ಮೈಸೂರು, ಜೂ. 27(ಆರ್ಕೆ)- ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಅಂಗಡಿಗಳನ್ನು ಸಹ ಇಂದಿ ನಿಂದ ಸಂಪೂರ್ಣ ಬಂದ್ ಮಾಡಲಾಗಿದೆ. ದೇವರಾಜ ಮೊಹಲ್ಲಾದ ವ್ಯಾಪ್ತಿಯ ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಮನ್ನಾರ್ಸ್ ಮಾರ್ಕೆಟ್, ಶಿವರಾಂಪೇಟೆ, ಸಂತೇಪೇಟೆಯ ಭಾಗದ ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಬುಧವಾರ ಆದೇಶಿಸಿದ್ದರು. ತಮಗೆ ಹಣ್ಣು ಮತ್ತು ತರಕಾರಿಗಳನ್ನು ವಿಲೇವಾರಿ ಮಾಡಲು ಒಂದು ದಿನ ಅವಕಾಶ ನೀಡ ಬೇಕೆಂದು…
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆ.1ರಿಂದ ಆರಂಭ
June 28, 2020ಮೈಸೂರು, ಜೂ.27(ಎಂಟಿವೈ)- ಕಳೆದ 3 ವರ್ಷ ದಿಂದ ಸ್ಥಗಿತಗೊಂಡು ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿ ರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಪಿಎಸ್ಎಸ್ಕೆ) ಆಧುನಿಕ ತಂತ್ರಜ್ಞಾನ ಬಳಸಿ ಉನ್ನತೀ ಕರಿಸಿ ಕಬ್ಬು ಅರೆಯುವ ಕಾರ್ಯ ಆರಂಭಿಸಲಾಗು ವುದು. ಆ ಮೂಲಕ ಸುತ್ತಲ ಹಳ್ಳಿಗಳ ಕಬ್ಬು ಬೆಳೆಗಾರರಿಗೆ ನೆರವಾಗಲಾಗುವುದು ಎಂದು ನಿರಾಣಿ ಸಮೂಹ ಸಂಸ್ಥೆ ಅಧ್ಯಕ್ಷ, ಶಾಸಕ ಮುರುಗೇಶ್ ಆರ್.ನಿರಾಣಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಆಯೋ ಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಅವರು, ನಿರಾಣಿ ಶುಗರ್ಸ್…
ಡಾ.ಯತೀಂದ್ರ ಸಿದ್ದರಾಮಯ್ಯ ಜನ್ಮದಿನ: ಅಭಿಮಾನಿಗಳಿಂದ ಸಮಾಜಸೇವಾ ಕಾರ್ಯ
June 28, 2020ಮೈಸೂರು, ಜೂ.27(ಎಂಟಿವೈ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವರುಣಾ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಅವರ ಜನ್ಮದಿನ ವಾದ ಶನಿ ವಾರ ನಗರದ ವಿವಿಧೆಡೆ ಕಾಂಗ್ರೆಸ್ ಕಾರ್ಯ ಕರ್ತರು ಸಮಾಜ ಸೇವಾ ಕಾರ್ಯ ಕೈಗೊಂ ಡರು. ಆ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿ ಆಚರಿಸಿದರು. ಮೈಸೂರಿನ ಬಂಬೂಬಜಾರ್ನಲ್ಲಿ ರುವ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಕರ್ನಾಟಕ ರಾಜ್ಯ ಹಿಂದು ಳಿದ ವರ್ಗಗಳ…
ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಕೆಪಿಸಿಸಿ ಆರೋಪ
June 28, 2020ಬೆಂಗಳೂರು, ಜೂ. 27(ಕೆಎಂಶಿ)- ಕೋವಿಡ್-19 ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಆರೋಪಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯ ಕತ್ವದಲ್ಲಿ ಸೇರಿದ್ದ ಮುಖಂಡರ ಸಭೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹರಡುತ್ತಿದ್ದರೂ, ಪರಿಸ್ಥಿತಿಯನ್ನು ನಿಭಾ ಯಿಸುವಲ್ಲಿ ಸರ್ಕಾರ ವೈಫಲ್ಯ ಕಂಡಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದೇ ಈ ಲೋಪಕ್ಕೆ ಕಾರಣ ಎಂದು ದೂರಿದೆ. ಸೋಂಕು ಹತ್ತಿಕ್ಕಲು ಪ್ರತಿಪಕ್ಷಗಳನ್ನು ವಿಶ್ವಾ ಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತಕ್ಷಣವೇ ಸರ್ವ ಪಕ್ಷಗಳ ನಾಯಕರ ಸಭೆ ಕರೆಯ ಬೇಕೆಂದು…
ಜಂತಗಳ್ಳಿಯಲ್ಲಿ ಒಂದೇ ವಾರದಲ್ಲಿ ಮತ್ತೊಂದು ಚಿರತೆ ಬೋನಿಗೆ
June 28, 2020ಮೈಸೂರು, ಜೂ.27(ಎಂಟಿವೈ)- ಮೈಸೂರು ತಾಲೂಕು ವರುಣಾ ಹೋಬಳಿ ಜಂತಗಳ್ಳಿಯಲ್ಲಿ 7 ದಿನದ ಅಂತರದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಮೈಸೂರು ತಾಲೂ ಕಿನ ಜಂತಗಳ್ಳಿ ಸರ್ವೇ ನಂ.98ರ ಡಾ.ಮಧು ಸೂದನ್ ಎಂಬುವರಿಗೆ ಸೇರಿದ ಜಮೀನಿ ನಲ್ಲಿಟ್ಟಿದ್ದ ಬೋನಿಗೆ 4-5 ವರ್ಷದ ಗಂಡು ಚಿರತೆ ಶುಕ್ರವಾರ ರಾತ್ರಿ ಬಿದ್ದಿದೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾ ಗಿದ್ದು, ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ…
ವಿಜಯನಗರ 4ನೇ ಹಂತಕ್ಕೊಂದು ಹೆಬ್ಬಾಗಿಲು!
June 28, 2020ಮೈಸೂರು, ಜೂ.27- ನಗರದ ರಿಂಗ್ ರಸ್ತೆ ಮಗ್ಗಲಲ್ಲಿ ಅಭಿವೃದ್ಧಿಪಡಿಸಲಾದ ವಿಜಯನಗರ 4ನೇ ಹಂತ ಬಡಾ ವಣೆಯೂ ಸಹ ಸದ್ಯದಲ್ಲೇ ದೊಡ್ಡದಾದ ಪ್ರವೇಶ ದ್ವಾರವನ್ನು ಹೊಂದಲಿದೆ. 4 ದಿನಗಳ ಹಿಂದೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಕಾಂಕ್ರೀಟ್ನಿಂದ ಅಡಿಪಾಯ ನಿರ್ಮಿಸಲಾಗುತ್ತಿದೆ. ವಿಜಯನಗರ 4ನೇ ಹಂತಕ್ಕೆ ಪ್ರವೇ ಶಿಸಲು ದೊಡ್ಡದಾಗಿ ನಿರ್ಮಾಣಗೊಂಡಿ ರುವ `80 ಅಡಿ ರಸ್ತೆ’ಗೆ ಇನ್ನೂ ನಾಮ ಕರಣವಾಗಿಲ್ಲ. ಸದ್ಯಕ್ಕೆ ಇಲ್ಲಿನ ನಿವಾಸಿಗಳು ಇದನ್ನು `ಮರಿಮಲ್ಲಪ್ಪ ಕಾಂಪೌಂಡ್ ರಸ್ತೆ’ ಎಂದೇ ಕರೆಯುತ್ತಿದ್ದಾರೆ. 80 ಅಡಿ ಅಗಲ ವಾಗಿರುವ ಈ…
ಅಧ್ವಾನವಾಗಿರುವ ಮೈಸೂರಿನ ನಂ.1 ಉದ್ಯಾನವನ!
June 28, 2020ಮೈಸೂರು, ಜೂ.27(ಎಂಕೆ)- ಮೈಸೂ ರಿನಲ್ಲಿಯೇ ನಂ.1 ಉದ್ಯಾನವನ ಎಂದು ಕರೆಯಲ್ಪಡುವ ನಿವೇದಿತಾನಗರದ ಎನ್. ಆರ್.ಸುಬ್ಬರಾವ್ ಪಾರ್ಕ್ ಅವ್ಯವಸ್ಥೆ ಆಗರ ವಾಗಿದೆ. ಮೈಸೂರು ಮಹಾನಗರಪಾಲಿಕೆ ವಾರ್ಡ್ ನಂ.45ರ ವ್ಯಾಪ್ತಿಯ ಕಾಂತರಾಜ್ ಅರಸ್ ರಸ್ತೆ ಬದಿಯಲ್ಲಿರುವ ಪಾರ್ಕ್ ಇದಾಗಿದ್ದು, ಶಾರದಾದೇವಿನಗರ, ಜನತಾ ನಗರ, ಬೋಗಾದಿ, ಬೋಗಾದಿ 2ನೇ ಹಂತ, ಕುವೆಂಪುನಗರ, ರಾಮಕೃಷ್ಣನಗರ ನಿವಾಸಿಗಳ ನೆಚ್ಚಿನ ವಾಯುವಿಹಾರ ತಾಣವೂ ಇದಾಗಿದ್ದು, ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ದಸರಾ ಫಲಪುಷ್ಪ ಪ್ರದರ್ಶನದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಪ್ರಥಮ ಬಹು ಮಾನ ಪಡೆಯುವ ಮೂಲಕ…
ಕೊರೊನಾ ವಾರಿಯರ್ಸ್ಗೆ ಸಮರ್ಥನಂನಿಂದ ಸುರಕ್ಷಾ ಸಾಧನ ವಿತರಣೆ
June 28, 2020ಕೊರೊನಾ ವಾರಿಯರ್ಸ್ಗೆ ಸಮರ್ಥನಂನಿಂದ ಸುರಕ್ಷಾ ಸಾಧನ ವಿತರಣೆಮೈಸೂರು, ಜೂ.27(ಎಸ್ಪಿಎನ್)-ಸಮರ್ಥನಂ ಅಂಗವಿಕಲ ಸಂಸ್ಥೆಯು ರಾಜ್ಯಾದ್ಯಂತ ಕೊರೊನಾ ವಾರಿಯರ್ಸ್ಗಳಿಗೆ ಕೊರೊನಾ ಸೋಂಕು ತಡೆಗಟ್ಟಲು ಸುರಕ್ಷಾ ಸಾಧನಗಳನ್ನು ನೀಡುತ್ತಿರುವುದು ಉತ್ತಮ ಸಂಗತಿ ಎಂದು ಶಾಸಕ ಎಸ್.ಎ.ರಾಮದಾಸ್ ಪ್ರಶಂಸಿಸಿದರು. ಮೈಸೂರು ಪುರಭವನ ಆವರಣದಲ್ಲಿ `ಸಮರ್ಥನಂ ಅಂಗ ವಿಕಲ ಸಂಸ್ಥೆ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ವೈದ್ಯಕೀಯ ರಕ್ಷಣಾ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣ ಗೊಳಿಸುವ ಸಾಂಕ್ರಾಮಿಕ ರೋಗ. ಇದನ್ನು ತಡೆಗಟ್ಟಲು…
ನಾಳೆ ಜೆಎಸ್ಎಸ್ ಆಸ್ಪತ್ರೆ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಆನ್ಲೈನ್ ಮೂಲಕ ಸಿಎಂ ಚಾಲನೆ
June 28, 2020ಮೈಸೂರು, ಜೂ.27(ಪಿಎಂ)- ಜೆಎಸ್ಎಸ್ ವೈದ್ಯಕೀಯ ಕಾಲೇಜು ವತಿಯಿಂದ ಜೆಎಸ್ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ `ಹೆಚ್1ಎನ್1’ ಹಾಗೂ `ಕೋವಿಡ್-19’ ಪರೀಕ್ಷಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಜೂ.29ರಂದು ಹಮ್ಮಿಕೊಳ್ಳ ಲಾಗಿದೆ. ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದು ಬೆಳಗ್ಗೆ 10.30ಕ್ಕೆ ಆನ್ಲೈನ್ ಮೂಲಕ ಉದ್ಘಾಟಿಸಲಿ ದ್ದಾರೆ. ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಎನ್ಎಬಿಎಲ್ ಮತ್ತು ಐಸಿಎಂಆರ್ಗಳ ಅನುಮೋದನೆ ಪಡೆಯಲಾಗಿದೆ. ಈ ಪ್ರಯೋಗಾಲಯ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ರೋಗ ಲಕ್ಷಣ ಕಂಡುಬಂದರೆ…
ಪಾರ್ಥೇನಿಯಂ ತೆರವಿಗೆ ಶಾರದಾದೇವಿ ನಗರ ನಿವಾಸಿಗಳ ಮನವಿ
June 28, 2020ಮೈಸೂರು, ಜೂ.27(ಎಸ್ಪಿಎನ್)- ಮಳೆಗಾಲ ಆರಂಭವಾಗಿರುವುದರಿಂದ ಖಾಲಿ ನಿವೇಶನ, ರಸ್ತೆಬದಿಯಲ್ಲಿ ಪಾರ್ಥೇ ನಿಯಂ ಮತ್ತಿತರೆ ಗಿಡಗಂಟಿಗಳು ಬೆಳೆ ಯುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗೆ ಜ್ವರ ಕಾಣಿಸಿ ಕೊಳ್ಳುತ್ತಿದೆ ಎಂದು ಶಾರದಾದೇವಿನಗರ 6ನೇ ಹಂತ ಬಡಾವಣೆಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಶಾರದಾದೇವಿ ನಗರದ ಬ್ಯಾಂಕರ್ಸ್ ರಿಕ್ರಿಯೇಷನ್ ಕ್ಲಬ್ ಹಿಂಭಾ ಗದ 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆಯ ಹೆಚ್ಎಸ್ಆರ್ ಪ್ರಾವಿಜನ್ ಸ್ಟೋರ್ ಮುಂಭಾಗದ ಖಾಲಿ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಇದರಿಂದ ಇಲ್ಲಿನ ಇಬ್ಬರು ನಿವಾಸಿ…










