ಕೆಂಪುಕೋಟೆಗೆ 7,000 ಮಂದಿಗೆ ಆಹ್ವಾನ
News

ಕೆಂಪುಕೋಟೆಗೆ 7,000 ಮಂದಿಗೆ ಆಹ್ವಾನ

August 14, 2022

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡುವಕೆಂಪುಕೋಟೆಗೆ ಈ ಬಾರಿ 7000 ಅತಿಥಿಗಳು ಬರುವ ಸಾಧ್ಯತೆಇರುವುದರಿಂದದೆಹಲಿ ಪೆÇಲೀಸರು ಸರ್ಪಗಾವಲು ಹೆಚ್ಚಿಸಿದ್ದಾರೆ. ಕೆಂಪುಕೋಟೆಆಗಮನದ ಸ್ಥಳದಲ್ಲಿ ವಿವಿಧರೀತಿಯ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಮುಖ ಗುರುತಿ ಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸೋಮವಾರ ನಡೆಯಲಿರುವಕಾರ್ಯಕ್ರಮಕ್ಕಾಗಿ ಸುಮಾರು 10 ಸಾವಿರ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇರೀತಿಯ ಬೆದರಿಕೆಗಳನ್ನು ಸುಲಭವಾಗಿಎದುರಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಗಾಳಿಪಟ ಗಳನ್ನು ಹಿಡಿಯಲು 400 ಮಂದಿಯನ್ನು ನಿಯೋಜಿಸಲಾಗಿದೆ. ಇನ್ನುಕಟ್ಟಡದ ಮೇಲ್ಛಾವಣಿ ಸೇರಿದಂತೆ ಸೂಕ್ಷ್ಮಪ್ರದೇಶಗಳಲ್ಲೂ ಸಿಬ್ಬಂದಿ ಯನ್ನು ನಿಯೋಜಿಸಲಾಗಿದೆ. ಕೆಂಪುಕೋಟೆಯಿಂದಐದು ಕಿ.ಮೀವರೆಗೆ ಗಾಳಿಪಟ ಹಾರಾಟದ ವಲಯವಲ್ಲಎಂದು ಘೋಷಿಸಲಾಗಿದೆ. ಡಿಆರ್‍ಡಿಒದಡ್ರೋಣ್ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲಾಗಿದೆಎಂದು ಪೆÇಲೀಸರು ತಿಳಿಸಿದ್ದಾರೆ. ಕೆಂಪುಕೋಟೆ ಸುತ್ತಲು ಹೈ ರೆಸ್ಯೂಲೆಷನ್ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಅಲ್ಲಿಗೆ ಬರುವವರ ಮುಖಗಳನ್ನು ಸರಿಯಾಗಿಗುರುತಿಸಲು ಸಾಧ್ಯವಾಗುತ್ತದೆ. ಈ ಬಾರಿಆಹ್ವಾನಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿರುವುದರಿಂದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಊಟದ ಬಾಕ್ಸ್, ನೀರಿನ ಬಾಟಲ್, ರಿಮೋಟ್‍ಕಂಟ್ರೋಲ್‍ಕಾರಿನ ಕೀಗಳು, ಸಿಗರೇಟ್ ಲೈಟರ್, ಬ್ರೀಫ್ಕೆಸ್,
ಹ್ಯಾಂಡ್ ಬಾಗ್ಸ್, ಕ್ಯಾಮೆರಾ, ಬೈನಾಕ್ಯೂಲರ್, ಛತ್ರಿಗಳು ಸೇರಿದಂತೆಇದೇರೀತಿಯ ವಸ್ತುಗಳನ್ನು ಕೆಂಪುಕೋಟೆಯಆವರಣದಲ್ಲಿ ನಿಷೇಧಿಸಲಾಗಿದೆ.
ದೆಹಲಿಯಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೆÇಲೀಸ್‍ಆಯುಕ್ತ ದೀಪೇಂದ್ರ ಪಾತಕ್ ಹೇಳಿದ್ದು ಆಗಸ್ಯ್ 13ರಿಂದ 15ರವರೆಗೆ ಗಾಳಿಪಟ, ಬಲೂನ್‍ಅಥವಾಚೀನಾದ ಲ್ಯಾಂಟರ್ನ್ಗಳನ್ನು ಹಾರಿಸುವುದು ಶಿಕ್ಷಾರ್ಹ ಅಪರಾಧಎಂದು ಹೇಳಿದ್ದಾರೆ.

Translate »