ಮೈಸೂರಲ್ಲಿ ಶೀಘ್ರ ಚಿತ್ರನಗರಿ  ನಿರ್ಮಾಣಕ್ಕೆ ನಟ ಜೆಪಿ ಮನವಿ
ಮೈಸೂರು

ಮೈಸೂರಲ್ಲಿ ಶೀಘ್ರ ಚಿತ್ರನಗರಿ ನಿರ್ಮಾಣಕ್ಕೆ ನಟ ಜೆಪಿ ಮನವಿ

March 23, 2021

ಮೈಸೂರು,ಮಾ.22(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಲ್ಲೇ ಚಿತ್ರ ನಗರಿ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದ್ದು, ತ್ವರಿತವಾಗಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭಿಸುವಂತೆ ನಟ, ನಿರ್ಮಾ ಪಕ ಎಸ್.ಜಯಪ್ರಕಾಶ್ ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರುನಾಡಿನ ಸಾಂಸ್ಕøತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರಲ್ಲೇ ಫಿಲಂ ಸಿಟಿ(ಚಿತ್ರನಗರಿ) ಸ್ಥಾಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮ ತಿಸಿರುವುದು ಹರ್ಷದಾಯಕ ಬೆಳವಣಿಗೆ. ಕನ್ನಡ ಚಲನ ಚಿತ್ರೋದ್ಯಮದ ಚಟುವಟಿಕೆಗಳಿಗೆ ಮೈಸೂರು ನಗರವೂ ಅತ್ಯುತ್ತಮವಾದ ವಾತಾವರಣದಿಂದ ಕೂಡಿದೆ. ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಹಲವು ತಾಣಗಳಿವೆ. ಜೊತೆಗೆ ನೆರೆ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲೂ ಉತ್ತಮ ತಾಣಗಳಿರುವುದರಿಂದ ಚಿತ್ರನಗರಿ ನಿರ್ಮಾಣಕ್ಕೆ ಮೈಸೂರು ಜಿಲ್ಲೆಯೇ ಉತ್ತಮ ಆಯ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆಯಲ್ಲೇ ಚಿತ್ರನಗರಿ ಸ್ಥಾಪನೆಯಾಗಬೇಕು ಎಂಬುದು ನಮ್ಮೆ ಲ್ಲರ ಆಶಯವಾಗಿತ್ತು. ವರನಟ ಡಾ.ರಾಜ್‍ಕುಮಾರ್, ಸಾಹಸಸಿಂಹ ಡಾ.ವಿಷ್ಣುವರ್ಧನ್, ಕಲಿಯುಗದ ಕರ್ಣ ಡಾ.ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರತಿಭಾವಂತ ಕಲಾವಿದರನ್ನು, ತಂತ್ರಜ್ಞರನ್ನು, ಚಿತ್ರ ಸಾಹಿತಿಗಳನ್ನು, ನಿರ್ಮಾಪಕರು, ನಿರ್ದೇಶಕರನ್ನು ಕೊಡುಗೆಯಾಗಿ ನೀಡಿರುವ ಪುಣ್ಯಭೂಮಿ ಮೈಸೂರಾಗಿದೆ. ಮಾತ್ರವಲ್ಲ ಚಲನಚಿತ್ರರಂಗ ಪ್ರವೇಶಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಹತ್ತು ಹಲವು ಪ್ರತಿಭಾವಂತರಿಗೆ ಜನ್ಮ ನೀಡಿದ ಭೂಮಿ ಮೈಸೂರು. ಕನ್ನಡ ಮಾತ್ರವಲ್ಲದೆ ಹಲವಾರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಭಾಷೆಗಳ ಚಲನಚಿತ್ರಗಳ ನಿರ್ಮಾಣಕ್ಕೆ ಅತ್ಯುತ್ತಮ ತಾಣಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಚಿತ್ರನಗರಿ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ವರ್ಷವಿಡೀ ಅತ್ಯುತ್ತಮ ಹವಾಗುಣವನ್ನು ಹೊಂದಿರುವ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 250ಕ್ಕೂ ಹೆಚ್ಚು ಪ್ರೇಕ್ಷಣೀಯ ತಾಣಗಳಿದ್ದು, ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಮೈಸೂರಿನಲ್ಲಿರುವ ಕಲಾವಿದರಿಗೆ, ಸ್ಥಳೀಯ ಯುವ ಜನತೆಗೆ, ಪ್ರತಿಭಾವಂತರಿಗೆ ಉದ್ಯೋಗಾ ವಕಾಶಗಳು ಲಭಿಸಿ ಅವರ ಕುಟುಂಬಗಳೂ ಸಹ ಏಳಿಗೆ ಹೊಂದಲು ಚಿತ್ರನಗರಿ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ವಿÀಂಬ ಮಾಡದೆ ಯೋಜನೆ ಶೀಘ್ರವೇ ಕಾರ್ಯಗತಗೊಳಿಸ ಬೇಕೆಂದರು. ಸುದ್ದಿಗೋಷ್ಠಿಯಲ್ಲಿ ನಟಿ ಸುಲೇಖಾ, ಮಹೇಶ್ ತಲಕಾಡ್, ಚೇತನ್, ಪರಶಿವಮೂರ್ತಿ ಹಾಗೂ ಇನ್ನಿತರರು ಇದ್ದರು.

Translate »