ಮಂಡ್ಯ, ಆ.23(ಮೋಹನ್ರಾಜ್)- ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ಆ.25ರಂದು ಮಂಡ್ಯ ನಗರದಲ್ಲಿ ಜರುಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ದೆಹಲಿ ಉಸ್ತುವಾರಿ ಹಾಗೂ ಸಂಸದ ದುಶ್ಯಂತ್ ಕುಮಾರ್ ಗೌತಮ್ ಸೇರಿದಂತೆ 80 ಮಂದಿ ಪ್ರಮುಖ ಪದಾಧಿಕಾರಿಗಳು ಭಾಗ ವಹಿಸಲಿದ್ದು, ಸಭೆ ನಗರದ ಸುಮಾ- ರವಿ ಹಾಲ್ನಲ್ಲಿ ಜರುಗಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೀ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ…
ಶಾಲೆ ಆರಂಭ: ಮಕ್ಕಳಿಗೆ ಧೈರ್ಯ ತುಂಬಿದ ಸಚಿವ ನಾರಾಯಣಗೌಡ
August 24, 2021ಮಂಡ್ಯ, ಆ.23(ಮೋಹನ್ರಾಜ್)- ಇಂದಿನಿಂದ ಶಾಲೆಗಳು ಪ್ರಾರಂಭವಾಗುತ್ತಿ ರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳ ಗಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಧೈರ್ಯ ತುಂಬಿದ್ದಾರೆ. ಸೋಮವಾರ ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳಿಗೆ ಮಾಸ್ಕ್, ಸಾನಿಟೈಸರ್ ಹಾಗೂ ಚಾಕಲೇಟ್ ನೀಡಿ ಸಿಹಿ ಹಂಚುವ ಮೂಲಕ ಶುಭ ಹಾರೈಸಿ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ 1 ನೇ ಅಲೆ ಹಾಗೂ 2ನೇ ಅಲೆ ನಂತರ ಅಗಸ್ಟ್ 23 ರಿಂದ…
ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪನೆಗೆ ಸಹಕಾರ
August 23, 2021ಕೆ.ಆರ್.ಪೇಟೆ, ಆ.22- ಕೆ.ಆರ್.ಪೇಟೆ ಪಟ್ಟಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣರ ಪುತ್ಥಳಿ ಸ್ಥಾಪನೆಗೆ ಸಹಕರಿಸುವುದಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಹೇಳಿದರು. ಮಂಡ್ಯ ಜಿಲ್ಲಾ ಕುರುಬರ ಸಂಘದ ಆಶ್ರಯದಲ್ಲಿ ಪಟ್ಟಣದಲ್ಲಿ ಭಾನುವಾರ ನಡೆದ ತಾಲೂಕು ಕುರುಬರ ಸಂಘದ ಪುನರ್ರಚನೆ ಹಾಗೂ ಸಂಘಟನೆ ಸಂಬಂಧಿತ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣರ ಪುತ್ಥಳಿ ಅನಾವರಣಗೊಳ್ಳಬೇಕಿದೆ. ಇದಕ್ಕೆ ಅಗತ್ಯವಾದ ಸೌಲಭ್ಯ ಹಾಗೂ ನೆರವನ್ನು ಕೇಂದ್ರ ಸಂಘ ಹಾಗೂ ಸರ್ಕಾರ ದಿಂದ…
ಕೆ.ಆರ್.ಪೇಟೆಯಲ್ಲಿ ಮಳೆ; ಅಂಗಡಿಗಳಿಗೆ ನುಗ್ಗಿದ ನೀರು
August 23, 2021ಕೆ.ಆರ್.ಪೇಟೆ, ಆ.22(ಶ್ರೀನಿವಾಸ್)- ಪಟ್ಟಣದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಇರುವ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು, ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ ಸಾಮಗ್ರಿಗಳು ನಷ್ಟವಾಗಿದೆ. ಪಟ್ಟಣದ ಬಸ್ ನಿಲ್ದಾಣ ಎದುರಿನ ಮುಖ್ಯ ರಸ್ತೆಯಲ್ಲಿರುವ 10 ಕ್ಕೂ ಹೆಚ್ಚು ಬಟ್ಟೆ ಅಂಗಡಿ, ದಿನಸಿ ಅಂಗಡಿ ಹಾಗೂ ಮೊಬೈಲ್ ಅಂಗಡಿಗಳಿಗೆ ನೀರು ನುಗ್ಗಿದರಿಂದ 50 ಲಕ್ಷಕ್ಕೂ ಹೆಚ್ಚು ನಷ್ಟ ಆಗಿದೆ. ಮಹಾಲಕ್ಷ್ಮಿ ಬಟ್ಟೆ ಅಂಗಡಿಯ ನಾರಾಯಣ್ ಮತ್ತು ಮಹೇಂದ್ರ ಪಟೇಲ್ ಅವರಿಗೆ…
ಕವಲುದಾರಿಯ ರಾಜಕಾರಣದಿಂದ ಸಂವಿಧಾನಕ್ಕೆ ಅಪಾಯ
August 23, 2021ಮಂಡ್ಯ, ಆ.22(ಮೋಹನ್ರಾಜ್)- ಭಾರತದ ಪ್ರಸ್ತುತ ರಾಜಕಾರಣ ಕವಲು ದಾರಿಯಲ್ಲಿದ್ದು, ಸಂವಿ ಧಾನ ಅಪಾಯಕ್ಕೆ ಸಿಲುಕಿದೆ. ಸಂವಿಧಾನದ ರಕ್ಷಣೆ ಯೊಂದಿಗೆ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ಮನಸ್ಸು ಮಾಡದಿದ್ದರೆ ಜಾತಿವಾದ-ಕೋಮುವಾದ ನಮ್ಮನ್ನು ಮೂಲೆಗುಂಪು ಮಾಡಲಿವೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನು ವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಜನ್ಮ ದಿನೋತ್ಸವ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಂವಿಧಾನಿಕ…
ಕೆಆರ್ಎಸ್ ಹಿನ್ನೀರಲ್ಲಿ ಯಶಸ್ವಿಯಾಗಿ ನಡೆದ ಜಲಸಾಹಸಿ ನೌಕಾ ಕ್ರೀಡೆ
August 22, 2021ಶ್ರೀರಂಗಪಟ್ಟಣ, ಆ. 21(ವಿನಯ್ ಕಾರೇಕುರ)- ಕರ್ನಾಟಕ ಸ್ಟೇಟ್ ಸೈಯ್ಲಿಂಗ್ ಅಸೋಸಿಯೇಷನ್ (ಕೆಎಸ್ ಎಸ್ಎ) ಮತ್ತು ಮೈಸೂರು ಸೈಯ್ಲಿಂಗ್ ರೆಗಟ್ಟ (ಆರ್ಎಂಎಸ್ಸಿ) ಆಶ್ರಯ ದಲ್ಲಿ ಮೈಸೂರು ತಾಲೂಕು ಉಂಡು ವಾಡಿ ಗ್ರಾಮದ ಬಳಿ ಕೆಆರ್ಎಸ್ ಹಿನ್ನೀರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಜಲ ಸಾಹಸ ನೌಕಾ ಕ್ರೀಡೆ ಶನಿವಾರ ಕೆಲ ಗೊಂದಲಗಳ ನಡು ವೆಯೂ ಯಶಸ್ವಿಯಾಗಿ ನಡೆಯಿತು. ಈ ಕ್ರೀಡೆಗಾಗಿ ಮೈಸೂರು ಎನ್ಸಿಸಿ ಯಿಂದ 20 ಸ್ಪರ್ಧಿಗಳು ಸೇರಿದಂತೆ ಭೋಪಾಲ್, ಮುಂಬೈ, ಚೆನ್ನೈ, ಕೇರಳ ಮತ್ತು ಪಾಂಡಿಚೇರಿಯಿಂದ ಆಗಮಿ ಸಿದ್ದ…
ಪಾರದರ್ಶಕತೆ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ
August 22, 2021ಮಂಡ್ಯ, ಆ.21(ಮೋಹನ್ರಾಜ್)- ಕಾಮಗಾರಿಗಳ ಅನುಷ್ಠಾನ, ಸಾಮಗ್ರಿ ಖರೀದಿ, ಫಲಾನುಭವಿಗಳ ಆಯ್ಕೆ ಸೇರಿದಂತೆ ಇನ್ನಿತರ ಕಾರ್ಯ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆವಾಗಿ ಕಾರ್ಯ ನಿರ್ವಹಿಸುವಂತೆ ಜಿಪಂ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಡಾ.ವಿ.ರಾಮ್ಪ್ರಸಾತ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ 2021-22ನೇ ಜಿಪಂ ಲಿಂಕ್ ಡಾಕ್ಯುಮೆಂಟ್ ಕ್ರಿಯಾ ಯೋಜನೆ ಹಾಗೂ ಇನ್ನಿತರ ಅನುದಾನ ಕ್ರಿಯಾ ಯೋಜನೆಗಳ ಅನುಮೋದನೆ ಬಗ್ಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇಲಾಖಾವಾರು ಮಂಜೂರಾಗಿ…
ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ಗೆ ಚಾಲನೆ
August 22, 2021ಪಾಂಡವಪುರ, ಆ.21-ಪಟ್ಟಣದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆ ಆವರಣಲ್ಲಿ `ಹೊಂಬಾಳೆ ಫಿಲಂಸ್’ನಿಂದ ನಿರ್ಮಿಸಿರುವ ನೂತನ ಆಮ್ಲಜನಕ ಉತ್ಪಾದಕ ಘಟಕಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದಲ್ಲಿ ಸೋಂಕಿತರಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಸಲು ಆಮ್ಲಜನಕ ಉತ್ಪಾದಕ ಘಟಕ ಸ್ಥಾಪಿಸಿ, ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರು 90 ಲಕ್ಷ ರೂ.ನಲ್ಲಿ ಉಚಿತವಾಗಿ ಆಮ್ಲಜನಕ ಉತ್ಪಾದಕ ಘಟಕ ನಿರ್ಮಿಸಿಕೊಟ್ಟಿದ್ದು, ವಿಜಯ್ ಕಿರಗಂ ದೂರು ಅವರಿಗೆ ತಾಲೂಕಿನ ಜನತೆ…
ಶಾಲೆಗಳ ಆರಂಭದ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
August 22, 2021ಮಂಡ್ಯ, ಆ.21(ಮೋಹನ್ರಾಜ್)- ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗ ದಂತೆ ವಿಶೇಷ ಕಾಳಜಿ ವಹಿಸಿ ಅಗತ್ಯ ಸಿದ್ಧೆತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 9 ಹಾಗೂ 10 ಭೌತಿಕ ತರಗತಿಗಳು ಆರಂಭ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಪೂರ್ವ ಸಿದ್ಧತಾ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ…
ರಸ್ತೆ ದುರಸ್ತಿಗೆ ಆಗ್ರಹಿಸಿ ಪಾಂಡವಪುರದಲ್ಲಿ ಪ್ರತಿಭಟನೆ
August 21, 2021ಪಾಂಡವಪುರ, ಆ.20- ಇಲ್ಲಿನ ಪುರಸಭೆ ವ್ಯಾಪ್ತಿಯ ಕಾಮನ ಚೌಕ ಹಾಗೂ ಬೀರಶೆಟ್ಟಹಳ್ಳಿ ಸಂಪರ್ಕ ರಸ್ತೆ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಎತ್ತಿನಗಾಡಿ ಅಡ್ಡ ನಿಲ್ಲಿಸಿ ಪ್ರತಿಭಟಿಸಿದರು. ಪಾಂಡವಪುರ ಟೌನ್ ಕಾಮನಚೌಕದಲ್ಲಿ ಬಿಜೆಪಿ ಮುಖಂಡ, ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಜಮಾಯಿಸಿ, ಹದಗೆಟ್ಟಿರುವ ರಸ್ತೆಯಲ್ಲಿ ಜೋಡೆತ್ತು ಹಾಗೂ ಎತ್ತಿನಗಾಡಿಯನ್ನು ನಿಲ್ಲಿಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾಂಡವಪುರ ಪಟ್ಟಣದ ಕಾಮನಚೌಕದಿಂದ ಬೀರಶೆಟ್ಟಹಳ್ಳಿ ಬಡಾವಣೆಗೆ ತೆರಳಲು ತುಂಬಾ…