ಚಾಮರಾಜನಗರ: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ನ.10ರಂದು ಚಾಮರಾಜನಗರ, ಗುಂಡ್ಲುಪೇಟೆ, ಯಳಂ ದೂರು ಮತ್ತು ಕೊಳ್ಳೇಗಾಲ ಪಟ್ಟಣಗಳಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಯೋಜಿಸಿರುವ ಹಿನ್ನೆಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಹಲವು ಕ್ರಮಗಳನ್ನು ಪಾಲಿ ಸುವಂತೆ ಪೊಲೀಸ್ ಇಲಾಖೆ ಸಾರ್ವ ಜನಿಕರಲ್ಲಿ ಮನವಿ ಮಾಡಿದೆ. ನಿಷೇಧ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ನ.10 ರಂದು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಜಿಲ್ಲಾದ್ಯಂತ ಟಿಪ್ಪು ಜಯಂತಿ ಕಾರ್ಯಕ್ರಮ ಹೊರತುಪಡಿಸಿ ಯಾವುದೇ…
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ಹಲವು ಮುಖಂಡರ ಬಂಧನ-ಬಿಡುಗಡೆ
November 10, 2018ಚಾಮರಾಜನಗರ: ರಾಜ್ಯ ಸರ್ಕಾರ ನಾಳೆ (ನ.10) ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯ ಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿ ಟಿಪ್ಪು ಜಯಂತಿ ವಿರೋಧಿ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರ ವಾರ ಧರಣಿ ನಡೆಸಿದರು. ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾ ನದ ಮುಂಭಾಗದಿಂದ ಮೊದಲಿಗೆ ನಗರ ಸಭಾ ಸದಸ್ಯರಾದ ಸುದರ್ಶನಗೌಡ, ರಾಘ ವೇಂದ್ರ, ಜಿಲ್ಲಾ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ, ಮುಖಂಡ ರಾದ ಕೆಲ್ಲಂಬಳ್ಳಿ ಸೋಮನಾಯಕ್, ಸುಂದರ್ರಾಜ್, ಮಾರ್ಕೆಟ್ ಕುಮಾರ್ ಇತರರು ಟಿಪ್ಪು ಜಯಂತಿ ಆಚರಿಸುತ್ತಿ ರುವ ರಾಜ್ಯ…
ಇಂದು ಟಿಪ್ಪು ಜಯಂತಿ ಆಚರಣೆ
November 10, 2018ಚಾಮರಾಜನಗರ: ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಶಿವಮ್ಮ, ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್.ನಾಗರಾಜು, ಆರ್.ಧರ್ಮಸೇನ, ಜಿಪಂ ಉಪಾಧ್ಯಕ್ಷ ಜೆ.ಯೋಗೀಶ್, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಪಿ.ಎನ್. ದಯಾನಿಧಿ…
ಪೊಲೀಸರ ಮೇಲೆ ಹಲ್ಲೆ: ನಾಲ್ವರ ಬಂಧನ
November 10, 2018ಹನೂರು: ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ತನಿಖೆಗೆ ಆಗಮಿಸಿದ್ದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ರಾಮಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ನಗರ ಠಾಣೆ ಪೊಲೀಸ್ ಪೇದೆಗಳಾದ ಕೆಂಪರಾಜು, ಕೃಷ್ಣ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ರಾಮಾ ಪುರ ಪೊಲೀಸರು ಗೆಜ್ಜಲನಾಥ ಗ್ರಾಮದ ಕುಮಾರ್, ಆರ್ಮುಗಂ, ಮುತ್ತು ಹಾಗೂ ಕುಮಾರ್ಸ್ವಾಮಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ವಿವರ: ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕೆ.ಆರ್.ನಗರ…
ಪ್ರತಿ ವ್ಯಕ್ತಿಗೂ ಕಾನೂನು ನೆರವು ದೊರಕಲಿ: ನ್ಯಾ.ಯೋಗೇಶ್
November 10, 2018ಗುಂಡ್ಲುಪೇಟೆ: ಸಮಾಜದ ಕಟ್ಟ ಕಡೇ ವ್ಯಕ್ತಿಗೂ ಕಾನೂನು ನೆರವು ದೊರಕುವಂತೆ ಮಾಡುವ ಸಲು ವಾಗಿ ಕಾನೂನು ಸೇವೆ ನೀಡಲಾಗುತ್ತಿದೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಜೆ.ಯೋಗೇಶ್ ತಿಳಿಸಿದರು. ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀ ಲರ ಸಂಘದ ಆಶ್ರಯದಲ್ಲಿ ಆಯೋಜಿ ಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ನೆರವು ದೊರೆಯಬೇಕಾಗಿದೆ. ಆದರೆ ಇನ್ನೂ ಶ್ರೀಸಾಮಾ ನ್ಯರಿಗೆ ಕನಿಷ್ಠ ಮೂಲ ಕಾನೂನು ಬಗ್ಗೆಯೇ ತಿಳುವಳಿಕೆ…
ಮಲೈಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ
November 9, 2018ಹನೂರು: ತಾಲೂಕಿನ ಮಲೈ ಮಲೇಮಹದೇಶ್ವರ ಬೆಟ್ಟದಲ್ಲಿ ದೀಪಾ ವಳಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವ ವಿಧಿ ವಿದಾನಗಳ ಪೂಜಾ ಕಾರ್ಯಗಳು ಜರುಗಿದವು. ಲಕ್ಷಾಂತರ ಭಕ್ತರು ವಿಜೃಂಭಣೆಯಿಂಧ ನಡೆದ ಮಹಾರಥೋತ್ಸವಕ್ಕೆ ಸಾಕ್ಷಿಯಾದರು. ಬೆಳಿಗ್ಗೆ 4 ಗಂಟೆಯಿಂದ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪೂಜಾ ಕಾರ್ಯಗಳು ಜರುಗಿದವು. ಬೇಡಗಂಪಣ ಜನಾಂಗದ 101 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರಿಗೆ ಸ್ವಾಗತಿಸಿ ದರು. ಬಳಿಕ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ…
ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳಿಂದ ಸ್ವಯಂ ಪ್ರೇರಿತ ರಕ್ತದಾನ
November 9, 2018ಕೊಳ್ಳೇಗಾಲ: ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಪ್ರಥಮ ಬಾರಿಗೆ ಹನೂರು ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಉದ್ಭವ್ ಸಂಸ್ಥೆ ಹಾಗೂ ಚಾ.ನಗರ ವೈದ್ಯ ಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಅಯೋಜಿಸಲಾಗಿತ್ತು. ಶಿಬಿರದಲ್ಲಿ ಮಾದಪ್ಪನ ದರ್ಶನಕ್ಕೆ ಆಗ ಮಿಸಿದ 34ಮಂದಿಗೂ ಅಧಿಕ ಭಕ್ತರು ರಕ್ತ ದಾನದಲ್ಲಿ ಪಾಲ್ಗೊಂಡು 34ಯೂನಿಟ್ ರಕ್ತ ಸಂಗ್ರಹಕ್ಕೆ ಕಾರಣರಾದರು. ಶಿಬಿರದಲ್ಲಿ ಹನೂರು ರೆಡ್ ಕ್ರಾಸ್ ಸಂಸ್ಥೆಯ…
ಅರ್ಥಪೂರ್ಣ ಟಿಪ್ಪು ಜಯಂತಿಗೆ ನಿರ್ಧಾರ
November 9, 2018ಯಳಂದೂರು: ತಾಲೂಕು ಆಡಳಿತದ ವತಿಯಿಂದ ನ.10 ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಗ್ಗೆ ನ.5 ರಂದು ತಾಲೂಕು ಆಡ ಳಿತ ಪೂರ್ವಭಾವಿ ಸಭೆಯನ್ನು ನಡೆಸಿತ್ತು. ಜಹಗಿರ್ದಾರ್ ಬಂಗಲೆ ಮುಂಭಾಗ ಸ್ಥಳ ನಿಗಧಿಯಾಗಿತ್ತು. ಆದರೆ ಒಳಾಂಗಣದಲ್ಲೇ ಜಯಂತಿ ಆಚರಣೆಗೆ ಸ್ಪಷ್ಟ ಆದೇಶವಿರುವ ಹಿನ್ನೆಲೆಯಿಂದ ಕೆಲವರು ಜಾಗದ ಗೊಂದ ಲದಿಂದ ಸಭೆ ಅಪೂರ್ಣಗೊಂಡಿತ್ತು. ನಂತರ ಯಳಂದೂರು ಪದವಿ…
ಮದ್ಯದ ಅಮಲಿನಲ್ಲಿ ತಮ್ಮನ ಮೇಲೆ ಅಣ್ಣನಿಂದ ಮಾರಣಾಂತಿಕ ಹಲ್ಲೆ
November 9, 2018ಹನೂರು: ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ತಮ್ಮನ ಮೇಲೆ ಮಚ್ಚಿನಿಂದ ನಡೆಸಿದ ಘಟನೆ ಹನೂರು ಪಟ್ಟಣದ ಮಾರುತಿ ನಗರದಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.ಪಟ್ಟಣದ ನಂದಾ (35) ಎಂಬ ವ್ಯಕ್ತಿಯೇ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ವಿವರ: ಅಕ್ಕ ತಂಗಿಯರ ಮಕ್ಕಳಾದ ರಾಜು ಹಾಗೂ ನಂದ ಇಬ್ಬರು ಬೆಳಿಗ್ಗೆ ಪಾನ ಮತ್ತರಾಗಿ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ನಂದಾ ಗಾರೆ ಕೆಲಸ ಕೂಲಿ ಕಾರ್ಮಿಕ ನಾಗಿದ್ದು, ಅಣ್ಣ ರಾಜು ಬೀಗದ ರಿಪೇರಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಅಣ್ಣ ತಮ್ಮಂ ದಿರುಬ್ಬರೂ ಆಗಾಗ…
ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ
November 8, 2018ವಿರಾಜಪೇಟೆ: ನ.10 ರಂದು ವಿರಾ ಜಪೇಟೆ ಮಿನಿವಿಧಾನ ಸೌಧ ತಾಲೂಕು ಕಛೇರಿ ಸಭಾಂಗಣ ದಲ್ಲಿ ಟಿಪ್ಪು ಜಯಂತಿ ಯನ್ನು ಆಚರಿಸಲಾ ಗುತ್ತಿದ್ದು, ಅಹ್ವಾನ ನೀಡಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ವಿರುವುದಾಗಿ ಉಪ ವಿಭಾಗಾಧಿಕಾರಿ ಜವ ರೇಗೌಡ ತಿಳಿಸಿದರು. ಟಿಪ್ಪು ಜಯಂತಿ ಆಚರಣೆಯ ಪ್ರಯುಕ್ತ ಸ್ಥಳೀಯ ಪುರಭವನದಲ್ಲಿ ಕರೆದಿದ್ದ ಶಾಂತಿಸಭೆ ಯಲ್ಲಿ ಮಾತ ನಾಡಿದ ಅವರು, ಸರಕಾರದ ನಿಯ ಮದಂತೆ ಕಾರ್ಯಕ್ರಮ ಅಥವಾ ವಿರೋಧ ಹೇಳಿಕೆ ನೀಡು ವುದಾಗಲಿ, ಘೋಷಣೆ ಕೂಗುವು ದಾಗಲಿ, ಬ್ಯಾನರ್ ಹಾಕುವುದಾಗಲೀ ಮಾಡು…