ಗೋಣಿಕೊಪ್ಪಲು: ವಿಪರೀತ ಗಾಳಿ, ಮಳೆಗೆ ತುತ್ತಾಗಿ ಮನೆ ಕಳೆದು ಕೊಂಡಿದ್ದ ಕೊಡಗಿನ ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ಮಚ್ಚಮಾಡ ಕರುಂಬಯ್ಯನವರ ಮನೆಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳಾದ ದೇವಯ್ಯನವರನ್ನು ಬರ ಮಾಡಿಕೊಂಡ ಶಾಸಕರು ಸರ್ಕಾರದಿಂದ ಪರಿಹಾರವಾಗಿ 95 ಸಾವಿರವನ್ನು ನೀಡು ವಂತೆ ಸೂಚಿಸಿದರು. ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಆಶ್ರಯ ಮನೆ ಮಂಜೂರು ಮಾಡುವ ಮೂಲಕ ನಿರಾಶ್ರಿತಗೊಂಡ ಕರುಂಬಯ್ಯನವರಿಗೆ ಸಹಕರಿಸುವಂತೆ ನಿರ್ದೇಶನ ನೀಡಿದರು. ಕರ್ನಾಟಕ…
ಸೋಮವಾರಪೇಟೆಯಲ್ಲಿ ಆಟಿ ಸಂಭ್ರಮ
August 13, 2018ಸೋಮವಾರಪೇಟೆ: ನಾರಾಯಣ ಗುರು ಸೇವಾ ಸಮಿತಿ ಹಾಗೂ ತುಳು ನಾಡು ಬಿಲ್ಲವ ಮಹಿಳಾ ಸಂಘದ ವತಿಯಿಂದ ಇಲ್ಲಿನ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ 6ನೇ ವರ್ಷದ ಆಟಿ ಸಂಭ್ರಮೋತ್ಸವ ಕಾರ್ಯಕ್ರಮ ನಡೆಯಿತು. ನಾರಾಯಣಗುರು ಸೇವಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಟಿ. ರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯದ ಸಂಘಟನೆಗಳು ಹೆಚ್ಚು ಬಲಗೊಂಡಂತೆ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಉನ್ನತಿ ಸಾಧಿಸಬಹುದು. ಸಂಘಟನೆಗಳು ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಆಚಾರ, ವಿಚಾರ,…
ಆನೆಕಾಡು ಬಳಿ ಟಿಟಿ ಪಲ್ಟಿ
August 13, 2018ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಸಂಜೆ ಮಧ್ಯಪ್ರದೇಶ ದಿಂದ ಪ್ರವಾಸಕ್ಕೆ ಆಗಮಿಸಿದ್ದ ಟಿಟಿ ಕೆ.ಎ.01 3262 ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಉರುಳಿಬಿದ್ದಿತ್ತು. ವಾಹನದಲ್ಲಿ ಒಟ್ಟು 12 ಮಂದಿಯಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವಾಹನದಲ್ಲಿದ್ದ ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೀವನಾಧಾರ ಅಭಿವೃದ್ಧಿ ಬೇಕು… ರೈಲ್ವೆ ಮಾರ್ಗದಂತಹ ಮಾರಕ ಯೋಜನೆ ಬೇಡ
August 13, 2018ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಆಗ್ರಹ ಗೋಣಿಕೊಪ್ಪಲು: ಕೊಡಗಿನಲ್ಲಿ ಜೀವನಾಧಾರಕ್ಕೆ ಬೇಕಾದ ಅಭಿವೃದ್ದಿ ಕೆಲಸಗಳು ಆಗಬೇಕಿದೆಯೇ ಹೊರತು ರೈಲ್ವೆ ಮಾರ್ಗದಂತಹ ಮಾರಕ ಯೋಜನೆ ಗಳು ಬೇಡ ಎಂಬ ಸಂದೇಶವನ್ನು ಇಲ್ಲಿನ ಕಾವೇರಿ ಕಾಲೇಜಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಪುಚ್ಚಿಮಾಡ ದಿ. ತಿಮ್ಮಯ್ಯ, ದಿ. ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಮೀನಾ ಸುಬ್ಬಯ್ಯ ಜ್ಞಾಪ ಕಾರ್ಥ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭಾಷಣ…
ಪಾಲೆಯಂಡ ಪೊನ್ನಪ್ಪ ಸುಪ್ರೀತಾಗೆ ಆಸ್ಟ್ರೇಲಿಯನ್ ಪ್ರಶಸ್ತಿ
August 12, 2018ಮೈಸೂರು: ಆಸ್ಟ್ರೇಲಿಯಾದಲ್ಲಿ ಪಿಹೆಚ್.ಡಿ ಮಾಡುತ್ತಿರುವ ಮೈಸೂರಿನ ಪಾಲೆಯಂಡ ಪೊನ್ನಪ್ಪ ಸುಪ್ರೀತಾ ಅವರು 2018ನೇ ಸಾಲಿನ ನ್ಯಾಷನಲ್ ಕೌನ್ಸಿಲ್ ಆಫ್ ವುಮೆನ್ ಕ್ವೀನ್ಸ್ಲ್ಯಾಂಡ್ (ಎನ್ಸಿಡಬ್ಲ್ಯೂಕ್ಯೂ) ಆಫೀಸ್ ಫಾರ್ ವುಮೆನ್ (ರಿಟರ್ನ್ ಟು ವರ್ಕ್) ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎನ್ಸಿಡಬ್ಲ್ಯೂಕ್ಯೂ ಸಂಸ್ಥೆಯು ನ್ಯಾಷನಲ್ ಕೌನ್ಸಿಲ್ ಆಫ್ ವುಮೆನ್ ಆಫ್ ಆಸ್ಟ್ರೇಲಿಯಾ ಇಂಕ್ ಲಿಮಿಟೆಡ್ ಸಂಸ್ಥೆಯ ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಮಹಿಳಾ ಸಬಲೀಕರಣ ಮತ್ತು ಜೀವನದ ಎಲ್ಲಾ ಹಂತಗಳಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸುವಲ್ಲಿ ಕಾರ್ಯನಿರ್ವ ಹಿಸುತದೆ. ಅಲ್ಲದೆ, ರಾಜ್ಯ ಮತ್ತು…
ಕೊಡಗಿನಲ್ಲಿ ಮಳೆ ಕಡಿಮೆಯಾಗಲು ಪ್ರಾರ್ಥಿಸೋಣ: ಶಾಸಕ ಕೆ.ಜಿ.ಬೋಪಯ್ಯ
August 12, 2018ಮಡಿಕೇರಿ: ಜಿಲ್ಲೆಯಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಮಳೆ ಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಜನರು ಕಷ್ಟ ನಷ್ಟಕ್ಕೆ ಸಿಲುಕಿದ್ದು, ಮಳೆ ಕಡಿಮೆಯಾಗಲು ಎಲ್ಲರೂ ಪ್ರಾರ್ಥಿಸೋಣ ಎಂದು ಬೋಪಯ್ಯ ಕರೆ ನೀಡಿದರು. ಕೊಡಗು ಜಿಲ್ಲಾ ಯುವ ಒಕ್ಕೂಟ, ಹಾಗೂ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಗ್ಗೋಡ್ಲು ಗ್ರಾಮದ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ನಡೆದ 27ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ, ಮಾತನಾಡಿದರು. ಕೊಡಗಿ ನಲ್ಲಿ ಕೆಸರು ಗದ್ದೆ ಕ್ರೀಡಾಕೂಟ…
ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ
August 12, 2018ಮಡಿಕೇರಿ: ತೋಟದ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸುಂಟಿಕೊಪ್ಪದ ಕೊಡಗರ ಹಳ್ಳಿ ಬಳಿ ನಡೆದಿದೆ. ಸ್ಥಳೀಯ ನಿವಾಸಿ ರಾಧಾ (55) ಎಂಬಾಕೆ ಎಂದಿ ನಂತೆ ತೋಟದ ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದ ಒಳಗಾಗಿದ್ದ ಕಾಡಾನೆ ಏಕಾಏಕಿ ದಾಳಿ ನಡೆದಿದೆ. ಕಾಡಾನೆ ಧಾಳಿಯಿಂದ ರಾಧಾ ಅವರ ಬಲಗೈ ಮುರಿಯಲ್ಪಟ್ಟಿದ್ದು ಕೂದೆಲೆಳೆಯ ಅಂತರ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ತೆರಳಿದ ಗಾಯಾಳುವಿನ ಯೋಗಕ್ಷೇಮ…
ಡೆತ್ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
August 12, 2018ಮಡಿಕೇರಿ: ಡೆತ್ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಅಮ್ಮತ್ತಿ ಸಮೀಪದ ಒಂಟಿಯಂಗಡಿಯಲ್ಲಿ ನಡೆದಿದೆ. ಒಂಟಿಯಂಗಡಿ ನಿವಾಸಿ ಶಿವಲಿಂಗಪ್ಪ ಎಂಬುವರ ಪುತ್ರಿ, ವೀರಾಜ ಪೇಟೆಯ ಸರ್ಕಾರಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪುಷ್ಪಾ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಾಯುವ ಮುನ್ನ ಡೆತ್ನೋಟ್ ಬರೆದಿಟ್ಟಿರುವ ಪುಷ್ಪಾ, ‘ನನ್ನ ಸಾವಿಗೆ ಯಾರೂ ಕಾರಣ ಅಂತಾ ಹೇಳೋದಿಲ್ಲ. ಅದು ಅವರಿಗೆ ಗೊತ್ತಿದೆ. 17 ವರ್ಷದ ಜೀವನ 17 ಜನ್ಮದಂತಾಗಿದೆ. ಪ್ರತಿದಿನ ಸಾಯಿ, ಸಾಯಿ ಅಂತಾ…
ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯ ಪೊಲಿಂಕಾನ ಉತ್ಸವ
August 12, 2018ಮಡಿಕೇರಿ: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿ ಯಿಂದ ಪೆÇಲಿಂಕಾನ ಉತ್ಸವದ ವಿಶೇಷ ಪೂಜೆ ನಡೆಯಿತು. ಶ್ರೀಭಗಂಡೇಶ್ವರ ದೇವಾ ಲಯದ ಆವರಣದ ಶ್ರೀ ಮಹಾ ಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಭಗಂಡೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣಗಳನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ನಂತರ ವಾದ್ಯಗೋಷ್ಠಿಯೊಂದಿಗೆ ತ್ರಿವೇಣಿ…
ವಿರಾಜಪೇಟೆಯಲ್ಲಿ ಇಂದು ಪೊಮ್ಮಕಡ ಕೂಟ ಉದ್ಘಾಟನೆ
August 12, 2018ವಿರಾಜಪೇಟೆ: ಸಾಹಿತ್ಯ ಸಂಸ್ಕೃತಿ ಭಾಷೆ ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೊಮ್ಮಕ್ಕಡ ಪಾತ್ರ ಮಹತ್ವವಾದದ್ದು. ಎಲ್ಲಾ ಕೊಡವ ಸಮಾಜಗಳಲ್ಲಿ ಪೊಮ್ಮಕ್ಕಡ ಕೂಟ ಎಂಬ ಒಕ್ಕೂಟಗಳು ಚಾಲ್ತಿಯಲ್ಲಿದೆ. ವಿರಾಜಪೇಟೆ ಕೊಡವ ಸಮಾಜದಲ್ಲೂ ಮಹಿಳೆಯರ ಒಕ್ಕೂಟವನ್ನು ಸ್ಥಾಪಿಸಲಾಗಿದ್ದು ಅಧಿಕೃತವಾಗಿ ಆಗಸ್ಟ್ 12 ರಂದು ವಿರಾಜಪೇಟೆ ಕೊಡವ ಸಮಾಜದದಲ್ಲಿ ಚಾಲನೆ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷೆ ಮನಿಯಪಂಡ ಕಾಂತಿ ಸತೀಶ್ ತಿಳಿಸಿದರು. ವಿರಾಜಪೇಟೆಯಲ್ಲಿ ಗೋಷ್ಠಿಯನ್ನದ್ದೇಸಿಸಿ ಮಾತನಾಡಿದ ಅವರು, ಕೊಡವ ಸಮಾಜದ ಸಹಯೋಗದಲ್ಲಿ ಪೊಮ್ಮಕ್ಕಡ ಒಕ್ಕೂಟವನ್ನು ಸ್ಥಾಪಿಸುವಂತೆ ಕಳೆದ ಮಹಾಸಭೆಯಲ್ಲಿ ಅಂಗಿಕರಿಸಲಾಗಿತ್ತು….