ಕಲಬುರಗಿ,ಫೆ.18-ತೈಲ ದರಗಳು ಹೆಚ್ಚಾ ಗಿದ್ದರೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾವ ಬಂದಿದೆ. ಆದರೆ, ಕೊರೊನಾ ಹಾವಳಿ ಹಾಗೂ ನೈಸರ್ಗಿಕ ವಿಕೋಪಗಳಿಂ ದಾಗಿ ಸಾಮಾನ್ಯ ಜನರು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ದರಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಿದರೆ ಅವರಿಗೆ ಮತ್ತಷ್ಟು ತೊಂದರೆ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು. ಕಳೆದ ಬಾರಿಯ ಬಜೆಟ್ನಲ್ಲಿ ಸಾರಿಗೆ…
ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಕಾಮಗಾರಿಗೆ ಬಜೆಟ್ನಲ್ಲಿ ಕನಿಷ್ಠ 200 ಕೋಟಿ ಅನುದಾನ ಕಲ್ಪಿಸಿ
February 19, 2021ಮೈಸೂರು,ಫೆ.18(ಪಿಎಂ)- ಮೈಸೂರು ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ನಿಲ್ದಾಣಕ್ಕೆ ಪ್ರಾರಂಭಿಕವಾಗಿ ಈ ಸಾಲಿನ ಬಜೆಟ್ನಲ್ಲಿ ಕನಿಷ್ಠ 200 ಕೋಟಿ ರೂ. ಅನುದಾನ ಕಲ್ಪಿಸುವಂತೆ ಹಾಗೂ ಹುಣಸೂರು ತಾಲೂ ಕಿನ 49 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋ ದನೆ ಜೊತೆಗೆ ಬಜೆಟ್ನಲ್ಲಿ ಅನುದಾನ ವನ್ನೂ ದೊರಕಿಸಿಕೊಡಲು ಕೋರಿ ಸಂಸದ ಪ್ರತಾಪ್ ಸಿಂಹ ಗುರುವಾರ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮೈಸೂರು ನಗರವು ಅತ್ಯಂತ ವೇಗ ವಾಗಿ ಬೆಳೆಯುತ್ತಿದ್ದು, ಸಾರ್ವಜನಿಕರು ಸಂಪರ್ಕಕ್ಕಾಗಿ ರೈಲ್ವೆ…
ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಸೋಂಕು, 23 ಮಂದಿ ಗುಣಮುಖ
February 19, 2021ಮೈಸೂರು, ಫೆ.18(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 23 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 53,834 ಮಂದಿಗೆ ಸೋಂಕು ತಗುಲಿದಂತಾಗಿದೆ. 52,662 ಸೋಂಕಿತರು ಗುಣ ಕಂಡಿದ್ದಾರೆ. ಇಂದು ಕೊರೊನಾದಿಂದ ಒಂದೂ ಸಾವಿನ ವರದಿಯಾಗಿಲ್ಲ. ಜಿಲ್ಲೆಯಲ್ಲಿನ್ನೂ 143 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 40 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 31, ಖಾಸಗಿ ಆಸ್ಪತ್ರೆಗಳು-ನಿಗಾ ಕೇಂದ್ರಗಳಲ್ಲಿ 72 ಮಂದಿ ಚಿಕಿತ್ಸೆ…
ಮೈಸೂರು ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಹೈಕಮಾಂಡ್ ತೀರ್ಮಾನವೇ ಅಂತಿಮ
February 19, 2021ಮೈಸೂರು,ಫೆ.18- ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ವಿಚಾರ ಕುರಿತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ಮೈಸೂರು ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಸದಸ್ಯರ ಸಭೆ ನಡೆಯಿತು. ಸದಸ್ಯರು ಅಂತಿಮ ನಿರ್ಧಾರವನ್ನು ಹೈಕಮಾಂಡ್ಗೆ ಬಿಟ್ಟಿದ್ದಾರೆ. ಯಾವುದೇ ಸ್ಪಷ್ಟ ತೀರ್ಮಾನವಿಲ್ಲದೆ ಸಭೆ ಮುಕ್ತಾಯವಾಗಿದೆ. ಕೆಲ ಸದಸ್ಯರು ಬಿಜೆಪಿ ಜೊತೆ ಮೈತ್ರಿ ಬೇಡ ಎಂದಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ದೊಂದಿಗೆ ಮೈತ್ರಿ ಮಾಡಿಕೊಂಡರೂ ನಮ್ಮ ಅಭ್ಯಂತರವಿಲ್ಲ…
ಎನ್.ಆರ್.ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಕಲ್ಪಿಸಲು ಸಂದೇಶ್ಸ್ವಾಮಿ ಮನವಿ
February 19, 2021ಮೈಸೂರು,ಫೆ.18(ವೈಡಿಎಸ್)- ಬಜೆಟ್ನಲ್ಲಿ ಎನ್.ಆರ್.ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರಲ್ಲಿ ಮಾಜಿ ಮೇಯರ್ ಸಂದೇಶ್ಸ್ವಾಮಿ ಮನವಿ ಮಾಡಿದ್ದಾರೆ. ಎನ್.ಆರ್.ಕ್ಷೇತ್ರದಲ್ಲಿ ಕಳೆದ 25-30 ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಯುಜಿಡಿ ವ್ಯವಸ್ಥೆ ಇಲ್ಲ. ಉತ್ತಮ ರಸ್ತೆಗಳಿಲ್ಲ. ಉತ್ತಮ ಶೈಕ್ಷಣಿಕ ಸಂಸ್ಥೆಗಳಿಲ್ಲ. ರೆವಿನ್ಯೂ ಬಡಾವಣೆಗಳೇ ಹೆಚ್ಚಿವೆ. ಕೆ.ಆರ್, ಚಾಮರಾಜ ಕ್ಷೇತ್ರಗಳಂತೆ ಎನ್.ಆರ್.ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ. ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು 50 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು…
ರೈತ ಸಂಘವನ್ನು ಯುವ ಸಮೂಹ ಮತ್ತಷ್ಟು ಬಲಪಡಿಸಲಿ: ಸುನೀತಾ ಪುಟ್ಟಣ್ಣಯ್ಯ ಸಲಹೆ
February 19, 2021ಮೈಸೂರು, ಫೆ.18(ಎಂಟಿವೈ)- ರೈತ ನಾಯಕ ಪುಟ್ಟಣ್ಣಯ್ಯ ಅಗಲಿ 3 ವರ್ಷ ಗಳು ಕಳೆದಿದ್ದರೂ ಕರ್ನಾಟಕ ರಾಜ್ಯ ರೈತ ಸಂಘ ಇನ್ನೂ ಜೀವಂತವಾಗಿದೆ. ಪುಟ್ಟ ಣ್ಣಯ್ಯ ಬಿಟ್ಟು ಹೋದ ರೈತ ಸಂಘವನ್ನು ಯುವ ಸಮೂಹ ಮತ್ತಷ್ಟು ಬಲಪಡಿಸ ಬೇಕು ಎಂದು ದಿ.ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಸಲಹೆ ನೀಡಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ಗುರುವಾರ ಆಯೋಜಿಸಿದ್ದ `ಕೆ.ಎಸ್.ಪುಟ್ಟಣ್ಣಯ್ಯ ನೆನಪು ಹಾಗೂ ಸಂಘದ ರಾಜ್ಯ ಮಟ್ಟದ ಸಮಾರಂಭ’ ಉದ್ಘಾಟಿಸಿ…
ಕಸ್ತೂರಿ ನಿವಾಸ ಸಿನಿಮಾಗೆ 50 ವರ್ಷದ ಸಂಭ್ರಮ; ನಾದಬ್ರಹ್ಮ ಸಂಗೀತ ಸಭಾದಲ್ಲಿ ನಾಳೆ ರಸಮಂಜರಿ
February 19, 2021ಮೈಸೂರು,ಫೆ.18(ಎಂಟಿವೈ)-ವರನಟ ಡಾ.ರಾಜ್ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’ ಚಲನಚಿತ್ರದ 50ನೇ ವರ್ಷದ ಸಂಭ್ರಮಾ ಚರಣೆ ಪ್ರಯುಕ್ತ ಫೆ.20ರ ಸಂಜೆ 4ಕ್ಕೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಡಾ.ರಾಜ್, ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವ ಹಳೆಯ ಚಲನ ಚಿತ್ರಗಳ ಸುಮಧುರ ಗೀತೆಗಳ ಸಂಗಮ ಹಾಗೂ ರಸಮಂಜರಿ ಆಯೋಜಿಸಲಾಗಿದೆ ಎಂದು ಕಾರ್ಯ ಕ್ರಮ ವ್ಯವಸ್ಥಾಪಕರಾದ ಎಂ.ವಿ.ಗೋವಿಂದರಾಜು, ಶ್ರೀಕಂಠರಾವ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಪ್ತಗಿರಿ ಮೆಲೋಡಿಸ್ ಹಾಗೂ ಶೃಂಗಾರ್ ಮೆಲೋಡಿಸ್ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮ…
ಫೆ.21ಕ್ಕೆ ದೊಡ್ಡಕೆರೆ ಮೈದಾನದಲ್ಲಿ `ಶಿವಾಜಿ ಕಪ್ ಕಬಡ್ಡಿ ಪಂದ್ಯಾವಳಿ’
February 19, 2021ಮೈಸೂರು, ಫೆ.18(ಎಂಟಿವೈ)- ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಮೈಸೂರಿನ ಪರಿಸರ ಸ್ನೇಹಿ ಬಳಗವು ಫೆ.21ರ ಬೆಳಿಗ್ಗೆ 9ರಿಂದ ದೊಡ್ಡಕೆರೆ ಮೈದಾನದಲ್ಲಿ ಮೈಸೂರು ವಿಭಾಗ ಮಟ್ಟದ ಹೊನಲು ಬೆಳಕಿನ ಶಿವಾಜಿ ಕಪ್ ಕಬಡ್ಡಿ ಪಂದ್ಯಾವಳಿ ಆಯೋ ಜಿಸಿದೆ ಎಂದು ಪರಿಸರ ಬಳಗ ಅಧ್ಯಕ್ಷ ಡಿ.ಲೋಹಿತ್ ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಸುತ್ತಲ ಗ್ರಾಮಗಳಿಂದ 50ಕ್ಕೂ ಹೆಚ್ಚು ತಂಡ ಭಾಗವಹಿಸುತ್ತಿವೆ. ವಿಜೇತರಿಗೆ ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ 20 ಸಾವಿರ ರೂ., ತೃತೀಯ ಮತ್ತು ಚತುರ್ಥ ಬಹುಮಾನ…
ಭೇರುಂಡ ಫೌಂಡೇಷನ್ ವತಿಯಿಂದ ಹಳ್ಳಿಕಾರ್, ಅಮೃತ್ ಮಹಲ್ ಗೋ ತಳಿಗಳ ಸಂರಕ್ಷಣೆಗೆ ಅಗತ್ಯ ಸಹಕಾರ
February 18, 2021ಸಚಿವ ಪ್ರಭು ಚವ್ಹಾಣ್ ಅವರಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಯ ಮೈಸೂರು,ಫೆ.17(ಪಿಎಂ)-ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಗೋ ತಳಿಗಳ ಸಂರಕ್ಷಣೆಗೆ ತಮ್ಮ ಭೇರುಂಡ ಫೌಂಡೇಷನ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಶುಸಂಗೋಪನೆ ಸಚಿವ ಪ್ರಭುಚವ್ಹಾಣ್ ಅವರಿಗೆ ಅಭಯ ನೀಡಿದರು. ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥ ಯದು ವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬುಧವಾರ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್, ಅವರೊಂದಿಗೆ ಅಮೃತ್ ಮಹಲ್…
ಹಾಸನ, ಹಾವೇರಿ, ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ಒಂದೂ ಕೊರೊನಾ ಪ್ರಕರಣವಿಲ್ಲ
February 18, 2021ಮೈಸೂರು, ಫೆ.17(ವೈಡಿಎಸ್)- ರಾಜ್ಯದಲ್ಲಿ ದಿನಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಬುಧ ವಾರ ಬಾಗಲಕೋಟೆ, ಹಾಸನ, ಹಾವೇರಿ ಜಿಲ್ಲೆಯಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ. ಆದರೆ, ಬೆಂಗಳೂರು ನಗರದಲ್ಲಿ ಸೋಂಕಿನ ಸಂಖ್ಯೆ ದಿಢೀರ್ ಏರುಮುಖವಾಗಿದೆ. ಬುಧವಾರ ಕೊರೊನಾದ 253 ಹೊಸ ಪ್ರಕರಣಗಳು ಪತ್ತೆಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಸೋಂಕಿಗೆ ಒಳಗಾದವರಿಗಿಂತ ಸೋಂಕಿ ನಿಂದ ಗುಣವಾದವರ ಸಂಖ್ಯೆಯೇ ಹೆಚ್ಚಿತ್ತು. ರಾಜ್ಯದಲ್ಲಿಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಬುಧವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ. 41 ಸೋಂಕಿತರಿಗೆ ಗುಣವಾಗಿದ್ದು,…










