ಚಾಮರಾಜನಗರ: 15ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪಿ.ನಂಜುಂಡಸ್ವಾಮಿ ಸೋತು-ಗೆದ್ದ ಪ್ರಸಂಗ ನಡೆಯಿತು. ಮತ ಎಣಿಕೆ ನಡೆದು ಪಕ್ಷೇತರ ಅಭ್ಯರ್ಥಿ ಕೆ.ಜಗದೀಶ್ ಹೆಚ್ಚಿನ ಮತ ಗಳಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಂ.ಹೇಮಂತ ಕುಮಾರ್ ಮರು ಎಣಿಕೆ ಮಾಡುವಂತೆ ಕೋರಿದರು. ನಿಯ ಮಾವಳಿಯಂತೆ ಮರು ಎಣಿಕೆ ಮಾಡಿದಾಗ ಕಾಂಗ್ರೆಸ್ ಅಭ್ಯರ್ಥಿ ಆರ್.ಪಿ.ನಂಜುಂಡಸ್ವಾಮಿ 334 ಮತಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದ್ದರು. ನಂತರ ಪರಿಶೀಲಿಸಿದಾಗ ಮತ ಎಣಿಕೆ ನಡೆಯುವಾಗ ಅಭ್ಯರ್ಥಿ ಗಳ ಹೆಸರಿನ ಮುಂದೆ ಆ ಅಭ್ಯರ್ಥಿ ಪಡೆದ ಮತಗಳನ್ನು ದಾಖ…
7ರಲ್ಲಿ 6 ಗೆದ್ದ ಎಸ್ಡಿಪಿಐ
September 5, 2018ಚಾಮರಾಜನಗರ: ಸ್ಥಳೀಯ ನಗರಸಭಾ ಚುನಾವಣೆಯಲ್ಲಿ 31 ವಾರ್ಡ್ಗಳ ಪೈಕಿ ಕೇವಲ 7 ವಾರ್ಡ್ನಲ್ಲಿ ಮಾತ್ರ ಎಸ್ಡಿಪಿಐ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಈ ಪೈಕಿ 6 ವಾರ್ಡ್ಗಳಲ್ಲಿ ಗೆಲುವು ಸಾಧಿಸಿ ಗಮನ ಸೆಳೆದಿದೆ. ಕಳೆದ ಚುನಾವಣೆಯಲ್ಲಿ 4 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದ ಎಸ್ಡಿಪಿಐ ಈ ಬಾರಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪಕ್ಷದ ಸಂಘಟನೆ ಹೇಗಿದೆ ಎಂಬುದನ್ನು ಸಾಬೀತು ಪಡಿಸಿದೆ. ವಾರ್ಡ್ ನಂಬರ್ 3, 4, 5, 6, 9 ಮತ್ತು 12ರಲ್ಲಿ ಎಸ್ಡಿ ಪಿಐ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ‘ಅತಂತ್ರ’ ಮಾಜ್ಯಿಕ್ ಸಂಖ್ಯೆ 17 ತಲುಪದ ಪಕ್ಷಗಳು
September 4, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದಿದ್ದು, ಈ ಎರಡು ನಗರಸಭೆಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ‘ಅತಂತ್ರ’ ಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ತಲಾ 31 ವಾರ್ಡ್ಗಳನ್ನು ಒಳಗೊಂಡಿದೆ. ಸ್ಥಳೀಯ ಸಂಸದರು ಹಾಗೂ ಶಾಸಕರು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಮಯದಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹೀಗಾಗಿ ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಹೇರಲು 17 ಸದಸ್ಯರ ಬಲವನ್ನು ಹೊಂದಲೇಬೇಕು. ಆದರೆ, ಈ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಸದಸ್ಯರ್ಯಾರು? 233 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬಹಿರಂಗಕ್ಕೆ ಕ್ಷಣಗಣನೆ
September 3, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ 62 ಸ್ಥಾನಗಳ ಪೈಕಿ 60 ಸ್ಥಾನಗಳಿಗೆ ಮತದಾನ ನಡೆದಿದ್ದು, ಮತ ಎಣಿಕಾ ಕಾರ್ಯ ನಾಳೆ (ಸೆ.3) ನಡೆಯ ಲಿದೆ. ಫಲಿತಾಂಶ ಹೊರಬೀಳಲು ಕ್ಷಣ ಗಣನೆ ಆರಂಭವಾಗಿದೆ. ಚಾಮರಾಜನಗರ ನಗರಸಭೆಯ 31 ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ 132 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಯ 31 ಸದಸ್ಯ ಸ್ಥಾನದ ಪೈಕಿ 6ನೇ ವಾರ್ಡಿನಿಂದ ಬಿಎಸ್ಪಿ ಅಭ್ಯರ್ಥಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9ನೇ ವಾರ್ಡ್ನಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ರಮೇಶ್…
ಕೇಂದ್ರೀಯ ವಿದ್ಯಾಲಯಕ್ಕೆ ಪ್ರಸಕ್ತ ಸಾಲಿನಿಂದಲೇ ಹೆಚ್ಚುವರಿ ತರಗತಿಗೆ ಮಂಜೂರಾತಿ
September 3, 2018ಚಾಮರಾಜನಗರ: ಚಾಮರಾಜನಗರದ ಕೇಂದ್ರೀಯ ವಿದ್ಯಾ ಲಯದಲ್ಲಿ 2018-19ನೇ ಸಾಲಿನಿಂದಲೇ (ಪ್ರಸಕ್ತ ಸಾಲು) ಜಾರಿಗೆ ಬರುವಂತೆ 1 ರಿಂದ 5ನೇ ತರಗತಿವರೆಗೆ ಹೆಚ್ಚುವರಿ ತರಗತಿಗೆ ಮಂಜೂರಾತಿ ದೊರೆತಿದೆ. ಈ ಬಗ್ಗೆ ನವದೆಹಲಿಯ ಕೇಂದ್ರೀಯ ವಿದ್ಯಾಲಯದ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರಿಂದ ಪ್ರತಿ ತರಗತಿಗೆ 40 ವಿದ್ಯಾರ್ಥಿಗಳಂತೆ 1 ರಿಂದ 5ನೇ ತರಗತಿವರೆಗೆ ಒಟ್ಟು 200 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನಡೆಸಲು ಶಾಲೆಯಲ್ಲಿ ಅವಕಾಶ ದೊರೆತಂತೆ ಆಗಿದೆ. ಚಾಮರಾಜನಗರ ತಾಲೂಕಿನ ಮಾದಾ ಪುರ ಗ್ರಾಮದ ಬಳಿ 16 ಕೋಟಿ ರೂ. ವೆಚ್ಚದಡಿ…
ಗುಂಡ್ಲುಪೇಟೆ ಕೆರೆಗಳಿಗೆ ನೀರು ತುಂಬಿಸಲು ನೀಲನಕ್ಷೆ ತಯಾರು
September 3, 2018ಗುಂಡ್ಲುಪೇಟೆ: ನದಿ ಮೂಲದಿಂದ ನೀರು ತುಂಬಿಸುವ ಮುಂದುವರೆದ ಯೋಜನೆಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ನೀಲನಕ್ಷೆಯನ್ನು ತಯಾರಿಸಲಾ ಗಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ತಾಲೂಕಿನ ಬರಗಿ ಗ್ರಾಮದ ಕೆರೆಯು ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಪತ್ನಿ ಸವಿತಾ, ಪುತ್ರ ಭುವನ್ ಅವರೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದಲೂ ಸಾಕಷ್ಟು ಮಳೆ ಬೀಳದೆ ಕೆರೆ ಗಳಿಗೆ ನೀರು ತುಂಬಿರಲಿಲ್ಲ. ಆದರೆ ಈ…
ಜಿಲ್ಲಾಡಳಿತದಿಂದ ಅರ್ಥಪೂರ್ಣ ಶ್ರೀ ಕೃಷ್ಣ ಜಯಂತಿ ಆಚರಣೆ
September 3, 2018ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಶ್ರೀಕೃಷ್ಣ ಜಯಂತಿ ಯನ್ನು ಇಂದು ನಗರದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ನಗರದ ಜೆ.ಎಚ್.ಪಟೇಲ್ ಸಭಾಂ ಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಉದ್ಘಾಟಿಸಿದರು. ಇದೇ ಸಂದ ರ್ಭದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಸತ್ಯಮೇವ ಜಯತೇ ಎಂಬುದನ್ನು ಪ್ರತಿಪಾದಿಸಿದ. ಮಾನವೀಯ ಮೌಲ್ಯ ಗಳನ್ನು ಸಾರುವಲ್ಲಿ ಶ್ರೀಕೃಷ್ಣ ಅದರ್ಶ ವಾಗಿದ್ದಾನೆ ಎಂದರು. ಶ್ರೀ ಕೃಷ್ಣನ ಕುರಿತು ಹೆಚ್ಚು ಓದಬೇಕು. ಮಕ್ಕಳಿಗೂ ಸಹ ಕೃಷ್ಣನ ಕುರಿತು ತಿಳಿಸಿ…
‘ಇಲ್ಲ’ಗಳ ನಡುವೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ
September 3, 2018ಯಳಂದೂರು:- ಮೃತ್ಯುಗೆ ಆಹ್ವಾನ ನೀಡುವ ವಿದ್ಯುತ್ ಪರಿವರ್ತಕ….. ದೈಹಿಕ ಶಿಕ್ಷ ಕರೇ ಇಲ್ಲದೆ ಕ್ರೀಡಾ ವಂಚಿತ ವಿದ್ಯಾರ್ಥಿಗಳು… ಚುಮು ಚುಮು ಚಳಿಯಲ್ಲಿ ಹೆಣ್ಣು ಮಕ್ಕಳಿಗೆ ತಣ್ಣೀರು ಸ್ನಾನ! ಬಿಸಿ ನೀರು ಬೇಕೆಂದರೆ, ಮಕ್ಕಳೇ ಸ್ವತಃ ಒಲೆಯಲ್ಲಿ ನೀರು ಕಾಯಿಸಬೇಕಾದ ಪರಿಸ್ಥಿತಿ… ಇದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ದುಸ್ಥಿತಿ. ಯಳಂದೂರು ತಾಲೂಕು ಕೇಂದ್ರದಿಂದ 3 ಕಿಮೀ ದೂರದಲ್ಲಿರುವ ಮೆಲ್ಲಹಳ್ಳಿ ಗೇಟ್ ಬಳಿ ದುಗ್ಗಹಟ್ಟಿ ಗ್ರಾಮದ ರಾಜೇಶ…
ಶವ ಸಂಸ್ಕಾರದ ವೇಳೆ ಜೇನು ದಾಳಿ; 20ಕ್ಕೂ ಹೆಚ್ಚು ಮಂದಿಗೆ ಗಾಯ
September 3, 2018ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಜೇನು ಹುಳುಗಳು ದಾಳಿ ನಡೆಸಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಡೊಳ್ಳಿಪುರ ಗ್ರಾಮದಲ್ಲಿ ಇಂದು ನಡೆದಿದೆ. ಗ್ರಾಮದ ರತ್ನಮ್ಮ ಎಂಬುವರು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಶವವನ್ನು ಅವರ ಜಮೀನಿಗೆ ಕೊಂಡೊಯ್ಯಲಾಗಿತ್ತು. ಜಮೀನಿನಲ್ಲಿ ಶವ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಶವಕ್ಕೆ ಪೂಜೆ ಸಲ್ಲಿಸುತ್ತಿದ್ದ ವೇಳೆ ಜೇನು ಹುಳುಗಳು ದಾಳಿ ನಡೆಸಿವೆ. ಇದರಿಂದ ಗಾಬರಿಗೊಂಡ ಸಂಬಂಧಿಕರು ಶವವನ್ನು ಅಲ್ಲೇ ಬಿಟ್ಟು ದಿಕ್ಕಾಪಾಲಾಗಿ ಓಡಿದರು. ಆದರೂ 20ಕ್ಕೂ ಹೆಚ್ಚು ಜನರನ್ನು…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಬಿಗಿ ಭದ್ರತೆಯಲ್ಲಿ ಮತಯಂತ್ರ, ನಾಳೆ ಮತ ಎಣಿಕೆ
September 2, 2018ಸೋಲು-ಗೆಲುವಿನ ಲೆಕ್ಕಾಚಾರ, ಅಭ್ಯರ್ಥಿಗಳಲ್ಲಿ ಢವಢವ, ಬೆಟ್ಟಿಂಗ್ ಭರಾಟೆ ಚಾಮರಾಜನಗರ: ಜಿಲ್ಲೆಯ ಚಾಮ ರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ 60 ಸದಸ್ಯ ಸ್ಥಾನಗಳಿಗೆ ಶುಕ್ರವಾರ ಶಾಂತಿಯುತ ಮತದಾನ ನಡೆದಿದೆ. ಚಾಮರಾಜನಗರದಲ್ಲಿ ಶೇ.72.03, ಕೊಳ್ಳೇಗಾಲದಲ್ಲಿ ಶೇ.73.71 ರಷ್ಟು ಮತ ದಾನ ನಡೆದಿದ್ದು, ಮತದಾರರು ವಿದ್ಯು ನ್ಮಾನ ಮತಯಂತ್ರದಲ್ಲಿ ತಮ್ಮ ನಿರ್ಧಾ ರದ ಮುದ್ರೆ ಒತ್ತಿದ್ದಾರೆ. ಮತಯಂತ್ರ ಗಳು ಈಗ ಪೊಲೀಸರ ಸರ್ಪಗಾವಲಿನ ಲ್ಲಿದ್ದು, ಎಲ್ಲರ ಚಿತ್ತ ಮತ ಎಣಿಕೆ ದಿನ ವಾದ ಸೆಪ್ಟೆಂಬರ್ 3ರ ಮೇಲಿದೆ. ಜಿಲ್ಲಾ ಕೇಂದ್ರವಾದ…