ಮೈಸೂರು: ಪರಿಸರ ಸ್ನೇಹಿ ವೈದ್ಯಕೀಯ ತ್ಯಾಜ್ಯದ ಸಶಕ್ತ ನಿರ್ವಹಣೆ ಕುರಿತಂತೆ ಮೈಸೂರಲ್ಲಿ ಇಂದು ವೈದ್ಯರು ಹಾಗೂ ನರ್ಸ್ಗಳು ಜನ ಜಾಗೃತಿ ಜಾಥಾ ನಡೆಸಿದರು. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಯೋಜನೆ ಜಾರಿಗಾಗಿ ತರಬೇತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಸಂಘ-ಸಂಸ್ಥೆಗಳು ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸಲು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಸ್ಪತ್ರೆಗಳಿಂದ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಸರ್ಜನ್…
ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಡಾ.ಆಯಿಷಾ ಎಂ.ಷರೀಫ್ ಅಧಿಕಾರ ಸ್ವೀಕಾರ
September 23, 2018ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 6ನೇ ಹಂಗಾಮಿ ಕುಲಪತಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಆಯಿಷಾ ಎಂ.ಷರೀಫ್ ಅವರು ಇಂದು ಅಧಿಕಾರ ವಹಿಸಿಕೊಂಡರು. ಕ್ರಾಫರ್ಡ್ ಭವನದಲ್ಲಿ ನಿರ್ಗಮಿತ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅವರು ಡಾ.ಆಯಿಷಾ ಎಂ.ಷರೀಫ್ ಅವರಿಗೆ ಅಧಿಕಾರ ವಹಿಸಿಕೊಟ್ಟರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಆಯಿಷಾ ಅವರು, ತಾವು ವಿಶ್ವವಿದ್ಯಾನಿಲಯ ದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಿ ಫಲಿತಾಂಶ ಉತ್ತಮ ಪಡಿಸುವ ಮೂಲಕ ಸಂಸ್ಥೆಯ ಘನತೆ ಎತ್ತಿಹಿಡಿಯುವುದಾಗಿ ತಿಳಿಸಿದರು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು, ಅನ ಧಿಕೃತವಾಗಿ ವಾಸವಿರುವವರನ್ನು…
ವಿಶ್ವದಲ್ಲೇ ಭಾರತ ಬುದ್ಧಿವಂತರ ನಾಡು
September 23, 2018ಮೈಸೂರು: ವಿಶ್ವದ ಲ್ಲಿಯೇ ಅತೀ ಬುದ್ಧಿವಂತರ ನಾಡು ಭಾರತ. ಈ ದೇಶದಲ್ಲಿ ಹುಟ್ಟಿದ ಸರ್ ಎಂ.ವಿಶ್ವೇ ಶ್ವರಯ್ಯ ಶ್ರೇಷ್ಠ ಇಂಜಿನಿಯರ್ ಆಗಿ ವಿಶ್ವದ ಗಮನ ಸೆಳೆದರು ಎಂದು ಶಾಸಕ ಎಸ್.ಎ. ರಾಮದಾಸ್ ಗುಣಗಾನ ಮಾಡಿದರು. ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪ್ರಾಪರ್ಟೀಸ್ ಅಂಡ್ ಕನ್ಸ್ಟ್ರಕ್ಷನ್ಸ್ ಸಂಸ್ಥೆಯ 2ನೇ ಆವೃತ್ತಿಯ ಡೈರಕ್ಟರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್.ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಕೆಆರ್ಎಸ್ ಅಣೆಕಟ್ಟು, ಎಸ್ಬಿಎಂ ಬ್ಯಾಂಕ್, ಮೈಸೂರು ಸ್ಯಾಂಡಲ್ನಂತಹ ಸಂಸ್ಥೆಗಳನ್ನು ಸ್ಥಾಪಿಸಿ ದ್ದಾರೆ…
ಮೈಸೂರು ವಿವಿ ಎನ್ಎಸ್ಎಸ್ ಘಟಕ ಸುವರ್ಣ ಸಂಭ್ರಮಾಚರಣೆ
September 23, 2018ನಾಳೆಯಿಂದ ವರ್ಷವಿಡೀ ವಿವಿಧ ಕಾರ್ಯಕ್ರಮ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) 50ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ `ಸುವರ್ಣ ಸಂಭ್ರಮಾಚರಣೆ’ ಶೀರ್ಷಿಕೆಯಡಿ ವರ್ಷ ಕಾಲ ವಿವಿಧ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ಸೆ.24ರಂದು ನಡೆಯಲಿದೆ ಎಂದು ಮೈಸೂರು ವಿವಿಯ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ಸುವರ್ಣ ಸಂಭ್ರಮಾಚರಣೆ ಉದ್ಘಾಟನೆಯೊಂದಿಗೆ…
ಭಾರತದಲ್ಲಿ ಮಾಧ್ಯಮಗಳ ವ್ಯವಸ್ಥಿತ ಖರೀದಿ ಕಳವಳಕಾರಿ: ಪ್ರಕಾಶ್ ರೈ
September 23, 2018ನವದೆಹಲಿ: ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಇದೆ ಎಂದ ಬಹು ಭಾಷಾನಟ ಪ್ರಕಾಶ್ ರೈ ಅವರು, ದೇಶದಲ್ಲಿ ಮಾಧ್ಯಮಗಳನ್ನು ವ್ಯವ ಸ್ಥಿತವಾಗಿ ಖರೀದಿ ಮಾಡು ತ್ತಿರುವುದು ಕಳವಳಕಾರಿ ವಿಚಾರ ಎಂದು ಶನಿವಾರ ಹೇಳಿದ್ದಾರೆ. ಪತ್ರಕರ್ತರ ಮೇಲಿನ ಹಲ್ಲೆ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, ನಾನು ಅಧಿಕಾರದಲ್ಲಿರು ವವರ ವಿರುದ್ಧ ಮಾತನಾಡಿದಾಗ ಅದನ್ನು ಮಾಧ್ಯಮಗಳು ಪ್ರಕಟಿಸುವುದಿಲ್ಲ ಎಂದರು. ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಖರೀದಿ ಮಾಡುತ್ತಿರುವ ರೀತಿ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ದ್ವೇಷ ಸಾಧಿಸಲು ಸಹ ಜನರನ್ನು…
ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ಕಾನೂನು ಕ್ರಮ: ನಿವೇಶನ ಮಂಜೂರಾತಿದಾರರಿಗೆ ಮುಡಾ ಎಚ್ಚರಿಕೆ
September 23, 2018ಮೈಸೂರು: ಖಾಲಿ ನಿವೇಶನಗಳಲ್ಲಿ ಬೆಳೆದಿ ರುವ ಗಿಡಗಂಟಿ ತೆಗೆದು ಸ್ವಚ್ಛಗೊಳಿಸದಿದ್ದಲ್ಲಿ, ದಂಡ ವಿಧಿಸಿ ಮಂಜೂರಾತಿದಾರರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಎಚ್ಚರಿಕೆ ನೀಡಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಎರಡು ಬಾರಿ ಮೈಸೂರಿಗೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿದೆ ಯಾದ್ದರಿಂದ ನಗರವನ್ನು ಸ್ವಚ್ಛವಾಗಿಡುವುದು ಎಲ್ಲರ ಕರ್ತವ್ಯವಾಗಿದೆ. ಸಿಐಟಿಬಿ ಮತ್ತು ಮುಡಾದಿಂದ ಮಂಜೂರು ಮಾಡಿರುವ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ತ್ಯಾಜ್ಯ ಸಂಗ್ರಹ ವಾಗಿರುವ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ….
ಜಾನಪದದ ಗಂಧ ಗಾಳಿ ಗೊತ್ತಿಲ್ಲದವರಿಂದ ಜಾನಪದ ಸಾಹಿತ್ಯಕ್ಕೆ ಅವಮಾನ
September 23, 2018ಮೈಸೂರು: ಸಂಸ್ಕøತ ಕಲಿತ ಗಾಯಕರು ಸೊಲ್ಲು ಹಾಗೂ ಮೂಲ ಮಟ್ಟುಗಳನ್ನು ಕಡೆಗಣಿಸಿ ಜಾನಪದ ಗೀತೆ ಗಳನ್ನು ಹಾಡುವ ಮೂಲಕ ಜಾನಪದ ವನ್ನೇ ಅಪಮಾನಿಸುತ್ತಿದ್ದಾರೆ ಎಂದು ಜಾನ ಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಆರೋಪಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಜಾನ ಪದ ವಿಭಾಗವು ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣ ದಲ್ಲಿ ಶನಿವಾರ ವಿಶ್ವ ಜಾನಪದ ದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಜಾನಪದ ಗಾಯಕಿ ಭಾಗ್ಯಮ್ಮ ಮತ್ತು ತಂಡದವರ ಬಾಲ ನಾಗಮ್ಮನ ಕಥನಕಾವ್ಯ ಹಾಡುಗಾರಿಕೆ ಕಾರ್ಯಕ್ರಮವನ್ನು ಮೂವರು ಜಾನಪದ ಗಾಯಕಿಯರ…
ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪಟ್ಟಿ ಪ್ರಕಟ
September 23, 2018ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ 2017-18ನೇ ಸಾಲಿನ ಮೈಸೂರು ವಿಭಾಗದೊಳಗಿನ ಅಂತರ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಘಟಕದೊಳಗಿನ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಇಲಾಖೆಯ ವೈಬ್ಸೈಟ್ (www. schooleducation. kar.nic.in) ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಸದರಿ ವರ್ಗಾವಣೆ ಆದ್ಯತಾ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕ ವೃಂದವರು ಆಕ್ಷೇಪಣೆಗೆ ಸಂಬಂಧಿಸಿ ದಂತೆ ಅಗತ್ಯ ದಾಖಲೆಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೇರವಾಗಿ 2018ರ ಸೆ.25ರೊಳಗೆ ಆಕ್ಷೇಪಣೆ ಸಲ್ಲಿಸಬೇಕು….
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಚೇರಿ ಉದ್ಘಾಟನೆ ರದ್ದುಪಡಿಸಲು ಆಗ್ರಹ
September 23, 2018ಮೈಸೂರು: ಮೈಸೂರಿನ ಶ್ರೀನಟರಾಜ ಕಲ್ಯಾಣ ಮಂಟಪದಲ್ಲಿ ನಾಳೆ(ಸೆ.23) ನಡೆಯ ಲಿರುವ ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ವೀರಶೈವ ಲಿಂಗಾಯತ ಜಾಗೃತಿ ವೇದಿಕೆಯ ಮುಖಂಡರಾದ ಟಿ.ಎಸ್. ಲೋಕೇಶ್ ಹಾಗೂ ಹಿರಿಯ ವಕೀಲ ಮಾರ್ಬಳ್ಳಿ ಮೂರ್ತಿ ಒತ್ತಾಯಿಸಿದ್ದಾರೆ. ಜಿಲ್ಲಾ ಬಸವ ಬಳಗಗಳ ಒಕ್ಕೂಟದ ಕಚೇರಿ(ಬಸವೇಶ್ವರ ಪ್ರತಿಮೆ ಬಳಿ)ಯಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ನಿಲ್ಲಿಸ ದಿದ್ದರೆ, ಅದೇ ವೇದಿಕೆ…
ದಸರಾ ಸಾಂಸ್ಕøತಿಕ ಕಾರ್ಯಕ್ರಮ: ಕಲಾವಿದರಿಂದ ಅರ್ಜಿ ಆಹ್ವಾನ
September 23, 2018ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೈಸೂರಿನ ಜಗನ್ಮೋಹನ ಅರಮನೆ, ಪುರಭವನ, ಚಿಕ್ಕ ಗಡಿಯಾರ, ಗಾನಭಾರತಿ, ಕಲಾಮಂದಿರ ಹಾಗೂ ಕಿರು ರಂಗಮಂದಿರಗಳಲ್ಲಿ ಸಂಗೀತ, ನೃತ್ಯ, ನಾಟಕ, ಜಾನಪದ, ಹರಿಕತೆ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಕಲಾವಿದರು ಸ್ವ-ವಿವರವುಳ್ಳ ಅರ್ಜಿಯನ್ನು ಸೆ.28ರೊಳಗೆ ಕಲಾಮಂದಿರದಲ್ಲಿ ರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸ ಬೇಕೆಂದು ದಸರಾ ಸಾಂಸ್ಕøತಿಕ ಉಪಸಮಿತಿ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ….