ಡೆತ್‍ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಗು

ಡೆತ್‍ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

August 12, 2018

ಮಡಿಕೇರಿ:  ಡೆತ್‍ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಅಮ್ಮತ್ತಿ ಸಮೀಪದ ಒಂಟಿಯಂಗಡಿಯಲ್ಲಿ ನಡೆದಿದೆ.

ಒಂಟಿಯಂಗಡಿ ನಿವಾಸಿ ಶಿವಲಿಂಗಪ್ಪ ಎಂಬುವರ ಪುತ್ರಿ, ವೀರಾಜ ಪೇಟೆಯ ಸರ್ಕಾರಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪುಷ್ಪಾ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಸಾಯುವ ಮುನ್ನ ಡೆತ್‍ನೋಟ್ ಬರೆದಿಟ್ಟಿರುವ ಪುಷ್ಪಾ, ‘ನನ್ನ ಸಾವಿಗೆ ಯಾರೂ ಕಾರಣ ಅಂತಾ ಹೇಳೋದಿಲ್ಲ. ಅದು ಅವರಿಗೆ ಗೊತ್ತಿದೆ. 17 ವರ್ಷದ ಜೀವನ 17 ಜನ್ಮದಂತಾಗಿದೆ. ಪ್ರತಿದಿನ ಸಾಯಿ, ಸಾಯಿ ಅಂತಾ ಹೇಳ್ತಾ ಇದ್ರಲ್ಲ. ಈಗ ಸಾಯ್ತಾ ಇದ್ದೀನಿ ನಿಮ್ಮ ಕಣ್ಣಿಂದ ಒಂದು ಹನಿ ನೀರು ಬಂದರೂ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ, ನಾನು ಸತ್ತು ನನ್ನ ಸೇಡು ತೀರಿಸಿಕೊಳ್ಳುತ್ತೇನೆ, ಐ ಮಿಸ್ ಯೂ ಅಮ್ಮಾ, ಐ ಮಿಸ್ ಯೂ ಸಿಂಚು’ ಎಂದು ಡೆತ್‍ನೋಟ್‍ನಲ್ಲಿ ಬರೆಯಲಾಗಿದೆ.

ಘಟನೆ ಕುರಿತು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು, ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ವೀರಾಜ ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

Translate »