ಮೈಸೂರು

ಯೋಗವನ್ನು ಧಾರ್ಮಿಕ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ
ಮೈಸೂರು

ಯೋಗವನ್ನು ಧಾರ್ಮಿಕ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ

February 13, 2019

ಮೈಸೂರು: ಬೌದ್ಧಿಕ ಸಾಮಥ್ರ್ಯ ವೃದ್ಧಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಉನ್ನತ ಬದಲಾ ವಣೆ ತರುವಲ್ಲಿ ಯೋಗ ಒಂದು ಚಮತ್ಕಾರವೇ ಸರಿ. ಇಂತಹ ಮಹತ್ವದ ಯೋಗವನ್ನು ಧರ್ಮದ ಚೌಕಟ್ಟಿನೊಳಗೆ ನೋಡುವುದು ಸರಿಯಲ್ಲ ಎಂದು ಮೈಸೂರಿನ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಅಭಿಪ್ರಾಯಪಟ್ಟರು. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ಸಭಾಂ ಗಣದಲ್ಲಿ ಸಂಸ್ಥೆಯ ವಿಶೇಷ ಶಿಕ್ಷಣ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಸೋಷಿ ಯಲ್ ಸೈನ್ಸ್, ರಿಹ್ಯಾಬಿಲಿಟೆಷನ್ ಕೌನ್ಸಿಲ್ ಆಫ್…

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಲಾರಿ
ಮೈಸೂರು

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಲಾರಿ

February 13, 2019

ಮೈಸೂರು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮೈಸೂರಿನ ಕೆ.ಆರ್.ಸರ್ಕಲ್‍ನಲ್ಲಿ ಉರುಳಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಕಡೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿದ ಲಾರಿ(ಕೆಎಲ್40-ಕ್ಯೂ5584) ಕೆ.ಆರ್.ಸರ್ಕಲ್‍ನಲ್ಲಿ ಮುಂಜಾನೆ ಉರುಳಿ ಬಿದ್ದಿದೆ ಎಂದು ದೇವರಾಜ ಸಂಚಾರ ಪೊಲೀಸರು ತಿಳಿಸಿದರು. ಟಯರ್‍ಗಳನ್ನು ತುಂಬಿದ್ದ ಲಾರಿ, ಡಿ.ದೇವರಾಜ ಅರಸು ರಸ್ತೆಗೆ ತಿರುಗುವಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಸೂರಜ್…

ಮೇದರ ಸಮುದಾಯದ ಕುಲದೇವತೆ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ
ಮೈಸೂರು

ಮೇದರ ಸಮುದಾಯದ ಕುಲದೇವತೆ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ

February 13, 2019

ಮೈಸೂರು: ಮೈಸೂರಿನ ಧನ್ವಂತರಿ ರಸ್ತೆಯಲ್ಲಿನ ಮೇದರ ಸಮುದಾಯದ ಕುಲದೇವತೆ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರೆ ಮಹೋತ್ಸವ ವೈಭವಯುತವಾಗಿ ಮಂಗಳವಾರ ಸಂಜೆ ನೆರವೇರಿತು. ಮೈಸೂರು ನಗರ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘವು ಅಖಿಲ ಕರ್ನಾಟಕ ಶ್ರೀ ಗುರು ಮೇದರ ಕೇತೇಶ್ವರ ಟ್ರಸ್ಟ್, ಅಖಿಲ ಕರ್ನಾಟಕ ಮೇದ ಗಿರಿಜನಾಂಗದ ಕಲ್ಯಾಣ ಸೇವಾ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುತ್ತೂರು ಮಠದ ಕಿರಿಯ ಶ್ರೀಗಳಾದ ಜಯರಾಜೇಂದ್ರ ಸ್ವಾಮೀಜಿಯವರು ಚಾಲನೆ ನೀಡಿದರು. ಫೆ.10ರಿಂದ ಫೆ.15ರವರೆಗೆ…

ಸೇವೆಯೇ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸುತ್ತದೆ
ಮೈಸೂರು

ಸೇವೆಯೇ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸುತ್ತದೆ

February 13, 2019

ಮೈಸೂರು: ನಾನು ಅಧಿಕಾರದಲ್ಲಿದ್ದಾಗ ಆದಂತಹ ಕೆಲಸ ಗಳನ್ನು ನಾನು ಮಾಡಿದ್ದು ಎಂದು ನಾನೇ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಮಾಡಿದ ಸಮಾಜಸೇವೆ ಮಾತ್ರ ನಮ್ಮನ್ನು ಹಾಗೂ ನಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ ಎಂದು ಮಾಜಿ ಶಾಸಕ ವಾಸು ಅಭಿಪ್ರಾಯಪಟ್ಟರು. ಮೈಸೂರಿನ ಕೆ.ಆರ್.ಆಸ್ಪತ್ರೆ ರಸ್ತೆಯಲ್ಲಿ ರುವ ಶ್ರೀ ರಾಮಂದಿರದಲ್ಲಿ ಕಟ್ಟೆಮನೆ ಒಕ್ಕಲಿಗ ಶ್ರೀ ರಾಮಮಂದಿರದ ವತಿಯಿಂದ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಮೈಸೂರಿನ ದೊಡ್ಡ ಆಸ್ಪತ್ರೆಗೆ ತಕ್ಕಂತೆ ಜಿಲ್ಲಾ ಮಟ್ಟದ ಆಸ್ಪತ್ರೆ, ಜಯ ದೇವ ಆಸ್ಪತ್ರೆ, ಮಹಾರಾಣಿ ಕಾಲೇಜು…

ಫೆ.15ರಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ರುಚಿಕರ ಖಾದ್ಯ ಸವಿಯುವ ಅವಕಾಶ
ಮೈಸೂರು

ಫೆ.15ರಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ರುಚಿಕರ ಖಾದ್ಯ ಸವಿಯುವ ಅವಕಾಶ

February 13, 2019

ಮೈಸೂರು:ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಆಯೋಜಿಸಿರುವ ಕರಕುಶಲ ವಸ್ತು ಪ್ರದರ್ಶನದಲ್ಲಿ ಫೆ.15 ರಿಂದ 3 ದಿನ ಉತ್ತರ-ದಕ್ಷಿಣ ಭಾರತದ ಬಗೆ-ಬಗೆಯ ರುಚಿಕರ ಖಾದ್ಯಗಳನ್ನು ಸವಿಯಲು ಅವಕಾಶವಿದೆ. ಜೆಎಸ್‍ಎಸ್ ಅರ್ಬನ್ ಹಾತ್, ಜವಳಿ ಮಂತ್ರಾಲಯ(ಕರಕುಶಲ ಇಲಾಖೆ) ಸಹಯೋಗದ `ಕರಕುಶಲ ವಸ್ತು ಪ್ರದ ರ್ಶನ’ ಫೆ.8ರಂದೇ ಆರಂಭಗೊಂಡಿದ್ದು, 17ರಂದು ಕೊನೆಗೊಳ್ಳಲಿದೆ. ಕರಕುಶಲ ವಸ್ತುಗಳನ್ನು ಖರೀದಿಸಲು ಬರುವ ಗ್ರಾಹಕರಿಗೆ ಬಗೆ ಬಗೆಯ ಖಾದ್ಯ ಗಳನ್ನು ಊಣಬಡಿಸಲು ಆಹಾರ ಮೇಳ ವನ್ನು ಆಯೋಜಿಸಿದ್ದು, ಬಗೆ-ಬಗೆಯ ದೋಸೆಗಳು, ದಕ್ಷಿಣ ಭಾರತದ ತಿಂಡಿ…

ಜಾತಿ ಜಯಂತಿಗಳಾಗುತ್ತಿವೆ ಮಹಾತ್ಮರ ಜಯಂತಿಗಳು
ಮೈಸೂರು

ಜಾತಿ ಜಯಂತಿಗಳಾಗುತ್ತಿವೆ ಮಹಾತ್ಮರ ಜಯಂತಿಗಳು

February 13, 2019

ಮೈಸೂರು: ಮಹಾ ತ್ಮರ ಜಯಂತಿಗಳು ಇಂದು ಮಾನ ವೀಯ ಜಯಂತಿಗಳಾಗದೇ ಜಾತಿ ಜಯಂತಿಗಳಾಗುತ್ತಿವೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಸಮಿತಿ ಜಂಟಿಯಾಗಿ ಮಂಗಳವಾರ ಮೈಸೂರಿನ ಕಲಾಮಂದಿರ ದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಮಹನೀಯರ ಜಯಂತಿಗಳು ಜಾತಿ ಜಯಂತಿಗಳಾದರೆ ಮುಂದಿನ ದಿನ ಗಳಲ್ಲಿ ಇದು ಅಪಾಯಕಾರಿ ಎಂದರು. ಸವಿತಾ…

ಇಂದಿನಿಂದ ಭಾರತ ‘ಎ’, ಇಂಗ್ಲೆಂಡ್ ಲಯನ್ಸ್ ಟೆಸ್ಟ್ ಪಂದ್ಯ
ಮೈಸೂರು

ಇಂದಿನಿಂದ ಭಾರತ ‘ಎ’, ಇಂಗ್ಲೆಂಡ್ ಲಯನ್ಸ್ ಟೆಸ್ಟ್ ಪಂದ್ಯ

February 13, 2019

ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಫೆ.13ರಿಂದ 16ರವರೆಗೆ ಭಾರತ `ಎ’ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಿನ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಭಾರತ ‘ಎ’ ತಂಡದ ಆಟಗಾರ ಪ್ರಿಯಾಂಕ್ ಪಾಂಚಾಲ್ ತಿಳಿಸಿದರು. ಮಾನಸಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆವು. ಅದೇ ಪ್ರದರ್ಶನವನ್ನು ಇಲ್ಲೂ ಮುಂದುವರಿಸುವ ವಿಶ್ವಾಸವಿದೆ ಎಂದು ಭಾರತ ತಂಡದ ಆಟಗಾರ ಪ್ರಿಯಾಂಕ್ ಪಾಂಚಾಲ್ ಹೇಳಿದರು. ಕೇರಳದ…

ಫೇಸ್‍ಬುಕ್ ಖಾತೆ ತೆರೆದ ಮೈಸೂರು  ನಗರ ಸಂಚಾರ ಪೊಲೀಸರು
ಮೈಸೂರು

ಫೇಸ್‍ಬುಕ್ ಖಾತೆ ತೆರೆದ ಮೈಸೂರು ನಗರ ಸಂಚಾರ ಪೊಲೀಸರು

February 13, 2019

ಮೈಸೂರು: ಮೈಸೂರು ನಗರ ಸಂಚಾರ ಪೊಲೀಸ್ ವಿಭಾಗವೂ ಈಗ ಪ್ರತ್ಯೇಕವಾಗಿ ಫೇಸ್ ಬುಕ್ ಖಾತೆ ತೆರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ನಗರ ಪೊಲೀಸ್ ವತಿಯಿಂದ ಪ್ರಾರಂ ಭಿಸುವ ನೂತನ ಮತ್ತು ವಿಶೇಷ ಜನ ಸ್ನೇಹಿ ಕಾರ್ಯಕ್ರಮಗಳನ್ನು ಸಾರ್ವಜನಿ ಕರಿಗೆ ತಿಳಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು 2011ರಲ್ಲೇ `Mysore City Police’ ಹೆಸರಿನಲ್ಲಿ ಫೇಸ್‍ಬುಕ್ ಅಕೌಂಟ್ ಆರಂಭಿಸಲಾಗಿತ್ತು. ಆದರೆ, ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿ ಕರಲ್ಲಿ ಅರಿವು ಮೂಡಿಸುವ ಹಾಗೂ…

ಬಾಲಕಿ ಸೇರಿ ಮೂವರು ನಾಪತ್ತೆ
ಮೈಸೂರು

ಬಾಲಕಿ ಸೇರಿ ಮೂವರು ನಾಪತ್ತೆ

February 13, 2019

ಮೈಸೂರು: ಬಾಲಕಿ ಸೇರಿದಂತೆ ಮೂವರು ನಾಪತ್ತೆಯಾಗಿರುವ ಬಗ್ಗೆ ಮೈಸೂ ರಿನ ನಜರ್‍ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿ ರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿದ್ದ 17 ವರ್ಷದ ಅಣ್ಣಮ್ಮ, ಫೆ.9ರಿಂದ ನಾಪತ್ತೆಯಾಗಿದ್ದಾಳೆ. ನಜರ್‍ಬಾದ್ ಪಾಪರಾಂ ರಸ್ತೆ ನಿವಾಸಿ ಕಮಲ(19) ಜ.3ರಂದು ಹಾಗೂ ವಿದ್ಯಾ ನಗರ, 5ನೇ ಕ್ರಾಸ್ ನಿವಾಸಿ ತ್ರಿವೇಣಿ(23) ಕಳೆದ ಜ.30ರಂದು ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ನಜರ್‍ಬಾದ್ ಠಾಣೆ…

ಶಾಸಕರಿಗೆ ಆಮಿಷ ಆರೋಪ: ಯಡಿಯೂರಪ್ಪ ವಿರುದ್ಧ ಎಸಿಬಿಗೆ ಯುವ ಕಾಂಗ್ರೆಸ್ ದೂರು
ಮೈಸೂರು

ಶಾಸಕರಿಗೆ ಆಮಿಷ ಆರೋಪ: ಯಡಿಯೂರಪ್ಪ ವಿರುದ್ಧ ಎಸಿಬಿಗೆ ಯುವ ಕಾಂಗ್ರೆಸ್ ದೂರು

February 13, 2019

ಮೈಸೂರು: ಶಾಸಕರಿಗೆ ಹಣದ ಆಮಿಷವೊಡ್ಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಸಿನ್ ಖಾನ್ ಅವರು ಇಂದು ಮೈಸೂರಿನ ಟಿಪ್ಪು ಸರ್ಕಲ್ ಬಳಿ ಇರುವ ಎಸಿಬಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ ಬಹಿರಂಗವಾಗಿಯೇ ಆಮಿಷವೊಡ್ಡಿದ್ದಾರೆ ಎಂದಿರುವ ಅವರು, ಒಬ್ಬ ಶಾಸಕರಿಗೆ 10 ಕೋಟಿ ರೂ. ಆಫರ್ ನೀಡಿರುವುದರಿಂದ ಇಷ್ಟೊಂದು ಬೃಹತ್ ಮೊತ್ತದ…

1 1,129 1,130 1,131 1,132 1,133 1,611
Translate »