ಬೆಂಗಳೂರು, ಆ.27(ಕೆಎಂಶಿ)- ಅನಾಮಧೇಯ ಕಂಪ ನಿಯ ಹೆಸರಿನಲ್ಲಿ ರಸಗೊಬ್ಬರ ಇಲ್ಲವೆ ಬಿತ್ತನೆ ಬೀಜ ಮನೆ ಬಾಗಿಲಿಗೆ ಬಂದರೆ ಅಥವಾ ಯಾರಾದರೂ ನೀಡಿ ದರೆ, ರೈತರು ಅದನ್ನು ಖರೀದಿಸಬಾರದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಕಳಪೆ ಕಂಪನಿಗಳು ರೈತರ ಮನೆ ಬಾಗಿಲಿಗೆ ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡು ವುದು ಗಮನಕ್ಕೆ ಬಂದಿದೆ. ಈಗಾಗಲೇ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ರೈತರಿಗೆ ಅನ್ಯಾಯ ಇಲ್ಲವೆ ಮೋಸವಾಗುವುದಕ್ಕೆ ಬಿಡುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು…
ಬೆಂಗಳೂರಲ್ಲಿ ಬೃಹತ್ ಡ್ರಗ್ ಜಾಲ ಬಯಲು
August 28, 2020ಬೆಂಗಳೂರು, ಆ.27-ಮಾದಕ ವಸ್ತುಗಳನ್ನು ವಿದೇಶದಿಂದ ತರಿಸಿ ಸ್ಯಾಂಡಲ್ವುಡ್ ನಟ-ನಟಿಯರು, ಶ್ರೀಮಂತ ಕುಟುಂ ಬದ ಯುವಕ-ಯುವತಿಯರು ಹಾಗೂ ಕಾಲೇಜು ವಿದ್ಯಾರ್ಥಿ ಗಳಿಗೆ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ, ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿರುವುದು ಆತಂಕಕಾರಿಯಾಗಿದ್ದು, ದಂಧೆಕೋರರು ಡೆನ್ಮಾರ್ಕ್, ಬೆಲ್ಜಿಯಂ, ಜರ್ಮನಿ ಮುಂತಾದ ದೇಶಗಳಿಂದ ಡಾರ್ಕ್ ವೆಬ್ ಮೂಲಕ ಬುಕ್ ಮಾಡಿ ಕೊರಿ ಯರ್ನಲ್ಲಿ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರಿಸುತ್ತಿದ್ದರು ಎಂಬ ಆಘಾತಕಾರಿ ವಿಷಯ ಹೊರ ಬಿದ್ದಿದೆ. ಬೆಂಗಳೂರಿನಲ್ಲಿ…
ಲಾರಿಯಲ್ಲಿ ಭಾರೀ ಪ್ರಮಾಣದ ಗಾಂಜಾ ಸಾಗಾಟ: ಮೈಸೂರಿನ ಜೆಡಿಎಸ್ ಮುಖಂಡ ಕೈಸರ್ ಪಾಷಾ ಸೇರಿದಂತೆ ಬೆಂಗಳೂರಲ್ಲಿ ಮೂವರ ಬಂಧನ
August 28, 2020ಮೈಸೂರು ಆ.27(ಆರ್ಕೆ)-ಭಾರೀ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಮೈಸೂರಿನ ಇಬ್ಬರು ಸೇರಿದಂತೆ ಮೂವರನ್ನು ಬುಧವಾರ ಸಂಜೆ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗೌಸಿಯಾನಗರ `ಸಿ’ ಬ್ಲಾಕ್, 8ನೇ ಕ್ರಾಸ್ ನಿವಾಸಿ ಕೈಸರ್ ಪಾಷಾ, ಶಾಂತಿ ನಗರದ ಸಮೀರ್ ಹಾಗೂ ಕೋಲಾರ ಜಿಲ್ಲೆ, ಗೌರಿಬಿದನೂರಿನ ಇಸ್ಮಾಯಿಲ್ ಬಂಧಿತರು. ಅವರಿಂದ 204 ಕೆ.ಜಿ. ಗಾಂಜಾ, ಲಾರಿ, ಕಾರು ಹಾಗೂ 3 ಮೊಬೈಲ್ ಫೋನ್ಗಳನ್ನು ಬೆಂಗಳೂರಿನ ಸಿಸಿಬಿಯ ಆಂಟಿನಾ ರ್ಕೋಟಿಕ್ ಘಟಕದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಾತ್ಮೀದಾರರು ನೀಡಿದ ಮಾಹಿತಿಯ ಜಾಡು ಹಿಡಿದ…
ಬೇಟೆಗಾರರ ಬೇಟೆಯಾಡಿದ ರಾಣ!
August 28, 2020ಹುಣಸೂರು, ಆ.27(ಎಂಟಿವೈ, ಪ್ರಸಾದ್, ಕೆಕೆ)- ನಾಗರ ಹೊಳೆ ಅಭಯಾರಣ್ಯದಲ್ಲಿ ಹುಲಿ ಮತ್ತು ಜಿಂಕೆ ಬೇಟೆಗೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಬೇಟೆಗಾರರನ್ನು ಪತ್ತೆ ಹಚ್ಚುವ ಮೂಲಕ ಬಂಡೀಪುರದ ಅರಣ್ಯ ಇಲಾಖೆ ಪತ್ತೆದಾರಿ ಶ್ವಾನ ‘ರಾಣ’ ಸಾಹಸ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಗರಹೊಳೆ ಅಭಯಾರಣ್ಯದ ಕಲ್ಲಹಳ್ಳ ವಲಯದ ತಟ್ಟೆಕೆರೆ ಹಾಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಆ.25ರಂದು 6-7 ವರ್ಷದ ಹುಲಿ ಕಳೇಬರ ಪತ್ತೆಯಾಗಿತ್ತು. ಆದರೆ ಅದರ 4 ಕಾಲು ಗಳ ಪಂಜವನ್ನೇ ಕತ್ತರಿ ಸಿರುವುದು ಹಾಗೂ 2 ಕೋರೆ…
ಚಿಕ್ಕ ಮನೆಯಲ್ಲಿ 2-3 ಕುಟುಂಬ ವಾಸ; ಪ್ರತ್ಯೇಕ ಮನೆ ನಿರ್ಮಾಣಕ್ಕೆ ಶೀಘ್ರ ಕ್ರಮ
August 28, 2020ಮೈಸೂರು, ಆ.27(ಪಿಎಂ)- ಅಶೋಕ ಪುರಂನ ಬಹಳ ಚಿಕ್ಕದಾದ ಮನೆಗಳಲ್ಲಿ 2-3 ಸಂಸಾರಗಳು ವಾಸಿಸುತ್ತಿವೆ. ಈ ಬಡ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಡಲು ಶೀಘ್ರ ಕ್ರಮ ಕೈಗೊಳ್ಳು ವುದಾಗಿ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದರು. ಕೆಆರ್ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾ ನಗರ ಪಾಲಿಕೆಯ ವಾರ್ಡ್ 56 ಹಾಗೂ 60ರ ಅಶೋಕಪುರಂನಲ್ಲಿ ಗುರುವಾರ ಪಾದ ಯಾತ್ರೆ ನಡೆಸಿದ ಶಾಸಕರು, ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ಇಲ್ಲಿನ ಕಂಟೇ ನ್ಮೆಂಟ್ ವಲಯಗಳಿಗೆ ಭೇಟಿ ನೀಡಿ, ಕೊರೊನಾ ಸೋಂಕಿಗೆ…
ಪುರಭವನದಲ್ಲಿ ಕೊರೊನಾ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ
August 28, 2020ಮೈಸೂರು, ಆ.27(ಆರ್ಕೆ)- ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಮೈಸೂರಿನಲ್ಲಿ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ. ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೈಸೂರಿನ ಪುರಭವನದಲ್ಲಿ ಇಂದು ನಡೆದ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉದ್ದುದ್ದ ಸರತಿ ಸಾಲಿನಲ್ಲಿ ನಿಂತು ಕೊರೊನಾ ಪರೀಕ್ಷೆ ಮಾಡಿಸಿಕೊಂಡರು. ಆಧಾರ್ ಕಾರ್ಡ್ ನಂಬರ್, ಮೊಬೈಲ್ ನಂಬರ್, ವಾಸದ ವಿಳಾಸ ಪಡೆದು ವೈದ್ಯರು ಹಾಗೂ ನರ್ಸ್ಗಳು ಸಾರ್ವಜನಿಕರ ಸ್ವ್ಯಾಬ್ ತೆಗೆದು…
ಸಿಎಫ್ಟಿಆರ್ಐ ಸಿಬ್ಬಂದಿಗೆ ಕೊರೊನಾ ಟೆಸ್ಟ್
August 28, 2020ಮೈಸೂರು, ಆ. 27 (ಆರ್ಕೆ)- ಮೈಸೂರಿನ ಸಿಎಫ್ಟಿಆರ್ಐ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರ್ಯಾಪಿಡ್ ಆ್ಯಂಜಿಜೆನ್ ಕಿಟ್ ಮೂಲಕ ಗುರುವಾರ ಕೊರೊನಾ ಪರೀಕ್ಷೆ ನಡೆಸಲಾಯಿತು. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಿಎಫ್ಟಿಆರ್ಐ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೋವಿಡ್ ತಪಾಸಣಾ ಶಿಬಿರವನ್ನು ಆರೋಗ್ಯ ಇಲಾಖೆ ಡಿಸ್ಟ್ರಿಕ್ಸ್ಟ್ ಸರ್ವೇಲೆನ್ಸ್ ಅಧಿಕಾರಿ ಡಾ. ಶಿವಪ್ರಸಾದ್ ಉದ್ಘಾಟಿಸಿದರು. ಗುರುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆ ಯವರೆಗೆ ನಡೆದ ಶಿಬಿರದಲ್ಲಿ ಸಿಎಫ್ಟಿಆರ್ಐನ 121 ಮಂದಿ…
ಅಡುಗೆ ಅನಿಲ ಸಿಲಿಂಡರ್ ಖರೀದಿಗೂ ಡಿಜಿಟಲ್ ಪೇಮೆಂಟ್ ಕಡ್ಡಾಯ
August 28, 2020ಮೈಸೂರು, ಆ.27- ಸಣ್ಣಪುಟ್ಟ ಆರ್ಥಿಕ ವಹಿವಾಟಿಗೂ ಡಿಜಿಟಲ್ ಪೇಮೆಂಟ್ಗೆ ಒತ್ತಾಸೆ ನೀಡುತ್ತಿರುವ ಕೇಂದ್ರ ಸರ್ಕಾರ, ಈಗ ದಿನ ಬಳಕೆ ವಸ್ತುಗಳ ಖರೀದಿಯಲ್ಲೂ ಕಡ್ಡಾಯ ಡಿಜಿಟಲ್ ಪೇಮೆಂಟ್ಗೆ ಕಟ್ಟಾದೇಶ ಹೊರಡಿಸಿದೆ. ಅದರಲ್ಲೂ ದಿನ ಬಳಕೆಯ ಗ್ಯಾಸ್ ಸಿಲಿಂಡರ್ ಸರಬ ರಾಜಲ್ಲೂ 2020ರ ಆಗಸ್ಟ್ನಿಂದಲೇ ಶೇ.100ರಷ್ಟು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ ಗ್ರಾಹಕರು ತಮ್ಮ ಮೊಬೈಲ್ನ ಪ್ಲೇ ಸ್ಟೋರ್ ಓಪನ್ ಮಾಡಿ, ಸರ್ಚ್ ಬಾರ್ನಲ್ಲಿ ಊP Pಚಿಥಿ ಎಂದು ಟೈಪ್ ಮಾಡಿ, ಊP…
ವರ್ಷಾಂತ್ಯಕ್ಕೆ ಗ್ರಾಮ ಪಂಚಾಯತ್ ಚುನಾವಣೆ?
August 28, 2020ಬೆಂಗಳೂರು, ಆ.27- ರಾಜ್ಯ ಚುನಾವಣಾ ಆಯೋಗ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆಯಿದೆ. ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಹೊಸ ಮಾರ್ಗಸೂಚಿಗಳಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಆಯೋಗ ಚುನಾವಣೆ ನಡೆಸಲಿದೆ. ರಾಜ್ಯದಲ್ಲಿ 6025 ಗ್ರಾಮ ಪಂಚಾಯತ್ಗಳಿದ್ದು, ಅವುಗಳ ಅವಧಿ ಜೂನ್/ ಜುಲೈ ತಿಂಗಳಿಗೆ ಅಂತ್ಯವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ ಯಲ್ಲಿ ಅಸಾಧಾರಣ ಸಂದರ್ಭ ಎಂದು ಭಾವಿಸಿ ರಾಜ್ಯ ಚುನಾವಣಾ ಆಯೋಗ ಪಂಚಾ ಯತ್ ಚುನಾವಣೆಯನ್ನು ಮೇ ತಿಂಗಳಲ್ಲಿ ಮುಂದೂಡಿತ್ತು. ಈ ಮಧ್ಯೆ…
ರಾಜ್ಯದಲ್ಲಿ ಅ.1ರಿಂದ ಪದವಿ ಕಾಲೇಜು ಪ್ರಾರಂಭ
August 27, 2020ಬೆಂಗಳೂರು, ಆ.26(ಕೆಎಂಶಿ)- ಅಕ್ಟೋಬರ್ 1ರಿಂದಲೇ ಪದವಿ ಕಾಲೇಜುಗಳು ಪ್ರಾರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಇಂದಿಲ್ಲಿ ಪ್ರಕಟಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸ ಲಾಗುವುದು. ಅಕ್ಟೋಬರ್ 1ರಿಂದ ನೇರ ತರಗತಿಗಳು ಶುರುವಾಗಲಿದ್ದು, ತರಗತಿಗಳನ್ನು ಆರಂಭ ಮಾಡು ವುದರ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿ ಬರಬೇಕಿದೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ ಎಂದರು. ಸರ್ಕಾರವು ಮುಂದಿನ…