ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್
ಮೈಸೂರು

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್

September 27, 2022

ಮೈಸೂರು,ಸೆ.26(ಎಂಟಿವೈ)- ನವರಾತ್ರಿ ವೇಳೆ ಅರ ಮನೆಯಲ್ಲಿ ರಾಜವಂಶಸ್ಥರು ನಡೆಸುವ ಹಲವು ಧಾರ್ಮಿಕ ಕಾರ್ಯದಲ್ಲಿ ಪ್ರಮುಖ ಆಚರಣೆ ಖಾಸಗಿ ದರ್ಬಾರ್ ಸೋಮವಾರ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಸೋಮವಾರ ಬೆಳಗ್ಗೆ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡು, ರತ್ನಖಚಿತ ಸಿಂಹಾಸನರೂಢರಾಗಿ ಗಮನ ಸೆಳೆದರು. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನ ದವರೆಗೆ ನಡೆದ ನವರಾತ್ರಿಯ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಆದ್ಯವೀರ್ ಒಡೆಯರ್ ಪಾಲ್ಗೊಂಡರಲ್ಲದೆ, ಯದು ವಂಶದ ಸಾಂಪ್ರದಾಯಿಕ ಆಚರಣೆಗಳಲ್ಲಿ ಮಹತ್ವದ ಖಾಸಗಿ ದರ್ಬಾರ್ ನಲ್ಲಿ ಯದುವೀರ್ ಸಿಂಹಾಸನರೂಢರಾಗಿ ದರ್ಬಾರ್ ನಡೆಸಿ ದರು. ನವರಾತ್ರಿ ಪೂಜಾ ಮಹೋತ್ಸವಕ್ಕಾಗಿ ಅರಮನೆಯ ನೆಲಮಾಳಿಗೆಯಲ್ಲಿದ್ದ ಚಿನ್ನದ ಸಿಂಹಾಸನದ ಬಿಡಿಭಾಗಗಳನ್ನು ಸೆ.20ರಂದು ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿತ್ತು. ಸಿಂಹಾಸನಕ್ಕೆ ಇಂದು ಮುಂಜಾನೆಯೇ ಅರಮನೆಯಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು.

ಬಳಿಕ ಯದುವೀರ್ ಅವರಿಗೆ ಎಣ್ಣೆಶಾಸ್ತ್ರ ನಡೆಯಿತು. ಬೆಳಗ್ಗೆ 6.15ರಿಂದ 6.30ರೊಳಗೆ ಸಲ್ಲುವ ಶುಭ ಗಳಿಗೆಯಲ್ಲಿ ಸಿಂಹಾಸನಕ್ಕೆ `ಸಿಂಹ’ ಜೋಡಿಸಲಾಯಿತು. ಬಳಿಕ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಬೆಳಿಗ್ಗೆ 9.45ರಿಂದ 10.05ರೊಳಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ಮಾಡಲಾಯಿತು. ನಂತರ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ವಾಣಿ ವಿಲಾಸ ಸನ್ನಿದಾನದಲ್ಲಿ ಕಂಕಣ ಧಾರಣೆ ಮಾಡಲಾಯಿತು. ಬೆ.10.45ಕ್ಕೆ ಕೆಲ ಪೂಜಾ ಕಾರ್ಯ ಜರುಗಿದ ನಂತರ ಪಟ್ಟದ ಆನೆ ಧನಂಜಯ, ನಿಶಾನೆ ಆನೆ ಭೀಮಾ, ಪಟ್ಟದ ಕುದುರೆ, ಪಟ್ಟದ ಹಸು, ಒಂಟೆಯನ್ನು ಮಂಗಳವಾದ್ಯದೊಂದಿಗೆ ಕಳಸಹೊತ್ತ ಮುತ್ತೈದೆಯರೊಂದಿಗೆ ಸವಾರಿ ತೊಟ್ಟಿಗೆ ಕರೆತರಲಾಯಿತು. ನಂತರ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ಹಾಗೂ ಶ್ರೀ ಕೋಡಿ ಕಾಲಭÉೈರವ ಸ್ವಾಮಿ ದೇವಾಲಯದ ಕಳಸದೊಂದಿಗೆ ದೇವ ರನ್ನು ತರಲಾಯಿತು. ಅರಮನೆಯ ಪುರೋಹಿತರು ಕಂಕಣ ಧರಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಹರಸಿದರು.

ಬೆಳಗ್ಗೆ 11.15ಕ್ಕೆ ಸವಾರಿ ತೊಟ್ಟಿಯಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದರ್ಬಾರ್ ಹಾಲ್‍ಗೆ ಕಟ್ಟಿಗೆ ಯವರು, ದೀವಟಿಗೆ ಯವರು ಸಕಲ ಬಿರುದು ಬಾವಲಿಯೊಂದಿಗೆ ಬಹುಪರಾಕ್ ಹಾಕಿ ದರ್ಬಾರ್ ಹಾಲ್‍ಗೆ ಕರೆತಂದರು. ದರ್ಬಾರ್ ಹಾಲ್‍ನಲ್ಲಿ ಕಳಸ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯ ನಡೆದವು. ನಂತರ ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಯದುವೀರ ಒಡೆಯರ್, ಸಿಂಹಾ ಸನದ ಸಿಂಹಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 12.15ರಿಂದ 12.25ರೊಳಗೆ ಸಿಂಹಾಸನದಲ್ಲಿ ವೀರಾಜಮಾನರಾದರು.

ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ಶ್ರೀರಂಗ ಪಟ್ಟಣದ ಶ್ರೀರಂಗನಾಥÀ ದೇವಾಲಯ, ಮೇಲುಕೋಟೆಯ ಶ್ರೀ ಚೆಲುವ ನಾರಾಯಣಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯ, ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯ ಗಳು ಸೇರಿದಂತೆ 23 ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ನೀಡಿ, ತೀರ್ಥ ಪ್ರೋಕ್ಷಣೆ ಮಾಡಿ ಶುಭ ಕೋರಲಾಯಿತು.

ಎಲ್ಲಾ ದೇವಾಲಯಗಳಿಂದ ಆಗಮಿಸಿದ್ದ ಅರ್ಚಕರಿಂದ ಪ್ರಸಾದ ವಿನಿ ಯೋಗವಾದ ಬಳಿಕ ಸಿಂಹಾಸನದ ಮುಂದೆ ಪರದೆಯನ್ನು ಬಿಟ್ಟು ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ದೃಷ್ಟಿ ತೆಗೆಯ ಲಾಯಿತು. ನಂತರ ಯದುವೀರ್ ಅವರು ಸಿಂಹಾಸನದ ಮೇಲೆ ನಿಂತು ಸೆಲ್ಯೂಟ್ ಹೊಡೆದು ಹೊಗಳು ಭಟರು ಹಾಗೂ ದೀವಟಿಗೆಕಾರರಿಂದ ಗೌರವವಂದನೆ ಹಾಗೂ ಬಹುಪರಾಕ್ ಪಡೆದು ಸವಾರಿ ತೊಟ್ಟಿಯತ್ತ ತೆರಳಿದರು. ಅಲ್ಲಿ ತ್ರಿಷಿಕಾ ಕುಮಾರಿ ಒಡೆಯರ್, ಯದುವೀರರ ಪಾದ ಪೂಜೆ ಮಾಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್, ಅವರ ಮೊಮ್ಮಗ ಆದ್ಯವೀರ ನರಸಿಂಹರಾಜ ಒಡೆಯರ್ ಹಾಗೂ ರಾಜವಂಶದ ಪ್ರಮುಖರು ಉಪಸ್ಥಿತರಿದ್ದು, ಖಾಸಗಿ ದರ್ಬಾರ್‍ಗೆ ಸಾಕ್ಷಿಯಾದರು. ಅಂತಿಮವಾಗಿ ಮಧ್ಯಾಹ್ನ 1.50ರಿಂದ 2.05ರೊಳಗೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಚಾಮುಂಡಿತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತಂದು ಪೂಜಿಸಿದ ಬಳಿಕ ದರ್ಬಾರ್ ಸಂಪನ್ನಗೊಂಡಿತು.

ಪೊಲೀಸ್ ಬ್ಯಾಂಡ್‍ನವರು ನುಡಿಸಿದ ಚಾಮ ರಾಜ ಒಡೆಯರ್ ವಿರಚಿತ ಗೀತೆಗಳ ಸಂಗೀತ ಖಾಸಗಿ ದರ್ಬಾರ್‍ಗೆ ಕಳೆಕಟ್ಟಿತ್ತು. ಯದುವಂಶದ ರಾಷ್ಟ್ರಗೀತೆಯಾದ ಕಾಯೋ ಶ್ರೀ ಗೌರಿ ಗೀತೆಯನ್ನು ನುಡಿಸಿದ ವೇಳೆ ಸಿಂಹಾಸನದಲ್ಲಿ ಆಸೀನರಾಗಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎದ್ದು ನಿಂತು ಸೆಲ್ಯೂಟ್ ಹೊಡೆದು ಗಮನ ಸೆಳೆದರು.

ಬಿಗಿ ಬಂದೋಬಸ್ತ್: ಖಾಸಗಿ ದರ್ಬಾರ್ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ಅರಮನೆಗೆ ಪ್ರವೇಶ ನಿರ್ಬಂ ಧಿಸಲಾಗಿತ್ತು. ಬಂದೋಬಸ್ತ್ ಏರ್ಪಡಿಸಿದ್ದರಿಂದ ಅರಮನೆ ಆವರಣ ಬಿಕೋ ಎನ್ನುತ್ತಿತ್ತು. ರಾಜಮನೆತನದ ಸಂಬಂಧಿಗಳು ಸೇರಿದಂತೆ ಬೆರಳೆಣಿಕೆ ಯಷ್ಟು ಜನರು ಮಾತ್ರ ಖಾಸಗಿ ದರ್ಬಾರ್ ವೀಕ್ಷಿಸಲು ಅವಕಾಶ ನೀಡಲಾಗಿತ್ತು.

Translate »