5.08 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 15,685 ಮಂದಿ ಸಾವು ನವದೆಹಲಿ, ಜೂ.27- ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ದಾಖಲೆಯ 18,552 ಮಂದಿಯಲ್ಲಿ ವೈರಸ್ ಪತ್ತೆ ಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. ನಿನ್ನೆ ಒಂದೇ ದಿನ ವಿವಿಧ ರಾಜ್ಯಗಳಲ್ಲಿ ಒಟ್ಟಾರೆ 18,552 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು,…
ಗೊಂದಲವಿಲ್ಲದೆ ಪೂರ್ಣಗೊಂಡ `ಗಣಿತ’ ಪತ್ರಿಕೆ ಪರೀಕ್ಷೆ
June 28, 2020ಮೈಸೂರು, ಜೂ.27(ಎಂಟಿವೈ)- ಕೊರೊನಾ ಭಯವಿಲ್ಲದೆ ಮೈಸೂರು ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ಯನ್ನು 38,886 ವಿದ್ಯಾರ್ಥಿಗಳು ಬರೆದರೆ, 411 ವಿದ್ಯಾರ್ಥಿಗಳು ಗೈರಾದರು. ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳಿಂ ದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾ ಗದೆ ಸಂತೋಷದಿಂದಲೇ ಪರೀಕ್ಷೆ ಬರೆದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಸಂಬಂಧ ಪರ-ವಿರೋಧ ಚರ್ಚೆ ಮಧ್ಯೆಯೇ ಜೂ. 25ರಂದು ಆರಂಭವಾದ ಪರೀಕ್ಷೆ ಮೈಸೂರು ಜಿಲ್ಲೆಯಲ್ಲಿ ಯಾವುದೇ…
`ಲಕ್ಷ ವೃಕ್ಷ ಅಭಿಯಾನ’ದಡಿ ಕುವೆಂಪುನಗರದಲ್ಲಿ ಸಾವಿರ ಗಿಡ ವಿತರಣೆ
June 28, 2020ಮೈಸೂರು, ಜೂ.27(ಎಸ್ಪಿಎನ್)- `ಲಕ್ಷ ವೃಕ್ಷ ಅಭಿಯಾನ’ದಡಿ ಹೆಚ್.ವಿ. ರಾಜೀವ ಸ್ನೇಹ ಬಳಗದಿಂದ ಮೈಸೂರು ಕುವೆಂಪುನಗರದ ಸುಮಸೋಪಾನ ಉದ್ಯಾನವನದಲ್ಲಿ ವಿವಿಧ ಜಾತಿಯ ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ಶನಿವಾರ ವಿತರಿಸಲಾಯಿತು. ಕಾರ್ಯಕ್ರಮದಂಗವಾಗಿ ಉದ್ಯಾನವನ ದಲ್ಲಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ನೇತೃತ್ವ ದಲ್ಲಿ ಹೊಂಗೆಗಿಡ ನೆಡಲಾಯಿತು. ಬಳಿಕ ಬಳಗದ ಸಂಚಾಲಕ ಆರ್. ಕುಮಾರ್, ಈವರೆಗೆ ಅಭಿಯಾನದಡಿ 20 ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಗಿದೆ ಎಂದರು. ದಾಳಿಂಬೆ, ಕರಿಬೇವು, ದಾಸವಾಳ, ಗುಲಾಬಿ, ಇನ್ಸುಲಿನ್, ಬೆಟ್ಟದ ನೆಲ್ಲಿಕಾಯಿ, ಬೇವು, ರಣಕಳ್ಳಿ, ಅಮೃತಬಳ್ಳಿ, ಹೊಂಗೆ…
ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ FIR
June 28, 2020ಬೆಂಗಳೂರು, ಜೂ. 27(ಕೆಎಂಶಿ)- ಕೊರೊನಾ ನಗರ ಪ್ರದೇಶವಲ್ಲದೆ, ಗ್ರಾಮೀಣ ಪ್ರದೇಶಕ್ಕೂ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿದ ವರ ವಿರುದ್ಧ ಎಫ್ಐಆರ್ ದಾಖಲಿ ಸಲು ಸರ್ಕಾರ ಸ್ಥಳೀಯ ಪ್ರಾಧಿಕಾರ ಗಳಿಗೆ ಅಧಿಕಾರ ನೀಡಿದೆ. ಪೊಲೀಸ್ ಇಲಾಖೆ ಮೂಲಕವೇ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ. ಅಂಗಡಿ-ಮುಂಗಟ್ಟು, ವಾಣಿಜ್ಯ ಚಟುವಟಿಕಾ ಕೇಂದ್ರಗಳಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಸಾರ್ವಜನಿಕ ಹಿತದೃಷ್ಟಿ ಯಿಂದ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಬೇಕು. ಮಳಿಗೆಗಳ…
ಸರಗಳ್ಳರ ಬಗ್ಗೆ ಎಚ್ಚರ!
June 28, 2020ಮೈಸೂರು,ಜೂ.27(ಆರ್ಕೆ)-ಮಹಿಳೆಯರ ಚಿನ್ನದ ಸರ ಅಪಹರಣ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ವಾರ ಕಾಲ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಅದಕ್ಕಾಗಿ ವಿಜಯನಗರ ನಿವಾಸಿಯಾದ ತಾಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಬಿಜೆಪಿ ಮುಖಂಡ ಎಲ್.ಆರ್.ಮಹದೇವಸ್ವಾಮಿ ಅವರು ಒಂದು ಆಟೋ, ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಂ ಉಪಕರಣ ಹಾಗೂ ಸಿಬ್ಬಂದಿ ಒದಗಿಸಿದ್ದಾರೆ ಎಂದು ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಹೆಚ್.ಆರ್. ಬಾಲಕೃಷ್ಣ ತಿಳಿಸಿದ್ದಾರೆ. ಪ್ರತೀ ದಿನ ಬೆಳಗ್ಗೆಯಿಂದ ಸಂಜೆವರೆಗೂ ಆ ವಾಹನದಲ್ಲಿ ಸಂಚರಿಸಿ ವಿಜಯನಗರ…
7.80 ಕೋಟಿ ರೂ. ವೆಚ್ಚದ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ
June 28, 2020ಮೈಸೂರು, ಜೂ.27 (ಆರ್ಕೆಬಿ)- ಮೈಸೂರಿನ ಮೆಟ್ರೊಪೋಲ್ ವೃತ್ತದ ಬಳಿಯಿರುವ ಮಹಾರಾಣಿ ಮಹಿಳಾ ವಿಜ್ಞಾನ ಪ್ರಥಮ ದರ್ಜೆ ಪದವಿ ಕಾಲೇಜಿನ ಆವರಣದಲ್ಲಿ ಸರ್ಕಾರದ 7.80 ಕೋಟಿ ರೂ. ಅನುದಾನದಲ್ಲಿ ಕಾಲೇಜಿನ ಹೆಚ್ಚುವರಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. 794.21 ಚದರ ಮೀಟರ್ನ ನೆಲ ಮಹಡಿ, ಒಂದು ಮತ್ತು ಎರಡನೇ ಮಹಡಿ, 701.20 ಚದರ ಮೀಟರ್ನಲ್ಲಿ 3ನೇ ಮಹಡಿ ಕಟ್ಟಡದಲ್ಲಿ ಒಟ್ಟು 5 ಪ್ರಯೋಗಾಲಯ, 20 ಹೆಚ್ಚುವರಿ ತರಗತಿ ಕೊಠಡಿ…
ದೇಶದಲ್ಲಿ ಒಂದೇ ದಿನ 16,922 ಮಂದಿಯಲ್ಲಿ ಸೋಂಕು ಪತ್ತೆ: 418 ಮಂದಿ ಸಾವು
June 26, 2020ನವದೆಹಲಿ: ದೇಶದಲ್ಲಿ ಗುರುವಾರ ದೇಶದಲ್ಲಿ 16,922 ಮಂದಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 4,73,105ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ ಕೊರೊನಾಗೆ ಮತ್ತೆ 418 ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 14,894ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ. ಈ ನಡುವೆ 4,73,105 ಮಂದಿ ಸೋಂಕಿತರ ಪೈಕಿ 2,71,697 ಮಂದಿ ಗುಣಮುಖ ರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ ರಾಷ್ಟ್ರದಲ್ಲಿ 1,86,514 ಮಂದಿ ಸೋಂಕಿನಿಂದ…
ಮೈಸೂರು ಜಿಲ್ಲೆಯಲ್ಲಿ 16 ಕಂಟೇನ್ಮೆಂಟ್
June 26, 2020ಮೈಸೂರು: ಮೈಸೂರು ನಗರದಲ್ಲಿ 8 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16 ಪ್ರದೇಶಗಳನ್ನು ಕಂಟೇ ನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ. ಮೈಸೂರಿನ ನಜರ್ಬಾದ್ನ ಪಾಪಾರಾಂ ಸ್ಟ್ರೀಟ್, ಉದಯಗಿರಿಯ 2ನೇ ಹಂತ, 3ನೇ ಮುಖ್ಯ ರಸ್ತೆಯ 4ನೇ ಕ್ರಾಸ್, ಮಂಡಿ ಮೊಹಲ್ಲಾದ ರಾಜ್ ಮಂಡಿ ಅಶೋಕ ರಸ್ತೆ, ರಾಜೀವ್ನಗರ ಗುಪ್ತ ಸ್ಟೋರ್ ಸಮೀಪ, ದೇವೇಗೌಡ ವೃತ್ತದ ಬಳಿಯ ವೆಂಕಟೇಶ್ವರನಗರ, ವಿಶ್ವೇಶ್ವರನಗರದ ತಪೋವನ ಅಪಾರ್ಟ್ಮೆಂಟ್, ಜಲಪುರಿ ಬಿ-ಬ್ಲಾಕ್, ಶಾರದಾ ದೇವಿನಗರ 2ನೇ ಎ-ಕ್ರಾಸ್, ತಿ.ನರಸೀಪುರ ತಾಲೂಕು, ಮೂಗೂರು ಹೋಬ ಳಿಯ ಕುರುಬೂರು, ಬನ್ನೂ…
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶುಭಕೋರಿದ ಶಾಸಕ ರಾಮದಾಸ್
June 26, 2020ಮೈಸೂರು, ಜೂ.25(ಎಂಟಿವೈ)- ಕೊರೊನಾ ಭಯದ ನಡುವೆಯೂ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ ಎಲ್ಲಾ ಊಹಾಪೋಹಗಳಿಗೂ ಕೊನೆ ಹಾಡಿದ್ದಾರೆ ಎಂದು ಶಾಸಕ ಎಸ್.ಎ. ರಾಮದಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಸೇಂಟ್ ಮೇರಿಸ್ ಶಾಲೆ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ಗುರು ವಾರ ಭೇಟಿ ನೀಡಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಪರೀಕ್ಷಾ ಸಿದ್ಧತೆ, ಕೊರೊನಾ ಕುರಿತು ಸಮಾಲೋಚಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಕೊರೊನಾ ಕಷ್ಟದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕಾ? ರದ್ದು ಮಾಡ ಬೇಕಾ? ಎಂಬ ಗೊಂದಲ ಉಂಟಾಗಿತ್ತು. ಪರೀಕ್ಷೆಗಾಗಿ ವಿದ್ಯಾರ್ಥಿಗಳು ಸಿದ್ಧತೆ…
40 ಲಕ್ಷ ರೂ. ರಸ್ತೆ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
June 26, 2020ಮೈಸೂರು,ಜೂ.25(ಆರ್ಕೆಬಿ)- ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಪಾಲಿಕೆಯ 18ನೇ ವಾರ್ಡ್ನಲ್ಲಿ 14ನೇ ಹಣಕಾಸು ಅನುದಾನದಡಿ 40 ಲಕ್ಷ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮ ಗಾರಿಗೆ ಗುರುವಾರ ಚಾಲನೆ ನೀಡಿದರು. ಮೇದರಕೇರಿ-ಯಾದವ ಗಿರಿ ಬಳಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು, ಕಾಮಗಾರಿಯಲ್ಲಿ ಗುಣ ಮಟ್ಟ ಕಾಯ್ದುಕೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿ ದರು. ಈ ಸಂದರ್ಭ ಬಿಜೆಪಿ ಚಾಮರಾಜ ಕ್ಷೇತ್ರ ಘಟಕ ಅಧ್ಯಕ್ಷ ಸೋಮ ಶೇಖರರಾಜು, ಉಪಾಧ್ಯಕ್ಷ ಕುಮಾರ ಗೌಡ, ಪ್ರಧಾನ ಕಾರ್ಯದರ್ಶಿ…









