ಬೆಂಗಳೂರು,ಆ.30-ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸ ಹೊಂದಿ ದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಅನಂತಕುಮಾರ್ ಪ್ರತಿಷ್ಠಾನ ನಗರ ದಲ್ಲಿ ಆಯೋಜಿಸಿದ್ದ ದೇಶ ಮೊದಲು ವೆಬಿನಾರ್ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಕೋವಿಡ್ ಸೋಂಕನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುತ್ತಾ ಬಂದಿದೆ. ಸೋಂಕು ದೇಶಕ್ಕೆ ಕಾಲಿ ಡುವ ಮುನ್ನವೇ ಪ್ರಧಾನಿ ಮೋದಿ ಅವರು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದರು. ಫೆಬ್ರವರಿ ಮೊದಲ ವಾರದಲ್ಲಿ ಕೇವಲ…
ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ ಇಂದು ಶಿಕ್ಷೆ ಪ್ರಮಾಣ ಪ್ರಕಟ
August 31, 2020ನವದೆಹಲಿ: ಅಡ್ವೊಕೇಟ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶಿಕ್ಷೆಯ ಪ್ರಮಾಣವನ್ನು ನಾಳೆ (ಸೋಮವಾರ) ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ನ್ಯಾಯಾಂಗ ನಿಂದನೆ ಕಾಯ್ದೆಯಡಿ ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಆರು ತಿಂಗಳು ಜೈಲುಶಿಕ್ಷೆ ಅಥವಾ 2 ಸಾವಿರ ದವರೆಗೆ ದಂಡ ಅಥವಾ ದಂಡ ಮತ್ತು ಜೈಲುಶಿಕ್ಷೆ ಎರಡೂ ಶಿಕ್ಷೆಯನ್ನು ಪ್ರಶಾಂತ್ ಭೂಷಣ್ ಎದುರಿಸಬೇಕಾಗಬಹುದು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿ ಅಡ್ವೊ ಕೇಟ್ ಪ್ರಶಾಂತ್…
ಎಡಿಎ ಅನುಮೋದನೆಗಾಗಿ ರಾಮಮಂದಿರ ವಿನ್ಯಾಸ ಹಸ್ತಾಂತರಿಸಿದ ಅಯೋಧ್ಯೆ ಟ್ರಸ್ಟ್
August 31, 2020ಅಯೋಧ್ಯೆ, ಆ.30-ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮಮಂದಿರದ ವಿನ್ಯಾಸ ಮತ್ತು ಅದಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಡಿಎ) ಅನುಮೋದನೆಗಾಗಿ ಸಲ್ಲಿಸಿದೆ. ಟ್ರಸ್ಟ್ನ ಸದಸ್ಯ ಡಾ.ಅನಿಲ್ಮಿಶ್ರಾ ಅವರು ಶನಿವಾರ ದಾಖಲೆಗಳನ್ನು ಎಡಿಎ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ನೀರಜ್ ಶುಕ್ಲಾ ಅವರಿಗೆ ಹಸ್ತಾಂತರಿಸಿದರು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಡಾ.ಅನಿಲ್ ಮಿಶ್ರಾ ಅವರು ಶ್ರೀ ರಾಮಜನ್ಮಭೂಮಿ ಮಂದಿರದ ವಿನ್ಯಾಸ ಮತ್ತು ಇತರ ಅಗತ್ಯ ದಾಖಲೆಗಳನ್ನು ಉಪಾಧ್ಯಕ್ಷ ಮತ್ತು ಅಯೋಧ್ಯೆ ಅಭಿವೃದ್ಧಿ…
ಆರ್ಯವೈಶ್ಯ ಮಹಾಸಭಾದ ಬಹುಪಯೋಗಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
August 31, 2020ಮೈಸೂರು, ಆ.30(ಪಿಎಂ)- ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಚೌದ್ರಿ ಅಪ್ಪಾಜಿ ಶೆಟ್ಟರ ಧರ್ಮಛತ್ರ ಮತ್ತು ಉಚಿತ ವಿದ್ಯಾರ್ಥಿನಿಲಯ ಟ್ರಸ್ಟ್ ಸಹಯೋಗ ದಲ್ಲಿ ಮೈಸೂರಿನ ಲಷ್ಕರ್ ಮೊಹಲ್ಲಾದ ಗೀತಾ ಮಂದಿರ ರಸ್ತೆಯಲ್ಲಿ ನಿರ್ಮಿಸು ತ್ತಿರುವ ಬಹುಪಯೋಗಿ ಕಟ್ಟಡದ ಶಂಕುಸ್ಥಾಪನೆ ಭಾನುವಾರ ನೆರವೇರಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ನ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮಾತನಾಡಿ, ಆರ್ಯ ವೈಶ್ಯ ಮಹಾಸಭಾ ಹಲವು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮುದಾಯದ ಅವಶ್ಯಕತೆಗಳಿಗೆ ಅನುಗುಣ ವಾಗಿ ಇಡೀ ರಾಜ್ಯದಲ್ಲಿ ಹಲವು ಸೇವಾ…
7 ಲಕ್ಷ ರೂ. ಮೌಲ್ಯದ ಬೀಟೆ ಮರ ವಶ: ಓರ್ವನ ಬಂಧನ
August 31, 2020ಮೈಸೂರು, ಆ.30(ಎಂಟಿವೈ)- ದಾಖಲೆ ಯಿಲ್ಲದೆ ಸಾಮಿಲ್ವೊಂದಕ್ಕೆ ಕುಯ್ಯಿಸಲು ತಂದಿದ್ದ 7 ಲಕ್ಷ ರೂ. ಮೌಲ್ಯದ ಬೀಟೆ ಮರದ ದಿಮ್ಮಿಗಳನ್ನು ತಿ.ನರಸೀಪುರ ವಲಯದ ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ಸಂಚಾರಿ ದಳದ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಿ.ನರಸೀಪುರ ವಲಯದ ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ಸಂಚಾರಿ ದಳದ ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ ಬನ್ನೂರು ಹೋಬಳಿಯ ಕೊಡಗಳ್ಳಿ ಬಳಿಯಿರುವ ಸಾಮಿಲ್ವೊಂ ದಕ್ಕೆ ತೆರಳಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಬೀಟೆ ಮರದ ದಿಮ್ಮಿಗಳನ್ನು ಕುಯ್ಯಿಸಲು…
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಚಿತ್ರ ನಿರ್ಮಾಪಕ ಮುನಿರತ್ನಗೆ ಕೊರೊನಾ ದೃಢ
August 31, 2020ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡ ನಾಯಕರು ಮೈಸೂರು, ಆ.30(ಪಿಎಂ)- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹಾಗೂ ಬೆಂಗಳೂರು ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಅವರಿಗೂ ಕೊರೊನಾ ದೃಢಪಟ್ಟಿದೆ. ಈ ಸಂಬಂಧ ಇಬ್ಬರು ನಾಯಕರೂ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿ ದ್ದಾರೆ. `ನಾನು ಕೋವಿಡ್-19′ ಪರೀಕ್ಷೆಗೆ ಒಳ ಗಾಗಿದ್ದೆ. ವರದಿಯು ಪಾಸಿಟಿವ್ ಎಂದು ಬಂದಿದೆ. ನಿಮ್ಮ ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸ ಹೊಂದಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ’ ಎಂದು ನಳಿನ್ಕುಮಾರ್…
ಕ್ಯಾನ್ವಾಸ್ ಮೇಲೆ ಅರಳಿದ ಕಾಡು ಹೂಗಳು
August 31, 2020ಮೈಸೂರು, ಆ.30(ಆರ್ಕೆಬಿ)- ದಾರಿ ಯಲ್ಲಿ ಯಾರ ಗಮನಕ್ಕೂ ಬಾರದೇ ಅರಳಿ ಮುದುಡುವ ಕಾಡು ಹೂವುಗಳು ಕೆ. ಸಂಗೀತಾ ಅವರ ಕುಂಚದಲ್ಲಿ ಅರಳುತ್ತವೆ. ಅಕ್ರಿಲಿಕ್ ವಾಟರ್ ಬೇಸ್ಡ್ ಕಲರ್ ಬಳಸಿ ಕ್ಯಾನ್ವಾಸ್ ಮೇಲೆ ಇಂಥ ಹತ್ತಾರು ಹೂ ಗಳನ್ನು ಅರಳಿಸಿರುವ ಈ ಕಲಾ ಪ್ರತಿಭೆ 25ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನವನ್ನು ಭಾನುವಾರ ಮೈಸೂರಿನ ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದರು. `ಅರಳು’ ಚಿತ್ರಕಲಾ ಪ್ರದರ್ಶನವನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ಗೌಡ ಚಿತ್ರಕಲಾ…
ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಕಾಣದ ಜನಜಂಗುಳಿ
August 31, 2020ಸತತ ಕೆಲಸ ಮಾಡಿದ್ದ ವೈದ್ಯರು, ಲ್ಯಾಬ್ ಟೆಕ್ನಿಷಿಯನ್ಗೆ ಭಾನುವಾರ ವಿಶ್ರಾಂತಿ ಮೈಸೂರು, ಆ.30(ಆರ್ಕೆಬಿ)- ಕೊರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ಆರ್ಎಟಿ)ನಲ್ಲಿ ದೀರ್ಘ ಕಾಲ ಪಾಲ್ಗೊಂಡಿದ್ದ ಕೆಲ ವೈದ್ಯರು, ಲ್ಯಾಬ್ ಟೆಕ್ನಿಷಿಯನ್ ಮತ್ತು ಇತರೆ ಸಿಬ್ಬಂದಿಗೆ ವಿಶ್ರಾಂತಿ ನೀಡುವ ಸಲುವಾಗಿ ಟೌನ್ಹಾಲ್ ಸೇರಿದಂತೆ ಕೆಲವು ಆರ್ಎಟಿ ಕೇಂದ್ರಗಳಿಗೆ ಭಾನುವಾರ ರಜೆ ನೀಡಲಾಗಿತ್ತು. ಭಾನುವಾರವಾದ್ದರಿಂದ ಕೃಷ್ಣಮೂರ್ತಿಪುರಂನ ಮಕ್ಕಳ ಕೂಟ, ಚಾಮುಂಡಿಪುರಂನ ಅಕ್ಕಮ್ಮಣ್ಣಿ ಆಸ್ಪತ್ರೆ, ಕೆ.ಆರ್. ಆಸ್ಪತ್ರೆಗಳಲ್ಲಿ ಅಷ್ಟೇನೂ ಜನಜಂಗುಳಿ ಕಂಡು ಬರ ಲಿಲ್ಲ….
ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಜ್ಞಾನದ ಅವಶ್ಯಕತೆ ಇದೆ
August 31, 2020ಮೈಸೂರು, ಆ.30- ಮೈಸೂರಿನ ಜಯಲಕ್ಷ್ಮೀಪುರಂ ನಲ್ಲಿರುವ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ದೈಹಿಕ ಸಾಮಥ್ರ್ಯ ಮತ್ತು ಕ್ರೀಡಾ ನಿರ್ವಹಣೆಗೆ ವೈಜ್ಞಾನಿಕ ಅನುಸಂಧಾನ ಕುರಿತು ರಾಷ್ಟ್ರಮಟ್ಟದ ವೆಬಿನಾರ್ ಆಯೋಜಿಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಪಿಇ ಮತ್ತು ಎಸ್ಎಸ್ ವಿಭಾಗದ ಅಧ್ಯಕ್ಷ ಡಾ.ಸಿ.ವೆಂಕ ಟೇಶ್ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವ ಜ್ಞಾನದ ಅವಶ್ಯಕತೆ ಇದೆ. ದೈಹಿಕ ಸಾಮಥ್ರ್ಯದ ಬಗ್ಗೆ ಪುಸ್ತಕಗಳು, ಸಂಶೋ ಧನಾ…
`ಸಮಸ್ಯೆಗಳಿಗೆ ಪರಿಹಾರ ಮಾರ್ಗ ತೋರಿಸುವುದೇ ನಿಜವಾದ ವಿದ್ಯೆ’
August 31, 2020ರಾಮಕೃಷ್ಣ ಮಠದ ಸ್ವಾಮಿ ಸುಖಾತ್ಮಾನಂದಜೀ ಮಹಾರಾಜ್ ಬೋಧನೆ ಮೈಸೂರು, ಆ.30(ಎಸ್ಪಿಎನ್)-ವಿದ್ಯೆ ವಿನಯವನ್ನು ಕಲಿಸುತ್ತದೆ. ಜ್ಞಾನ ವಿವೇಕವನ್ನು ಬೆಳೆಸುತ್ತದೆ. ಮನುಷ್ಯನ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಮಾರ್ಗ ವನ್ನು ತೋರಿಸುವುದೇ ನಿಜವಾದ ವಿದ್ಯೆ ಎಂದು ರಾಮಕೃಷ್ಣ ಮಠದ ಹಿರಿಯ ಯತಿಗಳಾದ ಸ್ವಾಮಿ ಸುಖಾತ್ಮಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು. ಮೈಸೂರು ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ನೂತನ ಕೊಠಡಿ ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಜೀವನ ಮೌಲ್ಯಗಳ ಅಳವಡಿಕೆಗೆ ಸಹಕಾರಿಯಾಗುವುದೇ ನಿಜವಾದ ಶಿಕ್ಷಣ ಎಂದರು. ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಾಜೀ ಮಹಾರಾಜ್…