ಟಿಕೆಟ್ ವಂಚಿತರೊಂದಿಗೆ ಸಿಎಂ ಸಮಾಲೋಚನೆ
ಮೈಸೂರು

ಟಿಕೆಟ್ ವಂಚಿತರೊಂದಿಗೆ ಸಿಎಂ ಸಮಾಲೋಚನೆ

April 19, 2018

ಮೈಸೂರು: ಪದ್ಮನಾಭನಗರ, ಕೊಳ್ಳೇಗಾಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ನಂತರ ಉದ್ಭವಿಸಿರುವ ಅಸಮಾಧಾನವನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಟಿಕೆಟ್ ವಂಚಿತರೊಂದಿಗೆ ಚರ್ಚೆ ನಡೆಸಿದರು.

ಪದ್ಮನಾಭನಗರದ ಪ್ರಬಲ ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್, ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಎಸ್.ಬಾಲರಾಜು ಅವರೊಂದಿಗೆ ಚರ್ಚಿಸಿದ ಸಿದ್ದ ರಾಮಯ್ಯ ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವುದಾಗಿ ಅವರಿಗೆ ತಿಳಿಸುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಮುಖ್ಯಮಂತ್ರಿಗಳ ಸಲಹೆಯಿಂದ ಸಮಾಧಾನ ಗೊಳ್ಳದ ಪದ್ಮನಾಭನಗರದ ಶ್ರೀನಿವಾಸ್ ಅಸಮಾಧಾನ ದಿಂದಲೇ ಸಿಎಂ ನಿವಾಸದಿಂದ ಹೊರ ಹೋದರು.

Translate »