ಅರಸೀಕೆರೆ: ಬಡವರ ಕನಸಿನ ಕೂಸಾಗಿರುವ ನಗರದ ಸುಬ್ರಹ್ಮಣ್ಯ ನಗರ ದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಗತಿಯಲ್ಲಿರುವ ಜಿ ಫ್ಲಸ್ ಮಾದರಿಯ ವಸತಿ ಗೃಹಗಳ ಕಾಮ ಗಾರಿಯನ್ನು ರಾಜೀವ್ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ಮೂಲ ಸೌಲಭ್ಯಗಳೊಂದಿಗೆ ಉತ್ತಮ ಪರಿಸರದಲ್ಲಿ 1,181 ಮನೆಗಳ ನಿರ್ಮಾ ಣವು ಜಿ ಪ್ಲಸ್ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದ್ದು , ಕುಡಿಯುವ ನೀರು, ಚರಂಡಿ, ಬೀದಿ ದೀಪಗಳು ಒಳಗೊಂಡಂತೆ ಬೃಹತ್ ಬಡಾವಣೆಯ ಕಾಮಗಾರಿಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗಮನಹರಿ ಸಲಾಗಿದೆ. ಅನೇಕ ವರ್ಷಗಳಿಂದ ಸೂರಿಲ್ಲದೇ ನಗರದಲ್ಲಿ ವಾಸಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಮನೆಗಳನ್ನು ನಿರ್ಮಿಸಿಕೊಡಲು ನಗರಸಭೆ ವತಿಯಿಂದ ಯೋಜನೆಯನ್ನು ರೂಪಿಸಿ ಫಲಾನುಭವಿ ಗಳನ್ನು ಆಯ್ಕೆ ಮಾಡಿದ್ದು ,ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದರು.
ಜನಪರ ಯೋಜನೆಯನ್ನು ಜನರಿಗೆ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯ ಮೂಲಕ ಉತ್ತಮ ಯೋಜನೆಯು ಸಾಕಾರಗೊ ಳ್ಳಲು ಜನಪ್ರತಿನಿಧಿಗಳು ಮತ್ತು ಸಾರ್ವಜನಿ ಕರು ಸಹಕಾರ ನೀಡಿದಾಗ ಮಾತ್ರ ಸಾಧ್ಯ ವಾಗುತ್ತದೆ. ನಗರಸಭೆ ವಸತಿ ರಹಿತರಿಗೆ ನಿರ್ಮಿಸಿಕೊಡುತ್ತಿರುವ ಗೃಹ ನಿರ್ಮಾಣ ಕಾಮಗಾರಿ ಉತ್ತಮ ಗುಣಮಟ್ಟದೊಂ ದಿಗೆ ನಡೆಯುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿ ಸಿದರು. ಅಲ್ಲದೇ ಕಾಮಗಾರಿಯ ಗುತ್ತಿಗೆ ಪಡೆದಿರುವ ಕಂಪನಿಯ ಸಿಬ್ಬಂದಿಗಳೊಂ ದಿಗೆ ಚರ್ಚಿಸಿ ಕೆಲ ಸಲಹೆ ಸೂಚನೆಗ ಳನ್ನು ನೀಡಿರುವುದಾಗಿ ಹೇಳಿದರು.
ಗುತ್ತಿಗೆದಾರರಿಗೆ ಸೂಚನೆ: ಕಾಮಗಾರಿ ವಿಳಂಬವಾದರೆ ಕಟ್ಟಡಗಳ ಗುಣಮಟ್ಟಕ್ಕೆ ಹಾನಿಯಾಗುವ ಸಂಭವ ಹೆಚ್ಚಾಗಿರುವು ದರಿಂದ ಪ್ರಗತಿಯಲ್ಲಿರುವ ಕಾಮಗಾರಿ ನಿಲ್ಲದಂತೆ ಆಯಾ ಹಂತಗಳಲ್ಲೇ ಕಾಮಗಾರಿ ಗಳನ್ನ ನಿಯಮಾನುಸಾರವೇ ಪಾಲಿಸು ವಂತೆ ಹಾಜರಿದ್ದ ಗುತ್ತಿಗೆ ಪಡೆದ ಕಂಪನಿಯ ನೌಕರರಿಗೆ ಸೂಚಿಸಿದರಲ್ಲದೇ ಈಗಾಗಲೇ ಶೇ.50 ರಷ್ಟು ಕಾಮಗಾರಿ ಪೂರ್ಣಗೊಂ ಡಿದ್ದು ,ಉಳಿದ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜೀವ್ ಗಾಂಧೀ ವಸತಿ ನಿಗಮದ ಕೆ.ಎ.ಎಸ್. ಅಧಿಕಾರಿ ಬಿರಾದರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಮೋದ್ ಕುಮಾರ್, ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಪೌರಾಯುಕ್ತ ಚಲ ಪತಿ, ಅಭ್ಯಂತರ ಆನಂದ್, ಗುತ್ತಿಗೆದಾರ ಕಂಪನಿಯ ವ್ಯವಸ್ಥಾಪಕ ನಿತೀನ್ ಶರ್ಮಾ ಮತ್ತಿತರರು ಹಾಜರಿದ್ದರು.