ಕೋಟೆಯಲ್ಲಿ ಇಂದಿನಿಂದ ಮದ್ಯವರ್ಜನ ಶಿಬಿರ
ಮೈಸೂರು

ಕೋಟೆಯಲ್ಲಿ ಇಂದಿನಿಂದ ಮದ್ಯವರ್ಜನ ಶಿಬಿರ

November 16, 2018

ಎಚ್.ಡಿ.ಕೋಟೆ:  ಪಟ್ಟಣದ ಬೆಳಗನಹಳ್ಳಿ ರಸ್ತೆಯಲ್ಲಿರುವ ಗುರು ಭವನದಲ್ಲಿ 1288ನೇ ಮದ್ಯವರ್ಜನ ಶಿಬಿರ, ನ.16 ರಿಂದ 23 ರವರೆಗೆ ನಡೆ ಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾ ಧಿಕಾರಿ ಎಂ.ಶಶಿಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನಲ್ಲಿ ನಡೆಯುತ್ತಿರುವ 5 ನೇ ಮದ್ಯವರ್ಜನ ಶಿಬಿರ ಇದಾಗಿದ್ದು, ಶಿಬಿರವನ್ನು ತಹಸಿಲ್ದಾರ್ ಮಂಜುನಾಥ್ ಉದ್ಘಾಟಿಸುವರು. ಮದ್ಯವರ್ಜನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸಿ.ಎನ್. ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೆಶಕ ವಿ.ವಿಜಯಕುಮಾರ್, ತಾಲೂಕು ಪಂಚಾ ಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ. ಗಿರಿಗೌಡ, ವೃತ್ತ ನಿರೀಕ್ಷಕ ಹರೀಶ್ ಕುಮಾರ್, ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರ ಶೇಖರ್, ವಕೀಲ ಎಂ.ಎನ್. ರವಿಶಂಕರ್, ಪುರಸಭೆ ಸದಸ್ಯ ನಾಗರಾಜ್ ಹಾಜ ರಿರುವರು ಎಂದರು.

ಮದ್ಯವರ್ಜನ ವ್ಯವಸ್ಥಾಪಕ ಸಮಿತಿ ಉಪಾಧ್ಯಕ್ಷ ಆರ್.ಡಿ.ವೀರಪ್ಪ, ಗೌರವ ಸಲಹೆಗಾರ ಎಸ್.ಎನ್. ರಂಗೇಗೌಡ, ಸಹ ಕಾರ್ಯದರ್ಶಿ ವಿನಯ್ ಭಜರಂಗಿ, ಜಿಮ್ ಯಶವಂತ್, ಕಸಾಪ ತಾಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್, ರಾಜೇಶ್ ಗೋಷ್ಠಿಯಲ್ಲಿದ್ದರು.

Translate »