ಒಂದು ಇಲ್ಲವೆ ಎರಡನೇ ತರಗತಿ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ
ಮೈಸೂರು

ಒಂದು ಇಲ್ಲವೆ ಎರಡನೇ ತರಗತಿ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ

May 24, 2022

ರಾಷ್ಟಿçÃಯವಾದಿ ಶಿಕ್ಷಣ ವ್ಯವಸ್ಥೆಯಿಂದ ಹಿಂದೆ ಸರಿಯಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು,ಮೇ ೨೩- ಶಿಕ್ಷಣ ವ್ಯವಸ್ಥೆ ಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ, ಎಷ್ಟೇ ಸಮಸ್ಯೆ ಎದುರಾದರೂ ರಾಷ್ಟಿçÃಯವಾದಿ ಶಿಕ್ಷಣ ನೀಡುವ ಸರ್ಕಾರ ನಿಲುವಿನಿಂದ ವಿಮುಖ ವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯ ವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸು ತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಚಾಮರಾಜಪೇಟೆಯ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನಲ್ಲಿ ಆಚಾರ್ಯ ನರರತ್ನ ಸುರಿಜಿ ಮಹಾ ರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡದಾದ ಒಂದೇ ಬಾರಿಗೆ ೧೧ ಮಂದಿ ಬಾಲಕರು ಮತ್ತು ಬಾಲಕಿಯರಿಗೆ ಸನ್ಯಾಸ ಧೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರುತ್ತಿದ್ದು, ರಾಷ್ಟಿçÃಯವಾದಿ ಸಮಾಜ ನಿರ್ಮಿಸಲು ಪ್ರತಿಯೊಬ್ಬರಿಗೂ ದೇಶಪ್ರೇಮ ಮೂಡಿ ಸುವ ಶಿಕ್ಷಣ ಅಗತ್ಯವಾಗಿದೆ. ನಾವು ಬ್ರಿಟಿಷ್ ಮಾದರಿ ಶಿಕ್ಷಣ ವ್ಯವಸ್ಥೆಯಿಂದ ಇನ್ನೂ ಮುಕ್ತವಾಗಿಲ್ಲ. ಹೀಗಾಗಿ ಒಂದು ಅಥವಾ ಎರಡನೇ ತರಗತಿಯಲ್ಲಿ ನೈತಿಕ ಶಿಕ್ಷಣದ ಪಾಠಗಳನ್ನು ಅಳವಡಿಸುತ್ತೇವೆ. ಹೀಗಾಗಿ ರಾಷ್ಟಿçÃಯವಾದಿ ಶಿಕ್ಷಣ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದ್ದೇವೆ ಎಂದರು. ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡದಿದ್ದರೆ ಜನ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂಬುದು ಪ್ರಧಾನಿ ಮೋದಿ ಅವರ ಪ್ರತಿಪಾದನೆಯಾಗಿದ್ದು, ಇದೇ ಹಾದಿಯಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ.

ನಮಗೆ ದೇಶದಲ್ಲಿ ಔಪಚಾರಿಕ ಶಿಕ್ಷಣ ಬಹಳಷ್ಟು ಕಡೆಗಳಲ್ಲಿ ಸಿಗುತ್ತದೆ. ತಾಯಿ, ನಂತರ ಗುರುಗಳಿಂದಲೂ ಶಿಕ್ಷಣ ದೊರೆಯುತ್ತಿದೆ. ಆದರೆ ನೈತಿಕ ಶಿಕ್ಷಣ ಮತ್ತು ರಾಷ್ಟಿçÃಯವಾದಿ ಶಿಕ್ಷಣ ದೊರೆಯುವುದಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಧಾರ್ಮಿಕ ಸಮುದಾಯ ಒಳಗೊಂಡAತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದರು. ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದು, ಇವೆಲ್ಲವುಗಳಿಗೂ ಪರಿಹಾರಗಳಿವೆ. ಜೈನ ಧರ್ಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತದ ಚಿಂತನೆಗಳನ್ನು ನೀಡಿದ್ದಾರೆ. ಇಂತಹ ಚಿಂತನೆಗಳನ್ನು ಸಾಕಾರಗೊಳಿಸಲು ಧಾರ್ಮಿಕ ವರ್ಗ ಕೈಜೋಡಿಸಬೇಕು ಎಂದರು.

ಹಿAಸೆಯಿAದ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಅಹಿಂಸೆಯೇ ಎಲ್ಲದಕ್ಕೂ ಮದ್ದು ಎಂದು ಜೈನ ಧರ್ಮ ನಮಗೆ ಕಲಿಸಿಕೊಟ್ಟಿದೆ. ಇದೇ ಉದ್ದೇಶದಿಂದ ನಮ್ಮ ಪೂರ್ವಜರು ವಸುದೈವ ಕುಟುಂಬಕA ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಇಡೀ ವಿಶ್ವ, ಇಡೀ ಬ್ರಹ್ಮಾಂಡ ನಮ್ಮ ಪರಿವಾರವಾಗಿದ್ದು, ನಾವು ಕೇವಲ ಪರಿವಾರದ ಸದಸ್ಯರು. ಇದೇ ಮಾರ್ಗದಲ್ಲಿ ನಡೆಯುವುದು ನಮ್ಮ ದ್ಯೇಯವಾಗಿದೆ. ಎಲ್ಲರೂ ಸುಖಿಯಾಗಿದ್ದರೆ, ಎಲ್ಲರೂ ನಿರೋಗಿಯಾಗುತ್ತಾರೆ. ನಾವು ಬದುಕಬೇಕು. ಮತ್ತೊಬ್ಬರಿಗೂ ಬದಕಲು ಬಿಡಬೇಕು. ನಮ್ಮ ಬದುಕು ಪ್ರೇಮ ಭಾವನೆಯಿಂದ ಕೂಡಿರಬೇಕು. ಇಂತಹ ಮನೋಭಾವನೆಗಳಿಂದ ತೊಂದರೆಗಳು ದೂರಾಗಲಿವೆ ಎಂದು ಹೇಳಿದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕಳೆದ ೭೦ ವರ್ಷಗಳಲ್ಲಿ ಆಗದ ಬದಲಾವಣೆ ಕೇವಲ ೮ ವರ್ಷಗಳಲ್ಲಿ ಆಗಿದೆ. ದೇಶದ ಗೌರವ ಎತ್ತಿ ಹಿಡಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ವರ್ಷಗಳಲ್ಲಿ ಮಾಡಿದ್ದಾರೆ. ಇವರ ಸಾಧನೆಯಿಂದಾಗಿ ಇಂದು ಜಗತ್ತಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು.

ಕಾಲ ಬದಲಾಗುತ್ತಿದೆ. ಸಣ್ಣ ಮಗು ಕೂಡ ಹತ್ತು ನಿಮಿಷ ಮೊಬೈಲ್ ಇಲ್ಲದೇ ಇರಲು ಸಾಧ್ಯವಾಗುತ್ತಿಲ್ಲ. ಸನ್ಯಾಸ ಸ್ವೀಕರಿಸಲು ಆಗಮಿಸಿರುವವರು ಶ್ರೀಮಂತ ಕುಟುಂಬದವರು. ಇವರು ನಾಳೆಯಿಂದ ವಾಹನಗಳಲ್ಲಿ ಓಡಾಡುವಂತಿಲ್ಲ. ಯಾರೋ ಕೊಟ್ಟಿರುವುದನ್ನು ತಿನ್ನಬೇಕಾಗುತ್ತದೆ. ಇದೊಂದು ಕಠೋರವಾದ ತಪಸ್ಸು ಎಂದರು.

ಉದಯ್ ಗರುಡಾಚಾರ್ಯ. ಆಚರಿಯಾ ನಾರಥನ್ಸುರಿಜಿ, ಆಚಾರ್ಯ ವರ್ಧ ಮಾನ್ ಸಾಗರ್ ಜೀ, ಮಿಥಾಲಾಲ್ ಜೈನ್ ಆಂಕೋರ್ ಅವರು ಪ್ರವಚನ ನೀಡಿದರು. ಸಮಾ ರಂಭದಲ್ಲಿ ಶಾಸಕರಾದ ಜಮೀರ್ ಅಹಮದ್ ರಾಜಸ್ಥಾನ್ ಜೈನ ಶ್ವೇತಾಂಬರ ಮೂರ್ತಿ ಪೂಜಕ್ ಸಂಘ ಟ್ರಸ್ಟ್ ನ ಮುಖಂಡರಾರದ ಇಂದರ್ ಚಂದ್ ನಹಾರ್, ಪ್ರಕಾಶ್ ಪಿರ್ಗಲ್, ಪ್ರವೀಣ್ ಚೌಹಾನ್, ಕಿಶೋರ್ ಜೈನ್, ಇಂದರ್ ಚಂದ್ ನಹಾರ್, ಹೀರಾ ಲಾಲ್ ಕೊಠಾರಿ, ಸುಶೀಲ್ ತಲೇಸಾರಾ, ಸಿದ್ದಾರ್ಥ್ ಬೋಹ್ರಾ, ತಾರಾಚಂದ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಸಂದೇಶ ನಿಡಗುಂಡ, ಶಿವಯೋಗಿ, ಸಾ.ಶಿ. ಮರುಳಯ್ಯ, ಸಿದ್ದಯ್ಯ ಪುರಾಣ ಕರನ್ನ ಪಠ್ಯ ಕೈ ಬಿಟ್ಟಿದ್ದರು. ಅದನ್ನೂ ಈಗ ಸೇರಿಸಲಾಗಿದೆ.

ರಾಷ್ಟçಕವಿ ಕುವೆಂಪುಗೆ ಅಪಮಾನ ಮಾಡಿಲ್ಲ
ಬೆಂಗಳೂರು: ೪ನೇ ತರಗತಿ ಪಠ್ಯ ಪರಿಷ್ಕರಣೆಯಲ್ಲಿ ರಾಷ್ಟçಕವಿ ಕುವೆಂಪು ಅವರಿಗೆ ಶಿಕ್ಷಣ ಇಲಾಖೆ ಅಪಮಾನ ಮಾಡಿದ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ೪ನೇ ತರಗತಿ ಪರಿಸರ ಅಧ್ಯಯನ ಪಠ್ಯ ಪರಿಷ್ಕರಣೆ ಮಾಡಿಲ್ಲ. ಆದರೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕುವೆಂಪು ಬಗ್ಗೆ ಎಷ್ಟು ಪಠ್ಯ ಸೇರಿಸಿದ್ದೇವೆ ನೋಡಲಿ. ನಾವು ಕುವೆಂಪು ಬಗ್ಗೆ ಹೆಚ್ಚು ಪಠ್ಯ ಸೇರಿಸಿದ್ದೇವೆ. ಶಿಕ್ಷಣ ಇಲಾಖೆ ಕುವೆಂಪು ಅವರಿಗೆ ಅಪ ಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಿವಾದದ ಮೂಲಕ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಯತ್ನ
ಬೆಂಗಳೂರು,ಮೇ ೨೩ (ಕೆಎಂಶಿ)-ಪಠ್ಯಪುಸ್ತಕದಲ್ಲಿ ಜಾತಿ ರಾಜಕೀಯ ಮಾಡಿ, ಆ ಮೂಲಕ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದು ಪುಟವಿದ್ದ ಟಿಪುö್ಪ ಪಠ್ಯವನ್ನು ಆರು ಪುಟಕ್ಕೆ ವಿಸ್ತರಿಸುತ್ತಾರೆ. ಅದೇ ಸಮಯದಲ್ಲಿ ಮೈಸೂರು ರಾಜವಂಶಸ್ಥ ಒಡೆಯರ್ ಪಾಠವನ್ನು ಕಡಿತ ಮಾಡುತ್ತಾರೆ. ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೆಲ್ಲವನ್ನು ಏಕೆ ಪ್ರಶ್ನಿಸಿರಲಿಲ್ಲ? ಸ್ವಾತಂತ್ರ‍್ಯ ಹೋರಾಟಗಾರರು, ಕ್ರಾಂತಿಕಾರರ ಬಗ್ಗೆ ನಾವು ಪಠ್ಯದಲ್ಲಿ ಮತ್ತಷ್ಟು ಸೇರಿಸಿದ್ದೇವೆಯೇ ಹೊರತು ಯಾವು ದನ್ನೂ ತೆಗೆದಿಲ್ಲ ಎಂದು ನಾಗೇಶ್ ಸ್ಪಷ್ಟಪಡಿಸಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಎಂಬುದು ಎಲ್ಲ ರಿಗೂ ತಿಳಿದಿದೆ. ಆದರೆ ಬೆಂಗಳೂರು ಆರಂಭಿಸುವ ಸಂದರ್ಭ ದಲ್ಲಿ ಕೆಂಪೇಗೌಡರ ಬಗ್ಗೆ ವಿವರಣೆ ನೀಡಲು ಇವರು ಮುಂದಾ ಗಲಿಲ್ಲ. ಬರಗೂರು ರಾಮಚಂದ್ರಪ್ಪ ಅವರು ತುಂಬಾ ಒಳ್ಳೆಯ ವರು, ಅವರು ಒತ್ತಡಕ್ಕೆ ಮಣ ದು ಈ ರೀತಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ನಾರಾಯಣಗುರು, ಭಗತ್‌ಸಿಂಗ್, ಇವರ ಜೊತೆಗೆ ಕ್ರಾಂತಿಕಾರಿಗಳಾದ ರಾಜದೇವ್, ಸುಖ್‌ದೇವ್ ಅವರ ಪಠ್ಯವನ್ನೂ ಅಳವಡಿಸಿದ್ದೇವೆ. ಕ್ರಾಂತಿಕಾರಿಗಳ ಬಗ್ಗೆ ವಿಪಕ್ಷ ನಾಯಕರು ಈಗ ಮಾತನಾಡುತ್ತಿರುವುದು ಸಂತೋಷ. ಬರಗೂರು ರಾಮಚಂದ್ರಪ್ಪ ಅವರು ಇದ್ದಾಗ ಸಿದ್ದರಾಮಯ್ಯ ಪ್ರಶ್ನೆ ಮಾಡಲೇ ಇಲ್ಲ. ಕುವೆಂಪು ಬಗ್ಗೆ ಒಂದೇ ಒಂದು ಸಾಲು ಬದಲಾವಣೆ ಮಾಡಿದ್ದೀರಾ? ಇಲ್ಲ ಸಲ್ಲದ್ದನ್ನು ಹೇಳಿ ಜಾತಿ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರ ಪಠ್ಯ ಕೈಬಿಟ್ಟು, ಇವರ ಪಠ್ಯ ಕೈಬಿಟ್ಟು ಅನ್ನುವುದೇ ದೊಡ್ಡ ವಿಷಯವಾಗಿದೆ. ರಾಮಚಂದ್ರಪ್ಪ ಇರುವ ಸಂದರ್ಭದಲ್ಲಿ ಪಠ್ಯಗಳನ್ನು ಬಿಟ್ಟು ವಿಚಾರಗಳ ಬಗ್ಗೆ
ಯಾರೂ ಪ್ರಶ್ನೆ ಮಾಡಿರುವುದಿಲ್ಲ. ವಿವಾದವಿಲ್ಲದೆ, ಹೊಸ ಪಠ್ಯಪುಸ್ತಕ ರಚನೆ ಯಾಗಿದೆ. ಪಿಯು ಪಠ್ಯ ಪರಿಷ್ಕರಣೆಗೂ ಶಿಕ್ಷಣ ಇಲಾಖೆ ಸ್ಪಂದಿಸಿದೆ ಎಂದರು.

ಮೊಗಲರು ಅಕ್ರಮಣ ಮಾಡಿದ್ದು ಏಕೆ ಅಂತ ಹೇಳಲೇ ಇಲ್ಲ. ಮೊಗಲರು ಆಡಳಿತ ಮಾಡಿದ್ದಾರೆ ಅಂತ ಹೇಳುತ್ತಲೇ ಇರುತ್ತಾರೆ. ಮೊಗಲರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದನ್ನು ಪಠ್ಯದಲ್ಲಿ ಅಳವಡಿಸಿದ್ದೇವೆ. ಕಾಶ್ಮೀರದ ಮಹಾರಾಜ ಅಸ್ಸಾಂ, ತಮಿಳುನಾಡು ರಾಜರ ಪಠ್ಯವೂ ಇದೆ ಎಂದು ಸಮರ್ಥನೆ ಮಾಡಿಕೊಂಡರು.
ಸಂಗೊಳ್ಳಿರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣ ಚೆನ್ನಮ್ಮ, ರಾಣ ಅಬ್ಬಕ್ಕ, ಹತ್ತನೇ ತರಗತಿ ಪುಸ್ತಕದಲ್ಲಿ ಒಂದು ಸಾಲೂ ಇಲ್ಲ. ಆದರೆ ಟಿಪುö್ಪವಿನ ಬಗ್ಗೆ ವಿಸ್ತಾರವಾದ ಪಠ್ಯವಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಕ್ಕಳ ತಲೆಯಲ್ಲಿ ಹಿಂದೂ, ಮುಸ್ಲಿಂ ವರ್ಗಭೇದ ಮಾಡಿದೆ. ಹಿಂದೂ ನಾಯಕರಿದ್ದರೆ, ಅದನ್ನು ತೆಗೆಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ಮೇ ೧೬ರಿಂದ ಶಾಲೆಗಳು ಆರಂಭವಾಗಿವೆ. ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿವೆ. ಶಾಲೆ ಆರಂಭವಾಗುವುದಕ್ಕೂ ಮುನ್ನವೇ ೨೪ ಸಾವಿರ ಅತಿಥಿ ಶಿಕ್ಷಕರನ್ನು ಲೋಪವಿಲ್ಲದೇ ನೇಮಕ ಮಾಡಿದ್ದೇವೆ. ಈ ಶಿಕ್ಷಕರು ಯಾರ ಮನೆಯ ಬಾಗಿಲಿಗೂ ಬರಲಿಲ್ಲ. ಇಂತಹ ಸನ್ನಿವೇಶ ಕೆಲವರಿಗೆ ಸಹಿಸಲಾಗುತ್ತಿಲ್ಲ. ಮಕ್ಕಳು ಕಲಿಕೆ ಮಾಡಲಾಗದ್ದನ್ನು ತೆಗೆದಿದ್ದೇವೆ. ಅವರ ಭವಿಷ್ಯದ ದೃಷ್ಟಿಯಿಂದ ಕೆಲವು ಪಠ್ಯಗಳನ್ನು ಸೇರಿಸಿದ್ದೇವೆ ಎಂದರು.

Translate »