ಮಡಿಕೇರಿ,ಮಾ.7-ಆರ್ಟಿಸಿ ವರ್ಗಾ ವಣೆ ಅರ್ಜಿಯನ್ನು ಸಕಾಲದಲ್ಲಿ ವಿಲೇ ವಾರಿ ಮಾಡದೆ ಅಧಿಕಾರಿಗಳು ಸತಾಯಿ ಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊ ಬ್ಬರು ಮಡಿಕೇರಿ ತಾಲೂಕು ಕಚೇರಿಯಲ್ಲಿ ಏಕಾಂಗಿಯಾಗಿ ಧರಣಿ ನಡೆಸಿದರು. ಅಧಿಕಾರಿಗಳು ತಿಂಗಳಾನುಗಟ್ಟಲೇ ಅಲೆದಾಡಿಸಿ ಆ ನಂತರ ವಿನಾಕಾರಣ ಅರ್ಜಿಯಲ್ಲಿ ನ್ಯೂನತೆಗಳಿವೆ ಎಂದು ಕುಂಟು ನೆಪ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಚೇಲಾವರ ಗ್ರಾಮದ ಬಾಚಮಂಡ ಲೋಕೇಶ್ ಆರೋಪಿಸಿದರು. ಕಳೆದ ಜುಲೈನಿಂದ ತಾಲೂಕು ಕಚೇರಿಗೆ ತನ್ನ ಕುಟುಂಬದ ಆಸ್ತಿಯ ಆರ್ಟಿಸಿ ವರ್ಗಾವಣೆ ಮಾಡಿಸಿಕೊಳ್ಳಲು ಅಲೆದಾ ಡುತ್ತಿದ್ದು ದಾಖಲೆಗಳು…
ಕೊರೊನಾ ಪ್ರಕರಣ ಪತ್ತೆಯಾಗದಿದ್ದರೂ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮ
March 7, 2020ಮಡಿಕೇರಿ,ಮಾ.6-ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ನ ಶಂಕಿತ ಪ್ರಕರಣ ಇಂದಿನವರೆಗೂ ಕಂಡು ಬಂದಿಲ್ಲ ವಾದರೂ, ರಾಜ್ಯ ಆರೋಗ್ಯ ಇಲಾಖೆಯ ಸೂಚನೆಯಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಗೆಗಳ ವಾರ್ಡ್ ಒಂದನ್ನು ಶಂಕಿತ ಪ್ರಕರಣದ ಚಿಕಿತ್ಸೆಗಾಗಿ ಮೀಸಲಿಟ್ಟಿದೆ. ಭಿತ್ತಿ ಪತ್ರಗಳು, ಕರ ಪತ್ರಗಳನ್ನು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಹಂಚಲಾ ಗುತ್ತಿದೆ. ಕೊಡಗು ಜಿಲ್ಲೆಯ ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನಲೆಯಲ್ಲಿ ಗಡಿ ಗ್ರಾಮಗಳಲ್ಲಿ, ಚೆಕ್ ಪೋಸ್ಟ್ಗಳಲ್ಲಿ ಆರೋಗ್ಯ ಇಲಾಖೆ ವಿಶೇಷ ನಿಗಾ ವ್ಯವಸ್ಥೆ…
ಬೈಕ್ ಡಿಕ್ಕಿ ಮಹಿಳೆ ಸಾವು
March 7, 2020ಕುಶಾಲನಗರ,ಮಾ.6-ಮನೆಗೆ ತೆರಳುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ವಾಗಿ ಗಾಯ ಗೊಂಡು ಮೃತ ಪಟ್ಟಿರುವ ಘಟನೆ ಶುಕ್ರವಾರ ಕೂಡುಮಂಗಳೂರಿನಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ನಿವಾಸಿ ಜಯಮ್ಮ (69) ಮೃತಪಟ್ಟ ಮಹಿಳೆ. ಕುಶಾಲನಗರದಿಂದ ಕೂಡು ಮಂಗಳೂರಿನ ಮನೆಗೆ ಆಟೊರಿಕ್ಷಾ ದಲ್ಲಿ ತೆರಳಿ ನಂತರ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ, ಎದುರಿ ನಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದ ರಿಂದ ಗಾಯಗೊಂಡ ಜಯಮ್ಮ ಅವ ರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆ…
ಆನೆಕಾಡು : ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು, ಓರ್ವನ ಸ್ಥಿತಿ ಗಂಭೀರ
March 7, 2020ಕುಶಾಲನಗರ,ಮಾ.6-ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಕಾಡು ಬಳಿ ಕಾರೊಂದು ಚಾಲನ ನಿಯಂತ್ರಣ ತಪ್ಪಿ ಹಳ್ಳ ಬಿದ್ದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಸಂಭವಿಸಿದೆ. ಏಳನೇ ಹೊಸಕೋಟೆ ನಿವಾಸಿ ಕಾರು ಚಾಲಕ ಅಬೂಬಕ್ಕರ್ ಗಂಭೀರ ವಾಗಿ ಗಾಯಗೊಂಡಿದ್ದು, ಈತನ ಮಗ ಆ್ಯರೀಸ್ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾನೆ. ಏಳನೇ ಹೊಸಕೋಟೆಯ ತಮ್ಮ ಮನೆಯಲ್ಲಿ ಊಟ ಮುಗಿಸಿಕೊಂಡು ತಂದೆ ಅಬೂಬಕ್ಕರ್ ಮಗ ಆ್ಯರೀಸ್ ಇಬ್ಬರು ನಿಸರ್ಗಧಾಮದ ಟೂರಿಸ್ಟ್ ಸೆಂಟರ್ ನಲ್ಲಿರುವ ತಮ್ಮ ಅಂಗಡಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ…
ಗೋಣಿಕೊಪ್ಪಲಿನಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಹೊರತುಪಡಿಸಿ ಬಜೆಟ್ನಲ್ಲಿ ಕೊಡಗು ಸಂಪೂರ್ಣ ಕಡೆಗಣನೆ
March 6, 2020ಮಡಿಕೇರಿ, ಮಾ.5- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ಮೇಲ್ನೋಟಕ್ಕೆ ರೈತ ಪರವಾಗಿದೆ ಎನ್ನು ವಂತಿದೆ. ಕೃಷಿಕ ವರ್ಗಕ್ಕೆ ಸಾಕಷ್ಟು ಯೋಜನೆ ಗಳನ್ನು ಯಡಿಯೂರಪ್ಪ ಪ್ರಕಟಿಸಿದ್ದಾರೆ. 2 ಲಕ್ಷ 37 ಸಾವಿರದ 893 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿದ ಸಿಎಂ ಯಡಿ ಯೂರಪ್ಪ, ಈ ಬಜೆಟ್ನಲ್ಲಿ ಜಿಲ್ಲಾವಾರು ಯೋಜನೆ ಬದಲಿಗೆ ವಿವಿಧ ಇಲಾಖೆಗಳ ಯೋಜನೆಗೆ ಒತ್ತು ನೀಡಿದ್ದಾರೆ. ಆದರೆ ಕೊಡಗು ಜಿಲ್ಲೆಯ ಜನರ ಬೇಡಿಕೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂಬುದು ಬಜೆಟ್ ಅಂಕಿ ಅಂಶಗಳಿಂದ ಕಂಡು…
ಅನಿತಾ ಕಾರ್ಯಪ್ಪಗೆ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ’
March 6, 2020ಮಡಿಕೇರಿ, ಮಾ.5- ಕೊಡಗಿನ ಹಿರಿಯ ರಂಗಭೂಮಿ ನಟಿ ಶ್ರೀಮತಿ ಅಡ್ಡಂಡ ಅನಿತಾ ಕಾರ್ಯಪ್ಪ ಅವರಿಗೆ ಈ ಬಾರಿಯ ಪ್ರತಿಷ್ಠಿತ ಕಿತ್ತೂರುರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಲಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿ ರೂ.25,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮಾ.8 ರಂದು ಮಹಿಳಾ ದಿನಾಚರಣೆಯ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11.00 ಗಂಟೆಗೆ ಈ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಹಿಳಾ…
ವಿರಾಜಪೇಟೆಯಲ್ಲಿ ಲೈನ್ಮೆನ್ ಮೇಲೆ ಹಲ್ಲೆ
March 6, 2020ವಿರಾಜಪೇಟೆ, ಮಾ.5- ವಿರಾಜಪೇಟೆ ವ್ಯಾಪ್ತಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಎಂಬಾತನ ಮೇಲೆ ಗಣಪತಿ ಎಂಬಾತ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣಪತಿ ತಲೆ ಮರೆಸಿ ಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣವನ್ನು ಚೆಸ್ಕಾಂ ಸಿಬ್ಬಂದಿಗಳು ಖಂಡಿಸಿದ್ದು, ಕರ್ತವ್ಯನಿರತ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಂಘದ ಪದಾಧಿಕಾರಿಗಳು ಕಳವಳ…
ಕರೆಂಟ್ ಶಾಕ್ನಿಂದ ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಸಾವು
March 6, 2020ಗೋಣಿಕೊಪ್ಪಲು, ಮಾ.5- ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದ ಅಮ್ಮ, ಮಗಳು ಕಾಳು ಮೆಣಸು ಕೊಯ್ಯಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲೂಕಿನ ಕುಂದಾ ಗ್ರಾಮದ ಈಚೂರು ಎಂಬಲ್ಲಿ ನಡೆದಿದೆ. ಮೃತ ಮಹಿಳೆಯರನ್ನು 45 ವರ್ಷದ ಸ್ವರೂಪ ಖಾತುನ್ ಮತ್ತು 20 ವರ್ಷದ ಹಸೀನಾ ಎಂದು ಗುರುತಿಸಲಾಗಿದೆ. ಈಚೂರು ಗ್ರಾಮದ ರಮೇಶ್ ಅವರ ತೋಟ ದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾಳು ಕೊಯ್ಯಲು ಅಲ್ಯೂಮಿನಿಯಂ ಏಣಿಯನ್ನು ಬಳಸಿದ್ದೆ ಈ ಘಟನೆ…
ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ
March 6, 2020ಮಡಿಕೇರಿ, ಮಾ.5- ತನ್ನ ಸೋದರ ಮಾವನ ಮೇಲೆ ಹಲ್ಲೆ ನಡೆಸಿ, ಹತ್ಯೆ ಗೈದಿದ್ದ ಆರೋಪಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾ ವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಚೇರಂಬಾಣೆಯ ಸುರೇಶ್ ಎಂಬಾ ತನೆ ಶಿಕ್ಷೆಗೆ ಗುರಿಯಾದ ಅಪರಾಧಿ. ಘಟನೆ ವಿವರ: 2019ರ ಏಪ್ರಿಲ್ 9ರಂದು ಸಂಜೆ 7 ಗಂಟೆಗೆ ಚೇರಂಬಾಣೆಯ ಜೀವನ್ ಎಂಬುವರ ತೋಟದ ಲೈನ್ ಮನೆಗೆ ಬಂದ ರಾಜು ಎಂಬುವರ ತಂಗಿಯ ಮಗ ಸುರೇಶ್, ಸೋದರತ್ತೆ ಮತ್ತು ಆಕೆಯ…
ಇಂದು ರಾಜ್ಯ ಬಜೆಟ್ ; ಬಹು ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ
March 5, 2020ಮಡಿಕೇರಿ,ಮಾ.4-ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಮಾರ್ಚ್ 5ರಂದು ಬಜೆಟ್ ಮಂಡನೆ ಮಾಡಲಿದ್ದು, ಜಿಲ್ಲೆಯ ಜನರ ನಿರೀಕ್ಷೆಗಳು ಕೂಡ ಬೆಟ್ಟದಷ್ಟಿವೆ. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಬೇಕೆಂಬ ಕೂಗು ಕೂಡ ಇದ್ದು, ಇದೀಗ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಗಳು ದೊರೆಯಬಹುದೇ ಎಂಬ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳ ಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದ್ದು, ಇಂದಿಗೂ 2018ರ ವಿಕೋಪದ ಕಾಮಗಾರಿಗಳು ಪೂರ್ಣಗೊಂಡಿಲ್ಲ. 2019ರ ಜಲ ಪ್ರಳಯಕ್ಕೆ ತುತ್ತಾದ ಕುಟುಂಬಗಳಿಗೆ ಸರಕಾರ ಪರಿಹಾರ ನೀಡಿದೆಯಾದರೂ,…