ಡೆತ್‍ನೋಟ್ ಬರೆದಿಟ್ಟು ಡೈರಿ ಕಾರ್ಯದರ್ಶಿ ಆತ್ಮಹತ್ಯೆ
ಮಂಡ್ಯ

ಡೆತ್‍ನೋಟ್ ಬರೆದಿಟ್ಟು ಡೈರಿ ಕಾರ್ಯದರ್ಶಿ ಆತ್ಮಹತ್ಯೆ

July 17, 2021

ಕೆ.ಆರ್.ಪೇಟೆ, ಜು.16(ಶ್ರೀನಿವಾಸ್)- ತಾಲೂಕಿನ ಲಕ್ಷ್ಮಿಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಲಕ್ಷ್ಮೀಪುರ ಗ್ರಾಮದ ತಮ್ಮಣ್ಣಗೌಡ ಮತ್ತು ಹೇಮಾವತಿ ದಂಪತಿ ಪುತ್ರ ಶರತ್(25) ಆತ್ಮಹತ್ಯೆ ಮಾಡಿಕೊಂಡವನು. ಲಕ್ಷ್ಮೀಪುರ ಗ್ರಾಮದ ಶರತ್ ಕಳೆದ ಏಳು ವರ್ಷಗಳಿಂದ ಡೈರಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಹಾಲಿನ ಡೈರಿ ಅಧ್ಯಕ್ಷೆ ಜಯಂತಿಮಂಜೇ ಗೌಡ, ನಿವೃತ್ತ ಇಂಜಿನಿಯರ್ ಎಲ್.ಆರ್. ಕುಮಾರಸ್ವಾಮಿ ಮತ್ತು ಇತರರು ನೀಡಿದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಸಂಘದ ಲೆಟರ್‍ಹೆಡ್‍ನಲ್ಲಿ ಡೆತ್ ನೋಟ್ ಬರೆದಿಟ್ಟು ತೆಂಡೇಕೆರೆ ಸಮೀಪದ ಫುಡ್ ಪಾರ್ಕ್ ಬಳಿ ಕಾರಿನಲ್ಲಿ ಕುಳಿತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿ ದ್ದಾರೆ. ವಿಷಯ ತಿಳಿದ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಇನ್ಸ್‍ಪೆಕ್ಟರ್ ನಿರಂಜನ್, ಸಬ್ ಇನ್ಸ್‍ಪೆಕ್ಟರ್ ಸುರೇಶ್, ಅಪರಾಧ ವಿಭಾಗದ ಪಿಎಸ್‍ಐ ಪ್ರಮೋದ್ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಶರತ್ ಡೆತ್‍ನೋಟ್ ನಲ್ಲಿ ನಮೂದಿಸಿರುವಂತೆ ಆತನ ಆತ್ಮಹತ್ಯೆಗೆ ಕಾರಣವಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕುಮಾರ್, ಲಕ್ಷ್ಮೀಪುರ ಪ್ರಸನ್ನಕುಮಾರ್ ಇತರರು ಪೆÇಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Translate »