ಸ್ಥಗಿತಗೊಂಡಿರುವ ವಿವಿಧ ಇಲಾಖೆ ವಾಹನಗಳ ಆರೋಗ್ಯ ಇಲಾಖೆಗೆ ನೀಡಲು ಸಲಹೆ
ಮೈಸೂರು

ಸ್ಥಗಿತಗೊಂಡಿರುವ ವಿವಿಧ ಇಲಾಖೆ ವಾಹನಗಳ ಆರೋಗ್ಯ ಇಲಾಖೆಗೆ ನೀಡಲು ಸಲಹೆ

April 4, 2020

ಬೆಂಗಳೂರು,ಏ.3(ಕೆಎಂಶಿ)- ಈಗ ದೇಶದಾದ್ಯಂತ ಲಾಕ್‍ಡೌನ್ ಆಗಿರುವುದರಿಂದ ಅನೇಕ ಇಲಾಖೆಗಳಲ್ಲಿ ಪೂರ್ಣಪ್ರಮಾಣದ ಕಚೇರಿ ಕೆಲಸಗಳು ನಡೆ ಯುತ್ತಿಲ್ಲ. ಹೀಗಾಗಿ ಆಯಾ ಇಲಾಖೆ ಗಳಲ್ಲಿರುವ ವಾಹನಗಳು ಖಾಲಿ ಇರುವುದರಿಂದ ಆರೋಗ್ಯ ಇಲಾ ಖೆಗೆ ಅಗತ್ಯವಾದ ವಾಹನ ನೀಡಿ ಸಹಕರಿಸಿ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.

ಆದರೆ ಕೊರೊನಾವನ್ನು  ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಈಗಲೂ ಸಹ ಸಮರೋಪಾದಿಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ  ಇಲಾಖೆ ಗಳಿಗೆ ಹೆಚ್ಚಿನ ವಾಹನಗಳ ಅಗತ್ಯಗಳಿವೆ. ಆದ್ದರಿಂದ ವಿವಿಧ ಇಲಾಖೆಗಳಲ್ಲಿ ಲಭ್ಯ ವಿರುವ ವಾಹನಗಳನ್ನು ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಸೇವೆಗೆ ತಾತ್ಕಾಲಿಕವಾಗಿ ನೀಡಿ ಸಹಕರಿಸಬೇ ಕೆಂದು ನಾನು ಎಲ್ಲ ಇಲಾಖೆಗಳ ಮುಖ್ಯ ಸ್ಥರಿಗೆ ಕೋರುತ್ತೇನೆ ಎಂದು ಅವರು ತಿಳಿಸಿದರು.

ಕೊರೊನಾ ನಿಯಂತ್ರಣ ಸೇವೆಗೆ ಈ ರೀತಿ ವಾಹನಗಳನ್ನು ವಿವಿಧ ಇಲಾಖೆಗಳಿಂದ ಅಧಿಕೃತವಾಗಿ ಪಡೆದು ಆರೋಗ್ಯ ಇಲಾ ಖೆಗೆ ಒದಗಿಸುವ ಪ್ರಕ್ರಿಯೆಯನ್ನು ನಮ್ಮ ಸಾರಿಗೆ ಇಲಾಖೆಯ ಆರ್.ಟಿ.ಒ. ಅಧಿಕಾರಿ ಗಳು ಕೈಗೊಳ್ಳುತ್ತಿದ್ದಾರೆ. ಆದರೆ ಕೆಲವು ವಾಹನ ಚಾಲಕರು ಕೊರೊನಾದ ಭಯ ದಿಂದ ಆರೋಗ್ಯ ಇಲಾಖೆಗೆ ತಮ್ಮ ವಾಹನ ಗಳೊಂದಿಗೆ ತಾತ್ಕಾಲಿಕ ಸೇವೆ ನೀಡಲು ನಿರಾಕರಿಸುತ್ತಿರುವ ಪ್ರಕರಣಗಳು ಕಂಡುಬಂದಿವೆ.

ಆದರೆ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಏಕೆಂ ದರೆ ಆರೋಗ್ಯ ಸೇವೆಗೆ ವಾಹನಗಳೊಂದಿಗೆ ತೆರ ಳುವ ಚಾಲಕರಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಮತ್ತು ವೈದ್ಯಕೀಯ ಪರಿಕರಗಳನ್ನು, ಸೌಕರ್ಯಗಳನ್ನು ಒದಗಿ ಸಲು ಸರ್ಕಾರ ಕ್ರಮ ಕೈಗೊಂಡಿದೆ. ನಮ್ಮ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಿ ಆರೋಗ್ಯ ಸೇವೆಗೆ ಅಗತ್ಯವಾದ ವಾಹನಗಳ ಸೇವೆ ಯನ್ನು ಒದಗಿಸಲು ವಿವಿಧ ಇಲಾಖೆಗಳ ಅಧಿಕಾರಿ ಗಳು ಮತ್ತು ಚಾಲಕರು ಸಹಕರಿಸಬೇಕೆಂದು  ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿನಂತಿಸಿಕೊಂಡಿದ್ದಾರೆ.

 

 

Translate »