ಮಂಡ್ಯ, ನ.2- ಕುರಿತೊಳೆಯಲು ಹೋಗಿ ಅಪ್ಪ ಮತ್ತು ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ತಾಲ್ಲೂಕಿನ ಗೊರವಾಲೆ ಗ್ರಾಮದ ವಿ.ಸಿ.ನಾಲೆಯಲ್ಲಿ ನಡೆದಿದೆ. ಗೊರವಾಲೆ ಗ್ರಾಮದ ಹನುಮಂತೇಗೌಡ(48) ಮತ್ತು ಮಗ ಹೇಮಂತ್(13) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವವರು. ಭಾನುವಾರ ಮಧ್ಯಾಹ್ನ ಕುರಿಗಳನ್ನು ವಿಶ್ವೇಶ್ವರಯ್ಯ ನಾಲೆಯಲ್ಲಿ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ಹೇಮಂತ್ ನೀರಿಗೆ ಬಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಅಪ್ಪ ಹನುಮಂತೇಗೌಡ ಮಗನನ್ನು ರಕ್ಷಣೆ ಮಾಡಲು ಹೋಗಿ ಅವರೂ ಸಹ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮಗನ ಮೃತದೇಹವು ನಾಲೆಯ…
ಕೆ.ಆರ್.ಪೇಟೆ ಬಳಿ ನದಿಯಲ್ಲಿ ಮುಳುಗಿ ಯುವಕ ಸಾವು
November 3, 2020ಕೆ.ಆರ್.ಪೇಟೆ, ನ.2- ತಾಲ್ಲೂಕಿನ ಹೇಮಗಿರಿಯ ಬಳಿ ಹೇಮಾವತಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಸಾವಿಗೀಡಾಗಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯ ಪಿ.ಎಲ್.ಡಿ ಬ್ಯಾಂಕ್ ಬಳಿ ಮೆಸ್ ನಡೆಸುತ್ತಿದ್ದ ಪಾಂಡವಪುರ ತಾಲೂಕಿನ ನಳ್ಳೇನ ಹಳ್ಳಿಯ ಬೆಟ್ಟೇಗೌಡರ ಪುತ್ರ ಎನ್.ಬಿ. ಅಭಿಷೇಕ್ (28)ಮೃತ ಯುವಕ. ಅಭಿಷೇಕ್ ತನ್ನ ಗೆಳೆಯರೊಂದಿಗೆ ಸ್ನೇಹಿತನೊಬ್ಬನ ಹುಟ್ಟುಹಬ್ಬಕೆಂದು ಕೆ.ಆರ್.ಪೇಟೆಗೆ ತೆರಳಿದ್ದನೆನ್ನಲಾಗಿದೆ. ಶನಿವಾರ ರಾತ್ರಿ ಪಾರ್ಟಿ ಮುಗಿಸಿದ ಗೆಳೆಯರು ಭಾನು ವಾರ ಹೇಮಾವತಿ ನದಿ ಬಳಿ ವಿಹಾರ ತೆರಳಿದ್ದರು. ಈ ವೇಳೆ ನದಿಗೆ…
ಬೇವುಕಲ್ಲು ಗ್ರಾಮದಲ್ಲಿ ವೃದ್ಧನ ಕೊಲೆ: ರೌಡಿಶೀಟರ್ನಿಂದ ದುಷ್ಕøತ್ಯ
October 30, 2020ಮಂಡ್ಯ, ಅ.29- ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಶೀಟರ್ವೊಬ್ಬ ವೃದ್ಧನನ್ನು ಇರಿದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ನಡೆದಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇವುಕಲ್ಲು ಗ್ರಾಮದ ಚನ್ನವೀರಯ್ಯ(70) ಕೊಲೆಯಾದ ವೃದ್ಧ. ಅದೇ ಗ್ರಾಮದ ರೌಡಿ ಶೀಟರ್ ಮೋಹನ್ ಎಂಬಾತ ವೃದ್ಧನನ್ನು ಚಾಕುವಿ ನಿಂದ ಇರಿದು ಕೊಲೆ ಮಾಡಿದ್ದು, ಹಳೇ ವೈಷಮ್ಯವೇ ಕೊಲೆಗೆ ಕಾರಣ ಎಂದು ಚನ್ನವೀರಯ್ಯ ಅವರ ಅಣ್ಣನ ಮಗ ವಸಂತ್ ಕುಮಾರ್ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ….
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಾಗೃತಿ ಆಂದೋಲನ
October 30, 2020ಮಂಡ್ಯ ಅ.29- ಕೋವಿಡ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಜನರಿಗೆ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಹಾಗೂ ಭ್ರಷ್ಟಾ ಚಾರ ಜಾಗೃತಿ ಅರಿವು ಆಂದೋಲನವನ್ನು ಜಿಲ್ಲಾ ನ್ಯಾಯಾಂಗ ಇಲಾಖೆ ವತಿಯಿಂದ ಹಮ್ಮಿಕೊಂಡಿರುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ.ವಸ್ತ್ರಮಠ ತಿಳಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೆÇಲೀಸ್ ಇಲಾಖೆ ಮತ್ತು ಮಂಡ್ಯ ವಕೀಲರ…
ವಿಶ್ವಕ್ಕೆ ಅಂಟಿರುವ ಕೊರೊನಾ ಶೀಘ್ರ ತೊಲಗಲಿ
October 30, 2020ಭಾರತೀನಗರ, ಅ.29(ಅ.ಸತೀಶ್)- ವಿಶ್ವಕ್ಕೆ ಅಂಟಿರುವ ಕೊರೊನಾ ಬಹುಬೇಗ ತೊಲ ಗಲಿ, ಜನರು ನಿರ್ಭಯವಾಗಿ ಜೀವಿಸಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಣೇಶ್ ತಿಳಿಸಿದರು. ಕೆ.ಎಂ.ದೊಡ್ಡಿ ಗ್ರಾಪಂ ಆವರಣದಲ್ಲಿ ವಕೀ ಲರ ಸಂಘ, ಆರೋಗ್ಯ ಇಲಾಖೆ, ಕೆ.ಎಂ. ದೊಡ್ಡಿ ಗ್ರಾಮ ಪಂಚಾಯಿತಿ ಸಹಯೋಗ ದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕಿನ ವಿವಿಧ ಸಂಘಟನೆ ಗಳಿಂದ ಕೋವಿಡ್-19 ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ತಪ್ಪದೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಗ್ರಾಮೀಣ ಭಾಗದಲ್ಲೂ…
ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಪ್ರಕರಣ ಲಿಂಗಪಟ್ಟಣಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
October 30, 2020ಕೋವಿಡ್ ನಿಯಮ ಉಲ್ಲಂಘಿಸಿ ಪ್ರಸಾದ ವಿತರಣೆ: ಶಾಸಕ ಡಾ.ಅನ್ನದಾನಿ ವಿಷಾದ ಮಳವಳ್ಳಿ ಅ.29- ತಾಲೂಕಿನ ಹಲಗೂರು ಹೋಬ ಳಿಯ ಲಿಂಗಪಟ್ಟಣ ಗ್ರಾಮದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 50 ಮಂದಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ. ವಿ.ವೆಂಕಟೇಶ್ ಅವರು ಲಿಂಗಪಟ್ಟಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮ ಪಂಚಾಯಿತಿಯ ವ್ಯಾಪ್ತಿಗಳಲ್ಲಿ ಯಾವುದೇ ದೇವಾಲಯದಲ್ಲಿ ಪ್ರಸಾದ ವಿತರಣೆಯನ್ನು ಮಾಡಬಾರದು, ಗ್ರಾಮದ ಎಲ್ಲರಿಗೂ ಕೋವಿಡ್-19 ಪರೀಕ್ಷೆ ಮಾಡಿಸಿ ಹಾಗೂ ಸ್ಯಾನಿಟೈಸರ್ ಸಿಂಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಅಸ್ವಸ್ಥಗೊಂಡ ವ್ಯಕ್ತಿಗಳ…
ವಿವಿಧ ಜಿಲ್ಲೆಗಳಲ್ಲಿ ಕಳ್ಳತನ: 7 ಮಂದಿ ಖದೀಮರ ಬಂಧನ
October 27, 2020ಮಂಡ್ಯ, ಅ.27- ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಯ ವಿವಿಧೆಡೆ 60 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತು ಗಳನ್ನು ಕಳ್ಳತನ ಮಾಡಿದ್ದ 7 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದ್ದು, 34 ಪ್ರಕರಣ ಗಳನ್ನು ಭೇದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶು ರಾಮ್ ಹೇಳಿದರು. ಮಂಗಳವಾರ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಸಿ.ರವಿಕುಮಾರ್ ಅಲಿಯಾಸ್ ರವಿ(39), ಮಂಡ್ಯ ತಾಲೂಕಿನ ಸೂನಗಹಳ್ಳಿ…
ನಾಗಮಂಗಲದಲ್ಲಿ ರಾಜ್ಯೋತ್ಸವ ಪೂರ್ವಭಾವಿ ಸಭೆ
October 27, 2020ನಾಗಮಂಗಲ, ಅ.27(ಮಹೇಶ್)- ತಹಶೀಲ್ದಾರ್ ಕುಂಞÂ ಅಹಮದ್ ಅವರ ನೇತೃತ್ವ ದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳ ಗೊಂಡಂತೆ ಕನ್ನಡ ರಾಜ್ಯೋತ್ಸವ ಪೂರ್ವ ಭಾವಿ ಸಭೆಯು ಮಂಗಳವಾರ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಬೆಳಗ್ಗೆ 11-30 ಕ್ಕೆ ನಿಗದಿಯಾಗಿತ್ತು. ತಹಶೀಲ್ದಾರ್ ನಿಗದಿತ ಸಮಯಕ್ಕೆ ಬಂದಿದ್ದರೂ ಕೆಲ ಇಲಾಖೆ ಅಧಿಕಾರಿಗಳು ಗೈರು ಹಾಜ ರಾಗಿದ್ದು ಎದ್ದು ಕಾಣುತ್ತಿತ್ತು. ತಹಶೀಲ್ದಾರ್ ಕುಂಞÂ ಅಹಮದ್ ಇಲಾಖೆ ಅಧಿಕಾರಿ ಗಳಿಗೆ ಫೆÇೀನ್ ಮುಖಾಂತರ ಮಾತ ನಾಡಿದರೂ ಸಹ…
ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಪೆÇಲೀಸರು
October 27, 2020ಶ್ರೀರಂಗಪಟ್ಟಣ, ಅ.27(ವಿನಯ್ ಕಾರೇಕುರ)- ಬೂಟಿನಶಬ್ದ, ಖಾಕಿ ಸಮವಸ್ತ್ರ ಹಾಗೂ ಖಾಕಿಯ ಭಾಷೆಯ ಬಳಕೆ ಇಲ್ಲದೆ ಸಾಂಪ್ರದಾಯಿಕವಾಗಿ ಶ್ರೀರಂಗಪಟ್ಟಣ ಗ್ರಾಮಾಂತರ ಪೆÇಲೀಸರು ಪಂಚೆ ಟವೆಲ್ ಹಾಕಿಕೊಂಡು ಸಡಗರದಿಂದ ವಿಶೇಷ ವಾಗಿ ಆಯುಧ ಪೂಜೆಯನ್ನು ಆಚರಿಸಿದರು. ಜನ ಸ್ನೇಹಿ ಪೆÇಲೀಸ್ ಠಾಣೆ ಎನಿಸಿ ಕೊಂಡಿದ್ದ ಗ್ರಾಮಾಂತರ ಪೆÇಲೀಸ್ ಠಾಣೆ ಖಾಕಿ ಮಾಯವಾಗಿ ಗ್ರಾಮೀಣ ಭಾಗ ದಲ್ಲಿನ ಪಂಚೆ ಟವೆಲ್ಗಳಲ್ಲಿ ಎಸ್.ಐ ಗಿರೀಶ್ ಮತ್ತು ಸಿಬ್ಬಂದಿ ಮಿಂಚಿದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆಯನ್ನು ಸ್ವಚ್ಛಗೊಳಿಸಿ, ಗನ್, ಕಂಪ್ಯೂಟರ್ಸ್, ಸರ್ಕಾರಿ ಮತ್ತು ಖಾಸಗಿ…
ಮಳವಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
October 27, 2020ಮಳವಳ್ಳಿ, ಅ.27- ಮಳವಳ್ಳಿ ಪುರ ಸಭೆಯ ಆಧ್ಯಕ್ಷರಾಗಿ ರಾಧಾ ನಾಗರಾಜ್ ಉಪಾಧ್ಯಕ್ಷರಾಗಿ ಟಿ.ನಂದಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಪುರಸಭೆಯ 23 ಸ್ಥಾನಗಳು ಲೋಕಸಭಾ ಸದಸ್ಯರ ಹಾಗೂ ಶಾಸಕರ ಮತದಾನ ಸೇರಿ ಒಟ್ಟು 25 ಮತದಾರರಿದ್ದ ಈ ಚುನಾವಣೆಗೆ ರಾಧ ನಾಗರಾಜು(17ನೇ ವಾರ್ಡ್), ಅಧ್ಯಕ್ಷ ಸ್ಥಾನಕ್ಕೆ ಟಿ.ನಂದಕುಮಾರ್(10ನೇ ವಾರ್ಡ್) ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇಲ್ಲಿ 9 ಜೆಡಿಎಸ್, 5 ಕಾಂಗ್ರೆಸ್, 2 ಬಿಜೆಪಿ, 7 ಪಕ್ಷೇತರ ಸದಸ್ಯರಿದ್ದಾರೆ. ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ…