ನಾವೆಲ್ಲರೂ ಕೊರೊನಾ ಯುದ್ಧ ಎದುರಿಸುತ್ತಿದ್ದೇವೆ
ಮೈಸೂರು

ನಾವೆಲ್ಲರೂ ಕೊರೊನಾ ಯುದ್ಧ ಎದುರಿಸುತ್ತಿದ್ದೇವೆ

April 27, 2020

ನವದೆಹಲಿ, ಏ.26- ಇಂದು ನಾವೆಲ್ಲರೂ ಯುದ್ಧ ವಾತಾವರಣದ ಮಧ್ಯದಲ್ಲಿದ್ದೇವೆ, ಅದು ಕೊರೊನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವ ಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೊನಾ ವಿರುದ್ಧ ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅವರು ಇಂದು ತಮ್ಮ ಆಕಾಶವಾಣಿಯ ತಿಂಗಳ ಕಾರ್ಯಕ್ರಮ ಮನ್ ಕೀ ಬಾತ್‍ನಲ್ಲಿ ಮುಖ್ಯವಾಗಿ ಕೊರೊನಾ ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‍ರನ್ನು  coronawarriors. gov.in  ಪೋರ್ಟಲ್ ಮೂಲಕ ಸಂಪರ್ಕಿಸುವಂತೆ ಒತ್ತಾಯಿಸಿದರು. ಇತ್ತೀಚೆಗೆ ಆರಂಭಗೊಂಡ ಈ ಪೋರ್ಟಲ್‍ನಲ್ಲಿ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದಾರೆ ಎಂದರು.

ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೊನಾ ವಾರಿಯರ್ಸ್ ಆಗಬಹುದು ಎಂದರು.

ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಜನಪ್ರೇರಿತವಾದದ್ದು. ಇಡೀ ಜಗತ್ತು ಇಂದು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಮುಂದಿನ ದಿನಗಳಲ್ಲಿ ಕೊರೊನಾ ಬಗ್ಗೆ ಪ್ರಸ್ತಾಪಿಸಿದಾಗ ಭಾರತ ದೇಶದ ಜನ ಪರವಾದ ಅಭಿಯಾನ, ಕೆಲಸಗಳು ಕೇಂದ್ರಬಿಂದುವಾಗು ತ್ತದೆ. ನಮ್ಮ ಶ್ರಮಜೀವಿ ರೈತರು,

ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದಾರೆ. ಕೊರೊನಾ ವಿರುದ್ಧ ಪ್ರತಿ ಯೊಬ್ಬರೂ ತಮ್ಮದೇ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೆಲವರು ತಮ್ಮ ಇಡೀ ಪಿಂಚಣಿಯನ್ನು ದಾನ ಮಾಡಿದರೆ, ಕೆಲವರು ಪ್ರಧಾನ ಮಂತ್ರಿ ನಿಧಿಗೆ ನೀಡುತ್ತಿ ದ್ದಾರೆ. ತರಕಾರಿ ಬೆಳೆಯುವ ರೈತರು ತರಕಾರಿ, ಹಣ್ಣುಗಳನ್ನು ಅಗತ್ಯವಿರುವವರಿಗೆ ನೀಡಿ ಸಹಕರಿಸುತ್ತಿದ್ದಾರೆ. ಕೆಲವರು ಫೇಸ್ ಮಾಸ್ಕ್ ಮಾಡಿ ವಿತರಿಸುತ್ತಿದ್ದಾರೆ. ಕ್ವಾರಂಟೈನ್‍ಗೆ ನೀಡಲಾಗಿರುವ ಶಾಲೆ, ಕಾಲೇಜು, ಸರ್ಕಾರಿ ಕಟ್ಟಡಗಳಿಗೆ ಕೆಲವರು ಬಣ್ಣ ಬಳಿದು ಸಿದ್ಧಪಡಿಸಿಕೊಡುತ್ತಿದ್ದಾರೆ. ನಮ್ಮ ಉದ್ಯಮ, ಕಚೇರಿ ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ ವಲಯ ಹೀಗೆ ಎಲ್ಲಾ ವಲಯಗಳಲ್ಲಿ ಕೊರೊನಾ ವೈರಸ್ ನಂತರ ಹೊಸ ಬದ ಲಾವಣೆಯನ್ನು ಎಲ್ಲರೂ ಅಳವಡಿಸಿಕೊಳ್ಳುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಹೊಸತನವನ್ನು ಅನ್ವೇಷಿಸುವ ಆಸೆ ಹುಟ್ಟಿಕೊಂಡಿದೆ ಎಂದರು.

ನಿರ್ಗತಿಕರಿಗೆ ಆಹಾರ ನೀಡುವುದರಿಂದ ಹಿಡಿದು, ರೇಷನ್ ವಿತರಿಸುವುದು, ಲಾಕ್‍ಡೌನ್ ಸುಗಮವಾಗಿರುವಂತೆ ನೋಡಿಕೊಳ್ಳುವುದು, ಆಸ್ಪತ್ರೆಗಳಲ್ಲಿ ವ್ಯವಸ್ಥೆ, ವೈದ್ಯಕೀಯ ಉಪಕರಣಗಳ ಉತ್ಪಾದನೆ ಇತ್ಯಾದಿಗಳಲ್ಲಿ ಇಡೀ ದೇಶ ಒಂದೇ ದಿಕ್ಕಿನತ್ತ ಸಾಗುತ್ತಿದ್ದು ಅದು ಒಂದು ಸಾಮಾನ್ಯ ಉದ್ದೇಶದಿಂದ, ಅದು ಕೊರೊನಾ ಯುದ್ಧ ಗೆಲ್ಲುವುದು. ಇಲ್ಲಿ ಭಾರತೀಯರೆಲ್ಲರೂ ಸೈನಿಕರು. ವಿದೇಶಗಳ ನಾಯಕರು ‘ಥ್ಯಾಂಕ್ಯೂ ಇಂಡಿಯಾ’, ಭಾರತದ ಜನರಿಗೆ ಧನ್ಯವಾದಗಳು ಎಂದಾಗ ನನಗೆ ಹೆಮ್ಮೆಯಾಗುತ್ತದೆ. ಭಾರತ ದೇಶ ತನ್ನ ನಾಗರಿಕರ ಕಾಳಜಿ ನೋಡಿಕೊಳ್ಳುವುದು ಮಾತ್ರವಲ್ಲದೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಇತ್ತೀಚೆಗೆ ಜನರಲ್ಲಿ ಮಾಸ್ಕ್ ಧರಿಸುವ ಅರಿವು ಮೂಡಿದೆ. ಮಾಸ್ಕ್ ಧರಿಸಿದ ವ್ಯಕ್ತಿ ಗಳೆಲ್ಲ ಅನಾರೋಗ್ಯರು ಎಂದು ಅರ್ಥವಲ್ಲ. ಅದೊಂದು ಮುನ್ನೆಚ್ಚರಿಕೆಯಷ್ಟೆ. ಸಾರ್ವ ಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪು ಎಂದು ಹಿಂದಿನಿಂದಲೂ ನಮಗೆ ಗೊತ್ತಿತ್ತು. ಆದರೂ ಕೆಲವು ಕಡೆ ಜನರು ದುರಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಇನ್ನು ಮುಂದಾದರೂ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಬಿಡೋಣ ಎಂದು ನಿರ್ಧಾರ ಮಾಡುವ ಸಮಯವಿದು. ಇದು ನಮ್ಮಲ್ಲಿ ಅಗತ್ಯ ಶುಚಿತ್ವವನ್ನು ಹೆಚ್ಚಿಸುವು ದಲ್ಲದೆ ಕೊರೋನಾ ವಿರುದ್ಧ ಹೋರಾಟಕ್ಕೆ ಬಲ ನೀಡುತ್ತದೆ ಎಂದರು.

ಕೋವಿಡ್-19 ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಪೂರ್ವಭಾವಿ ಪಾತ್ರವನ್ನು ಶ್ಲಾಘಿಸಲೇಬೇಕು. ಇಂದು ಅಕ್ಷಯ ತೃತೀಯದ ಸುದಿನ. ಆದರೆ ಈ ವರ್ಷ ಆಚರಿಸಲು ಸಾಧ್ಯವಾಗದಿದ್ದರೂ ನಮಗೆ ವಿಶೇಷ ಮಹತ್ವವನ್ನು ಹೊಂದಿದೆ. ಕೊರೊನಾ ಸೋಂಕಿನ ವರ್ಷ ಎಂದು ಈ ವರ್ಷವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ವರ್ಷ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ ಸಮಯದಲ್ಲಿ ಇಷ್ಟೊಂದು ಕಷ್ಟಗಳು ಬರಬಹುದು ಎಂದು ಯಾರೂ ಭಾವಿಸಿರಲಿಲ್ಲ. ಈದ್ ಆಚರಣೆ ವೇಳೆಗೆ ನಾವು ಕೊರೋನಾ ಮುಕ್ತರಾಗೋಣ ಎಂದು ಪ್ರಾರ್ಥಿಸಿಕೊಳ್ಳೋಣ. ಕೊರೊನಾ ವೈರಸ್ ಸಮಯದಲ್ಲಿ ಶೌಚ ಕಾರ್ಮಿಕರ ಕೆಲಸ ಎಷ್ಟೊಂದು ಮಹತ್ವದ್ದು ಎಂದು ಗೊತ್ತಾಗುತ್ತಿದೆ. ಈ ಹಿಂದೆ ಅವರ ಕೆಲಸ, ಕೊಡುಗೆ ಗಮನಕ್ಕೆ ಬರುತ್ತಿರಲಿಲ್ಲ ಎಂದು ಮೋದಿ ಹೇಳಿದರು.

Translate »