ಕಡೇ ದಿನವಾದ ಇಂದು ನಾಮಪತ್ರ ಸಲ್ಲಿಸಿದ್ದ ಯಾವುದೇ ಉಮೇದುದಾರರು ತಮ್ಮ ನಾಮಪತ್ರ ಹಿಂಪಡೆಯದಿದ್ದದ್ದು ಹಾಗೂ ನಿಗದಿತ ೭ ಸ್ಥಾನಗಳಿಗೆ ಏಳೇ ಜನ ಕಣದಲ್ಲಿ ಉಳಿದಿದ್ದರು. ಹಾಗಾಗಿ ಇವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಪ್ರಕಟಿಸಿದ್ದಾರೆ.

ಮೇ ೨೪ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು, ಮೇ ೨೫ ರಂದು ಪರಿಶೀಲನೆ ಹಾಗೂ ಮೇ ೨೭ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು.
ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಲಕ್ಷ÷್ಮಣ ಸವದಿ, ಟಿ. ನಾರಾಯಣ ಸ್ವಾಮಿ, ಶ್ರೀಮತಿ ಹೇಮಲತಾ ನಾಯಕ್ ಹಾಗೂ ಎಸ್. ಕೇಶವ ಪ್ರಸಾದ್, ಕಾಂಗ್ರೆಸ್‌ನಿAದ ಕೆ.ಅಬ್ದುಲ್ ಜಬ್ಬಾರ್ ಹಾಗೂ ಎಮ್. ನಾಗ ರಾಜ ಯಾದವ್, ಜೆಡಿಎಸ್ ಪಕ್ಷದಿಂದ ಟಿ.ಎ. ಶರವಣ ಅವರು ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ.
ಇಂದು ನಾಮಪತ್ರ ಹಿಂಪಡೆಯುವ ಸಮಯ ಮೀರಿದ ನಂತರ ನಾಮಪತ್ರ ಸಲ್ಲಿಸಿದ್ದ ೭ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯ ದರ್ಶಿಗಳೂ ಆದ ವಿಶಾಲಾಕ್ಷಿ ಅವಿರೋಧ ಆಯ್ಕೆಯ ಪ್ರಮಾಣ ಪತ್ರಗಳನ್ನು ವಿತರಿಸಿದರು.

Translate »