ಅರಸೀಕೆರೆ: ನಾವು ಆಪರೇಷನ್ ಕಮಲಕ್ಕೆ ಕೈಹಾಕುವು ದಿಲ್ಲ. ಕಾಂಗ್ರೆಸ್ನಲ್ಲಿನ ಗೊಂದಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು. ಅರಸೀಕೆರೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಆರತಕ್ಷತೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ 104 ಶಾಸಕರಿದ್ದೇವೆ. ಪ್ರತಿಪಕ್ಷವಾಗಿ ಒಳ್ಳೆಯ ರೀತಿ ಕೆಲಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ್ದೇವೆ. ಆದರೆ ರಾಜ್ಯ ಸರ್ಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಮನ್ವಯತೆ ಇಲ್ಲ. ಕಾಂಗ್ರೆಸ್ನಲ್ಲಿ ಒಳ ಜಗಳಗಳು ನಡೆಯುತ್ತಿವೆ. ಅದಕ್ಕೂ ನಮಗೂ…
ಸೈಮಾ ಪ್ರಶಸ್ತಿ 2018: ರಾಜಕುಮಾರ ಶ್ರೇಷ್ಠ ಚಿತ್ರ, ಪುನೀತ್, ಶಾನ್ವಿ ಅತ್ಯುತ್ತಮ ನಟ-ನಟಿ
September 17, 2018ದುಬೈ: 2018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ದುಬೈ ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(ಸೈಮಾ ಅವಾರ್ಡ್) ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಪಾಲ್ಗೊಂಡಿದ್ದರು. ಇನ್ನು ಪುನೀತ್ ರಾಜ್ಕುಮಾರ್ ಅಭಿ ನಯದ ಯಶಸ್ವಿ ಚಿತ್ರ ರಾಜಕುಮಾರ ಅತ್ಯುತ್ತಮ ಚಿತ್ರ ಸೇರಿದಂತೆ ಐದು ವಿಭಾಗ ಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ರಾಜಕುಮಾರ ಚಿತ್ರದ ಅಭಿನಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದರೆ, ಶಾನ್ವಿ…
ದಸರಾ ಗಜಪಡೆಗೆ ಮ್ಯಾಗ್ನೆಟ್ ಟ್ರ್ಯಾಲಿಯ ರಕ್ಷಣೆ
September 17, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವಾದ ಆನೆಗಳ ರಕ್ಷಣೆಗೆ ಮ್ಯಾಗ್ನೆಟ್ ಟ್ರ್ಯಾಲಿಯನ್ನು ಮೈಸೂರಿನ ಯುವಕರಿಬ್ಬರು ಉಡುಗೊರೆಯಾಗಿ ನೀಡಿದ್ದು, ಪ್ರತೀ ದಿನ ಆನೆಗಳು ಸಾಗುವ ಮಾರ್ಗದಲ್ಲಿ ಮೊನಚಾದ ಮೊಳೆ ಹಾಗೂ ಕಬ್ಬಿಣದ ಚೂರುಗಳನ್ನು ಟ್ರ್ಯಾಲಿ ಸೆಳೆದುಕೊಳ್ಳುವ ಮೂಲಕ ಆನೆಗಳ ಕಾಲನ್ನು ಕಾಪಾಡುತ್ತದೆ. ವಿವಿಧ ಆನೆಗಳ ಶಿಬಿರದಿಂದ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ 12 ಆನೆಗಳು ಪ್ರತೀ ದಿನ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ 2 ಬಾರಿ ತಾಲೀಮು ನಡೆಸಲಿದ್ದು, ದಾರಿಯುದ್ದಕ್ಕೂ…
ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
September 17, 2018ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 2ರಿಂದ 3ರೂ.ನಷ್ಟು ಇಳಿಕೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾಳೆಯಿಂದ (ಸೆ.17) ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಿದೆ. ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿರುವ ಕುಮಾರಸ್ವಾಮಿ ನಾಳೆಯಿಂದಲೇ ದರ ಇಳಿಸಲು ಸೂಚನೆ ನೀಡಿದ್ದು, ಅಧಿಕೃತ ಆದೇಶವೊಂದೇ ಬಾಕಿ ಇದೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್…
ವಾಣಿಜ್ಯ ಉಪಗ್ರಹ ಪಿಎಸ್ಎಲ್ವಿ 4 ಯಶಸ್ವಿ ಉಡಾವಣೆ
September 17, 2018ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೆಗ್ಗಳಿಕೆಗೆ ಭಾನುವಾರ ಮತ್ತೊಂದು ಗರಿ ಮೂಡಿದೆ. ಇದೇ ಮೊದಲ ಬಾರಿಗೆ ಇಸ್ರೋ ಸಂಪೂರ್ಣ ವಾಣಿಜ್ಯ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಬ್ರಿಟನ್ನ ‘ನೋವಾ ಎಸ್ಎಆರ್’ ಮತ್ತು ‘ಎಸ್1-4′ ಭೂ ಸರ್ವೇಕ್ಷಣೆ ಉಪಗ್ರಹಗಳನ್ನು ಹೊತ್ತ ‘ಪಿಎಸ್ಎಲ್ವಿ-ಸಿ42′ ರಾಕೆಟ್ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ 10.08ಕ್ಕೆ ಸರಿಯಾಗಿ ನಭಕ್ಕೆ ಚಿಮ್ಮಿತು. ಇಸ್ರೋ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. 200 ಕೋಟಿ ಆದಾಯ: ಸಂಪೂರ್ಣ ವಾಣಿಜ್ಯ…
ಭಗವಂತನ ಕೃಪೆಯಿದ್ದರೆ ಮುಖ್ಯಮಂತ್ರಿಯಾಗುತ್ತೇನೆ
September 17, 2018ಕಲಬುರಗಿ, ಸೆ.16-: ಭಗವಂತನ ಕೃಪೆ ಇದ್ದರೆ ಮುಖ್ಯ ಮಂತ್ರಿ ಆಗ್ತೀನಿ, ಅದಕ್ಕೆ ಅವಸರ ಇಲ್ಲ. ನಮ್ಮ ಸರ ಕಾರದ ಬಗ್ಗೆ ಆತಂಕಪಡುವ ಅವ ಶ್ಯಕತೆ ಇಲ್ಲ. ಅರ್ಜೆಂಟ್ನಲ್ಲಿ ಹೋದರೆ ಅಪಘಾತ ಜಾಸ್ತಿ ಆಗುತ್ತದೆ. ಹಾಗಾಗಿ ನಿಧಾನವಾಗಿ ನಮ್ಮ ಸರಕಾರ ಹೋಗು ತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಾಣಗಾಪುರದ ದತ್ತಾ ತ್ರೇಯ ದೇವರಿಗೆ ಪೂಜೆಯ ಬಳಿಕ ಮಾತನಾಡಿದ ಅವರು, ಆಪರೇಷನ್ ಕಮಲದ ಹೆಸರಲ್ಲಿ 15ರಿಂದ 16 ಜನ ಶಾಸಕರು, ಮಾಜಿ ಶಾಸಕರಿಗೆ ಸಂಪರ್ಕ ಮಾಡ್ತಿದ್ದಾರೆ. ಬಿ.ಸಿ.ಪಾಟೀಲ್, ರಹೀಮ್…
ಮೈಸೂರಿಗರ ಗಮನ ಸೆಳೆದ ಮಹಿಳೆಯರ `ಸೀರೆ ನಡಿಗೆ’
September 17, 2018ಮೈಸೂರು: ‘ಆರೋಗ್ಯವಂತ ಮಹಿಳೆ-ಸಂತಸದ ಮನೆ’ ವಿಷಯ ಕುರಿತಂತೆ ಜನಜಾಗೃತಿ ಮೂಡಿಸಲು ಬಣ್ಣ ಬಣ್ಣದ ಸೀರೆ ತೊಟ್ಟಿದ್ದ ನೂರಾರು ಮಹಿಳೆಯರು ಇಂದು ಬೆಳಿಗ್ಗೆ ಮೈಸೂರಿನಲ್ಲಿ ‘ಸೀರೆ ನಡಿಗೆ’ಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಮಹಿಳೆಯರು ಸೀರೆ ತೊಟ್ಟು ನಡೆಯುವ ಸ್ಪರ್ಧೆಯಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಿಗ್ಗೆ 6 ಗಂಟೆಗೆ ಮಹಾರಾಜ ಜೂನಿಯರ್ ಕಾಲೇಜು ಮೈದಾನದ ಜೆ.ಎಲ್ಬಿ ರಸ್ತೆ ಯಲ್ಲಿ ರಾಜಮಾತೆ ಪ್ರಮೋದಾ ದೇವಿ ಹಸಿರು ನಿಶಾನೆ ತೋರಿಸುವ ಮೂಲಕ ಸ್ಪರ್ಧೆಗೆ…
ದಸರೆಯೊಳಗೆ ಜಗನ್ಮೋಹನ ಅರಮನೆ ಪ್ರವಾಸಿಗರ ವೀಕ್ಷಣೆಗೆ ಲಭ್ಯ
September 17, 2018ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ರಾಜಮನೆತನಕ್ಕೆ ಸೇರಿರುವ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯವು ಆಧುನಿಕ ರೂಪ ತಾಳುತ್ತಿದ್ದು, ದಸರೆಯೊಳಗೆ ಸುಸಜ್ಜಿತ ಸಂಗ್ರಹಾಲಯದ ವೀಕ್ಷಣೆಗೆ ಲಭ್ಯವಾಗಲಿದೆ. ನವೀಕರಣಗೊಳ್ಳುತ್ತಿರುವ ಜಗನ್ಮೋಹನ ಅರಮನೆಯ ಕಾಮಗಾರಿಯನ್ನು ಭಾನುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ, ದಸರಾ ಮಹೋತ್ಸವಕ್ಕೂ ಮುನ್ನ ನವೀಕರಣಗೊಂಡ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯವನ್ನು ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ನಮ್ಮದಾಗಿದೆ. ಕಳೆದ ಒಂದು ವರ್ಷದಿಂದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ವಸ್ತು…
ಸುಂಟಿಕೊಪ್ಪ ಶಾಲೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ
September 17, 2018ಸುಂಟಿಕೊಪ್ಪ: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಶಾಲೆಯ ಇಕೋ ಕ್ಲಬ್ ಹಾಗೂ ವಿಜ್ಞಾನ ಸಂಘದ ವತಿಯಿಂದ ಶನಿವಾರ (ಸೆ.15 ರಂದು) ‘ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸ್ವಚ್ಛತಾ ಕಾರ್ಯಕ್ಕೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಶಾಲಾ ವಿದ್ಯಾರ್ಥಿಗಳು, ನಮ್ಮ ಮನೆ, ಶಾಲೆ, ಸಮುದಾಯ ಹಾಗೂ ಸುತ್ತ ಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದಾಗಿ ಸಂಕಲ್ಪ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಪರಿಸರ ಸ್ವಚ್ಛತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ‘ಸ್ವಚ್ಛತೆಯೇ ಸೇವೆ’…
ತೆರೆಮರೆಗೆ ಸರಿಯುತ್ತಿದೆ ಬದುಕಿನ ಜಟಕಾ ಬಂಡಿ
September 17, 2018ಮೈಸೂರು: ಟಕ್.. ಟಕ್..ಟಕ್ ಕುದುರೆ ಹೆಜ್ಜೆ ಸದ್ದಿನೊಂದಿಗೆ ಟಾಂಗಾದಲ್ಲಿ ಕುಳಿತು ಸಂಚರಿಸುವುದು ಒಂದು ವಿಶಿಷ್ಟ ಅನುಭವ. ಮೈಸೂರು ಪರಂಪರೆಯೊಂದಿಗೆ ನಂಟು ಬೆಸೆದುಕೊಂಡಿರುವ ಟಾಂಗಾ, ಆಧುನಿಕ ಪ್ರಪಂಚದ ಆಕರ್ಷಕ ಸಾರಿಗೆ ಎಂದರೆ ತಪ್ಪಾಗಲಾರದು. 1897ರ ವೇಳೆಗೆ ಮೈಸೂರು ಪ್ರವೇಶಿಸಿದ ಟಾಂಗಾ ಗಾಡಿ, ಮೈಸೂರು ಸಂಸ್ಥಾನದಲ್ಲಿ ಪ್ರಮುಖ ಸಾರಿಗೆ ಸೌಲಭ್ಯವಾಗಿತ್ತು. ರಾಜ-ಮಹಾರಾಜರಿಗೂ ಟಾಂಗಾ ಗಾಡಿ ಎಂದರೆ ಅಚ್ಚುಮೆಚ್ಚು. ಸಾಮಾನ್ಯರೂ ಸಂಚಾರಕ್ಕೆ ಟಾಂಗಾ ಗಾಡಿಯನ್ನೇ ಅವಲಂಬಿಸಿದ್ದರು. ಎರಡು ದಶಕಗಳ ಹಿಂದೆಯೂ ಟಾಂಗಾ ಗಾಡಿಗಳ ಸದ್ದು ಜೋರಾಗಿಯೇ ಇತ್ತು. ಆದರೆ ಆಧುನಿಕತೆ ನಡುವೆ…