ಮೈಸೂರು: ಪತ್ರ ಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಮೈಸೂರು ಜಿಲ್ಲಾ ನಾಯಕ ಯುವ ಕರ ಸಂಘದ ಕಾರ್ಯಕರ್ತರು ಗುರು ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಪತ್ರಕರ್ತರ ಸ್ವಾತಂತ್ರ್ಯಕ್ಕೆ ಭಂಗ ತರದಿರಿ, ಸಂತೋಷ್ ತಮ್ಮಯ್ಯ ಪ್ರಕರಣ ಕೈಬಿಡಿ ಎಂದು ಪ್ರತಿ ಭಟನಾಕಾರರು ಘೋಷಣೆ ಕೂಗಿದರು. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಹರಣ ನಡೆಯುತ್ತಿದೆ. ಸಂತೋಷ್ ತಮ್ಮ ಯ್ಯರಿಗೆ ನ್ಯಾಯ ಕೊಡಿಸಬೇಕು. ಪ್ರಕರಣ ವನ್ನು ಗೃಹ ಇಲಾಖೆ ಗಂಭೀರವಾಗಿ ಪರಿ ಗಣಿಸಬೇಕು ಎಂದು ಗೃಹ ಸಚಿವರಲ್ಲಿ…
ಕೋಟೆಯಲ್ಲಿ ಇಂದಿನಿಂದ ಮದ್ಯವರ್ಜನ ಶಿಬಿರ
November 16, 2018ಎಚ್.ಡಿ.ಕೋಟೆ: ಪಟ್ಟಣದ ಬೆಳಗನಹಳ್ಳಿ ರಸ್ತೆಯಲ್ಲಿರುವ ಗುರು ಭವನದಲ್ಲಿ 1288ನೇ ಮದ್ಯವರ್ಜನ ಶಿಬಿರ, ನ.16 ರಿಂದ 23 ರವರೆಗೆ ನಡೆ ಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾ ಧಿಕಾರಿ ಎಂ.ಶಶಿಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಾಲೂಕಿನಲ್ಲಿ ನಡೆಯುತ್ತಿರುವ 5 ನೇ ಮದ್ಯವರ್ಜನ ಶಿಬಿರ ಇದಾಗಿದ್ದು, ಶಿಬಿರವನ್ನು ತಹಸಿಲ್ದಾರ್ ಮಂಜುನಾಥ್ ಉದ್ಘಾಟಿಸುವರು. ಮದ್ಯವರ್ಜನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸಿ.ಎನ್. ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೆಶಕ ವಿ.ವಿಜಯಕುಮಾರ್, ತಾಲೂಕು ಪಂಚಾ ಯಿತಿ ಸ್ಥಾಯಿ…
ಮದ್ಯ ತ್ಯಜಿಸಿ, ಸಾಂಸಾರಿಕ ಬದುಕು ಯಶಸ್ವಿಗೊಳಿಸಿ
November 16, 2018ಬೈಲಕುಪ್ಪೆ: ದುಶ್ಚಟಕ್ಕೆ ಬಲಿಯಾದರೆ ನಿಮ್ಮ ಸಂಸಾರ ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಮದ್ಯವಜ್ರ್ಯ ಶಿಬಿರದಲ್ಲಿ ಪಾಲ್ಗೊಂಡು ದುಶ್ಚಟದಿಂದ ಹೊರ ಬನ್ನಿ. ಆಗ ನಿಮ್ಮ ಸಂಸಾರ ಯಶಸ್ವಿಯಾಗಿ ಸಾಗುತ್ತದೆ ಎಂದು ತಾಪಂ ಸದಸ್ಯ ಎ.ಟಿ.ರಂಗಸ್ವಾಮಿ ಕಿವಿಮಾತು ಹೇಳಿದರು. ಪಿರಿಯಾಪಟ್ಟಣ ತಾಲೂಕು ಮಲ್ಲಿನಾಥಪುರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ ವಲಯ ವತಿಯಿಂದ ಆಯೋಜಿಸಲಾಗಿದ್ದ ಮದ್ಯವಜ್ರ್ಯನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮಸ್ಥಳ ಮಂಜುನಾಥ ದೇವರ ಕೃಪೆಯಿಂದ ನೀವುಗಳು ದುಶ್ಚಟಕ್ಕೆ ಮುಕ್ತಿ ಹಾಡುವ ಕಾಲ…
ರೈಲು ಪ್ರಯಾಣಿಕರ ಆಭರಣ ಕಳವು: ಆರೋಪಿ ಸೆರೆ
November 16, 2018ಮೈಸೂರು: ರೈಲಿನಲ್ಲಿ ಪ್ರಯಾಣಿಕರ ಆಭರಣ ಕದ್ದು ತಲೆಮರೆಸಿ ಕೊಂಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದ ಹೆಚ್.ಎಂ.ನಾಗರಾಜ ಬಂಧಿತ ಆರೋಪಿ. ಕೇರಳದ ವೈನಾಡು ಜಿಲ್ಲೆ ಶರ್ಲಿ ಎಂಬುವರು ಅಜ್ಮೀರ್-ಮೈಸೂರು ಎಕ್ಸ್ಪ್ರೆಸ್ ರೈಲಿನ ಎಸ್-3 ಬೋಗಿಯಲ್ಲಿ ಅಕ್ಕನೊಂ ದಿಗೆ ಪ್ರಯಾಣಿಸುತ್ತಿದ್ದಾಗ ನವೆಂಬರ್ 4ರಂದು ಬೆಳಿಗ್ಗೆ 6 ಗಂಟೆ ವೇಳೆಗೆ ವ್ಯಾನಿಟಿ ಬ್ಯಾಗಿನ ಲ್ಲಿದ್ದ 2 ಚಿನ್ನದ ಸರ, 2 ಮೊಬೈಲ್, 2900 ರೂ. ನಗದು ಸೇರಿದಂತೆ 1,33,400 ರೂ. ಮೌಲ್ಯದ ಆಭರಣ ಕಳವಾಗಿತ್ತು. ಪ್ರಕರಣ…
ನ.18ರಂದು ಮೈಸೂರು ಸಾಹಿತ್ಯ ಉತ್ಸವ
November 16, 2018ಮೈಸೂರು: `ಮೈಸೂರು ಸಾಹಿತ್ಯ ಉತ್ಸವ’ವನ್ನು ನ.18ರಂದು ಭಾರ ತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಜಿ ಗವರ್ನರ್ ವೈ.ವಿ.ರೆಡ್ಡಿ ಉದ್ಘಾಟಿಸಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಲಿಟರರಿ ಫೋರಮ್ ಚಾರಿಟೆಬಲ್ ಟ್ರಸ್ಟ್ ಅಧ್ಯ ಕ್ಷರೂ ಆದ ಮೈಸೂರು ಬುಕ್ ಕ್ಲಬ್-2015ರ ಸಂಸ್ಥಾಪಕಿ ಶುಭ ಸಂಜಯ್ ಅರಸ್ ಈ ವಿಷಯ ತಿಳಿಸಿದರು. ಟ್ರಸ್ಟ್ ಹಾಗೂ ಬುಕ್ ಕ್ಲಬ್ ವತಿಯಿಂದ ಸಾಹಿತ್ಯ ಉತ್ಸವವನ್ನು ಆಯೋಜಿಸಲಾಗಿದ್ದು, ಮೈಸೂರು ನಜರ್ಬಾದಿನ ವಿಂಡ್ ಚೈಮ್ಸ್ ಹೋಟೆಲ್ನಲ್ಲಿ ನಡೆಯಲಿರುವ ಉತ್ಸವಕ್ಕೆ ಅಂದು ಬೆಳಿಗ್ಗೆ 9.30ಕ್ಕೆ…
ಸರ್ಕಾರಿ ಜಾಗ ಒತ್ತುವರಿ ಆರೋಪ ಪಾಲಿಕೆಯಿಂದ ನೋಟೀಸ್
November 16, 2018ಮೈಸೂರು: ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕುಂಬಾರಕೊಪ್ಪಲಿನ ಎನ್.ಸ್ವಾಮಿ ಎಂಬುವರಿಗೆ ಜುಲೈ 19ರಂದು ಅಂತಿಮ ನೋಟೀಸ್ ಜಾರಿಗೊಳಿಸಿದ್ದಾರೆ. 2017ರ ಡಿಸೆಂಬರ್ 21ರಂದು ಜಿಲ್ಲಾಧಿಕಾರಿಗಳು ಫೋನ್-ಇನ್ ಕಾರ್ಯಕ್ರಮ ನಡೆಸಿದಾಗ ಕುಂಬಾರಕೊಪ್ಪಲು ಗ್ರಾಮದ ಮಹದೇವು ಎಂಬುವರು ಕರೆ ಮಾಡಿ, ಗ್ರಾಮದ ನಿವೇಶನ ಸಂಖ್ಯೆ 102/ಬಿ ಮಾಲೀಕರಾದ ಎನ್.ಸ್ವಾಮಿ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆಂದು ಆರೋಪಿಸಿದ ಹಿನ್ನೆಲೆಯಲ್ಲಿ ಸರ್ವೆ ನಡೆಸಿ ಅಗತ್ಯ ಕ್ರಮ ವಹಿಸುವಂತೆ ಡಿಸಿ ಅವರು ಸೂಚಿಸಿದ್ದರು….
ದಟ್ಟಗಳ್ಳಿಯಲ್ಲಿ ಅಂಚೆ ಕಚೇರಿ ಆರಂಭ
November 16, 2018ಮೈಸೂರು: ಮೈಸೂರಿನ ದಟ್ಟಗಳ್ಳಿ 6ನೇ ಹಂತ ಎ ಬ್ಲಾಕ್ ಕನಕದಾಸ ನಗರ 6ನೇ ಮೇನ್, 7ನೇ ಕ್ರಾಸ್ನಲ್ಲಿ ಮನೆ ನಂಬರ್ 3030 ಇಲ್ಲಿ ನೂತನ ಅಂಚೆ ಕಚೇರಿಯನ್ನು ತೆರೆಯಲಾಗಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. ಬಟವಾಡೆ ಸೇವೆ ಒಳಗೊಂಡ ಈ ಅಂಚೆ ಕಚೇ ರಿಯ ಪಿನ್ಕೋಡ್ ಸಂಖ್ಯೆ: 570033 ಆಗಿದೆ. ಮೈಸೂರಿನ ನಿವೇದಿತಾ ನಗರ, ಆನಂದ ನಗರ, ರಾಜಾಜಿ ನಗರ, ಜೆ ಬ್ಲಾಕ್, ಆರ್.ಕೆ.ನಗರ, ರಾಜ ರಾಜೇಶ್ವರಿನಗರ, ಎಂ.ಎಂ.ಜಿ. ಲೇಔಟ್, ದೇವಿಪ್ರಸಾದ್…
ಆಯುರ್ವೇದ ಕುರಿತು ಮೈಸೂರಲ್ಲಿ ಜಾಗೃತಿ ಜಾಥಾ
November 16, 2018ಮೈಸೂರು: ಆಯು ರ್ವೇದದ ನಡಿಗೆ ‘ಆರೋಗ್ಯದ ಕಡೆಗೆ’ ಎಂಬ ಜನ ಜಾಗೃತಿ ಜಾಥಾ ಮೈಸೂರಲ್ಲಿ ನಡೆ ಯಿತು. ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜನ ಜಾಗೃತಿ ಜಾಥಾವನ್ನು ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಬಳಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿದರು. ಕಾಲೇಜು ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಪ್ರಾಧ್ಯಾಪಕರಾದ ಡಾ.ರಾಜೇಂದ್ರ, ಡಾ.ಮೈತ್ರಿ, ಡಾ.ಉಮಾಶಂಕರ್, ಡಾ. ಆದರ್ಶ್, ಡಾ.ಸಂಜಯ್, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ರೈಲು ನಿಲ್ದಾಣ…
ಕೆಆರ್ಎಸ್ ಉದ್ಯಾನವನ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೆ ಸರ್ಕಾರ ನಿರ್ಧಾರ
November 15, 2018ಬೆಂಗಳೂರು: ವಿಶ್ವ ವಿಖ್ಯಾತ ಕೆಆರ್ಎಸ್ ಉದ್ಯಾನವನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಯೋಜನೆ ಸಿದ್ಧಪಡಿಸಿದೆ. 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ, ಗೋಪುರ ಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟ್ಯಾಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವ ಕುಮಾರ್ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ…
ಜನಾರ್ದನ ರೆಡ್ಡಿಗೆ ಜಾಮೀನು: ಜೈಲಿನಿಂದ ಬಿಡುಗಡೆ
November 15, 2018ಬೆಂಗಳೂರು: ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಡೀಲ್ನಲ್ಲಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಒಂದನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಐದು ದಿನಗಳ ಜೈಲು ವಾಸದಿಂದ ಇಂದು ಸಂಜೆ ಜನಾರ್ಧನ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರು. ನವೆಂಬರ್ 10 ರಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಅವರು ನವೆಂಬರ್ 24 ರವರೆಗೂ…