ಮೈಸೂರು, ನ.4(ಎಂಟಿವೈ)- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಹೊರಗಿನ ಗುತ್ತಿಗೆದಾರರಿಗೆ ಮಣೆ ಹಾಕುತ್ತಿದೆ. ಸೆಸ್ಕ್ ಪೂರ್ಣಗುತ್ತಿಗೆ ಆಧಾರದಡಿ ಕರೆದಿರುವ ಟೆಂಡರ್ ರದ್ದು ಮಾಡುವಂತೆ ಆಗ್ರಹಿಸಿ ನ.6ರಿಂದ ಸೆಸ್ಕ್ ಕಚೇರಿಗಳೆದುರು ಆಮರಣಾಂತ ಉಪವಾಸ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಸಿ.ರಮೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗೋಷ್ಠಿ ನಡೆಸಿದ ಅವರು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ವೃತ್ತ ವಿಭಾಗ, ಉಪ ವಿಭಾಗಗಳಲ್ಲಿ…
ಮದುವೆಗಾಗಿ ಮತಾಂತರ ತಡೆಗೆ ಕಠಿಣ ಕಾನೂನು ಜಾರಿ
November 4, 2020ಬೆಂಗಳೂರು, ನ.3(ಕೆಎಂಶಿ)- ಲವ್ ಜಿಹಾದ್ ಮಟ್ಟ ಹಾಕಲು, ಮದುವೆಗಾಗಿ ಮತಾಂ ತರ ನಡೆಸುವುದನ್ನು ತಡೆಯಲು ರಾಜ್ಯದಲ್ಲಿ ಕಾನೂನು ತರಲಾಗು ವುದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕøತಿ, ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಪ್ರಕಟಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿ ರುವ ಅವರು, ಮದುವೆಯಾಗುವ ಉದ್ದೇಶ ದಿಂದ ಮತಾಂತರವಾಗುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ಅವರು, ಜಿಹಾದಿ ಶಕ್ತಿಗಳು ನಮ್ಮ ಸಹೋದರಿಯರ ಘನತೆ ಗೌರವ ಹರಣ…
ಆರ್.ಆರ್.ನಗರದಲ್ಲಿ ಶೇ.45.24, ಶಿರಾದಲ್ಲಿ ಶೇ.82.13 ಮತದಾನ
November 4, 2020ಕೊರೊನಾ ಸೋಂಕಿತರಿಂದಲೂ ಮತದಾನ ಬೆಂಗಳೂರು, ನ.3-ಭಾರಿ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮಂಗಳವಾರ ಶಾಂತಿ ಯುತ ಮತದಾನ ನಡೆಯಿತು. ಶಿರಾದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಆರ್ ಆರ್ ನಗರದಲ್ಲಿ ಜನರು ಅತಿ ಕಡಿಮೆ ಉತ್ಸಾಹ ತೋರಿಸಿದ್ದಾರೆ. ಮತದಾನ ಅಂತ್ಯಗೊಂಡಾಗ ಶಿರಾದಲ್ಲಿ ಶೇ. 82.13 ಮತ್ತು ರಾಜರಾಜೇಶ್ವರಿ ನಗರ ದಲ್ಲಿ ಶೇ.45.24ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಇದೇ ಮೊದಲ ಬಾರಿಗೆ ಸಂಜೆ 5ರ ನಂತರ…
ಜೀವನ ಸಹಜಸ್ಥಿತಿಗೆ ಬಂದಿದೆ ಆದರೆ ಕೊರೊನಾ ತೊಲಗಿಲ್ಲ… ಎಚ್ಚರ
November 4, 2020ಮೈಸೂರು, ನ.3(ಎಸ್ಬಿಡಿ)- ಕೊರೊನಾ ಹೊಡೆತಕ್ಕೆ ಜಗತ್ತೇ ತತ್ತರಿಸಿದೆ. ಸೋಂಕು ಕೊಂಚ ತಗ್ಗಿದರೂ ಸುಧಾರಿಸಿಕೊಳ್ಳಲು ಇನ್ನೂ ಬಹಳಷ್ಟು ಸಮಯ ಬೇಕು. ಪ್ರಕರಣ ಕಡಿಮೆಯಾಗಿವೆ ಎಂದು ಸ್ವಲ್ಪ ಎಚ್ಚರ ತಪ್ಪಿದರೂ 2ನೇ ಬಾರಿ ಕೊರೊನಾಘಾತ ನಿಶ್ಚಿತ. ಹಾಗಾಗಬಾರದೆಂದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವುದರ ಜೊತೆಗೆ ದಂಡ ವಿಧಿಸುವ ಮೂಲಕ ತೀಕ್ಷ್ಣವಾಗಿಯೂ ಮನವರಿಕೆ ಮಾಡಿ ಕೊಡಲಾಗುತ್ತಿದೆ. ಆದರೆ ಜನರಿಗೆ ಬುದ್ಧಿ ಹೇಳುವ ಜನಪ್ರತಿನಿಧಿ ಗಳು, ಅಧಿಕಾರಿಗಳು, ಮುಖಂಡರು ಈ…
ನಟಿಯರಾದ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ
November 4, 2020ಬೆಂಗಳೂರು,ನ.3(ಕೆಎಂಶಿ)-ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾ ಗಿರುವ ಚಿತ್ರನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಅವರು ಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿ ಸಿದೆ. ಪ್ರಕರಣದ ಆರೋಪಿಗಳಾದ ಸಂಜನಾ, ರಾಗಿಣಿ ದ್ವಿವೇದಿ, ರಾಹುಲ್, ವೀರೇನ್ ಖನ್ನಾ, ಪ್ರಶಾಂತ್, ಅಭಿಸ್ವಾಮಿ ಅವರು ಗಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಪರಪ್ಪನ ಅಗ್ರಹಾರದಲ್ಲಿ ಇನ್ನೂ ಕಾಲ ಕಳೆಯಬೇಕಿದೆ. ತಮಗೆ ಜಾಮೀನು ನೀಡಬೇಕೆಂದು ಪ್ರಕರಣದ 6 ಆರೋಪಿಗಳು ಹೈಕೋರ್ಟ್ನ ನ್ಯಾಯಮೂರ್ತಿ ಹರೀಶ್ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಕಳೆದ…
ಬಂಡಿಪುರ ಅಭಯಾರಣ್ಯದಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ಆನೆಗೇ ಉರುಳಾಯ್ತು…
November 4, 2020ಮೊಳೆಯೂರು, ನ.3(ಎಂಟಿವೈ)- ಕಾಡಿನಿಂದ ನಾಡಿಗೆ ಬಂದು ಹೊಲ-ಗದ್ದೆಗಳಲ್ಲಿ ಮೇಯ್ದು ಮತ್ತೆ ಕಾಡಿಗೆ ವಾಪಸಾಗುತ್ತಿದ್ದಾಗ ರೈಲ್ವೆ ಕಂಬಿಯ ಬ್ಯಾರಿಕೇಡ್ ದಾಟಲು ಯತ್ನಿಸಿದ ಗಂಡಾನೆಯೊಂದು ಅದರಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟ ದುರಂತ ಮಂಗಳವಾರ ಮುಂಜಾನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವಲಯದ ನಡಾಹಡಿ ಬೀಟ್ನಲ್ಲಿ ನಡೆದಿದೆ. ಮೊಳೆಯೂರು ಮತ್ತಿತರೆಡೆ ಕಾಡಾನೆಗಳು ಆನೆ ಕಾರಿಡಾರ್ ಮೂಲಕ ಕಾಡಂಚಿನ ಗ್ರಾಮಗಳಿಗೆ ರಾತ್ರಿ ವೇಳೆ ನುಸುಳಿ ಹೊಲ-ಗದ್ದೆಯಲ್ಲಿ ಬೆಳೆದ ಫಸಲನ್ನು ತಿಂದು ಬೆಳಗಾಗು ವಷ್ಟರಲ್ಲಿ ಕಾಡು ಸೇರುವ ಪರಿಪಾಠ ಹೊಂದಿವೆ. ಕಳೆದ ರಾತ್ರಿ…
ಹಿರಿಯ ಕಲಾವಿದ ಹೆಚ್.ಜಿ.ಸೋಮಶೇಖರರಾವ್ ನಿಧನ
November 4, 2020ಬೆಂಗಳೂರು,ನ.3-ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್.ಜಿ.ಸೋಮಶೇಖರ ರಾವ್ (86) ವಯೋಸಹಜ ಕಾಯಿಲೆಗಳಿಂದಾಗಿ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಹಿರಿಯ ಕಲಾವಿದರಾದ ಎಸ್ಜಿಎಸ್, ಪತ್ನಿ, ಇಬ್ಬರು ಪುತ್ರರು ಹಾಗೂ ಕಿರಿಯ ಸೋದರ, ಚಿತ್ರನಟ ದತ್ತಣ್ಣ ಸೇರಿದಂತೆ ಅಪಾಯ ಬಂಧು ಬಳಗವನ್ನು ಅಗಲಿದ್ದಾರೆ. ಕೆನರಾ ಬ್ಯಾಂಕ್ನ ಮಾಜಿ ಉದ್ಯೋಗಿಯಾದ ಸೋಮ ಶೇಖರರಾವ್, ಮಿಂಚಿನ ಓಟ, ಮಿಥಿಲೆಯ ಸೀತೆಯರು, ಸಾವಿತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ಯಾಂಕ್ ವೃತ್ತಿಯಲ್ಲಿದ್ದುಕೊಂಡೇ ಸಾಹಿತ್ಯ, ರಂಗಭೂಮಿ, ಸಿನಿಮಾ ಕ್ಷೇತ್ರಗಳತ್ತ ಅತೀವ ಆಸಕ್ತಿಯನ್ನು…
ಶಾಲೆ ಪುನರಾರಂಭ: ನ.6ಕ್ಕೆ ನಿರ್ಧಾರ
November 4, 2020ಬೆಂಗಳೂರು,ನ.3-ರಾಜ್ಯದಲ್ಲಿ ಶಾಲೆ ಗಳ ಪುನಾರಂಭ ಕುರಿತು ಪೆÇೀಷಕರು ಮತ್ತು ಸಾರ್ವ ಜನಿಕ ಶಿಕ್ಷಣ ಇಲಾಖೆ ಎಲ್ಲ ಉಪನಿರ್ದೇಶಕರ ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನ.4ರಿಂದ 6ರವರೆಗೆ ಸಭೆ ನಡೆಸಲಿದ್ದು, 6ರಂದು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಈ ಸಂದರ್ಭ ದಲ್ಲಿ ಪದವಿಪೂರ್ವ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಕೂಡ ಚರ್ಚೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಶಾಲೆಗಳ ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಚಿವರು…
ಮೈಸೂರು: ಕೊರೊನಾ ಸಾವಿಲ್ಲದ ಮಂಗಳವಾರ!
November 4, 2020ಜಿಲ್ಲೆಯಲ್ಲಿ ಸೊರಗಿದ ಸೋಂಕು ಮಂಗಳವಾರ 125 ಮಂದಿಗೆ ಕೋವಿಡ್ 203 ಮಂದಿ ಗುಣಮುಖ-ಡಿಸ್ಚಾರ್ಜ್ ರಾಜ್ಯದಲ್ಲಿ 2756 ಮಂದಿಗೆ ಸೋಂಕು, 7,140 ಗುಣಮುಖ, 26 ಸಾವು ಮೈಸೂರು, ನ.3(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮಂಗಳ ವಾರ ಕೊರೊನಾ ಸೋಂಕಿನಿಂದ ಒಂದೂ ಸಾವು ವರದಿಯಾಗಿಲ್ಲ. ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 125 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 48,056ಕ್ಕೆ ಏರಿಕೆಯಾಗಿದೆ. ಮಂಗಳವಾರ 203 ಮಂದಿ ಗುಣಮುಖರಾಗಿ…
ವಯೋಸಹಜ ಕಾಯಿಲೆ-ಸೋಂಕಿತರ ಬಗ್ಗೆ ಹೆಚ್ಚು ನಿಗಾ ಅಗತ್ಯ
November 4, 2020ಮೈಸೂರು, ನ.3(ಪಿಎಂ)- ವಯೋ ಸಹಜ ಕಾಯಿಲೆಗಳಿಂದ ಬಳಲುವ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿ, ಅವರ ಆರೋಗ್ಯದ ಮೇಲೆ ಹೆಚ್ಚು ನಿಗಾ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅಧಿ ಕಾರಿಗಳಿಗೆ ಸೂಚನೆ ನೀಡಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ಸೋಂಕು ತಪಾಸಣೆ, ಚಿಕಿತ್ಸೆ ಹಾಗೂ ನಿಯಂತ್ರಣ ಕುರಿತು ಮಂಗಳ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಜೊತೆಗೆ ಕೋವಿಡ್-19 ದೃಢಪಟ್ಟು ಆಸ್ಪತ್ರೆಗೆ ದಾಖಲಾಗುವ ಬಹುತೇಕರು ನಾನಾ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅವರಿಗೆ ಅಗತ್ಯವಿರುವ ಚಿಕಿತ್ಸೆ…










