ಮಂಡ್ಯ

ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ರೈತರ ಸರಣಿ ಪ್ರತಿಭಟನೆ
ಮಂಡ್ಯ

ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ರೈತರ ಸರಣಿ ಪ್ರತಿಭಟನೆ

December 14, 2019

ಮಂಡ್ಯ, ಡಿ.13(ನಾಗಯ್ಯ)- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ರೈತರು ಶುಕ್ರವಾರ ಸರಣಿ ಪ್ರತಿಭಟನೆ ನಡೆಸಿದರು. ಶ್ರೀರಂಗ ಪಟ್ಟಣ ದಲ್ಲಿ ಕೀಟಬಾಧೆ ತಡೆಗೆ ಆಗ್ರಹಿಸಿ ಮತ್ತು ಮದ್ದೂರಿನ ಗೊರವನಹಳ್ಳಿಯಲ್ಲಿ ಹೈ ಟೆನ್ಷನ್ ವಿದ್ಯುತ್ ಕಂಬ ಅಳವಡಿಕೆ ವಿರೋಧಿಸಿ ಹಾಗೂ ಅಕ್ರಮವಾಗಿ ವಶಪಡಿಸಿಕೊಂಡಿರುವ ಜಮೀನಿಗೆ ಬಾಡಿಗೆ ನೀಡದ ರಸ್ತೆ ನಿರ್ಮಾಣ ಕಂಪನಿ ವಿರುದ್ಧ ಕುದುರುಗುಂಡಿ ಗ್ರಾಮದಲ್ಲಿ ರೈತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಕೀಟಬಾಧೆ ತಡೆಗೆ ಆಗ್ರಹ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ತೆಂಗು, ಅಡಿಕೆ ಇತರ…

ಕೇಂದ್ರೀಯ ಶಾಲಾ ಕಟ್ಟಡ, ರೈಲ್ವೆ ಮೇಲ್ಸೇತುವೆ ನಿರ್ಮಾಣ ಅನುದಾನಕ್ಕೆ ಸುಮಲತಾ ಮನವಿ
ಮಂಡ್ಯ

ಕೇಂದ್ರೀಯ ಶಾಲಾ ಕಟ್ಟಡ, ರೈಲ್ವೆ ಮೇಲ್ಸೇತುವೆ ನಿರ್ಮಾಣ ಅನುದಾನಕ್ಕೆ ಸುಮಲತಾ ಮನವಿ

December 14, 2019

ಮಂಡ್ಯ, ಡಿ.13- ನಗರದಲ್ಲಿ ನೂತನ ಕೇಂದ್ರೀಯ ವಿದ್ಯಾಲಯದ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಾಗೂ ರೈಲ್ವೆ ಹಳಿಗೆ ಅಡ್ಡ ಲಾಗಿ ಮೇಲ್ಸೇತುವೆ ನಿರ್ಮಾಣ ಕಾಮ ಗಾರಿಗೆ ಅಗತ್ಯ ಅನುದಾನ ಬಿಡುಗಡೆಗೆ ಒತ್ತಾಯಿಸಿ ಶುಕ್ರವಾರ ದೆಹಲಿಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸಚಿವರುಗಳಿಗೆ ಮನವಿ ಸಲ್ಲಿಸಿದ್ದಾರೆ. ಮೊದಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೆÇೀಖ್ರಿಯಾಲ್ ಅವರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಿದ ಸುಮಲತಾ ಅಂಬರೀಶ್, ಶಿಥಿ ಲಾವಸ್ಥೆಯಲ್ಲಿರುವ ಮಂಡ್ಯ ನಗರದ ಕೇಂದ್ರೀಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿ ಗಳು…

ಸಹಕಾರ ಸಂಘಗಳ ಅಭಿವೃದ್ಧಿಯಿಂದ ರೈತರ ಪ್ರಗತಿ
ಮಂಡ್ಯ

ಸಹಕಾರ ಸಂಘಗಳ ಅಭಿವೃದ್ಧಿಯಿಂದ ರೈತರ ಪ್ರಗತಿ

December 14, 2019

ಕೆ.ಆರ್.ಪೇಟೆ,ಡಿ.13-ಸಹಕಾರ ಸಂಘಗಳು ಅಭಿವೃದ್ಧಿಯಾದರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೇ ಅವುಗಳ ಅಭಿ ವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ ತಿಳಿಸಿದರು. ತಾಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘದ ಕಟ್ಟಡ ಹಾಗೂ ಗೋದಾಮುಗಳನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಸಹಕಾರ ಸಂಘಗಳ ಮೂಲಕ ರೈತರಿಗೆ ಅಗತ್ಯ ವಾದ ಶೂನ್ಯ ಬಡ್ಡಿ…

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ‘ಶೋಭಾಯಾತ್ರೆ’
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ‘ಶೋಭಾಯಾತ್ರೆ’

December 12, 2019

ಗಮನ ಸೆಳೆದ ಶ್ರೀರಾಮ, ಲಕ್ಷ್ಮಣ, ಹನುಮ ವೇಷಧಾರಿಗಳು  ವಿವಿಧ ಜಿಲ್ಲೆಯ ಸಾವಿರಾರು ಹನುಮ ಭಕ್ತರು ಭಾಗಿ ಮಂಡ್ಯ, ಡಿ.11(ನಾಗಯ್ಯ)- ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬುಧವಾರ ಹನು ಮಾನ್ ಮಾಲಾಧಾರಿಗಳ ಶೋಭಾಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ಗಂಜಾಂನ ನಿಮಿಷಾಂಬ ದೇವಾ ಲಯ ಬಳಿಯ ಆಂಜನೇಯ ದೇಗುಲ ಬಳಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಗಂಜಾಂ ಮುಖ್ಯ ಬೀದಿ, ಕುವೆಂಪು ವೃತ್ತ, ಪುರಸಭೆ ಸರ್ಕಲ್, ಗೋವಿಂದಪ್ಪ ಬೀದಿ, ಅಂಚೆ ಕಚೇರಿ ಮಾರ್ಗವಾಗಿ ಯಾತ್ರೆಯು ಶ್ರೀರಂಗಪಟ್ಟಣದ…

ಗುಡ್ಡಪ್ಪನನ್ನು ನೇಮಿಸಿದ ಚಿಕ್ಕ ಅರಸಿನಕೆರೆ ಬಸವ!
ಮಂಡ್ಯ

ಗುಡ್ಡಪ್ಪನನ್ನು ನೇಮಿಸಿದ ಚಿಕ್ಕ ಅರಸಿನಕೆರೆ ಬಸವ!

December 12, 2019

ಮಂಡ್ಯ, ಡಿ.1- ಚಿಕ್ಕಅರಸಿನಕೆರೆ ಬಸವ ತಂಪಿನ ಮಾರಮ್ಮನಿಗೆ ಗುಡ್ಡಪ್ಪ ನನ್ನು ರೋಚಕ ರೀತಿಯಲ್ಲಿ ನೇಮಕ ಮಾಡಿ ಗಮನ ಸೆಳೆಯಿತು. ದೇವರಿಲ್ಲ, ಎಲ್ಲವೂ ಮೂಢನಂಬಿಕೆ ಎಂದು ವಾದ ಮಾಡುವ ಜನರಿರುವ ನಡುವೆ ನಗರದ ರಾಮನಹಳ್ಳಿ, ಹೊಸ ಹಳ್ಳಿಯ ಶ್ರೀತಂಪಿನ ಮಾರಮ್ಮ ದೇವ ಸ್ಥಾನಕ್ಕೆ ಗುಡ್ಡಪ್ಪನ ನೇಮಕ ಪ್ರಕ್ರಿಯೆ ಪವಾಡದಂತೆ ನಡೆಯಿತು. ಹೇಗೆ ನಡೆಯಿತು ಪ್ರಕ್ರಿಯೆ?: ಹೊಸಹಳ್ಳಿಯ ಚನ್ನಪ್ಪ ಎಂಬುವರ ಮನೆ ಪಕ್ಕದಲ್ಲಿ ತಂಪಿನ ಮಾರಮ್ಮನ ಪುಟ್ಟ ಗುಡಿಯಿತ್ತು. ಇತ್ತೀಚೆಗೆ ಮಾರಮ್ಮ ಚನ್ನಪ್ಪರ ಪುತ್ರ ಮನು ಅವರ ಕನಸಿನಲ್ಲಿ ಬಂದು…

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಂಡ್ಯ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

December 12, 2019

ಪಾಂಡವಪುರ, ಡಿ.11- ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಬುಧವಾರ ತಾಪಂ ಅನುದಾನದ 4.80ಲಕ್ಷ ರೂ.ವೆಚ್ಚದಡಿ ವಿವಿಧ ಕಾಮಗಾರಿಗೆ ತಾಪಂ ಸದಸ್ಯೆ ರಾಧಮ್ಮ ಚಾಲನೆ ನೀಡಿದರು. ತಾಪಂ ಅನುದಾನದ 2.10 ಲಕ್ಷ ರೂ. ವೆಚ್ಚದಲ್ಲಿ ಗುಳ್ಳೇಗೌಡರ ಮನೆಯಿಂದ ಜವರಪ್ಪ ಮನೆಯವರೆಗಿನ 50 ಮೀ.ಮೀ. ಉದ್ದ ಕಾಂಕ್ರಿಟ್ ರಸ್ತೆ ಅಭಿವೃದ್ದಿ, 2.10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಓವರೆಡ್ ಟ್ಯಾಂಕ್‍ನಿಂದ ಸುಮಾರು 712 ಮೀ.ಮೀ. ಉದ್ದದ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ, ಸುಮಾರು 52 ಸಾವಿರ ವೆಚ್ಚದಡಿ ಅಂಗನವಾಡಿ ಕಟ್ಟಡ ದುರಸ್ತಿ…

ಹುಲಿಕೆರೆ ಗ್ರಾಪಂ ಅವಿಶ್ವಾಸ ನಿರ್ಣಯ ಸಭೆ ರದ್ದು
ಮಂಡ್ಯ

ಹುಲಿಕೆರೆ ಗ್ರಾಪಂ ಅವಿಶ್ವಾಸ ನಿರ್ಣಯ ಸಭೆ ರದ್ದು

December 12, 2019

ಶ್ರೀರಂಗಪಟ್ಟಣ, ಡಿ.11(ವಿನಯ್ ಕಾರೇಕುರ)- ತಾಲೂಕಿನ ಹುಲಿಕೆರೆ ಗ್ರಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯು ಕೋರಂ ಕೊರತೆಯಿಂದ ರದ್ದುಪಡಿಸಲಾಯಿತು. ಹುಲಿಕೆರೆ ಗ್ರಾಪಂ ಅಧ್ಯಕ್ಷ ಸಿದ್ದರಾಜು ವಿರುದ್ಧ 12 ಜನ ಗ್ರಾಪಂ ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿ, ಪಾಂಡವಪುರ ಉಪವಿಭಾಗಾಧಿ ಕಾರಿ ಶೈಲಾಜ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವಿಶ್ವಾಸ ನಿರ್ಣಯ ಸಭೆಯನ್ನು ಕರೆಯಲಾಗಿತ್ತು. ಆದರೆ, ಸಭೆಗೆ 10 ಸದಸ್ಯರು ಗೈರಾದ ಕಾರಣ ಸಭೆಯನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ರದ್ದುಪಡಿಸಿದರು. ಇದರಿಂದ ಜೆಡಿಎಸ್ ಬೆಂಬ…

ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಮಂಡ್ಯ

ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

December 12, 2019

ಭಾರತೀನಗರ, ಡಿ.11(ಅ.ಸತೀಶ್)- ಹನುಮ ಜಯಂತಿ ಅಂಗವಾಗಿ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಾಳೆಮಂಡಿಯ ಸಮೀಪದ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಬೆಳಗಿನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ ಗಳನ್ನು ನಡೆಸಲಾಯಿತು. ಬಳಿಕ ಶ್ರೀರಾಮತಾರಕ ಹೋಮ ಸೇರಿದಂತೆ ಹಲವು ಧಾರ್ಮಿಕ ಪೂಜಾ ವಿಧಿ ವಿಧಾನ ನಡೆಸಲಾಯಿತು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಜೊತೆಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಮುಖಂಡರಾದ ಅನಿಲ್, ಮನೋಜ್, ಗಿರೀಶ್, ನಾರಾಯಣ, ಮಹೇಶ್, ಕಿರಣ್, ಕಾರ್ತಿಕ್, ಪ್ರದೀಪ್, ಬಸವ, ಅನಿ ಸೇರಿದಂತೆ…

ಉತ್ತಮ ಸಮಾಜಕ್ಕೆ ಪೂರ್ಣ ಸಂವಿಧಾನ ಜಾರಿ ಅಗತ್ಯ: ನಳಂದ ಬುದ್ಧ ವಿಹಾರದ ಬಂತೆ ಬೋಧಿದತ್ತ ಅಭಿಪ್ರಾಯ
ಮಂಡ್ಯ

ಉತ್ತಮ ಸಮಾಜಕ್ಕೆ ಪೂರ್ಣ ಸಂವಿಧಾನ ಜಾರಿ ಅಗತ್ಯ: ನಳಂದ ಬುದ್ಧ ವಿಹಾರದ ಬಂತೆ ಬೋಧಿದತ್ತ ಅಭಿಪ್ರಾಯ

December 11, 2019

ಮಂಡ್ಯ, ಡಿ.10(ನಾಗಯ್ಯ)- ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿ ಧಾನ ಸಂಪೂರ್ಣವಾಗಿ ಜಾರಿಯಾದರೆ ಪೆÇಲೀಸ್ ಠಾಣೆ ಹಾಗೂ ನ್ಯಾಯಾಲಯ ಗಳ ಅವಶ್ಯಕತೆಯೇ ಇರುವುದಿಲ್ಲ ಎಂದು ಚಾಮರಾಜನಗರ ನಳಂದ ಬುದ್ಧ ವಿಹಾ ರದ ಬಂತೆ ಬೋಧಿದತ್ತ ಅಭಿಪ್ರಾಯಪಟ್ಟರು. ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್-4 ಕರ್ನಾಟಕ) ಜಿಲ್ಲಾ ಸಮಿತಿ ವತಿಯಿಂದ ಡಾ.ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಡಾ. ಅಂಬೇಡ್ಕರ್ ಸಿದ್ಧಾಂತ ಮತ್ತು ಭಾರತ ಸಂವಿಧಾನಕ್ಕೆ ಗೌರವಾರ್ಪಣೆ ಕಾರ್ಯಕ್ರಮದ…

ಹೊಳಲಿನಲ್ಲಿ ಹನುಮ ಜಯಂತಿ
ಮಂಡ್ಯ

ಹೊಳಲಿನಲ್ಲಿ ಹನುಮ ಜಯಂತಿ

December 11, 2019

ಮಂಡ್ಯ, ಡಿ.10(ನಾಗಯ್ಯ)- ತಾಲೂಕಿನ ಹೊಳಲು ಗ್ರಾಮದ ಶ್ರೀಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ 17ನೇ ವರ್ಷದ ಹನುಮ ಜಯಂತಿ ಪ್ರಯಕ್ತ ದೇವರಿಗೆ ವಿಶೇಷ ಕಾರ್ಯಕ್ರಮ ನಡೆದವು. ಮುಂಜಾನೆಯಿಂದಲೇ ದೇವರಿಗೆ ಹೋಮ, ಹವನ, ಶ್ರೀರಾಮ ತಾರಕ ಹೋಮ, ಅಭಿಷೇಕ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಲಾ ಯಿತು. ಸಂಜೆ 6.30ಕ್ಕೆ ಆಂಜನೇಯ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕಾರ ಮಾಡಿ, ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ತಮಟೆ, ನಗಾರಿ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ…

1 39 40 41 42 43 108
Translate »