ಬೆಂಗಳೂರು,ಫೆ.17(ಕೆಎಂಶಿ)-ಕನ್ನಡದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಕನ್ನಡ ಪುಸ್ತಕ ಲೋಕ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬೆಳೆಯಬೇಕಾದ ಅಗತ್ಯವಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ನಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋ ಜನೆ ಮಾಡಿದ್ದ ಪರಿಶಿಷ್ಟ್ಟ ಜಾತಿ ಮತ್ತು ಪರಿಶಿಷ್ಟ್ಟ ಪಂಗಡದ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾ ರ್ಪಣೆ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು. ಇಂದಿನ ಸಾಹಿತ್ಯ ಪರಿಸ್ಥಿತಿ ಸೋಷಿಯಲ್ ಮೀಡಿಯಾ ಗಳ ಭರಾಟೆಯಲ್ಲಿ ಕಳೆದು ಹೋಗಿದೆ, ಇ-ಬುಕ್, ಆಡಿಯೋ…
ನೂತನ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಎಂ.ಎಂ.ಯೋಗೇಶ್ ಅಧಿಕಾರ ಸ್ವೀಕಾರ
February 18, 2021ಮೈಸೂರು,ಫೆ.17(ಪಿಎಂ)-ಮೈಸೂರು ಜಿಲ್ಲಾ ಪಂಚಾಯಿತಿಯ ನೂತನ ಸಿಇಓ ಆಗಿ ಎಂ.ಎಂ.ಯೋಗೇಶ್ ಬುಧವಾರ ಅಧಿಕಾರ ವಹಿಸಿಕೊಂಡರು. ಜಿಪಂ ಕಾರ್ಯಾಲಯದ ಸಿಇಓ ಕಚೇರಿಯಲ್ಲಿ ನಿರ್ಗಮಿತ ಸಿಇಓ ಬಿ.ಎ.ಪರಮೇಶ್ ಅವರಿಂದ ಎಂ.ಎಂ. ಯೋಗೇಶ್ ಅಧಿಕಾರ ವಹಿಸಿಕೊಂಡರು. ಎಂ.ಎಂ.ಯೋಗೇಶ್ ಅವರು 2004 ಬ್ಯಾಚ್ನ ಕೆಎಎಸ್ ಅಧಿಕಾರಿ ಹಾಗೂ 2016ರ ಬ್ಯಾಚ್ನ ಐಎಎಸ್ (ಆಯ್ಕೆ ಪಟ್ಟಿ) ಅಧಿಕಾರಿ ಆಗಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಕೆಆರ್ ಪೇಟೆ ಪಟ್ಟಣದ ಮರಿತಿಬ್ಬೇ ಗೌಡ ಮತ್ತು ನಂಜಮ್ಮ ದಂಪತಿ ಪುತ್ರರಾದ ಎಂ.ಎಂ. ಯೋಗೇಶ್, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಮತ್ತು…
ರಾಮಮಂದಿರದ ಬಗ್ಗೆ ಕುಮಾರಸ್ವಾಮಿ ಅಪಸ್ವರಕ್ಕೆ ಶಾಸಕ ರಾಮದಾಸ್ ಆಕ್ಷೇಪ
February 18, 2021ಬೆಂಗಳೂರು, ಫೆ.17(ಕೆಎಂಶಿ)- ದೇವೇಗೌಡರ ಕುಟುಂಬ ದೇವರಿಗೆ ಭಕ್ತಿ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಅವರ ಕುಟುಂಬದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಮಮಂದಿರ ನಿಧಿ ಅಭಿಯಾನಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಎ.ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆ ಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ, ಮಹಾತ್ಮಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ ಖSSನ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ಖSS ಬಗ್ಗೆ…
ರೈತರಿಂದ ನಾಳೆ ದೇಶಾದ್ಯಂತ ರೈಲು ರೋಕೋ ಚಳವಳಿ: ಮಧ್ಯಾಹ್ನ 12ರಿಂದ 4 ಗಂಟೆವರೆಗೆ ರೈಲು ಸ್ತಬ್ಧ
February 18, 2021ದಿಶಾ ರವಿ ಬಂಧನಕ್ಕೆ ರೈತರು, ಎಚ್ಡಿಕೆ ಖಂಡನೆ ನವದೆಹಲಿ,ಫೆ.17-ಕೃಷಿ ಕಾಯಿದೆ ರದ್ದತಿಗೆ ಆಗ್ರಹಿಸಿ ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ, ಹೆದ್ದಾರಿ ತಡೆ ಬಳಿಕ ಇದೀಗ ನಾಳೆ ದೇಶಾದ್ಯಂತ `ರೈಲ್ ರೋಕೋ’ ಚಳವಳಿ ಹಮ್ಮಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ 4 ಗಂಟೆಗಳ ಕಾಲ ಎಲ್ಲಾ ರೈಲುಗಳನ್ನು ತಡೆ ಯಲಿ ದ್ದಾರೆ. ರಾಜ್ಯದಲ್ಲೂ ರೈಲ್ ರೋಕೋ ಚಳವಳಿ ಮಾಡ್ತೇವೆ ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಯಶವಂತಪುರ…
ಬೆಮೆಲ್ ಖಾಸಗೀಕರಣ ಪ್ರಸ್ತಾಪಕ್ಕೆ ವಿರೋಧ; ಕೇಂದ್ರದ ಅಧೀನ ಇಲಾಖೆಗಳ ಅಣಕ ಶವಯಾತ್ರೆ ನಡೆಸಿ ಬೆಮೆಲ್ ಕಾರ್ಮಿಕರ ಪ್ರತಿಭಟನೆ
February 18, 2021ಮೈಸೂರು,ಫೆ.17(ಪಿಎಂ)- ಸಾರ್ವಜನಿಕ ಉದ್ದಿಮೆ ಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿ ಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್ನ ಮೈಸೂರು ಉತ್ಪಾದನಾ ಘಟಕದ ಕಾರ್ಮಿಕರ ಪ್ರತಿಭಟನೆ ಮೂರನೇ ದಿನವಾದ ಬುಧವಾರವೂ ಮುಂದುವರೆಯಿತು. ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿ ಯೇಷನ್ ಆಶ್ರಯದಲ್ಲಿ ಕಾರ್ಮಿಕರು ಸೋಮವಾರದಿಂದ ಹೂಟಗಳ್ಳಿ-ಕೆಆರ್ಎಸ್ ರಸ್ತೆಯ ಕಾರ್ಖಾನೆ ಮುಖ್ಯದ್ವಾರ ದಲ್ಲಿ ಗಂಟೆ ಕಾಲ ಪ್ರತಿಭಟನೆ ನಡೆಸುತ್ತಿದ್ದು, ಅದೇ ರೀತಿ ಇಂದೂ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ…
ಮೈಸೂರು ವಿಜಯನಗರ 3ನೇ ಹಂತದ ಉದ್ಯಾನವನದಲ್ಲಿ ನೆರಳು ನೀಡುವ 30ಕ್ಕೂ ಹೆಚ್ಚು ಗಿಡ ಮರಗಳಿಗೆ ಕತ್ತರಿ
February 18, 2021ಮೈಸೂರು, ಫೆ.17(ಆರ್ಕೆಬಿ)- ಉದ್ಯಾನವನವನ್ನು ನಿರ್ವಹಣೆ ಮಾಡ ಬೇಕಾದವರೇ ಇಲ್ಲಿರುವ ಮರ, ಗಿಡಗಳ ಕಡಿದು ನಿರ್ನಾಮ ಮಾಡಿದರೆ ಉದ್ಯಾ ನವನ ನಿರ್ವಹಣೆ ಸಾಧ್ಯವೇ? ಇಂತಹ ಪ್ರಶ್ನೆ ಮೈಸೂರಿನ ವಿಜಯನಗರ 3ನೇ ಹಂತದ ಇ ಬ್ಲಾಕ್ನಲ್ಲಿ ವಾಟರ್ ಟ್ಯಾಂಕ್ ಬಳಿ ನಡೆದಿದೆ. ಉದ್ಯಾನವನದಲ್ಲಿ ಹೊಂಗೆ, ಮಾವು, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ನಾನಾ ಮರ ಗಳನ್ನು ಬೆಳೆಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸುತ್ತಲಿನ ಪ್ರದೇಶದ ನೂರಾರು ವಾಯುವಿಹಾರಿಗಳು, ಹಿರಿಯ ನಾಗ ರಿಕರು ಈ ಉದ್ಯಾನವನದಲ್ಲಿ ವಿಹರಿ ಸುತ್ತಾರೆ. ಈ ಉದ್ಯಾನವನವನ್ನು…
ಸಚಿವ ಪ್ರಭು ಬಿ.ಚವ್ಹಾಣ್ಗೆ ಸನ್ಮಾನ
February 18, 2021ಮೈಸೂರು, ಫೆ.17-ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರಿಗೆ ಮೈಸೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಿದರು. ಇದೇ ವೇಳೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಡಿಸಿಪಿ ಗೀತಾ ಪ್ರಸನ್ನ, ಉಪವಿಭಾಗಾಧಿಕಾರಿಗಳಾದ ಡಾ.ಎನ್.ಸಿ.ವೆಂಕಟರಾಜು, ವೀಣಾ, ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಸಾದ್ ಮೂರ್ತಿ, ಉಪನಿರ್ದೇಶಕ ಡಾ.ಮಾದಪ್ಪ, ಡಾ.ನಾಗರಾಜು, ಡಾ.ಎಸ್.ವಿ.ಸುರೇಶ್, ಡಾ.ಸಿ.ರಾಮ ಚಂದ್ರ ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ
February 18, 2021ಮೈಸೂರು, ಫೆ.17-ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಶೋನೆಟ್ ಸಲ್ಡಾಟ್ ಸಾಲ್ಡಾನ 7,500 ರೂ. ಪಾವತಿಸಿ ರೆಡ್-ಬಿಲ್ಡ್ ಟೋಕನ್ ಅನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಹೈದ್ರಾಬಾದ್ನ ಲಲಿತಾ 5,000 ರೂ. ಪಾವತಿಸಿ 4 ಕೊಂಬಿನ ಜಿಂಕೆ, ಆಂಧ್ರ ಪ್ರದೇಶದ ಸುಕೀರ್ತಿ ಆರ್.ಗುಂಟೂರು ಅವರು 2,000ರೂ. ಪಾವತಿಸಿ ಸ್ಪಾಟೆಡ್ ವಿಸ್ಲಿಂಗ್ ಡಕ್ ಹಾಗೂ ಬೆಂಗಳೂರಿನ ಸಮರ್ಥ ಎಸ್. 1,000ರೂ. ಪಾವತಿಸಿ ಲವ್ ಬರ್ಡ್ ಅನ್ನು, ಅರ್ಜುನ್ ದೇಶಪಾಂಡೆ 2,000ರೂ. ಪಾವತಿಸಿ ನಾಗರಹಾವನ್ನು,…
ರಂಗ ಶಿಬಿರಗಳಿಂದ ಹೆಣ್ಣು ಮಕ್ಕಳಲ್ಲಿ ಸ್ವಾವಲಂಬನೆ: ಬಿ.ಜಯಶ್ರೀ
February 18, 2021ಮೈಸೂರು, ಫೆ.17(ಎಸ್ಪಿಎನ್)- ರಂಗಭೂಮಿ ತರಬೇತಿ ಶಿಬಿರಗಳಿಂದ ಹೆಣ್ಣು ಮಕ್ಕಳಲ್ಲಿ ಸ್ವಾವಲಂಬನೆ, ಲೋಕ ಜ್ಞಾನ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಬಿ.ಜಯಶ್ರೀ ಅಭಿಪ್ರಾಯಪಟ್ಟರು. ಮೈಸೂರು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೈಸೂರು ಸಂಚಲನ ಸಂಸ್ಥೆ ಬುಧವಾರ ಆಯೋಜಿ ಸಿದ್ದ `ಮಹಿಳಾ ರಂಗ ತರಬೇತಿ ಶಿಬಿರ’ದ ಸಮಾರೋಪ ಮತ್ತು ಸಂಚಲನ ಮಹಿಳಾ ರಂಗತಂಡದ ಕಲಾವಿದೆಯರು ಅಭಿನಯಿ ಸಿದ `ರೂಪ ರೂಪಗಳನು ದಾಟಿ’ ನಾಟ ಕದ 2ನೇ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಚಲನ ಸಂಸ್ಥೆಯ ದೀಪಕ್ ಮೈಸೂರು ಅವರು ಮಹಿಳೆಯರಿಗಾಗಿಯೇ ರಂಗ ತರಬೇತಿ…
ಬ್ಯಾಂಕ್ನಿಂದ ದೊಡ್ಡ ಮೊತ್ತ ಡ್ರಾ ಮಾಡುವ ಗ್ರಾಹಕರಿಗೆ ಪೊಲೀಸ್ ರಕ್ಷಣೆ ಗ್ರಾಹಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಬ್ಯಾಂಕ್ಗಳಿಗೆ ಪೊಲೀಸ್ ಆಯುಕ್ತರ ಪತ್ರ
February 18, 2021ಮೈಸೂರು, ಫೆ.17(ಎಸ್ಪಿಎನ್)- ಮೈಸೂರು ನಗರ ವ್ಯಾಪ್ತಿಯ ವಿವಿಧ ಬ್ಯಾಂಕ್ ಗಳಲ್ಲಿ ಪ್ರತಿದಿನ 10 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಹಣ ಡ್ರಾ ಮಾಡುವವರ ಬಗ್ಗೆ ಹತ್ತಿರದ ಠಾಣೆಗಳಿಗೆ ಮಾಹಿತಿ ನೀಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯ ಬ್ಯಾಂಕ್ ವ್ಯವಸ್ಥಾಪಕರಿಗೆ ಪೊಲೀಸರು ಸೂಚಿಸಿದ್ದಾರೆ. 3 ತಿಂಗಳ ಹಿಂದಿನ ಘಟನೆ. ಮೈಸೂರಿನ ವಾಣಿ ವಿಲಾಸ ಮೊಹಲ್ಲಾದಲ್ಲಿನ ಹೆಚ್ಡಿಎಫ್ಸಿ ಬ್ಯಾಂಕ್ ಮುಂದೆ ತಮ್ಮ ಕಾರು ನಿಲ್ಲಿಸಿದ್ದ ಮನೋಜ್ ಕುಮಾರ್ ಎಂಬುವರು…










