ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಶ್ರೀ ನಿರುಪಾಧೀಶ ಸ್ವಾಮಿಗಳ `ಸಿದ್ಧರಾಮ ವಿಲಾಸ’ ಕೃತಿ ಆಯ್ಕೆ
ಮೈಸೂರು

ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಶ್ರೀ ನಿರುಪಾಧೀಶ ಸ್ವಾಮಿಗಳ `ಸಿದ್ಧರಾಮ ವಿಲಾಸ’ ಕೃತಿ ಆಯ್ಕೆ

December 4, 2018

ಮೈಸೂರು: ಜೆಎಸ್‍ಎಸ್ ಮಹಾವಿದ್ಯಾ ಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಕೊಡಲಾಗುವ 2017ನೇ ಸಾಲಿನ ಶ್ರೀ ಶಿವರಾತ್ರೀ ಶ್ವರ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲೂಕಿನ ಮರೇಗುದ್ದಿಯ ಶ್ರೀ ನಿರುಪಾಧೀಶ ಸ್ವಾಮಿಗಳು ರಚಿಸಿರುವ ಸಿದ್ಧರಾಮ ವಿಲಾಸ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ, ಸ್ವಸ್ತಿವಾಚನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Translate »