ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬಿಎಸ್ಪಿ ಪ್ರತಿಭಟನೆ
ಚಾಮರಾಜನಗರ

ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬಿಎಸ್ಪಿ ಪ್ರತಿಭಟನೆ

August 21, 2018

ಗುಂಡ್ಲುಪೇಟೆ: ಪಟ್ಟಣದ 20ನೇ ವಾರ್ಡಿನಲ್ಲಿರುವ ಅಂಬೇ ಡ್ಕರ್ ಬಡಾವಣೆಯಲ್ಲಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಇತ್ತೀಚಿಗೆ ಬೀಳುತ್ತಿರುವ ಮಳೆಯಿಂದ ಬಡಾವಣೆಯ ರಸ್ತೆಗಳು ಕೆಸರು ಗದ್ದೆಯಂ ತಾಗಿದ್ದು, ವಾಹನ ಸಂಚಾರ ಮತ್ತು ಪಾದ ಚಾರಿಗಳಿಗೆ ಕಿರಿಕಿರಿಯುಂಟಾಗಿದೆ ಎಂದು ರಸ್ತೆ ಮಧ್ಯೆ ಕಳೆ ಗಿಡಗಳನ್ನು ನೆಡುವುದ ರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿ ಸಿರುವ ಮನವಿಯನ್ನು ಪುರಸಭೆಯ ಸಮನ್ವ ಯಾಧಿಕಾರಿ ಕೆ.ಮುರುಗೇಶ್ ಅವರಿಗೆ ಸಲ್ಲಿಸಿ ಶೀಘ್ರವಾಗಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ವೇಳೆ ಟೌನ್ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಮುಖಂಡ ರಾದ ಗಣೇಶ್, ಅಜಯ್, ಸತೀಶ್, ವೇಣು, ಸೀನಾ, ಮಹೇಶ್, ಅರುಣ್ ಇದ್ದರು.

Translate »